ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ : 6.76 ಕೋ.ರೂ. ವೆಚ್ಚದ ಪಿಟ್ ಲೈನ್ ಉದ್ಘಾಟನೆ
Team Udayavani, Sep 15, 2022, 9:51 AM IST
ಮಂಗಳೂರು : ಸೆಂಟ್ರಲ್ ರೈಲು ನಿಲ್ದಾಣದ ಕೋಚಿಂಗ್ ಡಿಪೊದಲ್ಲಿ ನೂತನ ಪಿಟ್ ಲೈನ್ ಅನ್ನು ದಕ್ಷಿಣ ರೈಲ್ವೇ ಮಹಾಪ್ರಬಂಧಕ ಬಿ.ಜಿ. ಮಲ್ಯ ಬುಧವಾರ ಉದ್ಘಾಟಿಸಿದರು. ಬಳಿಕ ನೂತನ ಪ್ಲಾಟ್ಫಾರ್ಮ್ ನಂ. 4 ಮತ್ತು 5ರ ಕಾಮಗಾರಿ, ಕ್ಯಾರೇಜ್ ಮತ್ತು ವ್ಯಾಗನ್ ಡಿಪೊ ಕೆಲಸಗಳನ್ನು ಪರಿಶೀಲಿಸಿದರು.
ಪ್ರಧಾನ ಮುಖ್ಯ ಎಂಜಿನಿಯರ್ ದೇಶ್ ರತನ್ ಗುಪ್ತ, ಪ್ರಧಾನ ಮುಖ್ಯ ಮೆಕ್ಯಾನಿಕಲ್ ಎಂಜಿನಿಯರ್ ಗೌತಮ್ ದತ್ತ, ಪಾಲಕ್ಕಾಡ್ ವಿಭಾಗೀಯ ರೈಲ್ವೇ ಪ್ರಬಂಧಕ ತ್ರಿಲೋಕ್ ಕೊಠಾರಿ ಹಾಜರಿದ್ದರು.
6.76 ಕೋಟಿ ರೂ. ವೆಚ್ಚದಲ್ಲಿ ಹೊಸ ಪಿಟ್ ಲೈನ್ ನಿರ್ಮಿಸಲಾಗಿದೆ, ಇದು 24 ಬೋಗಿಗಳ ನಿರ್ವಹಣ ಸಾಮರ್ಥ್ಯ ಹೊಂದಿದ್ದು ಹಳೆಯ 18 ಕೋಚ್ ಸಾಮರ್ಥ್ಯದ ಪಿಟ್ಲೆçನನ್ನು ತೆರವುಗೊಳಿಸಿ ಹೊಸ ನಂ. 4 ಮತ್ತು 5ನೇ ಪ್ಲಾಟ್ಫಾರ್ಮ್ ನಿರ್ಮಾಣ ಕೈಗೆತ್ತಿಕೊಳ್ಳಲಾಗುವುದು.
ಕೋಚ್ ಕ್ಲೀನಿಂಗ್, ಕೋಚ್ ಚಾರ್ಜಿಂಗ್, ನೀರು ಭರ್ತಿಗೊಳಿಸುವುದು ಇತ್ಯಾದಿ ಕೆಲಸಗಳೊಂದಿಗೆ ಎಂದಿನ ನಿರ್ವಹಣೆ, ಪರಿಶೀಲನೆಗೆ ಈ ಹೊಸ ಪಿಟ್ಲೆçನ್ ನೆರವಾಗಲಿದೆ.
ಪ್ರತೀ ಪ್ರಯಾಣಿಕ ರೈಲಿನ ಟ್ರಿಪ್ ಪೂರ್ಣಗೊಂಡ ಬಳಿಕ ಪ್ರಾಥಮಿಕ ಬೋಗಿ ನಿರ್ವಹಣೆಗೆ ಪಿಟ್ಲೆçನ್ ಅತ್ಯಗತ್ಯವಾಗಿದೆ. ಪ್ರತೀ ಪ್ರಯಾಣದ ಬಳಿಕ ಬೋಗಿಗಳ ತಳದಲ್ಲಿನ ತಪಾಸಣೆ, ಬ್ರೇಕ್ ಪರಿಶೀಲನೆ, ಎಲೆಕ್ಟ್ರಿಕಲ್ ನಿರ್ವಹಣೆ, ಸ್ವತ್ಛತೆ, ಹೊರ ಭಾಗ ಮತ್ತು ಒಳಭಾಗದ ತೊಳೆಯುವಿಕೆ, ಕೋಚ್ಗಳಿಗೆ ನೀರು ತುಂಬಿಸುವಂತಹ ಪ್ರಮುಖ ಕೆಲಸಗಳನ್ನು ಕೈಗೊಳ್ಳಲಾಗುತ್ತದೆ.
ಇದನ್ನೂ ಓದಿ : ಉಡುಪಿಯ ಹೆದ್ದಾರಿಯಲ್ಲಿ 30 ಬ್ಲಾಕ್ ಸ್ಪಾಟ್ : ಅಪಘಾತವಾದರೆ ಅಧಿಕಾರಿಗಳೇ ಹೊಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ತ್ರಿಶಾ ಪದವಿ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ
Mangaluru: ಹುಲಿ ವೇಷ ಬಣ್ಣಗಾರಿಕೆ ಹಿಂದಿದೆ ಶ್ರದ್ಧೆ, ಭಕ್ತಿ, ವಿಜ್ಞಾನ!
Court: ವಾಹನ ಅಪಘಾತ: ಮೃತ ವ್ಯಕ್ತಿಯ ಆಶ್ರಿತರಿಗೆ 1.35 ಕೋ.ರೂ. ಪರಿಹಾರ: ನ್ಯಾಯಾಲಯ ಆದೇಶ
Navaratri 2024: ಕರಾವಳಿಯಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಅದ್ದೂರಿ ಚಾಲನೆ
Mangaluru: ಮತದಾರರ ಒಲವು ನನ್ನ ಪರ: ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
ಹೊಸ ಮಾರುಕಟ್ಟೆಗೆ ಪ್ರವೇಶ: ಕೊಲ್ಹಾಪುರ ಮಾರುಕಟ್ಟೆಗೆ ಕಲಬುರಗಿ ಹಾಲು!
Navaratri: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹುಲಿ ವೇಷ ಕುಣಿತ ವೀಕ್ಷಿಸಿದ ನಟಿ ರಕ್ಷಿತಾ ಪ್ರೇಮ್
UV Fusion: ಸ್ವಕಲಿಕೆ ಮತ್ತು ಆತ್ಮಸ್ತೈರ್ಯ
Vijayapura: ಬೈಕ್ – ಲಾರಿ ನಡುವೆ ಭೀಕರ ಅಪಘಾತ… ಇಬ್ಬರು ಮೃತ್ಯು; ಸ್ಥಳೀಯರಿಂದ ಪ್ರತಿಭಟನೆ
ಒಣ ಕೊಬ್ಬರಿಗೆ ಈಗ ಬಂಗಾರದ ಬೆಲೆ; ಬೆಲೆ ಹೆಚ್ಚಳಕ್ಕೇನು ಕಾರಣ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.