ಜಮೀನು ವಿಭಾಗ ಪತ್ರ ನೋಂದಣಿಗೆ ಲಾಕ್‌ಡೌನ್‌ ಕುತ್ತು

ಸರ್ವೇ ಇಲಾಖೆಯಿಂದ ಅವೈಜ್ಞಾನಿಕ ವಿನಾಯಿತಿ ಅವಧಿ ನಿಗದಿ ; ಪರಿಷ್ಕರಣೆಗೆ ಒತ್ತಡ

Team Udayavani, Jul 1, 2020, 6:43 AM IST

ಜಮೀನು ವಿಭಾಗ ಪತ್ರ ನೋಂದಣಿಗೆ ಲಾಕ್‌ಡೌನ್‌ ಕುತ್ತು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಬೆಳ್ತಂಗಡಿ: ರೈತರು ತಮ್ಮ ಜಮೀನಿನ ವಿಭಾಗ ಪತ್ರ ನೋಂದಣಿಗೆ ಸರ್ವೇ ಇಲಾಖೆಯಿಂದ ಪಡೆದ 11 ಇ ನಕ್ಷೆಗಳ ಕಾಲಮಿತಿ ಮುಗಿದುದರಿಂದ ಅವರು ದುಬಾರಿ ಶುಲ್ಕ ಪಾವತಿಸಿ ಮತ್ತೂಮ್ಮೆ ಅಳತೆ ಮಾಡಿಸಬೇಕಾದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸತತ ಎರಡು ತಿಂಗಳು ಲಾಕ್‌ ಡೌನ್‌ ಇದ್ದುದರಿಂದ ಸರಕಾರಿ ಕೆಲಸಗಳು ಮಂದಗತಿಯಲ್ಲಿವೆ. ಈ ನಡುವೆ ಭೂ ಪರಭಾರೆಗೆ ಪಡೆದ 11ಇ ನಕ್ಷೆ ನೋಂದಣಿಗೆ ಸರ್ವೇ ಇಲಾಖೆ ಕೇವಲ 1 ತಿಂಗಳ ವಿನಾಯಿತಿ ನೀಡಿತ್ತು.

ಈ ಅವಧಿಯಲ್ಲಿ ಇದಕ್ಕಾಗಿ ಸರ್ವೇ ಇಲಾಖೆ ಟೋಕನ್‌ ವ್ಯವಸ್ಥೆ ಆರಂಭಿಸಿತ್ತು. ಹೆಚ್ಚಿನ ಮಂದಿ ದೂರದೂರಿನಲ್ಲಿ ಸಿಲುಕಿದ್ದು, ವಿನಾಯಿತಿ ಅವಧಿ ವಿಸ್ತರಿಸುವುದು ಅಗತ್ಯವಾಗಿತ್ತು.

ಪ್ರತೀ ಸರ್ವೇ ನಂ.ಗೆ 1,200 ರೂ.
ಈ ಮಧ್ಯೆ ಸರ್ವರ್‌ ಸಮಸ್ಯೆ ಮತ್ತಿತರ ತೊಂದರೆ ಎದುರಾದ್ದರಿಂದ ಈಗಾಗಲೇ ಅರ್ಜಿ ಸಲ್ಲಿಸಿದವರ ಕಾಲಮಿತಿ ಮುಗಿದಿದೆ. ವಿನಾಯಿತಿ ಅವಧಿ ವಿಸ್ತರಿಸದೆ ಇರುವುದರಿಂದ ಕಾಲಮಿತಿ ಮುಗಿದಿರುವ ರೈತರು ಒಂದು ಸರ್ವೇ ನಂಬರಿಗೆ 1,200 ರೂ.ಗಳಂತೆ ಪಾವತಿಸಿ ಮತ್ತೂಮ್ಮೆ ಅಳತೆಗೊಳಪಡಿಸಿ ಹೊಸ ನಕ್ಷೆ ತಯಾರಿಸಿಕೊಳ್ಳಬೇಕಾದ ಅನಿವಾರ್ಯತೆ ಒದಗಿದೆ.

ನೋಂದಣಿ ಮೇಯಲ್ಲಿ ಆರಂಭಗೊಂಡರೂ ವೇಗವಾಗಿ ಆಗುತ್ತಿಲ್ಲ. ಪ್ರಸ್ತುತ ಜನರು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ನೋಂದಣಿ ಕಚೇರಿಗೆ ಸ್ಕಾ éನ್‌ ಮಾಡಿದ ದಸ್ತಾವೇಜು ಪ್ರತಿ ಇಮೇಲ್‌ ಮಾಡಿ, ಬಳಿಕ ಉಪನೋಂದಣಾಧಿಕಾರಿಗಳು ನಿಗದಿಪಡಿಸಿದ ದಿನ ಕಡತ ಹಾಜರುಪಡಿಸಿ ನೋಂದಣಿ ಮಾಡಿಸಿಕೊಳ್ಳಬೇಕು. ಈ ಪ್ರಕ್ರಿಯೆಗೆ ಕನಿಷ್ಠ ಎರಡು ವಾರ ತಗಲುತ್ತದೆ.

ತಮ್ಮದಲ್ಲದ ತಪ್ಪಿನಿಂದ ಜನರಿಗೆ ಸಂಕಷ್ಟ
ಸರಕಾರವು ಎಲ್ಲ  ಕ್ಷೇತ್ರಗಳಲ್ಲಿ  ಕನಿಷ್ಠ 3 ತಿಂಗಳ ವಿನಾಯಿತಿ ಘೋಷಿಸಿದ್ದರೂ ಸರ್ವೇ ಇಲಾಖೆ ವ್ಯಾಪ್ತಿಗೆ ಕೇವಲ ಒಂದು ತಿಂಗಳು ಮಿತಿಗೊಳಿಸಿದೆ. ವಿನಾಯಿತಿ 3 ತಿಂಗಳು ಇದ್ದರೂ ಕೆಲವು ಕಡತಗಳಿಗೆ ಒಂದು ತಿಂಗಳ ಅವಧಿ ಸೂಚಿಸುತ್ತಿದೆ. ಈ ಕುರಿತು ಉಪನೋಂದಣಾಧಿಕಾರಿಗಳಿಗೂ ಸಮರ್ಪಕ ಮಾಹಿತಿ ಇಲ್ಲ.

ಇಲಾಖೆ ಈ ಬಗ್ಗೆ  ಸಾರ್ವಜನಿಕ ಪ್ರಕಟನೆ ನೀಡದಿರುವುದರಿಂದ ರೈತರಿಗೆ ಮಾಹಿತಿ ಲಭಿಸಿಲ್ಲ. ಇಲಾಖೆಯ ಈ ಕ್ರಮದಿಂದ 11ಇ ನಕ್ಷೆ ಪಡೆದು ಲಾಕ್‌ ಡೌನ್‌ನಿಂದಾಗಿ ನೋಂದಣಿಗೆ ಬಾಕಿಯಾಗಿರುವ ಎಲ್ಲ ಕಡತಗಳ ವಿಚಾರದಲ್ಲಿ ಜನರು ತಮ್ಮದಲ್ಲದ ತಪ್ಪಿಗೆ ದುಬಾರಿ ಮೊತ್ತ ತೆತ್ತು ಮತ್ತೆ ಅಳತೆ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ. ಇದರಿಂದ ಬ್ಯಾಂಕ್‌ ವ್ಯವಹಾರ, ಜಮೀನು ವಿಭಾಗ ಪರಭಾರೆಗೂ ಹೊಡೆತ ಬಿದ್ದಿದೆ.

ಆರಂಭದಲ್ಲಿ  11ಇ ನಕ್ಷೆ ಪಡೆದು ನೋಂದಣಿಗೆ 6 ತಿಂಗಳ ಅವಧಿ ನೀಡಲಾಗಿತ್ತು. ಕೋವಿಡ್‌ ಕಾರಣದಿಂದ ಮೂರು ತಿಂಗಳ ಹೆಚ್ಚುವರಿ ಅವಧಿ ನೀಡಲಾಗಿದೆ. ಈ ಮಧ್ಯೆಯೂ ತಾಂತ್ರಿಕ ದೋಷದಿಂದ ನೋಂದಣಿಗೆ ಬಾಕಿ ಉಳಿದಿರುವ ಕಡತಗಳಿದ್ದಲ್ಲಿ  ಮತ್ತೂಮ್ಮೆ  ಪರಿಶೀಲಿಸಲು ಉಪನೋಂದಣಾಧಿಕಾರಿಗಳಿಗೆ ಸೂಚಿಸುತ್ತೇನೆ.
– ಶ್ರೀಧರ್‌ ಹೆಚ್ಚುವರಿ ನಿರ್ದೇಶಕರು, ಸರ್ವೇ ಇಲಾಖೆ, ಬೆಂಗಳೂರು

ಟಾಪ್ ನ್ಯೂಸ್

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Uppinangady: ವರದಕ್ಷಿಣೆಗಾಗಿ ನಿತ್ಯ ಮಾನಸಿಕ, ದೈಹಿಕ ಹಿಂಸೆ: ದೂರು ದಾಖಲು

9

Puttur: ಅಮರ್‌ ಜವಾನ್‌ ಜ್ಯೋತಿ ಸ್ಮಾರಕಕ್ಕೆ ದುಷ್ಕರ್ಮಿಗಳ ದಾಳಿ

2

Theft Case: ಬ್ಯಾಂಕಿನಿಂದ ಹಣದ ಬ್ಯಾಗ್‌ ಕಳವು ಪ್ರಕರಣ

6-kadaba

Kadaba: ಕಾರು – ಬೈಕ್‌ ಅಪಘಾತ; ಸವಾರ ಮೃತ್ಯು

Tumbe

illegal Sand: ತುಂಬೆ, ಮಾರಿಪಳ್ಳ: ಮರಳು ಅಡ್ಡೆಗೆ ದಾಳಿ; 20 ಬೋಟ್‌ಗಳ ವಶ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

police

Uppinangady: ವರದಕ್ಷಿಣೆಗಾಗಿ ನಿತ್ಯ ಮಾನಸಿಕ, ದೈಹಿಕ ಹಿಂಸೆ: ದೂರು ದಾಖಲು

Exam

PG NEET-2024: ನೋಂದಣಿ ವಿಸ್ತರಣೆ

KSRTC VOLVO

Dasara: ಎರಡು ಸಾವಿರ ಹೆಚ್ಚುವರಿ ಬಸ್‌

school

ರಾಜ್ಯ ಪಠ್ಯಕ್ರಮ ಬೋಧನೆ ಕಡ್ಡಾಯ : ಶಾಲೆಗಳಿಗೆ ಶಿಕ್ಷಣ ಇಲಾಖೆ ಸೂಚನೆ

Vaishnodevi-Temple

Famous Goddess Temple: ಗುಹಾಲಯ ಶ್ರೀಮಾತಾ ವೈಷ್ಣೋದೇವಿ ದೇಗುಲ, ಜಮ್ಮು-ಕಾಶ್ಮೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.