Mangaluru: ಪಿಎಂ ಮೋದಿ ಭೇಟಿ ವೇಳೆ ದೈವಾರಾಧನೆ, ಕಂಬಳ ಝಲಕ್‌

ಎಪ್ರಿಲ್‌ 14ರಂದು ಸಂಜೆ ಮಂಗಳೂರಿನಲ್ಲಿ ಮೆಗಾ ಶೋ

Team Udayavani, Apr 12, 2024, 6:55 AM IST

Kambala

ಮಂಗಳೂರು: ಮೊದಲ ಬಾರಿಗೆ ಮಂಗಳೂರಿನಲ್ಲಿ ಅಧಿಕೃತ ರೋಡ್‌ ಶೋ ನಡೆಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರಾವಳಿಯ ವೈಶಿಷ್ಟ್ಯಗಳನ್ನು ಪರಿಚಯಿಸುವ ಬಗ್ಗೆ ತಯಾರಿ ನಡೆಸಲಾಗುತ್ತಿದೆ.

ಪೂರ್ಣ ಭದ್ರತೆಯೊಂದಿಗೆ ತೆರೆದ ವಾಹನದಲ್ಲಿ ರಸ್ತೆಯಲ್ಲಿ ಹಾದು ಹೋಗುತ್ತಿರುವಾಗಲೇ ಮೋದಿ ಅವರಿಗೆ ಕರಾವಳಿ ವೈಶಿಷ್ಟéಗಳಾದ ದೈವಾರಾಧನೆಯ ತುಣುಕು, ಕಂಬಳದ ಚಿತ್ರಣ, ಹುಲಿ ವೇಷದ ಅಬ್ಬರ, ಭರತನಾಟ್ಯದ ಝಲಕ್‌ ಇತ್ಯಾದಿಗಳನ್ನು ಕೂಡ ನೋಡಿ ಆನಂದಿಸ ಬಹುದು.
ಇದೆಲ್ಲವೂ ಪಕ್ಷದಿಂದ ಕೈಗೊಳ್ಳುವ ಕಾರ್ಯಕ್ರಮಗಳಲ್ಲ, ಬದಲಿಗೆ ಮೋದಿ ಅಭಿಮಾನಿಗಳು ಅವರಾಗಿಯೇ ಕೇಳಿಕೊಂಡಿರುವಂಥದ್ದು. ಇವು ಗಳಿಗೆ ಅಂತಿಮವಾಗಿ ಪ್ರಧಾನಿ ಯವರ ಭದ್ರತೆ ನೋಡಿಕೊಳ್ಳುವ ವಿಶೇಷ ಭದ್ರತಾ ತಂಡ (ಎಸ್‌ಪಿಜಿ) ಅನುಮತಿ ನೀಡಿದರೆ ಇದೊಂದು ವಿಶಿಷ್ಟ ರೋಡ್‌ ಶೋ ಎನ್ನಿಸಿಕೊಳ್ಳಲಿದೆ. ಈ ಎಲ್ಲ ವೈಶಿಷ್ಟéಗಳನ್ನೂ ರಸ್ತೆ ಬದಿಯಲ್ಲಿ ಚಿಕ್ಕ ಚಿಕ್ಕ ವೇದಿಕೆಗಳ ಮೂಲಕ ಪ್ರದರ್ಶಿಸಲಾಗುವುದು.

ಕಂಬಳದ ಕೋಣಗಳನ್ನೇ ಹೋಲುವ ಪ್ರತಿಕೃತಿ ಪ್ರದರ್ಶನ, ಹುಲಿವೇಷ ಕುಣಿತ ಪ್ರದರ್ಶನ, ಭರತ ನಾಟ್ಯ ಪ್ರದರ್ಶನ ನಡೆಯಲಿದ್ದು, ದೈವಾರಾಧನೆಯನ್ನು ಎಲ್‌ಇಡಿ ಮೂಲಕ ತೋರ್ಪಡಿಸಲಾಗುವುದು ಎಂದು ತಿಳಿದುಬಂದಿದೆ.

ಎ. 14ರಂದು 6ಕ್ಕೆ ಲೇಡಿಹಿಲ್‌ನ ಶ್ರೀ ನಾರಾಯಣಗುರು ವೃತ್ತದಲ್ಲಿ ಮೊದಲು ನಾರಾಯಣಗುರುಗಳ ಪ್ರತಿಮೆಗೆ ಪ್ರಧಾನಿ ಮೋದಿ ಮಾಲಾರ್ಪಣೆ ಮಾಡುವುದರೊಂದಿಗೆ ರೋಡ್‌ಶೋ ಆರಂಭಗೊಳ್ಳಲಿದೆ. ಬಳಿಕ ಲಾಲ್‌ಬಾಗ್‌ ಜಂಕ್ಷನ್‌, ಬಲ್ಲಾಳ್‌ಬಾಗ್‌, ಪಿವಿಎಸ್‌ ಜಂಕ್ಷನ್‌ ಮೂಲಕ ನವಭಾರತ ವೃತ್ತ ತಲುಪಲಿದೆ. ಸದ್ಯ ನವಭಾರತ ವೃತ್ತದ ವರೆಗೆ ರೋಡ್‌ ಶೋ ಎಂದಿದ್ದರೂ ಹಂಪನಕಟ್ಟೆ ಜಂಕ್ಷನ್‌ ವರೆಗೂ ರೋಡ್‌ ಶೋ ನಡೆಸುವ ಬಗ್ಗೆ ಯೋಚನೆ ಇದೆ, ಇಲ್ಲೂ ಅಂತಿಮ ನಿರ್ಧಾರವನ್ನು ಎಸ್‌ಪಿಜಿ ತೆಗೆದುಕೊಳ್ಳಲಿದೆ.

ಭರ್ಜರಿ ಭದ್ರತೆ: ಸಮಾವೇಶಕ್ಕಿಂ ತಲೂ ಹೆಚ್ಚಿನ ಮುನ್ನೆಚ್ಚರಿಕೆ ರೋಡ್‌ ಶೋದಲ್ಲಿ ಬೇಕಾಗುತ್ತದೆ. ಈಗಾಗಲೇ ಎಸ್‌ಪಿಜಿ ನೇತೃತ್ವದಲ್ಲಿ ಭದ್ರತಾ ಕಾರ್ಯ ಆರಂಭವಾಗಿದೆ.

ಜಿಲ್ಲಾಡಳಿತ, ಪೊಲೀಸ್‌ ಕಮಿಷನರ್‌ ಸಹಿತ ಹಿರಿಯ ಅಧಿ ಕಾರಿಗಳ ಸಭೆ ನಡೆದಿದ್ದು ಪ್ರಧಾನಿ ಆಗಮನ, ಭದ್ರತೆ ಇತ್ಯಾದಿ ಅಂಶಗಳನ್ನು ಚರ್ಚಿಸಲಾಗಿದೆ. ಲೇಡಿಹಿಲ್‌ನಿಂದ ರೋಡ್‌ ಶೋ ಮುಗಿಯುವಲ್ಲಿ ವರೆಗೂ ರಸ್ತೆ ಇಕ್ಕೆಲಗಳಲ್ಲೂ ಕಬ್ಬಿಣದ ತಾತ್ಕಾಲಿಕ ತಡೆಬೇಲಿ ನಿರ್ಮಿಸಲಾಗುತ್ತದೆ. ರಸ್ತೆಗೆ ಇಳಿಯಲು ಯಾರಿಗೂ ಅವಕಾಶ ಇರುವುದಿಲ್ಲ. ಬ್ಯಾರಿಕೇಡ್‌ನ‌ ಹಿಂದೆ ನಿಂತು ವೀಕ್ಷಿಸಬಹುದು.

ಜೇನುಗೂಡು ತೆರವು!
ರೋಡ್‌ ಶೋ ಸಾಗುವ ಕಟ್ಟಡ, ಮರಗಳಲ್ಲಿರುವ ಜೇನುಗೂಡು ಗಳನ್ನು ತೆರವುಗೊಳಿಸುವಂತೆ ಪೊಲೀಸ್‌ ಆಯುಕ್ತರ ಕಚೇರಿಯಿಂದ ಅರಣ್ಯಾಧಿಕಾರಿಗೆ ಸೂಚನೆ ಬಂದಿದೆ.
ಮಾಹಿತಿ ಸಂಗ್ರಹ: ಎಂ.ಜಿ. ರಸ್ತೆಯ ಇಕ್ಕೆಲದ ಕಟ್ಟಡಗಳ ತಪಾಸಣೆ, ಅಲ್ಲಿರುವವರೆಲ್ಲರ ಗುರುತುಪತ್ರ, ಆಧಾರ್‌ ಸಹಿತ ಮಾಹಿತಿ ಸಂಗ್ರಹ ಇತ್ಯಾದಿ ಕೆಲಸಗಳನ್ನು ಪೊಲೀಸರು ನಡೆಸಿದ್ದಾರೆ. ಅಲ್ಲದೆ ಕಟ್ಟಡ, ಮನೆ, ಅಪಾರ್ಟ್‌ಮೆಂಟ್‌, ಶೈಕ್ಷಣಿಕ ಸಂಸ್ಥೆ, ಹೊಟೇಲ್‌, ವಸತಿಗೃಹ ಮುಂತಾದೆಡೆ ಕಾರ್ಯ ನಿರ್ವಹಿಸುತ್ತಿರುವ/ಕಾರ್ಯ ನಿರ್ವಹಿಸದ ಸಿಸಿ ಕೆಮರಾ ಮಾಹಿತಿ ಯನ್ನೂ ಪಡೆದುಕೊಳ್ಳಲಾಗಿದೆ. ರೋಡ್‌ ಶೋ ವೇಳೆ ಕಟ್ಟಡಗಳ ಮೇಲೆ ಕೂಡ ಯಾರೂ ನಿಲ್ಲುವಂತಿಲ್ಲ.

ಸಂಜೆ 5ರ ಅನಂತರ ನಗರದೊಳಕ್ಕೆ ಪ್ರವೇಶ ಬಂದ್‌!
ಅಂದಾಜು ಸಂಜೆ 5ರ ಬಳಿಕ ಬಲ್ಮಠ ಕಡೆಯಿಂದ ಹಾಗೂ ಕೊಟ್ಟಾರ ಕಡೆಯಿಂದ ನಗರದೊಳಕ್ಕೆ ವಾಹನ ಸಂಚಾರ ಪೂರ್ಣ ಬಂದ್‌ಗೊಳಿಸಲು ಪೊಲೀಸರು ನಿರ್ಧರಿಸಿದ್ದಾರೆ. ಕೊಟ್ಟಾರ ಕಡೆಯಿಂದ ಮೋದಿ ಅವರು ನಾರಾಯಣಗುರು ವೃತ್ತಕ್ಕೆ ಆಗಮಿಸಿದರೆ ಬಲ್ಮಠ, ತೋಟಗಾರಿಕೆ ಇಲಾಖೆ ರಸ್ತೆ ಮೂಲಕ ತೆರಳುವ ನಿರೀಕ್ಷೆ ಇದೆ. ಹಾಗಾಗಿ ಹಂಪನಕಟ್ಟೆ, ಬಂಟ್ಸ್‌ಹಾಸ್ಟೆಲ್‌ ಕಡೆಗೆ ಬರುವಂತಹವರು ಅದಕ್ಕಿಂತ ಮೊದಲೇ ಸೇರಿಕೊಳ್ಳಬೇಕು.

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kambala

Kambala; ಬೆಂಗಳೂರು ಕಂಬಳ ಈ ಬಾರಿ ಅನುಮಾನ

Train

Train; ದೀಪಾವಳಿಗೆ ಬೆಂಗಳೂರು-ಮಂಗಳೂರು ವಿಶೇಷ ರೈಲು

1-bekku-a

Udayavani Special: ಇದು ಬೆಕ್ಕಿನ ಬಿಡಾರವಲ್ಲ; ಮಹಲು!

bk-Hari

Jharkhand Election; ಹರಿಪ್ರಸಾದ್‌ ಎಐಸಿಸಿ ಸಮನ್ವಯಕಾರ

police crime

Sullia; ಸ್ತ್ರೀಯರ ಬಗ್ಗೆ ತುತ್ಛ ಹೇಳಿಕೆ ಆರೋಪ: ಅರಣ್ಯಾಧಿಕಾರಿ ವಿರುದ್ಧ ದೂರು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.