Mangaluru: “ಐ ವಾಚ್’ ಗಿಫ್ಟ್ ಆಸೆಗೆ 1,10,028 ರೂ. ಕಳೆದುಕೊಂಡರು
Team Udayavani, Oct 9, 2024, 7:25 AM IST
ಮಂಗಳೂರು: ಐ ವಾಚ್ ಗಿಫ್ಟ್ ನೀಡುವುದಾಗಿ ಹೇಳಿ 1.10 ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ Knyamed ಕಂಪೆನಿಯಿಂದ ತಾನು ಕರೆ ಮಾಡುತ್ತಿದ್ದು, ನಮ್ಮ ಕಂಪೆನಿಯಿಂದ ನೀವು ಈ ಹಿಂದೆ ಬಟ್ಟೆ ಖರೀದಿಸಿದ್ದು, ನಿಮ್ಮ ಹೆಸರಿಗೆ ಆಫರ್ ಇದೆ. 5 ಸಾವಿರ ರೂ. ಬಟ್ಟೆ ಖರೀದಿಸಿದ್ದಲ್ಲಿ ಐ ವಾಚ್ ಗಿಫ್ಟ್ ನೀಡುವುದಾಗಿ ತಿಳಿಸಿದ್ದ. ಅದಕ್ಕಾಗಿ ಬ್ಯಾಂಕ್ ಖಾತೆಗೆ ಹಣ ಪಾವತಿಸುವಂತೆ ತಿಳಿಸಿದ್ದ. ಅದರಂತೆ ಗೂಗಲ್ ಪೇ ಮೂಲಕ 5,096 ರೂ. ಪಾವತಿಸಿದ್ದರು.
ಮಧ್ಯಾಹ್ನ ಇನ್ನೊಬ್ಬ ಕರೆ ಮಾಡಿ ಆರ್ಡರ್ ಕನ್ಫರ್ಮ್ ಮಾಡಲು ಐ ವಾಚ್ ಬಿಲ್ ವಾಟ್ಸಪ್ನಲ್ಲಿ ಕಳುಹಿಸಿ, ಗಿಫ್ಟ್ ಪಡೆಯಲು ಕೋಡ್ ನೀಡಿ 54,932 ರೂ. ಪಾವತಿಸುವಂತೆ ಹಾಗೂ ಅದು ರಿಫಂಡ್ ಆಗುವುದಾಗಿ ತಿಳಿಸಿದ್ದ. ಅದರಂತೆ ಹಣವನ್ನು ಪಾವತಿಸಿದ್ದರು.
ಸಂಜೆ ಮತ್ತೆ ಆರೋಪಿ ಕರೆ ಮಾಡಿ ನೀವು ತಪ್ಪಾದ ಕೋಡ್ ನಮೂದಿಸಿದ್ದು, ಮತ್ತೂಮ್ಮೆ ಪಾವತಿ ಮಾಡಿ. ಆಗ ಎಲ್ಲ ಹಣ ರಿಫಂಡ್ ಆಗುತ್ತದೆ ಎಂದಿದ್ದ. ದೂರುದಾರರು ಮತ್ತೆ 50 ಸಾವಿರ ರೂ. ಹಣ ಪಾವತಿ ಮಾಡಿದ್ದರು. ಪಾವತಿ ಮಾಡಿದ ಹಣವನ್ನು ವಾಪಸು ಕೇಳಲು ಕರೆ ಮಾಡಿದಾಗ ಆರೋಪಿ ಕರೆ ಸ್ವೀಕರಿಸಿಲ್ಲ. ಈ ವೇಳೆ ಅವರಿಗೆ ತಾನು ಮೋಸ ಹೋಗಿರುವುದು ಅರಿವಾಗಿದೆ. ತನಗೆ 1,10,028 ರೂ. ವಂಚನೆ ಮಾಡಿರುವ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru University: 9ಕ್ಕೂ ಅಧಿಕ ಪಿ.ಜಿ. ಕೋರ್ಸ್ಗೆ ವಿದ್ಯಾರ್ಥಿಗಳಿಲ್ಲ !
Mangaluru: ಉಸಿರಾಟ ಸಮಸ್ಯೆ; ಎಂಟು ತಿಂಗಳ ಗರ್ಭಿಣಿ ಸಾವು
Mangaluru: ಹುಲಿ ವೇಷದ ಅಬ್ಬರ ಸವಿಯಲಿರುವ ತಾರೆಯರು
Election Result: ಹರಿಯಾಣ, ಜಮ್ಮು ಕಾಶ್ಮೀರ ಫಲಿತಾಂಶ: ಬಿಜೆಪಿ ಸಂಭ್ರಮ
Kateel: ಸಂಭ್ರಮದ ಲಲಿತಾ ಪಂಚಮಿ: 15 ಸಾವಿರಕ್ಕೂ ಮಿಕ್ಕಿ ಭಕ್ತರಿಗೆ ಶೇಷ ವಸ್ತ್ರ ವಿತರಣೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Tunga River; ಬಂಡೆ ಮೇಲೆ ಸಿಲುಕಿ ಪರದಾಡುತ್ತಿದ್ದ ವ್ಯಕ್ತಿ ರಕ್ಷಣೆ
Anti-national activities ವಿರುದ್ಧ ಕ್ರಮಕ್ಕೆ ಸಿಎಂ ವಿಜಯನ್ ಮೌನ: ಕೇರಳ ರಾಜ್ಯಪಾಲ
Federalism..; ಒಮರ್ ಅಬ್ದುಲ್ಲಾಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ
Power…; ವಿನೇಶ್ ಫೋಗಾಟ್ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಬ್ರಜ್ ಭೂಷಣ್!
Navratri special: ಹೆಣ್ಣು ಅಬಲೆಯೇ? ಹಾಗೆಂದು ನಿರ್ಧರಿಸಿದ್ಯಾರು? ಹೆಣ್ಣಾ ಅಥವಾ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.