ಲಕ್ಷದ್ವೀಪ ಪ್ರವಾಸೋದ್ಯಮದ ಅವಕಾಶ ಬಳಸಿಕೊಳ್ಳುವಲ್ಲಿ ಮಂಗಳೂರು ಹಿನ್ನಡೆ


Team Udayavani, May 17, 2024, 10:55 AM IST

5

ಮಂಗಳೂರು: ಈ ವರ್ಷಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿತ್ತು. ರಾಜ್ಯದ ಪ್ರವಾಸಿಗರಿಗೆ ಲಕ್ಷದ್ವೀಪಕ್ಕೆ ಸಮೀಪದ ತಾಣವಾದ ಮಂಗಳೂರಿ ನಿಂದ ನೇರವಾಗಿ ಹೋಗುವುದಕ್ಕೆ ಸೌಲಭ್ಯ ಕಲ್ಪಿಸ‌ಬೇಕು ಎಂಬ ಆಗ್ರಹವೂ ಸಾರ್ವಜನಿಕ ರಂಗದಲ್ಲಿ ಮೂಡಿತ್ತು.

ಆದರೆ ಇದಾಗಿ 4 ತಿಂಗಳು ಸಂದರೂ ಪ್ರವಾಸಿಗರಿಗೆ ಖುಷಿ ಮೂಡಿಸುವಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಲಕ್ಷ ದ್ವೀಪಕ್ಕೆ ಪ್ರವಾಸ ಹೋಗುವವರು ಈಗಲೂ ಕೊಚ್ಚಿಗೆ ಹೋಗಿ ಅಲ್ಲಿಂದ ವಿಮಾನ ಅಥವಾ ನೌಕಾ ಮಾರ್ಗವಾಗಿಯೇ ತೆರಳಬೇಕಿದೆ. ಮೋದಿಯವರ ಲಕ್ಷದ್ವೀಪ ಭೇಟಿ ಯಿಂದ ಆ ಕುರಿತು ಬಹಳಷ್ಟು ಪ್ರಚಾರದ ಅಲೆಗಳು ಎದ್ದಿದ್ದವು. ಇದೇ ವೇಳೆ ಮಾಲ್ಡೀವ್ಸ್‌ನಲ್ಲಿ ಭಾರತ ವಿರೋಧಿ ಚಟುವಟಿಕೆ, ಭಾರತ  ವಿರೋಧಿ ಹೇಳಿಕೆ ಇತ್ಯಾದಿ ಕಾರಣ

ದಿಂದ ಬಾಯ್ಕಟ್‌ ಮಾಲ್ಡೀವ್ಸ್‌, ಗೋ ಲಕ್ಷದ್ವೀಪ್‌ ಎನ್ನುವ ಅಭಿಯಾನ ಸಾಮಾಜಿಕ ಜಾಲ ತಾಣಗಳಲ್ಲಿ ಕಂಡುಬಂದಿತ್ತು.

ಮಂಗಳೂರು -ಲಕ್ಷದ್ವೀಪದ ಪ್ರಯಾಣಕ್ಕೆ ಸಂಬಂಧಿಸಿದಂತೆ ಆಗಿರು ವುದು ಒಂದೇ ಬೆಳವಣಿಗೆ; ಅದೆಂದರೆ ಲಕ್ಷದ್ವೀಪದ ಜನರಿಗೆ ಮಂಗಳೂರಿಗೆ ಬಂದು ಹೋಗುವುದಕ್ಕೆ ಹೈಸ್ಪೀಡ್‌ ನೌಕೆ ಆರಂಭಗೊಂಡಿದ್ದು. ಆದರೆ ಅದರಲ್ಲಿ ಮಂಗಳೂರಿನವರಿಗಾಗಲೀ ಪ್ರವಾಸಿಗರಿಗಾಗಲೀ ಹೋಗುವುದಕ್ಕೆ ಯಾವುದೇ ಸಾಧ್ಯತೆ ಸದ್ಯಕ್ಕಂತೂ ಇಲ್ಲ. ಹೋಗು ವುದಾದರೆ ಲಕ್ಷದ್ವೀಪದಲ್ಲಿ ಅವರ ಬಂಧುಗಳಿರಬೇಕು, ಅವರಿಂದ ಪತ್ರಬೇಕು, ಹಾಗಿದ್ದಲ್ಲಿ ಪರ್ಮಿಟ್‌ ಸುಲಭವಾಗಿ ಸಿಗುತ್ತದೆ.

ಹೀಗಿದೆ ಪರಿಸ್ಥಿತಿ:

ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಪ್ರವಾಸ ತೆರಳಲು ಮುಖ್ಯವಾಗಿ ಬೇಕಾಗಿರು ವುದು ಅನುಮತಿ ನೀಡುವುದಕ್ಕೆ ಒಂದು ವ್ಯವಸ್ಥೆ. ಸದ್ಯ ಇದೆಲ್ಲವನ್ನೂ ಟೂರಿಸಂ ಏಜೆನ್ಸಿಗಳೇ ನಿರ್ವಹಿಸು ತ್ತಿವೆ. ಲಕ್ಷದ್ವೀಪಕ್ಕೆ ಹೋಗಲು ಬೇಕಾದ ಬೋರ್ಡಿಂಗ್‌ ಪಾಸ್‌ ಅನ್ನು ಲಕ್ಷದ್ವೀಪ ಆಡಳಿತ ಕೊಚ್ಚಿಯಲ್ಲಷ್ಟೇ ನೀಡುತ್ತಿದೆ. ಅದನ್ನು ಮಂಗಳೂರಿನಲ್ಲಿ ಪ್ರಾರಂಭಿಸಬೇಕು.ಲಕ್ಷದ್ವೀಪಕ್ಕೆ ಪ್ರವಾಸಿಗರು ಮಂಗಳೂರಿನಿಂದ ಹೋಗುವಂತೆ ಮಾಡುವ ಬಗ್ಗೆ ಸಂಸದರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರಾದರೂ ಯಾವುದೇ ಪರಿಣಾಮ ಕಾರಿ ಚರ್ಚೆಗಳು ನಡೆದಿಲ್ಲ.

ಹೈಪ್‌ ಮರೆತರೇ ಜನ?:

ಒಂದೊಮ್ಮೆ ಮಾಲ್ಡೀವ್ಸ್‌ ಎಂದರೆ ಮೂಗುಮುರಿಯುತ್ತಿದ್ದ ಜನರ ನೆನಪು ಈಗ ಮಾಸಿದಂತೆ ಕಾಣುತ್ತದೆ. ಮತ್ತೆ ನಿಧಾನವಾಗಿ ಮಾಲ್ಡೀವ್ಸ್‌ನತ್ತ ಹೋಗುವ ವರ ಸಂಖ್ಯೆ ಬೆಳೆಯುತ್ತಿದೆ ಎನ್ನುತ್ತಾರೆ ಪ್ರವಾಸಿ ಸಂಸ್ಥೆಯವರು.

ಮಾಲ್ಡೀವ್ಸ್‌, ಲಕ್ಷದ್ವೀಪ ಎರಡಕ್ಕೂ ಹೋಗುವವರಿದ್ದಾರೆ, ಜನ ಬಹಳ  ಬೇಗನೆ ವಿಚಾರಗಳನ್ನು ಮರೆಯು ತ್ತಾರೆ. ಲಕ್ಷದ್ವೀಪಕ್ಕೆ ಹೋಗುವವರಿಗೆ ಬೇಕಾದಷ್ಟು ಮೂಲಸೌಕರ್ಯವನ್ನು ನಮ್ಮ ಸರಕಾರಗಳು ಸೃಷ್ಟಿಸಿಲ್ಲ, ಹಾಗಾಗಿ ದೊಡ್ಡ ಬೇಡಿಕೆ ಕಂಡುಬರುತ್ತಿಲ್ಲ ಎನ್ನುತ್ತಾರೆ ವಿಕ್ರಂ ಟ್ರಾವೆಲ್ಸ್‌ನ ಶಿವಾನಂದ್‌.

ಲಕ್ಷದ್ವೀಪಕ್ಕೆ ತೆರಳುವುದಕ್ಕೆ ದೊಡ್ಡ ಬೇಡಿಕೆಯೇನೂ ಕಂಡುಬಂದಿಲ್ಲ, ಯಥಾಸ್ಥಿತಿಯಲ್ಲೇ ಇದೆ ಎನ್ನುತ್ತಾರೆ ವತಿಕಾ ಟ್ರಾವೆಲ್ಸ್‌ನ ವತಿಕಾ ಪೈ.

ಹೆಚ್ಚುತ್ತಿದೆ ಮೂಲಸೌಕರ್ಯ:

ವಿಲಾಸೀ ಸೌಲಭ್ಯಗಳು ಮಾಲ್ಡೀವ್ಸ್‌ನಲ್ಲಿರುವಷ್ಟರ ಮಟ್ಟಿಗೆ ಲಕ್ಷದ್ವೀಪದಲ್ಲಿ ಲ್ಲಿಲ್ಲ, ಪ್ರಶಾಂತ ವಾತಾವರಣ ಬಯಸುವವರಿಗೆ ಇದು ಸೂಕ್ತ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಲಗ್ಗೆ ಇಟ್ಟರೆ ನಿರ್ವಹಿಸುವುದು ಕಷ್ಟ ಎನ್ನುವುದು ಸದ್ಯ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷದ್ವೀಪ ನಿವಾಸಿ ರಮೀಜ್‌ ಹೇಳುವ ಮಾತು.

ಪ್ರಸ್ತುತ ಲಕ್ಷದ್ವೀಪ ಆಡಳಿತ ಬೀಚ್‌ಗಳ ಸೌಂದರ್ಯ ವರ್ಧನೆ, ಮೂಲಸೌಕರ್ಯ ಸುಧಾರಣೆ ಕೆಲಸದಲ್ಲಿ ತೊಡಗಿದೆ ಎಂದೂ ಅವರು ತಿಳಿಸುತ್ತಾರೆ.

ಲಕ್ಷದ್ವೀಪಕ್ಕೆ ಹೈಸ್ಪೀಡ್‌ ನೌಕೆಯಲ್ಲಿ 7-8 ಗಂಟೆಯಲ್ಲೇ ಹೋಗಬಹುದು ಎನ್ನುವುದು ನಿಜಕ್ಕೂ ದೊಡ್ಡ ಅವಕಾಶ. ಯಾವ ರೀತಿ ಮಂಗಳೂರಿನ ಮೂಲಕ ಪ್ರವಾಸಿಗರು ಹೋಗಬಹುದು ಎಂದು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮುಲ್ಲೈ ಮುಗಿಲನ್‌, ಜಿಲ್ಲಾಧಿಕಾರಿ, ದ.ಕ.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drinking Water198 ಕೋ.ರೂ.ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆ: ಇಂದು ಪ್ರಾಯೋಗಿಕ ಚಾಲನೆ

Drinking Water198 ಕೋ.ರೂ.ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆ: ಇಂದು ಪ್ರಾಯೋಗಿಕ ಚಾಲನೆ

ಈಗ ಮಂಗಳೂರಿನ ಗಾಳಿಯೂ ಕಲುಷಿತ! ಬೆಂಗಳೂರು, ಮೈಸೂರಿನಲ್ಲೂ ಮಾಲಿನ್ಯ ಅಪಾಯಕಾರಿ ಮಟ್ಟದಲ್ಲಿ

ಈಗ ಮಂಗಳೂರಿನ ಗಾಳಿಯೂ ಕಲುಷಿತ! ಬೆಂಗಳೂರು, ಮೈಸೂರಿನಲ್ಲೂ ಮಾಲಿನ್ಯ ಅಪಾಯಕಾರಿ ಮಟ್ಟದಲ್ಲಿ

Surathkal ನಾಲ್ಕು ತಿಂಗಳ ಮಗುವಿಗೆ ಥೈರಾಯ್ಡ್ ಎಂದ ವೈದ್ಯರು!

Surathkal ನಾಲ್ಕು ತಿಂಗಳ ಮಗುವಿಗೆ ಥೈರಾಯ್ಡ್ ಎಂದ ವೈದ್ಯರು!

Rain ಕರಾವಳಿಯಲ್ಲಿ ಎಲ್ಲೋ ಅಲರ್ಟ್‌

Rain ಕರಾವಳಿಯಲ್ಲಿ ಎಲ್ಲೋ ಅಲರ್ಟ್‌

Campco ಸದಸ್ಯತ್ವ ಚೀಟಿ ದುರ್ಬಳಕೆ ಮಾಡಿ ಕಳಪೆ ಅಡಿಕೆ ಮಾರಾಟ ಯತ್ನ

Campco ಸದಸ್ಯತ್ವ ಚೀಟಿ ದುರ್ಬಳಕೆ ಮಾಡಿ ಕಳಪೆ ಅಡಿಕೆ ಮಾರಾಟ ಯತ್ನ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.