Mangaluru: ಮತ್ತೆ ನಗರಕ್ಕೆ ಕೊಳೆತ ಮೀನಿನ ದುರ್ವಾಸನೆ ಶಿಕ್ಷೆ
Team Udayavani, Sep 24, 2024, 5:15 PM IST
ಸಾಂದರ್ಭಿಕ ಚಿತ್ರ
ಮಹಾನಗರ: ಮತ್ತೆ ನಗರದ ದಕ್ಷಿಣ ಭಾಗದ ನಿವಾಸಿಗಳಿಗೆ ಮೀನಿನ ತೈಲ ಸಂಸ್ಕರಣ ಘಟಕಗಳಿಂದ ದುರ್ವಾಸನೆಯ ಕಾಟ ಶುರುವಾಗಿದೆ.
ಬೋಳಾರ, ಮುಳಿಹಿತ್ಲು, ಲೀವೆಲ್ ರೋಡ್, ಜೆಪ್ಪು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ದುರ್ವಾಸನೆ ಹಬ್ಬಿದ್ದು ಜನ ಕಿರಿಕಿರಿ ಅನುಭವಿಸುತ್ತಿದ್ದಾರೆ.
ಮುಖ್ಯವಾಗಿ ಮಕ್ಕಳು, ಅಸ್ತಮಾದಂತಹ ಕಾಯಿಲೆ ಹೊಂದಿರುವವರು, ವೃದ್ಧರಿಗಂತೂ ಇದು ಅಸಹನೀಯವಾಗಿ ಪರಿಣಮಿಸಿದೆ.
ಪ್ರತಿವರ್ಷವೂ ಮೀನುಗಾರಿಕೆ ಸೀಸನ್ನಲ್ಲಿ ಈ ಸಮಸ್ಯೆ ಮರುಕಳಿಸುತ್ತದೆ. ಉಳ್ಳಾಲ ಕೋಟೆಪುರ ಭಾಗದಲ್ಲಿ ಮೀನು ಸಂಸ್ಕರಣೆ ಘಟಕಗಳಿದ್ದು, ಅಲ್ಲಿ ಕೊಳೆತ ಮೀನನ್ನು ಬೃಹತ್ ಪ್ರಮಾಣದಲ್ಲಿ ತಂದು ಫಿಶ್ ಮೀಲ್ ಉತ್ಪಾದಿಸಲಾಗುತ್ತದೆ. ಈ ವೇಳೆ ಇಡೀ ಪರಿಸರದಲ್ಲಿ ಅದು ಬೃಹತ್ ಪ್ರಮಾಣದಲ್ಲಿ ದುರ್ವಾಸನೆ ಹರಡುತ್ತದೆ.
ಇದು ಸ್ಥಳೀಯವಾಗಿ ಅನಾರೋಗ್ಯಕರ ಪರಿಸರ ಸೃಷ್ಟಿಸುತ್ತದೆ. ನಾವು ಅಂಬಾಮಹೇಶ್ವರಿ ಸೇವಾ ಟ್ರಸ್ಟ್ನಿಂದ ಮಾದರಿ ವಾರ್ಡ್ ನಿರ್ಮಾಣದ ಯತ್ನ ಮಾಡಲಾಗುತ್ತಿದೆ. ಸ್ಥಳೀಯವಾಗಿ ಮಹಾನಗರ ಪಾಲಿಕೆಯ ಯತ್ನಗಳಿಗೆ ಕೈ ಜೋಡಿಸುತ್ತಿದ್ದೇವೆ. ಆದರೆ ಈ ಮೀನು ಸಂಸ್ಕರಣೆಯ ಸಮಸ್ಯೆ ನಮ್ಮೆಲ್ಲ ಯತ್ನಕ್ಕೆ ತಡೆಯೊಡ್ಡಿದೆ ಎಂದು ಟ್ರಸ್ಟ್ ಅಧ್ಯಕ್ಷ ಸೀತಾರಾಮ ಅವರು ಈ ಕುರಿತು ಜಿಲ್ಲಾಧಿಕಾರಿಯವರಿಗೆ ಬರೆದ ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.
ಈ ಸಮಸ್ಯೆಯನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಂಡು, ಮೀನು ಸಂಸ್ಕರಣ ಕಾರ್ಖಾನೆ ಗಳಿಂದ ಆಗುವ ಸಮಸ್ಯೆ ನಿಯಂತ್ರಿಸಬೇಕು ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಾನು ಒತ್ತಾಯಿಸಲ್ಲ: ಕೇಂದ್ರ ಸಚಿವ ಎಚ್ಡಿಕೆ
Saligrama: ಚತುಷ್ಪಥ ರಸ್ತೆಯ ಅನಧಿಕೃತ ಒತ್ತುವರಿ ತೆರವಿಗೆ ಅಂತಿಮ ಹಂತದ ಸಿದ್ಧತೆ
Udupi: ಕತ್ತಲಲ್ಲಿ ಶೀಂಬ್ರಾ ಸೇತುವೆ: ಅಕ್ರಮಗಳ ಅಡ್ಡೆ!
3 ಡಿ ಮ್ಯೂರಲ್ ಹೃದಯಗಳೊಂದಿಗೆ ಕೆಂಪಾದ ಬೆಂಗಳೂರು ನಗರ
ಮುಡಾ ಪ್ರಕರಣ;ಸಿ.ಎಂ.ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ದ.ಕ. ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.