ನ. 8ರಿಂದ ಪದವಿ ತರಗತಿ; 61 ಕೋರ್ಸ್‌ ನಿಗದಿ

ಮಂಗಳೂರು ವಿ.ವಿ. ಶೈಕ್ಷಣಿಕ ಮಂಡಳಿ ಸಾಮಾನ್ಯ ಸಭೆಯಲ್ಲಿ ಪ್ರೊ| ಯಡಪಡಿತ್ತಾಯ

Team Udayavani, Oct 28, 2021, 6:38 AM IST

ನ. 8ರಿಂದ ಪದವಿ ತರಗತಿ; 61 ಕೋರ್ಸ್‌ ನಿಗದಿ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ನ. 8ರಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಪದವಿ ತರಗತಿಗಳು ಆರಂಭವಾಗಲಿವೆ. ಮೊದಲ ಹಂತದಲ್ಲಿ 61 ಕೋರ್ಸ್‌ಗಳನ್ನು ನಿಗದಿಪಡಿಸಲಾಗಿದೆ ಎಂದು ವಿ.ವಿ. ಕುಲಪತಿ ಪ್ರೊ| ಪಿ.ಎಸ್‌.ಯಡಪಡಿತ್ತಾಯ ಅವರು ತಿಳಿಸಿದ್ದಾರೆ.

ಮಂಗಳೂರು ವಿ.ವಿ.ಯಲ್ಲಿ ಬುಧವಾರ ನಡೆದ ಶೈಕ್ಷಣಿಕ ಮಂಡಳಿಯ ದ್ವಿತೀಯ ಸಾಮಾನ್ಯ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.

ಈ ಶೈಕ್ಷಣಿಕ ವರ್ಷದಿಂದಲೇ ಹೊಸ ಶಿಕ್ಷಣ ನೀತಿಯಡಿ ಪಠ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ. ಇದಕ್ಕಾಗಿ 48 ಅಧ್ಯಯನ ಮಂಡಳಿ ರಚಿಸಲಾಗಿದೆ. 61 ಕೋರ್ಸ್‌ಗಳ ಪೈಕಿ 6 ಕೋರ್ಸ್‌ ಹೊರತುಪಡಿಸಿ ಉಳಿದ ಪಠ್ಯ ಅಂತಿಮವಾಗಿದೆ. ಫ್ರೆಂಚ್‌, ಡಾಟಾ ಪ್ರೊಸೆಸಿಂಗ್‌, ತುಳು, ಕಂಪ್ಯೂಟರ್‌ ಅಪ್ಲಿಕೇಷನ್‌, ಅರೇಬಿಕ್‌ ಹಾಗೂ ಸಾಮಾನ್ಯ ಕಲಾ ಕೋರ್ಸ್‌ಗಳ ಪಠ್ಯ ಇನ್ನೂ ಅಂತಿಮವಾಗಿಲ್ಲ ಎಂದರು.

ಪರೀಕ್ಷೆ ಎರಡೇ ಗಂಟೆ !
ಹೊಸ ಶಿಕ್ಷಣ ನೀತಿಯಡಿ ಮೂರು ಗಂಟೆ ಬದಲು ಎರಡು ಗಂಟೆ ಅವಧಿಯ ಸೆಮಿಸ್ಟರ್‌ ಪರೀಕ್ಷೆ ಇರುತ್ತದೆ. ಮಂಗಳೂರು ವಿ.ವಿ.ಯಲ್ಲಿ “ಉದ್ಯಮಶೀಲತಾ ಅಭಿವೃದ್ಧಿ ಘಟಕ’ ಆರಂಭಿಸಲಾಗುವುದು. ಸರ್ಟಿಫಿಕೆಟ್‌ ಕೋರ್ಸ್‌ ಹಾಗೂ ಸ್ಟಾರ್ಟ್‌ಅಪ್‌ ಮಾದರಿಯಲ್ಲಿ ಉದ್ಯೋಗ ಸೃಷ್ಟಿಯ ಗುರಿಯಿದೆ ಎಂದರು.

ವಿ.ವಿ.ಯಿಂದ ಕಾನೂನು ಪದವಿ!
ಪ್ರಸಕ್ತ ಶೈಕ್ಷಣಿಕ ಅವಧಿಯಿಂದಲೇ ವಿ.ವಿ. ವ್ಯಾಪ್ತಿಯ ಪದವಿ ಕಾಲೇಜು ಗಳಲ್ಲಿ ಕಾನೂನು ಡಿಪ್ಲೊಮಾ ಕೋರ್ಸ್‌ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಮುಂದಿನ ಸಾಲಿನಿಂದ ಪಿಯುಸಿ ಬಳಿಕ 5 ವರ್ಷಗಳ “ಎಲ್‌ಎಲ್‌ಎಂ’ ಸಮಗ್ರ ಕೋರ್ಸ್‌ ಅಧ್ಯಯನಕ್ಕೆ ಕೊಡಗಿನ ಚಿಕ್ಕಅಳುವಾರು ವಿ.ವಿ. ಅಧ್ಯಯನ ಕೇಂದ್ರದಲ್ಲಿ ಅವಕಾಶ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಎನ್‌ಎಸ್‌ಎಸ್‌, ಎನ್‌ಸಿಸಿ ಜತೆ “ಯೂತ್‌ ರೆಡ್‌ಕ್ರಾಸ್‌’ ಚಟುವಟಿಕೆಗೆ ಮುಂದಿನ ಶೈಕ್ಷಣಿಕ ಅವಧಿಯಿಂದ ಅವಕಾಶ ಕಲ್ಪಿಸಲು ಅನುಮೋದನೆ ನೀಡಲಾಯಿತು. ಪದವಿಯಲ್ಲಿ ಬಿ. ವೊಕೇಶನಲ್‌ ಕಲಿತವರಿಗೆ ಇನ್ನು ಮುಂದೆ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅವಕಾಶ ನೀಡುವ ಸಂಬಂಧ ತಿದ್ದುಪಡಿ ತರಲಾಯಿತು.

ಇದನ್ನೂ ಓದಿ:5000 ಕಿಮೀ ದೂರ ಕ್ರಮಿಸಬಲ್ಲ ಅಗ್ನಿ 5 ಬ್ಯಾಲಿಸ್ಟಿಕ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ

ವಿ.ವಿ. ವ್ಯಾಪ್ತಿಯ ಕಾಲೇಜುಗಳಲ್ಲಿ “ಯೋಗ ವಿಜ್ಞಾನ’ ಎಂಬ ಪಠ್ಯವನ್ನು ಆಯ್ಕೆ ವಿಷಯವಾಗಿ ಅಳವಡಿಸಲು ನಿರ್ಣಯ ಮಾಡಲಾಯಿತು. ವಿ.ವಿ. ಹಾಗೂ ಯುಎಸ್‌ಎ ವೇಯ್ನ ಸ್ಟೇಟ್‌ ಯುನಿವರ್ಸಿಟಿ ಜತೆಗೆ ಒಡಂಬಡಿಕೆಗೆ ಅನುಮೋದನೆ ನೀಡಲಾಯಿತು.

ವಿ.ವಿ. ಕುಲಸಚಿವ ಡಾ| ಕಿಶೋರ್‌ ಕುಮಾರ್‌, ಕುಲಸಚಿವ ಡಾ|ಪಿ.ಎಲ್‌ ಧರ್ಮ, ಹಣಕಾಸು ಅಧಿಕಾರಿ ಡಾ| ಬಿ. ನಾರಾಯಣ ಉಪಸ್ಥಿತರಿದ್ದರು.

ವಿ.ವಿ.ಯಲ್ಲಿ “ಓಪನ್‌ ಬುಕ್‌ ಎಕ್ಸಾಂ’!
ವಿ.ವಿ.ಯಲ್ಲಿ ಮುಂದಿನ ಶೈಕ್ಷಣಿಕ ಸಾಲಿನಲ್ಲಿ “ಓಪನ್‌ ಬುಕ್‌ ಎಕ್ಸಾಂ’ (ಮುಕ್ತ ಪುಸ್ತಕ ಪರೀಕ್ಷೆ) ವಿಧಾನವನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು. ಈ ಮಾದರಿಯಲ್ಲಿ ಆನ್‌ಲೈನ್‌ ಮೂಲಕ ಪ್ರಶ್ನೆಪತ್ರಿಕೆಯನ್ನು ಬೆಳಗ್ಗೆ ನೀಡಲಾಗುತ್ತದೆ. ವಿದ್ಯಾರ್ಥಿಯು ಮನೆಯಲ್ಲೇ ಇದ್ದು ಸಂಜೆಯವರೆಗೆ ನಿಗದಿತ ಅವಧಿಯಲ್ಲಿ ಆನ್‌ಲೈನ್‌ ಮೂಲಕವೇ ಪರೀಕ್ಷೆ ಬರೆಯಬಹುದು ಎಂದು ಪ್ರೊ| ಪಿ.ಎಸ್‌.ಯಡಪಡಿತ್ತಾಯ ತಿಳಿಸಿದರು.

ಅನುಮೋದನೆಗೊಂಡ ಪ್ರಮುಖಾಂಶಗಳು
-ಸ್ನಾತಕೋತ್ತರ/ಪಿಎಚ್‌ಡಿಗೆ ಅಫ್ಘಾನಿಸ್ಥಾನ, ಇರಾಕ್‌ ಸೇರಿದಂತೆ ವಿದೇಶದ 64 ವಿದ್ಯಾರ್ಥಿಗಳ ಹೆಚ್ಚುವರಿ ಅರ್ಜಿಗಳು
-ಸ್ನಾತಕೋತ್ತರ ಸೈಬರ್‌ ಸೆಕ್ಯುರಿಟಿ, ಇತಿಹಾಸ ಹಾಗೂ ಪುರಾತತ್ವಶಾಸ್ತ್ರ, ಹಿಂದಿ ಕಾರ್ಯಕ್ರಮದ ಪರಿಷ್ಕೃತ ಪಠ್ಯಕ್ರಮ
-ಸ್ನಾತಕೋತ್ತರ “ಫುಡ್‌ ಸೈನ್ಸ್‌ ಆ್ಯಂಡ್‌ ನ್ಯೂಟ್ರೀಶಿಯನ್‌’ ಪರಿಷ್ಕೃತ ಪಠ್ಯಕ್ರಮ
-ಸ್ನಾತಕೋತ್ತರ ಜೀವವಿಜ್ಞಾನ, ಬಯೋ ಟೆಕ್ನಾಲಜಿ, ಸಾಗರ ಭೂ ವಿಜ್ಞಾನ ಪರಿಷ್ಕೃತ ಪಠ್ಯಕ್ರಮ
-ಸ್ನಾತಕೋತ್ತರ ವಸ್ತುವಿಜ್ಞಾನ ಪಠ್ಯದಲ್ಲಿ ಅಳವಡಿಸಿದ ಹೊಸಸಾಫ್ಟ್‌ಕೋರ್‌ ಕೋರ್ಸ್‌
-ಕಲಾ/ವಾಣಿಜ್ಯ/ವಿಜ್ಞಾನ ತಂತ್ರಜ್ಞಾನ/ಶಿಕ್ಷಣ ನಿಕಾಯದ ಪಿಎಚ್‌ಡಿ ಪದವಿಗೆ ಯುಜಿಸಿ ನಿರ್ದೇಶನದಂತೆ ಒಂದು ಹೆಚ್ಚುವರಿ ಕೋರ್ಸ್‌ ಅಳವಡಿಸಿ ಪರಿಷ್ಕೃತ ಪಠ್ಯ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.