KCCI ಮಂಗಳೂರಿನಲ್ಲಿ ನಮ್ಮದೇ ಉದ್ಯಮ ಬೆಳೆಸೋಣ: ಸಂಸದ ಕ್ಯಾ|ಬ್ರಿಜೇಶ್‌ ಚೌಟ

ಕೆನರಾ ಚೇಂಬರ್ಸ್‌ ಸಂವಾದ ಕಾರ್ಯಕ್ರಮ

Team Udayavani, Aug 23, 2024, 11:50 PM IST

KCCI ಮಂಗಳೂರಿನಲ್ಲಿ ನಮ್ಮದೇ ಉದ್ಯಮ ಬೆಳೆಸೋಣ: ಸಂಸದ ಕ್ಯಾ|ಬ್ರಿಜೇಶ್‌ ಚೌಟ

ಮಂಗಳೂರು: ಬೇರೆ ಉದ್ಯಮಗಳನ್ನು ಮಂಗಳೂರಿಗೆ ಆಕರ್ಷಿಸುವುದಕ್ಕೆ ಹಾಕುವ ಶ್ರಮಕ್ಕಿಂತಲೂ ನಮ್ಮದೇ ಇಲ್ಲಿನ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಮೂಲಕ ಈ ಭಾಗದ ಅಭಿವೃದ್ಧಿಗೆ ಮುಂದಾಗೋಣ. ಅದಕ್ಕೆ ಮಂಗಳೂರನ್ನು ಋಣಾತ್ಮಕವಾಗಿ ಬಿಂಬಿಸುವ ಬದಲು ಧನಾತ್ಮಕವಾಗಿ ತೋರಿಸುವುದು ಮುಖ್ಯ ಎಂದು ಸಂಸದ ಕ್ಯಾ| ಬ್ರಿಜೇಶ್‌ ಚೌಟ ಹೇಳಿದ್ದಾರೆ.

ನಗರದಲ್ಲಿ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯವರು ಹಮ್ಮಿಕೊಂಡಿದ್ದ “ಸಂಸದರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅನೇಕ ವರ್ಷಗಳಿಂದ ದೊಡ್ಡದೊಡ್ಡ ಉದ್ಯಮಗಳನ್ನು ಇಲ್ಲಿಗೆ ತರಲು ಬಹಳ ಪ್ರಯತ್ನಗಳು ನಡೆಯುತ್ತಿದ್ದರೂ ಅದರಲ್ಲಿ ಹೆಚ್ಚಿನ ಸಫ‌ಲತೆ ಸಿಕ್ಕಿಲ್ಲ. ಆ ಪ್ರಯತ್ನಗಳ ಜತೆಯಲ್ಲಿ ನಮ್ಮದೇ ಆದ “ಮಂಗಳೂರು ಆಧರಿತ ಉದ್ದಿಮೆ’ಗಳನ್ನೇ ಬೆಳೆಸುವ ಮೂಲಕ ಮೆಟ್ರೋ ನಗರಗಳಿಗೆ ನಾವು ಸರಿಸಾಟಿಯಾಗಿ ಬೆಳೆಯಬಹುದು ಎಂದರು.

ಮಂಗಳೂರಿನಲ್ಲಿ “ನೈಟ್‌ಲೈಫ್ ‘ ಎನ್ನುವುದೊಂದೇ ಕಾರಣಕ್ಕೆ ಇಲ್ಲಿಗೆ ಉದ್ಯಮಗಳು ಬರದಿರುವುದಲ್ಲ. ಎಷ್ಟೋ ಇತರ ನಗರಗಳು ಮಂಗಳೂರಿಗಿಂತ ಕೆಟ್ಟದ್ದಾಗಿವೆ. ಆದರೆ ಅಲ್ಲಿ ಐಟಿ ಸಹಿತ ಉದ್ದಿಮೆಗಳು ಬೆಳೆದಿವೆ. ಹಾಗಾಗಿ ಮಂಗಳೂರನ್ನು ಋಣಾತ್ಮಕವಾಗಿ ನೋಡುವುದು ಸಲ್ಲದು ಎಂದರು.

ಬೆಂಗಳೂರು-ಮಂಗಳೂರು ಸಂಪರ್ಕ ಮುಖ್ಯಮಂಗಳೂರು ಹಾಗೂ ಬೆಂಗಳೂರಿನ ಸಂಪರ್ಕ ತ್ವರಿತಗೊಳಿಸುವುದು ಹಿಂದಿನಿಂದಲೂ ಇರುವ ನನ್ನ ಗುರಿ, ನನ್ನ ನವಯುಗ ನವಪಥ ಪರಿಕಲ್ಪನೆಯಲ್ಲೂ ಅದನ್ನೇ ಹೇಳಿದ್ದೇನೆ, ಮಂಗಳೂರು-ಬೆಂಗಳೂರು ಸಂಪರ್ಕ ವೇಗವಾದರೆ ಬಹುತೇಕ ಅಭಿವೃದ್ಧಿ ವಿಚಾರಗಳು ಗುರಿಮುಟ್ಟಲಿವೆ, ಅದಕ್ಕಾಗಿ ಹಲವು ಅಂಶದ ಕೆಲಸಗಳನ್ನು ಮಾಡಲಾಗುತ್ತಿದೆ ಎಂದರು.

ಈಗಾಗಲೇ ಕೇಂದ್ರದ ಸಚಿವರನ್ನು ಭೇಟಿಯಾಗಿ ಮನದಟ್ಟು ಮಾಡಿದ್ದೇನೆ, ಮಂಗಳೂರು-ಬೆಂಗಳೂರು ರೈಲಿನ ವೇಗವರ್ಧನೆಗೂ ಅಧ್ಯಯನ ನಡೆಸಲಾಗುತ್ತಿದೆ, ಈ ಭಾಗದ ರೈಲಿನ ಸಮಸ್ಯೆ ಇತ್ಯರ್ಥಕ್ಕೆ ಮೂರೂ ಡಿಆರ್‌ಎಂಗಳ ಮಟ್ಟದ ಸಭೆ ಪ್ರತಿ ಮೂರು ತಿಂಗಳಿಗೊಮ್ಮೆ ಯೋಜಿಸಲಾಗಿದೆ ಎಂದರು.

ಮಂಗಳೂರಿನ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಲ್ಲಿದೆ. ಸಸಿಹಿತ್ಲಿನಲ್ಲಿ ಅಡ್ವೆಂಚರ್‌ ಟೂರಿಸಂ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಇಲ್ಲೊಂದು ಫಿಲ್ಮ್ ಸಿಟಿ ನಿರ್ಮಾಣ, ಆಹಾರ ಸಂಸ್ಕರಣ, ಸಾಗರೋತ್ಪನ್ನ ಸಂಸ್ಕರಣ ಘಟಕಗಳಿಗೆ ಉತ್ತೇಜನ ನೀಡುವುದೂ ಆದ್ಯತೆಯಾಗಿದೆ ಎಂದರು.

ಕೆನರಾ ಚೇಂಬರ್ಸ್‌ನ ಗಣ್ಯರೊಂದಿಗೆ ಸಂವಾದ ನಡೆಯಿತು. ಕೆಸಿಸಿಐ ಅಧ್ಯಕ್ಷ ಅನಂತೇಶ್‌ ವಿ.ಪ್ರಭು ಅವರು ಕರಾವಳಿ ಕುರಿತ ಬೇಡಿಕೆಗಳನ್ನೊಳಗೊಂಡ ಮನವಿ ಸಲ್ಲಿಸಿದರು.ಉಪಾಧ್ಯಕ್ಷ ಆನಂದ್‌ ಜಿ.ಪೈ, ಕಾರ್ಯದರ್ಶಿಗಳಾದ ಪಿ.ಬಿ.ಅಹಮದ್‌ ಮುದಾಸರ್‌, ಅಶ್ವಿ‌ನ್‌ ಪೈ ಮಾರೂರು, ಖಜಾಂಚಿ ಅಬ್ದುರ್‌ ರಹ್ಮಾನ್‌ ಮುಸ್ಬಾ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Subhra-Swamy

Mangaluru Visit: ಇಂದು ಡಾ. ಸುಬ್ರಮಣಿಯನ್‌ ಸ್ವಾಮಿ ಮಂಗಳೂರಿಗೆ

aane

Sulya: ಆಲೆಟ್ಟಿ: ಕಾಡಾನೆ ದಾಳಿ ಪ್ರದೇಶಕ್ಕೆ ಅರಣ್ಯಾಧಿಕಾರಿ ಭೇಟಿ

Mangaluru-BjP

Nagamangala Riots: ಕದ್ರಿ: ಗಣೇಶೋತ್ಸವ ಸಮಿತಿಗಳ ಒಕ್ಕೂಟದಿಂದ ಪ್ರತಿಭಟನೆ

udUdupi ಗೀತಾರ್ಥ ಚಿಂತನೆ-34: ಸ್ವಕರ್ಮ, ಸ್ವಧರ್ಮ: ಉತ್ಪಾದನೆಯ ಮರ್ಮ

Udupi ಗೀತಾರ್ಥ ಚಿಂತನೆ-34: ಸ್ವಕರ್ಮ, ಸ್ವಧರ್ಮ: ಉತ್ಪಾದನೆಯ ಮರ್ಮ

PROTEST

Udupi: ನಾಗಮಂಗಲ ಘಟನೆ ಖಂಡಿಸಿ ವಿವಿಧೆಡೆ ಪ್ರತಿಭಟನೆ

Tulunadu-utsava

Mangaluru: ತುಳುನಾಡ ಉತ್ಸವ ಪಿಲಿಕುಳ ಕಂಬಳ: ಬೆಂಗಳೂರಿನಲ್ಲಿ ಸಭೆ

police

Udupi: ನಾಪತ್ತೆಯಾಗಿದ್ದ ಬಾಲಕನ ರಕ್ಷಣೆ, ಮಕ್ಕಳ ರಕ್ಷಣ ಘಟಕಕ್ಕೆ ಹಸ್ತಾಂತರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Subhra-Swamy

Mangaluru Visit: ಇಂದು ಡಾ. ಸುಬ್ರಮಣಿಯನ್‌ ಸ್ವಾಮಿ ಮಂಗಳೂರಿಗೆ

Mangaluru-BjP

Nagamangala Riots: ಕದ್ರಿ: ಗಣೇಶೋತ್ಸವ ಸಮಿತಿಗಳ ಒಕ್ಕೂಟದಿಂದ ಪ್ರತಿಭಟನೆ

Tulunadu-utsava

Mangaluru: ತುಳುನಾಡ ಉತ್ಸವ ಪಿಲಿಕುಳ ಕಂಬಳ: ಬೆಂಗಳೂರಿನಲ್ಲಿ ಸಭೆ

1-adasdsaddas

Mangaluru CCB Police: 8 ಕೆಜಿ ಗಾಂಜಾ ಸಹಿತ ಇಬ್ಬರ ಬಂಧನ

Mangaluru: ಜೆಸಿಬಿ ಯಿಂದ ಮನೆ ಕೆಡವುತ್ತಿದ್ದ ವೇಳೆ ಗೋಡೆ ಕುಸಿದು ಇಬ್ಬರು ಮೃತ್ಯು

Mangaluru: ಹಳೆ ಮನೆ ಕೆಡವುತ್ತಿದ್ದ ವೇಳೆ ಗೋಡೆ ಕುಸಿದು ಇಬ್ಬರು ಮೃತ್ಯು

MUST WATCH

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

ಹೊಸ ಸೇರ್ಪಡೆ

Subhra-Swamy

Mangaluru Visit: ಇಂದು ಡಾ. ಸುಬ್ರಮಣಿಯನ್‌ ಸ್ವಾಮಿ ಮಂಗಳೂರಿಗೆ

aane

Sulya: ಆಲೆಟ್ಟಿ: ಕಾಡಾನೆ ದಾಳಿ ಪ್ರದೇಶಕ್ಕೆ ಅರಣ್ಯಾಧಿಕಾರಿ ಭೇಟಿ

congress

Haryana ಚುನಾವಣೆ: 89 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕಣಕ್ಕೆ, ಸಿಪಿಎಂಗೆ 1 ಸ್ಥಾನ

suicide (2)

Kanpur:ಮಹಿಳೆಯ ಬೆತ್ತಲೆ, ರುಂಡವಿಲ್ಲದ ಮೃತದೇಹ ಪತ್ತೆ

1bbb

Baahubali; ನೆರೆ ನೀರಲ್ಲಿ ತಲೆ ಮೇಲೆ ಬೈಕ್‌ ಹೊತ್ತು ನಡೆದ ‘ಬಾಹುಬಲಿ’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.