Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

ಫಾ| ಮುಲ್ಲರ್ಸ್‌ ನಲ್ಲಿ "ರುಬಿಕಾನ್‌ 2024' ಹೋಮಿಯೋಪತಿ ಸಮ್ಮೇಳನ ಉದ್ಘಾಟಿಸಿ ಸಚಿವ ದಿನೇಶ್‌

Team Udayavani, Nov 22, 2024, 12:26 PM IST

10-

ಮಂಗಳೂರು: ದೇಶದಲ್ಲಿ ಈಗ ಸಾಂಕ್ರಾಮಿಕ ಕಾಯಿಲೆ ಗಳಿಂದ ಹೆಚ್ಚಾಗಿ ಜೀವನಶೈಲಿಗೆ ಸಂಬಂಧಿಸಿದ ಸಕ್ಕರೆ ಕಾಯಿಲೆ, ಕ್ಯಾನ್ಸರ್‌, ಮಾನಸಿಕ ಒತ್ತಡದಂತಹ ಅನಾರೋಗ್ಯಗಳು ಕಂಡುಬರುತ್ತಿವೆ. ಅದಕ್ಕೆ ಹೋಮಿಯೋಪತಿ ಸಹಿತ ಎಲ್ಲ ವೈದ್ಯಕೀಯ ಕ್ಷೇತ್ರದವರೂ ಸಂಶೋಧನೆ ನಡೆಸುವ ಮೂಲಕ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯ ಇದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಕಂಕನಾಡಿಯ ಫಾದರ್‌ ಮುಲ್ಲರ್ ಸಭಾಂಗಣದಲ್ಲಿ ಫಾದರ್‌ ಮುಲ್ಲರ್‌ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಎರಡು ದಿನಗಳ 27ನೇ ವಾರ್ಷಿಕ ರಾಷ್ಟ್ರೀಯ ಹೋಮಿಯೋಪತಿ ಸಮ್ಮೇಳನ “ರುಬಿಕಾನ್‌ 2024′ ಉದ್ಘಾಟಿಸಿ ಅವರು ಮಾತನಾಡಿದರು.

300-400 ವರ್ಷ ಹಳೆಯದಾದ ಹೋಮಿಯೋಪತಿ ಚಿಕಿತ್ಸೆ ಭಾರತಕ್ಕೆ ಜರ್ಮನಿಯಿಂದ ಬಂದರೂ ಇಲ್ಲಿ ಬಹಳಷ್ಟು ಬೆಳೆದಿದೆ. ಹಲವು ರೀತಿಯ ದೀರ್ಘ‌ಕಾಲೀನ ಸಮಸ್ಯೆಗಳಿಗೆ ಅದು ಪರಿಹಾರ ಒದಗಿಸುತ್ತಿದೆ ಎಂದರು.

ಫಾದರ್‌ ಮುಲ್ಲರ್‌ ಚಾರಿಟೆಬಲ್‌ ಸಂಸ್ಥೆಯ ನಿರ್ದೇಶಕ ವಂ| ರಿಚರ್ಡ್‌ ಅಲೋಶಿಯಸ್‌ ಕುವೆಲ್ಲೊ ಅಧ್ಯಕ್ಷತೆ ವಹಿಸಿ ಮಾತನಾಡಿ, ಫಾದರ್‌ ಮುಲ್ಲರ್ ಕಾಲೇಜಿಗೆ ವೈದ್ಯಕೀಯ ಮೌಲ್ಯಮಾಪನ ಮತ್ತು ಹೋಮಿಯೋಪತಿಯ ರೇಟಿಂಗ್‌ ಬೋರ್ಡ್‌ ಎ-ಪ್ಲಸ್‌ ಶ್ರೇಯಾಂಕವನ್ನು ಕೊಟ್ಟಿದೆ ಎಂದು ಪ್ರಕಟಿಸಿದರು.

ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಿ, ಸೀಟುಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಹೋಮಿಯೋಪತಿ ಆಯೋಗ ಪರಿಶೀಲಿಸಬೇಕು ಎಂದರು. ಕಾಲೇಜಿನ ವಾರ್ಷಿಕ ಮ್ಯಾಗಜಿನ್‌ “ಪಯೋನಿಯರ್‌ 2024′ ಮತ್ತು “ರಿಸರ್ಚ್‌ ಬುಲೆಟಿನ್‌ 2024’ನ್ನು ಗಣ್ಯರು ಬಿಡುಗಡೆಗೊಳಿಸಿದರು.

ಫಾ| ಮುಲ್ಲರ್ ಕಾಲೇಜಿನ ಆಡಳಿತಾಧಿಕಾರಿ ವಂ| ಫೌಸ್ತಿನ್‌ ಲೋಬೊ ಸ್ವಾಗತಿಸಿ, ಪ್ರಾಂಶುಪಾಲ ಡಾ| ಇ.ಎಸ್‌.ಜೆ. ಪ್ರಭು ಕಿರಣ್‌ ವಂದಿಸಿದರು. ಡಾ| ದೀಪಾ ಪಾಯಸ್‌ ಮತ್ತು ಡಾ|ಮನೀಶ್‌ ಕುಮಾರ್‌ ತಿವಾರಿ ನಿರೂಪಿಸಿದರು.

ಫಾದರ್‌ ಮುಲ್ಲರ್‌ ಹೋಮಿಯೋ ಪತಿ ಫಾರ್ಮಸುಟಿಕಲ್‌ ಡಿವಿಜನ್‌ನ ಆಡಳಿತಾಧಿಕಾರಿ ವಂ| ನೆಲ್ಸನ್‌ ಡಿ. ಪಾಯಸ್‌, ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ವಂ| ಅಶ್ವಿ‌ನ್‌ ಎಲ್‌. ಕ್ರಾಸ್ತಾ, ಹೋಮಿ ಯೋಪತಿ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲೆ ಡಾ| ವಿಲ್ಮಾ ಮೀರಾ ಡಿ’ ಸೋಜಾ, ವೈದ್ಯಕೀಯ ಅಧೀಕ್ಷಕ ಡಾ| ಗಿರೀಶ್‌ ನಾವಡ ಮತ್ತು ಹೋಮಿಯೋಪತಿ ಸಮ್ಮೇಳನದ ಸಂಘಟನ ಕಾರ್ಯದರ್ಶಿ ಡಾ| ರಂಜನ್‌ ಸಿ.ಬ್ರಿಟ್ಟೊ ಉಪಸ್ಥಿತರಿದ್ದರು.

ಮಿಯೋಪತಿಯಲ್ಲಿ ಭಾರತ ವಿಶ್ವಖ್ಯಾತಿ

ವಿಶ್ವದಲ್ಲೇ ಹೋಮಿಯೋಪತಿ ಚಿಕಿತ್ಸೆ ಹಾಗೂ ಶಿಕ್ಷಣದಲ್ಲಿ ಭಾರತ ಮುಂಚೂಣಿಯಲ್ಲಿದೆ. 3.6 ಲಕ್ಷದಷ್ಟು ಪ್ರಮಾಣೀಕೃತ ಹೋಮಿಯೋಪತಿ ಚಿಕಿತ್ಸಕರು ದೇಶದಲ್ಲಿದ್ದಾರೆ. 270 ಕಾಲೇಜುಗಳು ಹೋಮಿಯೋಪತಿ ಶಿಕ್ಷಣ ನೀಡುತ್ತಿದ್ದು, 32 ಸಂಶೋಧನ ಕೇಂದ್ರಗಳು ಕಾರ್ಯವೆಸಗುತ್ತಿವೆ ಎಂದು ರಾಷ್ಟ್ರೀಯ ಹೋಮಿಯೋಪತಿ ಆಯೋಗದ ಅಧ್ಯಕ್ಷ ಡಾ| ಅನಿಲ್‌ ಖುರಾನಾ ಹೇಳಿದರು.

ಭಾರತದಿಂದ ಈಗ ಹೋಮಿಯೋಪತಿ ಔಷಧಗಳನ್ನು ಹೊರದೇಶಗಳಿಗೆ ರಫ್ತು ಮಾಡಲಾಗುತ್ತಿದೆ. 2021ರಿಂದ ಹೋಮಿಯೋಪತಿ ಆಯೋಗವನ್ನು ಪುನರ್‌ ರಚಿಸಲಾಗಿದ್ದು, ಪಠ್ಯಕ್ರಮದ ಸುಧಾರಣೆಗೆ ಗಮನ ಹರಿಸಲಾಗಿದೆ. ಸದ್ಯ ಇರುವ ನಾಲ್ಕು ಸ್ನಾತಕೋತ್ತರ ಕೋರ್ಸ್‌ ಗಳಲ್ಲದೆ ಹೆಚ್ಚುವರಿಯಾಗಿ ಚರ್ಮಚಿಕಿತ್ಸೆ ಹಾಗೂ ಸಮುದಾಯ ಆರೋಗ್ಯ ಕೋರ್ಸ್‌ಗಳನ್ನೂ ಸೇರಿಸಲಾಗುತ್ತಿದೆ ಎಂದರು.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.