ಗಡಿನಾಡಿನ ಹುಲಿಗಳಿಗೆ ಬಣ್ಣ ಹಚ್ಚುವ ಮನೀಶ್‌ ಕೂಡ್ಲು


Team Udayavani, Mar 7, 2018, 2:31 PM IST

7-March-16.jpg

ಬದಿಯಡ್ಕ: ಪದ್ಮನಾಭ-ಆಶಾಲತಾ ದಂಪತಿಯ ನಾಲ್ವರು ಪುತ್ರರಲ್ಲಿ ಮೊದಲನೆಯವರಾದ ಮನೀಶ್‌ ಕೂಡ್ಲು ಅವರಿಗೆ ಬಣ್ಣಗಳೆಂದರೆ ಪಂಚಪ್ರಾಣ. ಬಿಳಿಹಾಳೆಯಲ್ಲಿ, ಗೋಡೆಯಲ್ಲಿ ವರ್ಣಗಳ ಚೆಲ್ಲಿ, ತನ್ನ ಕುಂಚದಲ್ಲಿ ಕೈಚಳಕವ ತೋರಿ ಸೃಷ್ಟಿಸುವ ಕಲಾಕೃತಿಗಳ ಆಕರ್ಷಣೆ ಅಪಾರವಾದುದು. ಬಾಲ್ಯದಲ್ಲೇ ಕೈಬೀಸಿ ಕರೆಯುವ ಬಣ್ಣಗಳ ಲೋಕದಲ್ಲಿ ಹೂವರಳಿಸಿ, ತೆಂಗು ಕಂಗುಗಳ ಮಧ್ಯೆ ಪುಟ್ಟ ಮನೆಯ ಸುತ್ತೆಲ್ಲ ಹಸುರ ಚಿತ್ತಾರ ಬಿಡಿಸಿ ನೀಲಬಾನಿನಲ್ಲಿ ಉದಯಿಸುವ ಸೂರ್ಯನ ಬೆಳಕಿನ ತೋರಣ ಬರೆದು ಹಾರುವ ಹಕ್ಕಿಗಳ ಹಿಡಿದಿಟ್ಟು ವಿಸ್ಮಯ ಮೂಡಿಸುವ ಆಸಕ್ತಿಗೆ ಶಿಕ್ಷಕರ ಪ್ರೋತ್ಸಾಹವೇ ಬೆಂಬಲವಾಯಿತು.

ನವರಾತ್ರಿ ಬಂತೆಂದರೆ ಇವರಿಗೆ ಎಲ್ಲಿಲ್ಲದ ಬೇಡಿಕೆ. ಕಾಸರಗೋಡು ಸೇರಿದಂತೆ ಕಣ್ಣೂರು, ಪುತ್ತೂರು, ತಲಶ್ಯೇರಿ, ಮಂಗಳೂರು ಹಾಗೂ ಮುಂಬಯಿ ಮುಂತಾದೆಡೆ ಹುಲಿಕುಣಿತದ ತಂಡಗಳಿಗೆ ಬಣ್ಣ ಹಚ್ಚುವ ಮನೀಶ್‌ ಈಗಾಗಲೇ ಸಾವಿರಾರು ಹುಲಿಕುಣಿತದ ಕಲಾವಿದರ ಮೈಗೆ ಬಣ್ಣ ಹಚ್ಚಿ ಹುಲಿಯ ರೂಪನೀಡಿದ್ದಾರೆ. ಬಣ್ಣಗಳ ಆಯ್ಕೆ ಹಾಗೂ ಅತ್ಯಂತ ವೇಗವಾಗಿ, ಪರಿಣಾಮಕಾರಿಯಾಗಿ, ಆಕರ್ಷಕವಾಗಿ ಹುಲಿವೇಷಗಳನ್ನು ರೂಪಿಸುವ ಮನೀಶ್‌ ಅವರ ಕಲಾಸಾಧನೆ ಪ್ರಶಂಸನೀಯ. ಇದು ಅವರಿಗೆ ಬಲು ಪ್ರಿಯವಾದ ಕೆಲಸವೂ ಹೌದು.

ಹಿಂದೆ ಹುಲಿವೇಷಕ್ಕಾಗಿ ಬಣ್ಣ ಹಚ್ಚುವಾಗ ಮೊಟ್ಟೆಯ ಮೇಲೆ ಬಣ್ಣ ಹಚ್ಚಿ ಅದರಿಂದ ವೇಷಧಾರಿಯ ಶರೀರಕ್ಕೆ ಅಚ್ಚು ಹಾಕಲಾಗುತ್ತಿತ್ತು. ಮೊದಲ ದಿನ ರಾತ್ರಿ ಬಣ್ಣ ಹಚ್ಚಿದರೆ ಮಾತ್ರ ಮರುದಿನಕ್ಕಾಗುವಾಗ ಮೈ ಒಣಗಿ ಕುಣಿತಕ್ಕೆ ಸಜ್ಜಾಗುತ್ತಿದ್ದರೆ ಈಗ ಕಾಲದೊಂದಿಗೆ ಬದಲಾದ ರೀತಿನೀತಿಗಳಂತೆ ಬಣ್ಣಗಳ ಬಳಕೆಯಲ್ಲೂ ಬದಲಾವಣೆ ತರಲಾಗಿದೆ. ಅತ್ಯಂತ ವೇಗವಾಗಿ ಒಣಗುವ, ಹೆಚ್ಚು ಹೊಳಪಿನಿಂದ ಕೂಡಿದ ರಾಸಾಯನಿಕಯುಕ್ತ ಬಣ್ಣಗಳು ಶರೀರದ ಮೇಲೂ ಕೆಟ್ಟ ಪ್ರಭಾವವನ್ನು ಬೀರುವುದು ಕಂಡುಬರುತ್ತದೆ. ಆದರೆ ಬದಲಾದ ಶೆ„ಲಿ ಹಾಗೂ ಆವಿಷ್ಕಾರಗಳು ಕೆಲಸದ ಒತ್ತಡವನ್ನು ಕಡಿಮೆಮಾಡಿರುವುದು ಸುಳ್ಳಲ್ಲ.

ಚಿತ್ರಗಳ ಮೂಲಕ ಜನಮನಗೆದ್ದ ಮನೀಶ್‌ ಅವರ ನೈಪುಣ್ಯವನ್ನು ಗುರುತಿಸಿ ಗೌರವ ಅಭಿನಂದನೆಗಳು ಅರಸಿ ಬರುತ್ತಿರುವುದು ಶುಭ ಸೂಚನೆ. ಗಡಿನಾಡ ಸಾಹಿತ್ಯ ಅಕಾಡೆಮಿಯು ತನ್ನ ಪಯಣ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಅಧ್ಯಕ್ಷೆ ವೆಂಕಟಲಕ್ಷ್ಮೀ ಬಸವಲಿಂಗರಾಜು ಅವರು ಈ ಅಪ್ರತಿಮ ಕಲಾವಿದನನ್ನು ಸಮ್ಮಾನಿಸಿದ್ದಾರೆ.

ಬಣ್ಣದ ಲೋಕದಲ್ಲಿ ಕಾಮನಬಿಲ್ಲಿನ ಸೊಬಗಿನೊಂದಿಗೆ ಪತ್ನಿ ದೀಪಾ ಹಾಗೂ ಪುತ್ರ ಇಶಾನ್‌ ಜತೆಯಲ್ಲಿ ಬಣ್ಣ ಬಣ್ಣದ ಕನಸುಗಳನ್ನು ಹೊಸೆಯುವ ಈ ಚಿತ್ರ ಕಲಾವಿದನ ಬದುಕು ಬಣ್ಣದ ಹೂಗಳಿಂದ ಸದಾ ನಳನಳಿಸುವಂತಾಗಲಿ.

ವೀಡಿಯೋಗ್ರಾಫರ್‌, ವೀಡಿಯೋ ಎಡಿಟರ್‌
ಮುಂಬಯಿ ಆರ್ಟ್‌ ಗ್ಯಾಲರಿಯಲ್ಲಿ ಎರಡು ವರ್ಷ ದುಡಿದು ತನ್ನ ಅನುಭವ ಹಾಗೂ ಜ್ಞಾನವನ್ನು ಹೆಚ್ಚಿಸಿಕೊಂಡ ಇವರು ಉತ್ತಮ ವೀಡಿಯೋಗ್ರಾಫರ್‌ ಹಾಗೂ ವೀಡಿಯೋ ಎಡಿಟರ್‌ ಕೂಡ ಆಗಿದ್ದಾರೆ. ‘ಹಿಂಪೊಂಪು’ಮಲಯಾಳಂ ಆಲ್ಬಂ ಒಂದನ್ನು ನಿರ್ದೇಶಿಸಿದ್ದು ಕೆಲವು ಪ್ರಮುಖ ಆರಾಧನಾಲಯಗಳ ಹಾಗೂ ಕಲಾಕೇಂದ್ರಗಳ ಬಣ್ಣಗಳ ಆಯ್ಕೆಯಲ್ಲೂ ಸಲಹೆಗಾರರಾಗಿಯೂ ಪಾಲ್ಗೊಂಡಿದ್ದಾರೆ. ಚುನಾವಣೆ ಬಂತೆಂದರೆ ಇವರಿಗೆ ಕೈತುಂಬಾ ಕೆಲಸ ಖಚಿತ. ಭಿತ್ತಿ ಚಿತ್ರಗಳು, ಪ್ರಚಾರಕ್ಕಾಗಿ ಪಕ್ಷಭೇದವಿಲ್ಲದೆ ಇವರ ಚಿತ್ರಗಳು ಬಳಕೆಯಾಗುತ್ತವೆ.

ಮನೀಶ್‌ ಕೂಡ್ಲು ಆರನೆ ತರಗತಿಯಿಂದಲೇ ಶಾಲಾಕಲೋತ್ಸವಗಳಲ್ಲಿ ಚಿತ್ರರಚನೆ ಸ್ಪರ್ಧೆಗಳಲ್ಲಿ ಸತತವಾಗಿ ಪ್ರಥಮ ಬಹುಮಾನಗಳನ್ನು ಗಳಿಸುತ್ತಾ ಬಂದಿದ್ದು ಓಯಿಲ್‌ ಪೈಂಟಿಂಗ್‌, ಗೋಡೆಚಿತ್ರ, ಪೆನ್ಸಿಲ್‌ ಡ್ರಾಯಿಂಗ್‌, ಗ್ಲಾಸ್‌ ಪೈಂಟಿಂಗ್‌ ಸೇರಿದಂತೆ ಸುಮಾರು ಹನ್ನೆರಡು ರೀತಿಯ ಚಿತ್ರರಚನೆಗಳು ಇವರಿಗೆ ಕರತಲಾಮಲಕವಾಗಿವೆ. ಫನ್‌ ಆರ್ಟ್ಸ್ ತರಬೇತಿಯನ್ನು ಪಡೆದು ಮೂರು ವರ್ಷ ಅದೇ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಓಣಂ ಮುಂತಾದ ವಿಶೇಷ ಸಂದರ್ಭಗಳಲ್ಲಿ ಹೂರಂಗೋಲಿ ಹಾಗೂ ಚಿತ್ರರಚನಾ ಸ್ಪರ್ಧೆಗಳಿಗೆ ತೀರ್ಪುಗಾರರಾಗಿಯೂ, ಮುಖ್ಯ ಅತಿಥಿಯಾಗಿಯೂ ಭಾಗವಹಿಸಿದ್ಧಾರೆ .

ಅಖಿಲೇಶ್ ನಗುಮುಗಂ 

ಟಾಪ್ ನ್ಯೂಸ್

00025

Shiroor landslide: ಕೊನೆಗೂ 71 ದಿನಗಳ ಬಳಿಕ ಅರ್ಜುನ್‌ ಲಾರಿ ಹಾಗೂ ಮೃತದೇಹ ಪತ್ತೆ

Kota: ನೈಲಾಡಿಯಲ್ಲಿ ಹೊಂಚು ಹಾಕಿ ಸಾಕು ನಾಯಿಯನ್ನು ಭೇಟೆಯಾಡಿದ ಚಿರತೆ

Kota: ನೈಲಾಡಿಯಲ್ಲಿ ಹೊಂಚು ಹಾಕಿ ಸಾಕು ನಾಯಿಯನ್ನು ಬೇಟೆಯಾಡಿದ ಚಿರತೆ

siddaramaiah

Siddaramaiah ಬೆಂಬಲಿಸಿ ಅಹಿಂದದಿಂದ ಹುಬ್ಬಳ್ಳಿ-ಬೆಂಗಳೂರು ಜಾಗೃತಿ ಜಾಥಾ

Kalaburagi: ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಲು ಸರಕಾರಗಳ ಮೇಲೆ ಒತ್ತಡ, ಬೃಹತ್ ಸಮ್ಮೇಳನ

Kalaburagi: ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಲು ಸರಕಾರಗಳ ಮೇಲೆ ಒತ್ತಡ, ಬೃಹತ್ ಸಮ್ಮೇಳನ

Harsha Sai: ಅತ್ಯಾಚಾರ, ವಂಚನೆ ಆರೋಪ; ಖ್ಯಾತ ಯೂಟ್ಯೂಬರ್‌ ಹರ್ಷ ಸಾಯಿ ವಿರುದ್ಧ ದೂರು ದಾಖಲು

Harsha Sai: ಅತ್ಯಾಚಾರ, ವಂಚನೆ ಆರೋಪ; ಖ್ಯಾತ ಯೂಟ್ಯೂಬರ್‌ ಹರ್ಷ ಸಾಯಿ ವಿರುದ್ಧ ದೂರು ದಾಖಲು

“ದೇಶದ ಯಾವುದೇ ಭಾಗವನ್ನು ಪಾಕ್‌ ಎಂದು ಕರೆಯಬೇಡಿ: ಸುಪ್ರೀಂಕೋರ್ಟ್‌ ಆದೇಶದಲ್ಲೇನಿದೆ?

“ದೇಶದ ಯಾವುದೇ ಭಾಗವನ್ನು ಪಾಕ್‌ ಎಂದು ಕರೆಯಬೇಡಿ: ಸುಪ್ರೀಂಕೋರ್ಟ್‌ ಆದೇಶದಲ್ಲೇನಿದೆ?

Chikkamagaluru: ಹಣ ಪಡೆದ ಆರೋಪ… ಪ್ರಾಂಶುಪಾಲ, ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ

Chikkamagaluru: ಹಣ ಪಡೆದ ಆರೋಪ… ಪ್ರಾಂಶುಪಾಲ, ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಅಮೀಬಿಕ್‌ ಎನ್ಸೆಫಾಲಿಟಿಸ್‌ ಬಗ್ಗೆ ಎಚ್ಚರದಿಂದಿರಿ’

Kasaragod: “ಅಮೀಬಿಕ್‌ ಎನ್ಸೆಫಾಲಿಟಿಸ್‌ ಬಗ್ಗೆ ಎಚ್ಚರದಿಂದಿರಿ’

Kasaragod: ಬಗೆದಷ್ಟು ಆಳವಾಗಿದೆ ಅಮಲು ಪದಾರ್ಥ ಜಾಲ

Kasaragod: ಬಗೆದಷ್ಟು ಆಳವಾಗಿದೆ ಅಮಲು ಪದಾರ್ಥ ಜಾಲ

Kasaragod ಇಲಿ ಜ್ವರ: ಜಾಗ್ರತೆ ಪಾಲಿಸಿ : ಜಿಲ್ಲಾ ವೈದ್ಯಾಧಿಕಾರಿ

Kasaragod ಇಲಿ ಜ್ವರ; ಜಾಗ್ರತೆ ಪಾಲಿಸಿ : ಜಿಲ್ಲಾ ವೈದ್ಯಾಧಿಕಾರಿ

Kasaragod ಮಿದುಳನ್ನು ತಿನ್ನುವ ಅಮೀಬಾ ಸೋಂಕು: ಚಟ್ಟಂಚಾಲ್‌ ಯುವಕ ಸಾವು

Kasaragod ಮಿದುಳನ್ನು ತಿನ್ನುವ ಅಮೀಬಾ ಸೋಂಕು: ಚಟ್ಟಂಚಾಲ್‌ ಯುವಕ ಸಾವು

8

Virajpete: ಮನೆಯಂಗಳದಲ್ಲಿ ಕಾಡಾನೆ; ಗ್ರಾಮಸ್ಥರಲ್ಲಿ ಆತಂಕ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

00025

Shiroor landslide: ಕೊನೆಗೂ 71 ದಿನಗಳ ಬಳಿಕ ಅರ್ಜುನ್‌ ಲಾರಿ ಹಾಗೂ ಮೃತದೇಹ ಪತ್ತೆ

5(1)

Surathkal: ಹೊಸ ಆಕರ್ಷಣೆಗಳಿಲ್ಲದೆ ಸೊರಗುತ್ತಿವೆ ಬೀಚುಗಳು!

eshwarappa

Siddaramaiah ಪತ್ನಿ ಮುಗ್ದ, ಸಾತ್ವಿಕ ಹೆಣ್ಣು ಮಗಳು; ಅನ್ಯಾಯವಾಗಬಾರದು: ಈಶ್ವರಪ್ಪ

Kota: ನೈಲಾಡಿಯಲ್ಲಿ ಹೊಂಚು ಹಾಕಿ ಸಾಕು ನಾಯಿಯನ್ನು ಭೇಟೆಯಾಡಿದ ಚಿರತೆ

Kota: ನೈಲಾಡಿಯಲ್ಲಿ ಹೊಂಚು ಹಾಕಿ ಸಾಕು ನಾಯಿಯನ್ನು ಬೇಟೆಯಾಡಿದ ಚಿರತೆ

Dandeli:ದೂರು ನೀಡಿ ಎರಡುವರೆ ಗಂಟೆಯೊಳಗಡೆ ನಾಪತ್ತೆಯಾದ ಮಹಿಳೆಯನ್ನು ಪತ್ತೆ ಹಚ್ಚಿದ ಪೊಲೀಸರು

Dandeli:ದೂರು ನೀಡಿ ಎರಡುವರೆ ಗಂಟೆಯೊಳಗಡೆ ನಾಪತ್ತೆಯಾದ ಮಹಿಳೆಯನ್ನು ಪತ್ತೆ ಹಚ್ಚಿದ ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.