![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jun 19, 2023, 6:39 AM IST
ಮಂಗಳೂರು: ಮನೆಯಿಂದ ನಾಪತ್ತೆಯಾಗಿ ಮಾನಸಿಕವಾಗಿ ಅಸ್ವಸ್ಥನಾಗಿ ತಿರುಗಾಡು ತ್ತಿದ್ದ ಕೇರಳದ ಯುವಕನೋರ್ವ ಮಂಗಳೂರಿನಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿ ಮನೆ ಸೇರಿದ್ದಾನೆ.
ಕೇರಳ ಕೊಟ್ಟಾಯಂ ಜಿಲ್ಲೆಯ ತ್ರಿಕೋಡಿನಂನ ಮೇಘರಾಜ್ (27) 2022ರ ನವೆಂಬರ್ನಲ್ಲಿ ಮನೆಯಿಂದ ನಾಪತ್ತೆಯಾಗಿದ್ದ. ಹುಡುಕಾಡಿದರೂ ಪ್ರಯೋಜನವಾಗದ ಹಿನ್ನೆಲೆ ಯಲ್ಲಿ ಮನೆಯವರು ಕೇರಳದ ಕೊಟ್ಟಾಯಂನ ತ್ರಿಕೋಡಿನಂ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಮಂಗಳೂರು ಪಡೀಲ್ನ ಅರಣ್ಯ ಪ್ರದೇಶದಲ್ಲಿ ಮಾನಸಿಕ ಅಸ್ವಸ್ಥನಾಗಿ ತಿರುಗಾಡುತ್ತಿದ್ದ ಮೇಘರಾಜ್ನನ್ನು ಮಂಗಳೂರಿನ ವೈಟ್ ಡೌಸ್ ಸಂಸ್ಥೆಗೆ ತಂದು ಉಪಚರಿಸಲಾಗಿತ್ತು. ಆತ ಒಮ್ಮೆ ತಪ್ಪಿಸಿಕೊಂಡು ಹೋಗಿದ್ದ. ಮತ್ತೆ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಯಿತು. ಇದೀಗ ಆತ ಗುಣಮುಖನಾಗಿ ತನ್ನ ಊರಿನ ಹೆಸರನ್ನು ತಿಳಿಸಿದ್ದು ಅದರಂತೆ ಆತನನ್ನು ಮನೆಗೆ ತಲುಪಿಸಲಾಗಿದೆ. ಮೇಘರಾಜ್ನಿಗೆ ಬಾಲ್ಯದಲ್ಲಿ ಫಿಟ್ಸ್ ಕಾಯಿಲೆ ಇತ್ತು. ಆತ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ. ಒಂದು ದಿನ ರಾತ್ರಿ ಕೆಲಸ ಮುಗಿಸಿ ಬರುವಾಗ ಯಾವುದನ್ನೋ ನೋಡಿ ಭಯಪಟ್ಟಿದ್ದ. ಬಳಿಕ ಖಿ ನ್ನತೆಗೊಳಗಾಗಿದ್ದ. ಈಗ ಆತ ಸಿಕ್ಕಿರುವುದು ಖುಷಿ ತಂದಿದೆ ಎಂದು ಆತನ ಅಣ್ಣ ತಾರಾನಾಥ್ ತಿಳಿಸಿದ್ದಾರೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.