Mangaluru ಕೋಳಿ ಮಾಂಸದ ದರ ಏರಿಕೆ; ಮೊಟ್ಟೆಯ ದರ ಇಳಿಕೆ !

ಬರ, ಉತ್ಪಾದನೆ-ಸಾಗಾಟ ವೆಚ್ಚ ಹೆಚ್ಚಳ; ಸೀಸನ್‌ನಲ್ಲೇ ಬೆಲೆ ಏರಿಕೆ ಬಿಸಿ

Team Udayavani, Apr 1, 2024, 7:30 AM IST

Mangaluru ಕೋಳಿ ಮಾಂಸದ ದರ ಏರಿಕೆ; ಮೊಟ್ಟೆಯ ದರ ಇಳಿಕೆ !

ಮಂಗಳೂರು: ಬರ, ಬಿಸಿಲ ಝಳ ಮೊದಲಾದ ಕಾರಣಗಳಿಂದಾಗಿ ತರಕಾರಿ ದರದಲ್ಲಿ ಏರಿಕೆಯಾಗುತ್ತಿದ್ದಂತೆ ಕೋಳಿಮಾಂಸ, ಮೀನಿನ ದರವೂ ಏರುಗತಿ ಯಲ್ಲಿ ಸಾಗುತ್ತಿದ್ದು ಮಾಂಸಾಹಾರ ಪ್ರಿಯರ ಜೇಬಿಗೂ ಕತ್ತರಿ ಬೀಳುವಂತಾಗಿದೆ.

ಕರಾವಳಿಯಲ್ಲಿ ಪ್ರಸ್ತುತ ಕೋಲ, ನೇಮ, ಅಗೇಲು-ತಂಬಿಲಗಳು ಪ್ರತೀ ನಿತ್ಯ ಎಂಬಂತೆ ನಡೆಯುತ್ತಿವೆ. ಜತೆಗೆ ಮದುವೆ, ಔತಣ ಕೂಟಗಳು, ಸೀಮಂತ, ಮೆಹಂದಿ ಹೀಗೆ ವಿವಿಧ ಕಾರ್ಯಕ್ರಮಗಳೂ ನಡೆಯುತ್ತಿದ್ದು, ಕೋಳಿಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ. ಸದ್ಯ ಬೇಡಿಕೆಗೆ ತಕ್ಕಂತೆ ಪೂರೈಕೆ ಇದ್ದರೂ ಸಾಕಣೆ ಮತ್ತು ಇತರ ವೆಚ್ಚಗಳ ಏರಿಕೆಯಿಂದಾಗಿ ಕೋಳಿಮಾಂಸದ ದರ ಏರುತ್ತಲೇ ಇದೆ.

ದರ ಹೇಗಿದೆ?
ಪ್ರಸ್ತುತ ಕೋಳಿಮಾಂಸಕ್ಕೆ (ವಿದ್‌ ಸ್ಕಿನ್‌) ಕೆ.ಜಿ.ಗೆ ಬ್ರಾಯ್ಲರ್‌ ಕೆಲವು ಕಡೆ 235-240 ರೂ., ಟೈಸನ್‌ 270 ರೂ. ಇದೆ. ವಿದೌಟ್‌ ಸ್ಕಿನ್‌ ಮಾಂಸಕ್ಕೆ 265-270 ರೂ. ಇದೆ. ಸಜೀವ ಕೋಳಿ ಬ್ರಾಯ್ಲರ್‌ಗೆ ಕೆ.ಜಿ.ಗೆ 165-170 ರೂ. ಇದ್ದರೆ, ಟೈಸನ್‌ ಕೋಳಿ ಕೆ.ಜಿ.ಗೆ 185-190 ರೂ. ಇದೆ. ಒಂದು ವಾರದಿಂದ ಕೋಳಿ ಮಾಂಸದ ದರದಲ್ಲಿ ಏರಿಕೆಯಾಗುತ್ತಿದ್ದು, ಪ್ರತೀದಿನ ಅಥವಾ 2-3 ದಿನಗಳಿಗೆ 5-6 ರೂ. ವರೆಗೆ ಹೆಚ್ಚಳವಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.

ಬೆಲೆ ಏರಿಕೆಗೆ ಕಾರಣವೇನು?
ಈ ಬಾರಿ ಬರದಿಂದಾಗಿ ಕೋಳಿಗಳ ಆಹಾರದಲ್ಲಿ ಬಳಕೆಯಾಗುವ ಸೋಯಾ, ಜೋಳ ಫಸಲು ಕಡಿಮೆಯಾಗಿದೆ. ಪ್ರತೀ ಕೆ.ಜಿ. ಕೋಳಿ ಉತ್ಪಾದನೆಗೆ ತಗುಲುವ ವೆಚ್ಚವೂ 60-70 ರೂ.ಗಳಿಂದ 100 ರೂ. ವರೆಗೆ ಹೆಚ್ಚಳವಾಗಿದೆ. ನೀರಿನ ಕೊರತೆ ಹಾಗೂ ಬಿಸಿಲಿನ ಝಳಕ್ಕೆ ಶೇ. 20-25ರಷ್ಟು ಕೋಳಿ ಸಾಕಣೆ ಕೇಂದ್ರಗಳು ಮುಚ್ಚಿವೆ. ಸಾಗಾಟ ವೆಚ್ಚವೂ ಹೆಚ್ಚಾಗಿದೆ. ಬಿಸಿಲು ಕೂಡ ಹೆಚ್ಚಾಗುತ್ತಿರುವುದರಿಂದ ಕೋಳಿಗಳ ಬೆಳವಣಿಗೆಯ ಮೇಲೂ ಪರಿಣಾಮ ಉಂಟಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಮರಿಗಳು ಸಾವನ್ನಪ್ಪುತ್ತಿವೆ. ಇವೆಲ್ಲ ಕಾರಣದಿಂದ ಕೋಳಿ ಮಾಂಸದ ದರದಲ್ಲಿ ಏರಿಕೆಯಾಗುತ್ತಿದೆ ಎನ್ನುತ್ತಾರೆ ಸಾಕಣೆದಾರರು.

ಮೀನಿನ ದರವೂ ಏರಿಕೆ
ಕಡಲಿನಲ್ಲಿ ಮತ್ಸéಕ್ಷಾಮ ಉಂಟಾಗಿರು ವುದರಿಂದ ಬಹುತೇಕ ಬೋಟುಗಳು ಸಮುದ್ರಕ್ಕೆ ತೆರಳದೆ ಬಂದರಿನಲ್ಲೇ ಉಳಿದಿವೆ. ಬೇಡಿಕೆಗೆ ತಕ್ಕಂತೆ ಮೀನು ದೊರೆಯದ ಪರಿಣಾಮ ಮೀನಿನ ದರದಲ್ಲಿಯೂ ಏರಿಕೆಯಾಗಿದೆ. ಬಹುತೇಕ ಎಲ್ಲ ಮೀನುಗಳ ದರ ಕೆ.ಜಿ.ಗೆ 200 ರೂ. ದಾಟಿದೆ. ಗೋವಾ, ಗುಜರಾತ್‌ ಸಹಿತ ಹೊರ ರಾಜ್ಯಗಳಿಂದ ಮೀನು ಬರುತ್ತಿದ್ದರೂ ಬೆಲೆ ಇಳಿಕೆಯಾಗಿಲ್ಲ.

ಕುರಿ, ಆಡು ಮಾಂಸ ದರದಲ್ಲಿ ಬದಲಾವಣೆ ಆಗಿಲ್ಲ
ಕುರಿ-ಆಡು ಮಾಂಸದ ದರ 2023ರ ಜನವರಿಯಿಂದ ಯಥಾಸ್ಥಿತಿಯಲ್ಲೇ ಇದೆ. ಏರಿಕೆಯಾಲೀ ಇಳಿಕೆಯಾಗಲೀ ಆಗಿಲ್ಲ. ಕುರಿ-ಆಡು ಮಾಂಸ 650 ರೂ. ಮತ್ತು 850 ರೂ.ಗಳಲ್ಲಿ ಮಾರಾಟವಾಗುತ್ತಿದೆ. ಒಂದು ಬಾರಿ ಏರಿದರೆ ಮತ್ತೆ ಕಡಿಮೆಯಾಗುವುದಿಲ್ಲ ಎನ್ನುತ್ತಾರೆ ಮಂಗಳೂರಿನ ವೆಲೆನ್ಸಿಯಾದ ಮಾಂಸದ ಅಂಗಡಿ ಮಾಲಕರು.

ಹೊಟೇಲ್‌ಗ‌ಳಲ್ಲಿ ಖಾದ್ಯ ದರ ಏರಿಕೆ
ಮಾರುಕಟ್ಟೆಯಲ್ಲಿ ಮೀನು, ಕೋಳಿ ದರ ಏರಿಕೆಯ ಪರಿಣಾಮವಾಗಿ ಹೊಟೇಲ್‌ಗ‌ಳಲ್ಲಿ ಮಾಂಸಾಹಾರದ ದರವೂ ಏರಿಕೆಯಾಗಿದೆ. ಅತೀ ಹೆಚ್ಚು ಬೇಡಿಕೆಯಲ್ಲಿರುವ ಚಿಕನ್‌ ಸುಕ್ಕಾ, ಚಿಲ್ಲಿ, ಕಬಾಬ್‌ ಮೊದಲಾದವುಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಮೀನುಗಳಲ್ಲಿ ಗಾತ್ರಕ್ಕೆ ಅನುಗುಣವಾಗಿ ದರ ಹೆಚ್ಚು ಕಡಿಮೆ ಮಾಡುವುದೂ ಕಂಡುಬಂದಿದೆ. ತರಕಾರಿ ದರದಲ್ಲಿ ಏರಿಕೆಯಾಗಿದ್ದರೂ ಸಸ್ಯಾಹಾರಿ ಹೊಟೇಲ್‌ಗ‌ಳಲ್ಲಿ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ.

ಶುಂಠಿ, ಕೊತ್ತಂಬರಿ ಸೊಪ್ಪು ದರ ಏರಿಕೆ
ಖಾದ್ಯಗಳ ರುಚಿ ಹೆಚ್ಚಿಸುವ ಶುಂಠಿ ದರವೂ ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಿದ್ದು, ಕೆ.ಜಿ.ಗೆ 160-200 ರೂ. ವರೆಗೆ ಏರಿಕೆದೆ. ಈ ಮೊದಲು ಕೆ.ಜಿ. 120 ರೂ. ಇತ್ತು. ಬೇಡಿಕೆ ಹೆಚ್ಚಿರುವುದರಿಂದ ದರವೂ ಹೆಚ್ಚಾಗಿದೆ ಎನ್ನುತ್ತಾರೆ ವರ್ತಕರು. ಮಂಗಳೂರು ಮಾರುಕಟ್ಟೆ ಯಲ್ಲಿ ಕೊತ್ತಂಬರಿ ಸೊಪ್ಪು ಅಭಾವವುಂಟಾಗಿದ್ದು, ಬೇಡಿಕೆಗೆ ತಕ್ಕಂತೆ
ದೊರೆಯುತ್ತಿಲ್ಲ. 10 ರೂ.ಗೆ 100 ಗ್ರಾಂ. ದೊರೆಯುತ್ತಿದ್ದ ಕೊತ್ತಂಬರಿ ಸೊಪ್ಪಿನ ದರ ಪ್ರಸ್ತುತ 15 ರೂ.ಗೆ ಏರಿದೆ.

ಕೋಳಿ ಮಾಂಸಕ್ಕೆ ಬೆಲೆ ಹೆಚ್ಚಳವಾಗಿ ದ್ದರೂ ಮೊಟ್ಟೆ ದರದಲ್ಲಿ ಇಳಿಕೆಯಾಗಿದೆ. ಅಂಗಡಿಗಳಲ್ಲಿ 6.50 ರೂ. ಇದ್ದ ದರ ಪ್ರಸ್ತುತ 5.50-6 ರೂ.ಗೆ ಇಳಿಕೆಯಾಗಿದೆ. ಹೋಲ್‌ಸೇಲ್‌ ಮಾರುಕಟ್ಟೆಯಲ್ಲಿ 4.80-5 ರೂ. ವರೆಗೆ ಇದೆ.
ಮೊಟ್ಟೆ ಉಷ್ಣಕಾರಕ ಎನ್ನುವ ಭಾವನೆಇದೆ. ಪ್ರಸ್ತುತ ಸೆಕೆಯೂ ಹೆಚ್ಚಿರುವುದರಿಂದ ಕೆಲವರು ಮೊಟ್ಟೆ ತಿನ್ನುವುದರಿಂದ ವಿಮುಖರಾಗಿದ್ದಾರೆ. ರಮ್ಜಾನ್‌ ಉಪವಾಸ ಸಂದರ್ಭವೂ ಕೆಲವರು ಮೊಟ್ಟೆ ತಿನ್ನುವುದಿಲ್ಲ. ಬಿಸಿಲಿನ ಹಿನ್ನೆಲೆಯಲ್ಲಿ ಮೊಟ್ಟೆ ದಾಸ್ತಾನು ಮಾಡುವುದೂ ಕಷ್ಟವಾಗಿರು ವುದರಿಂದ ದರದಲ್ಲಿ ಇಳಿಕೆಯಾಗಿದೆ ಎನ್ನುತ್ತಾರೆ ವರ್ತಕರು.

- ಭರತ್‌ ಶೆಟ್ಟಿಗಾರ್‌

ಟಾಪ್ ನ್ಯೂಸ್

Kamlashile Temple; ಕಮಲಶಿಲೆ ದೇವಿಗೆ ಕುಬ್ಜಾ ಸ್ನಾನ

Kamlashile Temple; ಕಮಲಶಿಲೆ ದೇವಿಗೆ ಕುಬ್ಜಾ ಸ್ನಾನ

vidhana-Soudha

Cabinet Decission: ಏಳು ತಾಲೂಕುಗಳಲ್ಲಿ 100 ಹಾಸಿಗೆಗಳ ಆಸ್ಪತ್ರೆ

CM-Siddaramaiah

CM Siddaramaiah: ಮುಡಾ ಹಗರಣದಲ್ಲಿ ನನ್ನ ತಪ್ಪಿಲ್ಲ

Heavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟHeavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟ

Heavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟ

Heavy Rain ನಾವುಂದ, ಸಾಲ್ಬುಡಾ, ಅರೆಹೊಳೆ ಜಲಾವೃತ; ನೂರಕ್ಕೂ ಮಿಕ್ಕಿ ಮನೆಗಳು ದಿಗ್ಬಂಧನ

Heavy Rain ನಾವುಂದ, ಸಾಲ್ಬುಡಾ, ಅರೆಹೊಳೆ ಜಲಾವೃತ; ನೂರಕ್ಕೂ ಮಿಕ್ಕಿ ಮನೆಗಳು ದಿಗ್ಬಂಧನ

BJP Meeting; ತಾಕತ್ತಿದ್ದರೆ ಚುನಾವಣೆಗೆ ಬನ್ನಿ: ಬಿ.ಎಸ್‌.ಯಡಿಯೂರಪ್ಪ

ಅಣ್ಣಾಲು ಸೇತುವೆ ಮುಳುಗಡೆ: ವಾಹನ ಸಂಚಾರ ಸ್ಥಗಿತ

Heavy Rain ಅಣ್ಣಾಲು ಸೇತುವೆ ಮುಳುಗಡೆ: ವಾಹನ ಸಂಚಾರ ಸ್ಥಗಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Heavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟHeavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟ

Heavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟ

Rain ಪೊರ್ಕೋಡಿ ದೇವಸ್ಥಾನದ ಬಳಿ ಕುಸಿದ ರಸ್ತೆ: ವಾಹನ ಸಂಚಾರ ವ್ಯತ್ಯಯ

Rain ಪೊರ್ಕೋಡಿ ದೇವಸ್ಥಾನದ ಬಳಿ ಕುಸಿದ ರಸ್ತೆ: ವಾಹನ ಸಂಚಾರ ವ್ಯತ್ಯಯ

Retirement ಬಳಿಕ ಎಸ್‌ಪಿ ಪದೋನ್ನತಿಗೆ ಪೂರ್ವಾನ್ವಯ ಆದೇಶ

Retirement ಬಳಿಕ ಎಸ್‌ಪಿ ಪದೋನ್ನತಿಗೆ ಪೂರ್ವಾನ್ವಯ ಆದೇಶ

Building ನಿರ್ಮಾಣ ಕಾಮಗಾರಿ: ಕಾರ್ಮಿಕ ಇಲಾಖೆ ಸೂಚನೆ

Building ನಿರ್ಮಾಣ ಕಾಮಗಾರಿ: ಕಾರ್ಮಿಕ ಇಲಾಖೆ ಸೂಚನೆ

ರಾಷ್ಟ್ರ ಸಂತ ವಿರಾಗ ಸಾಗರ ಮುನಿಮಹಾರಾಜ್‌ ಸಮಾಧಿ ಮರಣ

ರಾಷ್ಟ್ರ ಸಂತ ವಿರಾಗ ಸಾಗರ ಮುನಿಮಹಾರಾಜ್‌ ಸಮಾಧಿ ಮರಣ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Kamlashile Temple; ಕಮಲಶಿಲೆ ದೇವಿಗೆ ಕುಬ್ಜಾ ಸ್ನಾನ

Kamlashile Temple; ಕಮಲಶಿಲೆ ದೇವಿಗೆ ಕುಬ್ಜಾ ಸ್ನಾನ

vidhana-Soudha

Cabinet Decission: ಏಳು ತಾಲೂಕುಗಳಲ್ಲಿ 100 ಹಾಸಿಗೆಗಳ ಆಸ್ಪತ್ರೆ

Rohan Bopanna

Wimbledon tennis match: ಬೋಪಣ್ಣ-ಎಬ್ಡೆನ್‌ ಮುನ್ನಡೆ

1-athli

Paris Olympics; ಆ್ಯತ್ಲೀಟ್‌ ಗಳಿಂದ ಶ್ರೇಷ್ಠ ನಿರ್ವಹಣೆ: ಮೋದಿ ವಿಶ್ವಾಸ

CM-Siddaramaiah

CM Siddaramaiah: ಮುಡಾ ಹಗರಣದಲ್ಲಿ ನನ್ನ ತಪ್ಪಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.