ಸದೃಢ ಸಮಾಜಕ್ಕೆ ಗುಣಮಟ್ಟದ ಶಿಕ್ಷಣ ಅಗತ್ಯ: ಸಚಿವ ಡಾ| ಅಶ್ವತ್ಥನಾರಾಯಣ
Team Udayavani, Dec 18, 2022, 1:00 AM IST
ಮೂಡುಬಿದಿರೆ : ಗುಣ ಮಟ್ಟದ ಶಿಕ್ಷಣ ನೀಡಲು ಸರಕಾರ ಬದ್ಧವಾಗಿದ್ದು ವಿದ್ಯಾರ್ಥಿ ಕೇಂದ್ರಿತ ವಾಗಿ ಹಲವು ಸುಧಾರಣೆಗಳಾಗಿವೆ. ಯುವಕ ಯುವತಿಯರಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡಲು ಸ್ಕಿಲ್ ಕನೆಕ್ಟ್ ಫ್ಲಾಟ್ ಎಂಬ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್.ಅಶ್ವತ್ಥ ನಾರಾಯಣ ಅವರು ಹೇಳಿದ್ದಾರೆ.
ಮೂಡುಬಿದಿರೆ ಹೊರವಲಯದ ಬನ್ನಡ್ಕದಲ್ಲಿ ಸ್ಥಾಪನೆಯಾಗಿರುವ ಮಂಗಳೂರು ವಿ.ವಿ.ಯ 6ನೇ ಘಟಕ ಕಾಲೇಜನ್ನು ಉದ್ಘಾಟಿಸಿ ಅವರು ಮಾತನಾಡಿದರು. ನೂತನ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಇ-ಗವರ್ನೆನ್ಸ್, ಯೂನಿಫೈಡ್ ಯೂನಿ ವರ್ಸಿಟಿ ಕಾಲೇಜ್ ಮ್ಯಾನೇಜೆ¾ಂಟ್, ಇ-ಆಫೀಸ್, ಸೇವಾ ಸಿಂಧು ಮುಂತಾದ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಆಡಳಿತದಲ್ಲಿ ಪಾರದರ್ಶಕತೆಯನ್ನು ತೋರಲಾಗುತ್ತಿದೆ ಎಂದರು.
ವೆಬ್ಸೈಟ್ಅನಾವರಣ
ಶಾಸಕ ಉಮಾನಾಥ್ ಕೋಟ್ಯಾನ್ ಘಟಕ ಕಾಲೇಜಿನ ವೆಬ್ಸೈಟ್ ಅನಾ ವರಣಗೊಳಿಸಿ ಮಾತನಾಡಿ, ಕಳೆದ ಸಾಲಿನಲ್ಲಿ ಪ್ರಾರಂಭವಾದ ಕಾಲೇಜು ತರಗತಿಗಳಲ್ಲಿ ಈ ವರ್ಷ 100ರಷ್ಟು ದಾಖಲಾತಿ ಆಗಿದೆ. ಸುಸಜ್ಜಿತ ಕಾಲೇಜು ಕ್ಯಾಂಪಸ್ ಕಟ್ಟಲು ಐದು ಎಕ್ರೆ ಜಾಗವನ್ನು ವಿ.ವಿ.ಗೆ ಹಸ್ತಾಂತರಿಸ ಲಾಗುವುದು ಎಂದರು.
ವಿ.ವಿ. ಕುಲಪತಿ ಪ್ರೊ| ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಮೀಣ ಪ್ರದೇಶಕ್ಕೆ ಕಾಲೇಜು ಒದಗಿಸಿಕೊಡಲು ಶಾಸಕರು ಅವಿರತ ಶ್ರಮವಹಿಸಿದ್ದಾರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬುದರ ಜತೆಗೆ ಸಬ್ ಕಾ ಪ್ರಯಾಸ್ ಕೂಡ ಅಗತ್ಯ ಎಂದರು.
ಪಡುಮಾರ್ನಾಡು ಗ್ರಾ.ಪಂ. ಅಧ್ಯಕ್ಷೆ ಸಿ.ಎಸ್. ಕಲ್ಯಾಣಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ದಯಾನಂದ ಪೈ, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ವಿ.ವಿ. ಹಣಕಾಸು ಅಧಿಕಾರಿ ಡಾ| ವೈ. ಸಂಗಪ್ಪ , ವಿವಿಧ ವಿಭಾಗಗಳ ಡೀನ್ಗಳು, ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು.
ಕುಲಸಚಿವ ಪ್ರೊ| ಕಿಶೋರ್ ಕುಮಾರ್ ಸಿ.ಕೆ. ಸ್ವಾಗತಿಸಿದರು. ಆಶಾ ಶ್ಯಾಲೆಟ್ ಡಿ’ಸೋಜಾ ಮತ್ತು ಸುಲೋಚನಾ ಪಚ್ಚನಡ್ಕ ನಿರೂಪಿಸಿ ದರು. ಘಟಕ ಕಾಲೇಜಿನ ಸಂಯೋಜಕ ಡಾ| ಗಣಪತಿ ಗೌಡ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.