Mangaluru: ತಡರಾತ್ರಿ ವಿಧಾನ ಪರಿಷತ್ ಸದಸ್ಯ ಐವನ್ ಮನೆಗೆ ಕಲ್ಲು; ಆರೋಪಿಗಳಿಗಾಗಿ ಶೋಧ
Team Udayavani, Aug 22, 2024, 5:13 PM IST
ಮಂಗಳೂರು: ರಾಜ್ಯಪಾಲರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಧಾನ ಪರಿಷತ್ ಐವನ್ ಡಿ’ಸೋಜಾ ಅವರ ಮನೆಗೆ ಬುಧವಾರ ತಡರಾತ್ರಿ ಅಪರಿಚಿತ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ, ಪರಾರಿಯಾಗಿದ್ದಾರೆ.
ನಗರದ ವೆಲೆನ್ಸಿಯಾದಲ್ಲಿರುವ ಮನೆ ಮೇಲೆ ಕಲ್ಲು ತೂರಾಟ ನಡೆದಿದ್ದು, ಐವನ್ ಡಿ’ಸೋಜಾ ಅವರು ಪಕ್ಷದ ಸಭೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ತೆರಳಿದ್ದರು. ಮನೆಯ ಇತರ ಸದಸ್ಯರು ಮನೆಯಲಿದ್ದರು. ಘಟನೆಯಲ್ಲಿ ಮನೆಗೆ ಯಾವುದೇ ಹಾನಿಯಾಗಿಲ್ಲ. ಗಾಜಿನ ಕಿಟಕಿಯ ಫ್ರೇಮ್ಗೆ ಕಲ್ಲು ಬಿದ್ದಿದ್ದು, ಮನೆಯ ಅಂಗಣದೊಳಗೆ ಕಲ್ಲು ಕಂಡು ಬಂದಿದೆ.
ಆರಂಭಿಕ ವರದಿ ಪ್ರಕಾರ ಬೈಕ್ನಲ್ಲಿ ಬಂದ ಇಬ್ಬರು ಬಂದು ಕಲ್ಲು ಎಸೆದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಪಾಂಡೇಶ್ವರ ಪೊಲೀಸರು ಭೇಟಿ ನೀಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ. ಸ್ಥಳದಲ್ಲಿರುವ ಸಿಸಿ ಕ್ಯಾಮೆರಾ ಫೂಟೇಜ್ಗಳನ್ನು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: PM Modi in Poland; ಯಾವುದೇ ಸಮಸ್ಯೆ ಯುದ್ಧ ಭೂಮಿಯಯಲ್ಲಿ ಪರಿಹರಿಸುವುದು ಅಸಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru CCB Police: 8 ಕೆಜಿ ಗಾಂಜಾ ಸಹಿತ ಇಬ್ಬರ ಬಂಧನ
Mangaluru: ಹಳೆ ಮನೆ ಕೆಡವುತ್ತಿದ್ದ ವೇಳೆ ಗೋಡೆ ಕುಸಿದು ಇಬ್ಬರು ಮೃತ್ಯು
Mangaluru: ರಕ್ಷಣೆಗಿರುವ ‘ರೈಲ್ವೇ ಗೇಟ್’ನಿಂದಲೇ ಪ್ರಯಾಣಿಕರಿಗೆ ಅಪಾಯ!
Public Works: ವಿದ್ಯಾರ್ಥಿಗಳು ಬಳಸುವ ದಾರಿಯಲ್ಲಿ ಕಾಂಕ್ರೀಟ್ ಕಾಲುಸಂಕ
Mangaluru: ತ್ಯಾಜ್ಯ ವಾಹನದಲ್ಲಿ ನಾಯಿ ಸಾಗಿಸಿದ ಚಾಲಕನಿಗೆ ಪಾಲಿಕೆಯಿಂದ ಎಚ್ಚರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.