ಒತ್ತಡದ ಬದುಕಿನಿಂದ ಹೆಚ್ಚುತ್ತಿದೆ ಮಾನಸಿಕ ಕಾಯಿಲೆ


Team Udayavani, Oct 10, 2018, 10:42 AM IST

10-october-3.gif

‘ಬದಲಾಗುತ್ತಿರುವ ಜಗತ್ತಿನಲ್ಲಿ ಯುವಜನರು ಮತ್ತು ಮಾನಸಿಕ ಆರೋಗ್ಯ’ ಘೋಷವಾಕ್ಯದಡಿ ಇಂದು ವಿಶ್ವಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ. ಮನೋರೋಗಕ್ಕೆ ಕಾರಣಗಳು ಹಲವಾರಿದ್ದರೂ ನಿರ್ಲಕ್ಷ್ಯ, ಮೂಢನಂಬಿಕೆಯಿಂದಾಗಿಯೇ ಈ ರೋಗ ಉಲ್ಬಣಗೊಳ್ಳುತ್ತಿರುವುದು ಸತ್ಯ. ವಿಶ್ವ ಮಾನಸಿಕ ಆರೋಗ್ಯ ದಿನದ ಈ ಸಂದರ್ಭದಲ್ಲಿ ಮನೋರೋಗದ ಬಗ್ಗೆ ಎಲ್ಲರೂ ಜಾಗೃತರಾಗುವುದು ಬಹುಮುಖ್ಯ. ಒತ್ತಡದ ಬದುಕಿನಲ್ಲಿ ಮಾನಸಿಕ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸೋಣ ಎಂಬ ಆಶಯದೊಂದಿಗೆ ಸುದಿನ ಸಾಂದರ್ಭಿಕ ಲೇಖನ.

ಮಹಾನಗರ: ಎರಡು ವರ್ಷಗಳ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 6,575 ಮಂದಿ ಮನೋರೋಗಕ್ಕಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ 4,467 ಮಂದಿ ಅಲ್ಪ ಪ್ರಮಾಣದ ಮಾನಸಿಕ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರೆ, 2,108 ಮಂದಿ ತೀವ್ರ ಮನೋರೋಗದಿಂದ ಬಳಲುತ್ತಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಮಾಹಿತಿ ಪ್ರಕಾರ, ಅಲ್ಪಪ್ರಮಾಣದ ಕಾಯಿಲೆಗೆ ಚಿಕಿತ್ಸೆ ಪಡೆದವರ ಪೈಕಿ ಬಹುತೇಕರು ಒತ್ತಡದಿಂದ ಮಾನಸಿಕ ಕಾಯಿಲೆಗೆ ಒಳಗಾದವರು! ಪ್ರೇಮ ವೈಫಲ್ಯ, ಸಂಬಂಧಗಳಲ್ಲಿ ಬಿರುಕು, ಸಂಶಯ ಮುಂತಾದವುಗಳೂ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತಿವೆ. ಇದರಿಂದ ಖನ್ನತೆ, ಆತ್ಮಹತ್ಯೆ, ಮಾದಕದ್ರವ್ಯ ಸೇವನೆಗೆ ಒಳಗಾಗುತ್ತಿರುವುದು ಹೆಚ್ಚುತ್ತಿದೆ ಎನ್ನುತ್ತಾರೆ ವೈದ್ಯರು.

ಅಲ್ಲದೆ ಆನುವಂಶೀಯತೆ ಮತ್ತುಪರಿಸರ ಸಂಬಂಧಿ ಒತ್ತಡವೂ ಮನೋರೋಗಕ್ಕೆ ಕಾರಣವಾಗಿದೆ. ಆದರೆ ಚಿಕಿತ್ಸೆ ಪಡೆದುಕೊಳ್ಳದೆ, ಮಾನಸಿಕ ರೋಗಗಳಿಂದ ಬಳಲುತ್ತಿರುವವರ ಸಂಖ್ಯೆಯೂ ಹೆಚ್ಚಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಉಳಿದಿರುವ ಮೂಢನಂಬಿಕೆಗಳಿಂದಾಗಿ ಮಾನಸಿಕ ರೋಗಿಗಳ ಸರಿಯಾದ ಸಂಖ್ಯೆ ಸಿಗುತ್ತಿಲ್ಲ ಎನ್ನುತ್ತಾರೆ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಪ್ರಮುಖರು.

5 ತಿಂಗಳಲ್ಲಿ 943 ಮಂದಿಗೆ ತೀವ್ರ ಮನೋರೋಗ
2017 ಎಪ್ರಿಲ್‌ನಿಂದ 2018ರ ಮಾರ್ಚ್‌ ತನಕ ಜಿಲ್ಲೆಯಲ್ಲಿ 3,090 ಮಂದಿ ಅಲ್ಪಪ್ರಮಾಣದ ಮನೋ ರೋಗ ಹಾಗೂ 1,645 ಮಂದಿ ತೀವ್ರ ಮನೋರೋಗದಿಂದ ಬಳಲು ತ್ತಿರುವವರು ಚಿಕಿತ್ಸೆ ಪಡೆದಿದ್ದಾರೆ. 2018ರ ಎಪ್ರಿಲ್‌ನಿಂದ ಆಗಸ್ಟ್‌ ತನಕ 1377 ಮಂದಿ ಅಲ್ಪ ಪ್ರಮಾಣದ ಕಾಯಿಲೆ ಮತ್ತು 943 ಮಂದಿ ತೀವ್ರ ಪ್ರಮಾಣದ ಮನೋರೋಗದಿಂದ ಬಳಲುತ್ತಿರುವವರು ಚಿಕಿತ್ಸಾನಿರತರಾಗಿದ್ದಾರೆ. ಪ್ರಾಥಮಿಕ ಹಂತದಲ್ಲಿಯೇ ಮನೋರೋಗವನ್ನು ಪತ್ತೆಹಚ್ಚಿ ಚಿಕಿತ್ಸೆ ಪಡೆದರೆ ಶೇ. 100ರಷ್ಟು ಗುಣಮುಖರಾಗಲು ಸಾಧ್ಯವಿದೆ. ತೀವ್ರ ಪ್ರಮಾಣದ ರೋಗದಿಂದ ಬಳಲುವವರನ್ನೂ ಮೊದಲಿನಂತಾಗಿಸುವುದು ಸಾಧ್ಯವಾಗಿದ್ದು, ಶೇ. 60ಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಡಾ| ವಿಜಯ್‌ ತಿಳಿಸಿದ್ದಾರೆ.

ಒತ್ತಡದಿಂದ ಮನೋರೋಗ ಹೆಚ್ಚು
ಅಲ್ಪ ಪ್ರಮಾಣದ ಮನೋರೋಗ ಸಮಸ್ಯೆ ಜೀವನದ ಪ್ರತಿಸ್ತರದಲ್ಲಿ ಪ್ರತಿಯೊಬ್ಬರನ್ನೂ ಬಾಧಿಸುತ್ತದೆ. ಮುಖ್ಯವಾಗಿ ಅತಿಯಾದ ಸಿಟ್ಟು, ಒತ್ತಡ, ತಲೆಬಿಸಿ, ಕೀಳರಿಮೆ, ಒಂದೇ ಕೆಲಸವನ್ನು ಪದೇಪದೆ ಮಾಡುವುದು ಮುಂತಾದವು ಇದರ ಲಕ್ಷಣಗಳು. ಕಾಡುವ ಒಬ್ಬಂಟಿತನ, ಅತಿಯಾದ ಕೆಲಸ, ಪ್ರೇಮ ವೈಫಲ್ಯ, ಮನೆಯವರ ಪ್ರೀತಿ ಸಿಗದಿರುವುದು, ಪ್ರೀತಿಪಾತ್ರರ ಮರಣ, ಉದ್ಯಮದಲ್ಲಿ ವಿಫಲವಾಗುವುದು ಮುಂತಾದವು ಅಲ್ಪಪ್ರಮಾಣದ ಮನೋರೋಗಕ್ಕೆ ಕಾರಣವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಲಸದೊತ್ತಡದಿಂದ ಮನೋರೋಗಕ್ಕೊಳಗಾಗುವವರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿರುವುದು ಆತಂಕಕಾರಿ ಎನ್ನುತ್ತಾರೆ ಇಲಾಖೆ ಪ್ರಮುಖರು. ಈ ಸಮಸ್ಯೆಯಿಂದ ಬಳಲುತ್ತಿರುವವರನ್ನು ಆಪ್ತ ಸಮಾಲೋಚನೆಯಿಂದ ಗುಣಪಡಿಸುವುದು ಸಾಧ್ಯವಿದೆ.

ಕೆಲವೊಂದು ದುರಂತಗಳು ಪದೇ ಪದೇ ನಡೆದಾಗ ಮತ್ತು ಅದರಿಂದ ಹೊರ ಬರಲು ಸಾಧ್ಯವಾಗದೇ ಇದ್ದಾಗ ಅಂತಹವರು ತೀವ್ರ ಮನೋರೋಗಿಗಳಾಗಿ ಬದಲಾಗುತ್ತಾರೆ. ಇಂತಹ ವರು ಆತ್ಮಹತ್ಯೆಯಂತಹ ಭಯಾನಕ ಘಟ್ಟಕ್ಕೂ ತಲುಪಿಬಿಡುತ್ತಾರೆ. ಏಕಾಗ್ರತೆ ಕಳೆದುಕೊಂಡು ಒಟ್ಟಾರೆಯಾಗಿ ವರ್ತನೆ ಇವೇ ಮುಂತಾದ ಚಟುವಟಿಕೆಗಳನ್ನು ತೋರ್ಪಡಿಸುತ್ತಾರೆ. 

3,945 ಮಂದಿಗೆ ಮೂರ್ಛೆರೋಗ
ಮಾನಸಿಕ ಆರೋಗ್ಯ ಹದಗೆಡುವುದರಲ್ಲಿ ಮೂರ್ಛೆರೋಗವೂ ಒಂದಾಗಿದೆ. 2017ರ ಎಪ್ರಿಲ್‌ನಿಂದ ಈ ವರ್ಷದ ಮಾರ್ಚ್‌ ತನಕ 2,449 ಮಂದಿಗೆ ಹಾಗೂ 2018ರ ಎಪ್ರಿಲ್‌ನಿಂದ ಆಗಸ್ಟ್‌ವರೆಗೆ 1,496 ಮಂದಿಗೆ ಮೂರ್ಛರೋಗದಂತಹ ಕಾಯಿಲೆಗಳು ಕಂಡು ಬಂದಿವೆ. ತಲೆಯೊಳಗಡೆ ಲವಣಾಂಶ ಏರುಪೇರು, ತಲೆಗೆ ಉಂಟಾಗುವ ಗಾಯಗಳು, ರಕ್ತದೊತ್ತಡದಲ್ಲಿನ ಏರುಪೇರು, ಆನುವಂಶಿಕ ಫಿಟ್ಸ್‌ ಕಾಯಿಲೆಯಿಂದ ಬಳಲುವವರು ಮುಂತಾದವರು ಇದರಲ್ಲಿ ಸೇರಿದ್ದಾರೆ.

ಗುಣಪಡಿಸುವ ರೋಗ
ಒತ್ತಡದಿಂದಾಗಿ ಮನೋರೋಗಕ್ಕೊಳಗಾಗುವವರು ಹೆಚ್ಚುತ್ತಿದ್ದಾರೆ. ಜತೆಗೆ ಆನುವಂಶೀಯತೆ, ಪರಿಸರ ಸಂಬಂಧಿ ಒತ್ತಡವೂ ಕಾರಣವಾಗುತ್ತಿದೆ. ಮಾನಸಿಕ ರೋಗವು ಗುಣಪಡಿಸಲಾಗದಂಥದ್ದಲ್ಲ. ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆದರೆ ವ್ಯಕ್ತಿ ಮತ್ತೆ ಮೊದಲಿನಂತಾಗುವುದು ಸಾಧ್ಯವಿದೆ.
– ಡಾ| ರತ್ನಾಕರ್‌, 
ಜಿಲ್ಲಾ ಮಾನಸಿಕ ಆರೋಗ್ಯ
ಕಾರ್ಯಕ್ರಮಾಧಿಕಾರಿ

‡ ಧನ್ಯಾ ಬಾಳೆಕಜೆ 

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.