Mangaluru: ಕಾರಿನಿಂದ ಲ್ಯಾಪ್ಟಾಪ್ ಕಳವು
Team Udayavani, Jun 8, 2024, 7:15 PM IST
ಸಾಂದರ್ಭಿಕ ಚಿತ್ರ
ಮಂಗಳೂರು: ಕಾರಿನಿಂದ ಲ್ಯಾಪ್ಟಾಪ್ ಕಳವು ಮಾಡಿರುವ ಘಟನೆ ನಗರದ ಹಂಪನಕಟ್ಟೆಯ ಸಮೀಪ ಸಂಭವಿಸಿದೆ.
ಶುಕ್ರವಾರ ಸಂಜೆ 5 ಗಂಟೆಗೆ ಹಂಪನಕಟ್ಟೆ ಕೆ.ಎಸ್.ರಾವ್ ರಸ್ತೆಯ ಜುವೆಲ್ಲರಿ ಶಾಪ್ ಪಕ್ಕದಲ್ಲಿ ರಸ್ತೆ ಬದಿಯಲ್ಲಿ ಕಾರು ಮಾಲಕರು ಕಾರನ್ನು ನಿಲ್ಲಿಸಿ ವಾಚ್ ರಿಪೇರಿ ಅಂಗಡಿಗೆ ಹೋಗಿ ಅರ್ಧ ಗಂಟೆ ಬಿಟ್ಟು ವಾಪಸ್ ಬಂದಿದ್ದರು. ಆಗ ಡ್ರೈವರ್ ಸೀಟ್ನ ಪಕ್ಕದ ಸೀಟಿನಲ್ಲಿಟ್ಟಿದ್ದ ಲ್ಯಾಪ್ಟಾಪ್ ಕಳವಾಗಿರುವುದು ಗಮನಕ್ಕೆ ಬಂದಿದೆ. ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.