ಕೇರಳದತ್ತ ವಾಲಿದೆ ಲಕ್ಷದ್ವೀಪದ ವಾಣಿಜ್ಯ ಉದ್ಯಮ!


Team Udayavani, Oct 30, 2017, 3:28 PM IST

30-Mng-11.jpg

ಮಹಾನಗರ: ಕೆಲವು ವರ್ಷಗಳ ಹಿಂದೆ ಲಕ್ಷದ್ವೀಪದ ಜನತೆ ಮಂಗಳೂರೇ ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು. ಇದು ಮಂಗಳೂರಿನ ಅಭಿವೃದ್ಧಿಗೂ ಪೂರಕವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಯಾವುದೋ ಕಾರಣಕ್ಕೆ ಲಕ್ಷದ್ವೀಪದತ್ತ ವಾಲಿದ್ದಾರೆ. ಮಂಗಳೂರಿನ ಜತೆ ತಮ್ಮ ವ್ಯವಹಾರವನ್ನು ಕಡಿಮೆಗೊಳಿಸಿದ್ದಾರೆ.

ಈ ನಿಟ್ಟಿನಲ್ಲಿ ಹಿಂದಿನಂತೆಯೇ ನಗರದ ಹಳೆ ಬಂದರಿನ ಮೂಲಕ ತಮ್ಮ ವ್ಯವಹಾರಗಳನ್ನು ಪುನರ್‌ ಸ್ಥಾಪಿಸುವ
ನಿಟ್ಟಿನಲ್ಲಿ ಶಾಸಕ ಜೆ.ಆರ್‌.ಲೋಬೋ ಅವರ ನಿಯೋಗ ಅ. 30ರಂದು ಲಕ್ಷದ್ವೀಪಕ್ಕೆ ತೆರಳಿ ಮಾತುಕತೆ ನಡೆಸಲಿದೆ. ಮಂಗಳೂರಿನ ಜತೆಗಿನ ಸಂಪರ್ಕವನ್ನು ಹಿಂದಿನ ಸ್ಥಿತಿಗೆ ತರಲು ಏನು ಮಾಡಬಹುದು ಎಂಬ ಕುರಿತು ನಿಯೋಗ ಅಲ್ಲಿನ ಪ್ರಮುಖರೊಂದಿಗೆ ಚರ್ಚಿಸಲಿದೆ.

25 ವರ್ಷಗಳಿಂದ ಕಡಿತ 
ಒಂದು ಕಾಲದಲ್ಲಿ ಲಕ್ಷದ್ವೀಪಕ್ಕೆ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದ ಮಂಗಳೂರು ಹಳೆ ಬಂದರು ನಿಧಾನಗತಿಯಲ್ಲಿ ತನ್ನ ಹಿಂದಿನ ಸಂಪರ್ಕ ಕೊಂಡಿಯನ್ನು ಕಳಚಿಕೊಂಡಿತು. ಸುಮಾರು 25 ವರ್ಷಗಳಿಂದ ವ್ಯವಹಾರ
ಸಂಪೂರ್ಣ ನಿಂತು ಹೋದ ಸ್ಥಿತಿಯಿದೆ. 

ಹಿಂದೆ ಅಲ್ಲಿನ ಜನತೆ ಪ್ರತಿಯೊಂದಕ್ಕೂ ಮಂಗಳೂರಿನ್ನೇ ಆಶ್ರಯಿಸಿದ್ದರು. ಇದು ನಗರದ ಆರ್ಥಿಕತೆಗೂ ದೊಡ್ಡ ಕೊಡುಗೆ ನೀಡಿತ್ತು. ಪ್ರಸ್ತುತ ಅದು ಕೇರಳದ ಪಾಲಾಗಿರುವುದರಿಂದ ಇಲ್ಲಿನ ಆರ್ಥಿಕತೆ ಕುಸಿತಕ್ಕೆ ಕಾರಣವಾಗಿದೆ. ಹೀಗಾಗಿ ಅದು ಪುನರ್‌ ಸ್ಥಾಪನೆಗೊಂಡರೆ ಇಲ್ಲಿನ ವ್ಯಾಪಾರ ಉದ್ಯಮಕ್ಕೆ ದೊಡ್ಡ ಕೊಡುಗೆಯಾದೀತು. 

ನಿಯೋಗದಲ್ಲಿ ಯಾರ್ಯಾರು.?
ಅ.30ರಂದು ಲಕ್ಷದ್ವೀಪಕ್ಕೆ ತೆರಳುವ ಶಾಸಕ ಜೆ.ಆರ್‌.ಲೋಬೋ ನೇತೃತ್ವದ ನಿಯೋಗದಲ್ಲಿ ಲೋಕೋಪಯೋಗಿ ಇಲಾಖಾಧಿಕಾರಿಗಳು, ಬಂದರು ಮಂಡಳಿ ನಿರ್ದೇಶಕರು, ಬೆಂಗಳೂರು ಪಿಡಬ್ಲ್ಯುಡಿ ಅಧಿಕಾರಿಗಳು ಇರುತ್ತಾರೆ. ಇವರು ಅಲ್ಲಿನ ಆಡಳಿತಾಧಿಕಾರಿ ಸಹಿತ ಇತರ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದ್ದಾರೆ. ಲಕ್ಷದ್ವೀಪದ ಸಂಸದರ ಜತೆಗೂ ಶಾಸಕ ಲೋಬೋ ಅವರು ಈ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. 

ಪುನರ್‌ ಸ್ಥಾಪನೆಗೆ ಪ್ರಯತ್ನ
ಮಂಗಳೂರಿನೊಂದಿಗೆ ಲಕ್ಷದ್ವೀಪದ ವ್ಯವಹಾರವನ್ನು ಪುನರ್‌ ಸ್ಥಾಪಿಸುವ ನಿಟ್ಟಿನಲ್ಲಿ ಕರ್ನಾಟಕದ ನಿಯೋಗ ಅಲ್ಲಿನ ಪ್ರಮುಖರೊಂದಿಗೆ ಚರ್ಚೆ ನಡೆಸಲಿದೆ. ಇದು ನಗರದ ವ್ಯಾಪಾರದ ವೃದ್ಧಿಗೂ ಅನುಕೂಲವನ್ನು ಸೃಷ್ಟಿಸುವ
ಹಿನ್ನೆಲೆಯಲ್ಲಿ ಅದಕ್ಕೆ ಪ್ರಯತ್ನಿಸಲಾಗುವುದು. ಅವರು ವ್ಯವಹಾರವನ್ನು ಕಡಿತಗೊಳಿಸಲು ಕಾರಣಗಳೇನು ಎಂಬುದರ ಬಗ್ಗೆ ಚರ್ಚಿಸಲಿದ್ದೇವೆ. 
ಜೆ.ಆರ್‌.ಲೋಬೋ,
  ಶಾಸಕರು, ಮಂಗಳೂರು ನಗರ ದಕ್ಷಿಣ

ಜೆಟ್ಟಿ ನಿರ್ಮಾಣಕ್ಕೆ ನಿರಾಸಕ್ತಿ.?
ಕೆಲವು ವರ್ಷಗಳ ಹಿಂದೆ ಸುಮಾರು 70 ಕೋ.ರೂ.ವೆಚ್ಚದಲ್ಲಿ ನಗರದ ಹಳೆಬಂದರಿನಲ್ಲಿ ಲಕ್ಷದ್ವೀಪದ ಜೆಟ್ಟಿಯೊಂದು ನಿರ್ಮಾಣವಾಗುತ್ತದೆ ಎಂದು ಹೇಳಲಾಗುತ್ತಿತ್ತು. ಲಕ್ಷದ್ವೀಪದ ಸರಕುಗಳಿಗೆ ಗೋದಾಮು ಸಹಿತ ಇತರ ಅನುಕೂಲಗಳಿಗೆ ಜೆಟ್ಟಿ ನಿರ್ಮಾಣಕ್ಕೆ ಅಲ್ಲಿನ ಆಡಳಿತ ಮುಂದಾಗಿತ್ತು. ಇದಕ್ಕೆ ಇಲ್ಲಿನ ಆಡಳಿತ ವರ್ಗ ಒಪ್ಪಿಗೆ ಸೂಚಿಸುವ ಜತೆಗೆ ಸ್ಥಳವನ್ನೂ ನೀಡುವ ಭರವಸೆ ನೀಡಲಾಗಿತ್ತು. ಆದರೆ ಪ್ರಸ್ತುತ ಜೆಟ್ಟಿ ನಿರ್ಮಾಣಕ್ಕೂ ಲಕ್ಷದ್ವೀಪದ ಆಡಳಿತ ನಿರಾಸಕ್ತಿ ತೋರಿದೆ. 

ಕಿರಣ್‌ ಸರಪಾಡಿ

ಟಾಪ್ ನ್ಯೂಸ್

1-deee

Viral Video; ಬೆಂಕಿ ಹೊತ್ತಿಕೊಂಡ ಬಳಿಕ ಚಾಲಕನಿಲ್ಲದೆ ಚಲಿಸಿದ ಕಾರು!!

Martin Box Office: ಹೇಗಿದೆ ʼಮಾರ್ಟಿನ್ʼ ಹವಾ.. ಎರಡು ದಿನದಲ್ಲಿ ಚಿತ್ರ ಗಳಿಸಿದ್ದೆಷ್ಟು?

Martin Box Office: ಹೇಗಿದೆ ʼಮಾರ್ಟಿನ್ʼ ಹವಾ.. ಎರಡು ದಿನದಲ್ಲಿ ಚಿತ್ರ ಗಳಿಸಿದ್ದೆಷ್ಟು?

Siruguppa: ಬಡಿಗೆಗಳ ಜಾತ್ರೆ; 70 ಜನರಿಗೆ ಗಾಯ; ಇಬ್ಬರ ಸ್ಥಿತಿ ಗಂಭೀರ

Siruguppa: ಬಡಿಗೆಗಳ ಜಾತ್ರೆ; 70 ಜನರಿಗೆ ಗಾಯ; ಇಬ್ಬರ ಸ್ಥಿತಿ ಗಂಭೀರ

Hagaribommanahalli: ಜೆಸ್ಕಾಂ ಇಲಾಖೆಯಿಂದ ನಿರ್ಲಕ್ಷ್ಯ, ಟಿಸಿಗಳ ಸುತ್ತ ಗಿಡಗಂಟೆಗಳು

Hagaribommanahalli: ಜೆಸ್ಕಾಂ ಇಲಾಖೆಯಿಂದ ನಿರ್ಲಕ್ಷ್ಯ, ಟಿಸಿಗಳ ಸುತ್ತ ಗಿಡಗಂಟೆಗಳು

Box office: ಮಾರ್ಟಿನ್‌ To ಜಿಗ್ರಾ.. ದಸರಾಕ್ಕೆ ರಿಲೀಸ್‌ ಆದ ಸಿನಿಮಾಗಳು ಗಳಿಸಿದ್ದೆಷ್ಟು?

Box office: ಮಾರ್ಟಿನ್‌ To ಜಿಗ್ರಾ.. ದಸರಾಕ್ಕೆ ರಿಲೀಸ್‌ ಆದ ಸಿನಿಮಾಗಳು ಗಳಿಸಿದ್ದೆಷ್ಟು?

7-health

Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?

Hubli: BJP’s fight only if Muslims are named in the case: Santosh Lad

Hubli: ಪ್ರಕರಣದಲ್ಲಿ ಮುಸ್ಲಿಮರ ಹೆಸರು ಇದ್ದರೆ ಮಾತ್ರ ಬಿಜೆಪಿಯ ಹೋರಾಟ: ಸಂತೋಷ್‌ ಲಾಡ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

26

Mangaluru: ಬಾಂಗ್ಲಾ ಪ್ರಜೆ; ಒಂದು ವಾರ ಕಸ್ಟಡಿಗೆ

Arrested: ಜುಗಾರಿ ಆಟ ಆಡುತ್ತಿದ್ದ 6 ಮಂದಿ ಸೆರೆ

Arrested: ಜುಗಾರಿ ಆಟ ಆಡುತ್ತಿದ್ದ 6 ಮಂದಿ ಸೆರೆ

11

Mangaluru: ಕಾರು ಢಿಕ್ಕಿ; ಸ್ಕೂಟರ್‌ ಸವಾರ ಸಾವು

10

Mangaluru: ನಿವೃತ್ತ ಕರ್ನಲ್‌ ರತ್ನಕುಮಾರ್‌ ಅಡಪ ನಿಧನ

Mangaluru: ಓವರ್‌ ಟೇಕ್‌ ಗಲಾಟೆ; ಬಸ್‌ ಗೆ ನುಗ್ಗಿ ಕಂಡಕ್ಟರ್‌ ಗೆ ಹಲ್ಲೆ

Mangaluru: ಓವರ್‌ ಟೇಕ್‌ ಗಲಾಟೆ; ಬಸ್‌ ಗೆ ನುಗ್ಗಿ ಕಂಡಕ್ಟರ್‌ ಮೇಲೆ ಹಲ್ಲೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-deee

Viral Video; ಬೆಂಕಿ ಹೊತ್ತಿಕೊಂಡ ಬಳಿಕ ಚಾಲಕನಿಲ್ಲದೆ ಚಲಿಸಿದ ಕಾರು!!

Martin Box Office: ಹೇಗಿದೆ ʼಮಾರ್ಟಿನ್ʼ ಹವಾ.. ಎರಡು ದಿನದಲ್ಲಿ ಚಿತ್ರ ಗಳಿಸಿದ್ದೆಷ್ಟು?

Martin Box Office: ಹೇಗಿದೆ ʼಮಾರ್ಟಿನ್ʼ ಹವಾ.. ಎರಡು ದಿನದಲ್ಲಿ ಚಿತ್ರ ಗಳಿಸಿದ್ದೆಷ್ಟು?

Dharwad: ಸಿಎಂ ಸಿದ್ದು ವಿರುದ್ದ ಪ್ರತಿಭಟನೆ: ಬಿಜೆಪಿ ಮುಖಂಡರ ಬಂಧನ

Dharwad: ಸಿಎಂ ಸಿದ್ದು ವಿರುದ್ದ ಪ್ರತಿಭಟನೆ: ಬಿಜೆಪಿ ಮುಖಂಡರು ವಶಕ್ಕೆ

Vijayapura: Why didn’t BJP say about withdrawal of CT Ravi case: MB Patil

Vijayapura: ಸಿ.ಟಿ.ರವಿ ಪ್ರಕರಣ ಹಿಂಪಡೆದ ಬಗ್ಗೆ ಬಿಜೆಪಿಯವರು ಯಾಕೆ ಹೇಳಲ್ಲ: ಎಂಬಿ ಪಾಟೀಲ್

Yuva: ರೌಡಿಸಂ ಸುತ್ತ ಯುವ ರಾಜಕುಮಾರ್‌: ಹೊಸ ಚಿತ್ರಕ್ಕೆ 3 ನಿರ್ಮಾಪಕರು

Yuva: ರೌಡಿಸಂ ಸುತ್ತ ಯುವ ರಾಜಕುಮಾರ್‌: ಹೊಸ ಚಿತ್ರಕ್ಕೆ 3 ನಿರ್ಮಾಪಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.