ಮೂಲ್ಕಿ ಗತ ವೈಭವವನ್ನು ಮರಳಿ ಪಡೆಯಲಿ: ಹರಿಕೃಷ್ಣ ಪುನರೂರು


Team Udayavani, Dec 18, 2017, 12:41 PM IST

18-Dec-9.jpg

ಮೂಲ್ಕಿ : ಶತಮಾನಗಳಿಂದಲೂ ಪ್ರಪಂಚದ ಭೂಪಟದಲ್ಲಿ ಗುರುತಿಸಿಕೊಂಡಿದ್ದ ಮೂಲ್ಕಿ ನಗರ ಅವಿಭಜಿತ ಜಿಲ್ಲೆಯಲ್ಲಿಯೇ ಒಂದು ಕೇಂದ್ರ ಪ್ರದೇಶವಾಗಿತ್ತು ಎಂಬ ದಾಖಲೆ ಇದ್ದರೂ ಈಗ ಎಲ್ಲವನ್ನು ಕಳೆದುಕೊಂಡಿರುವ ಗತ ಕಾಲದ ವೈಭವವನ್ನು ಮತ್ತೆ ಮರಳಿ ಪಡೆಯುವ ಪ್ರಯತ್ನ ಮೂಲ್ಕಿಯ ಜನರದ್ದಾಗಬೇಕು ಎಂದು ರಾಜ್ಯ ಕ.ಸಾ.ಪ. ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು. ಅವರು ಮೂಲ್ಕಿ ನೂತನವಾಗಿ ಆರಂಭಗೊಂಡ ನಾಗರಿಕ ಹಿತ ರಕ್ಷಣ ವೇದಿಕೆಯ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಮೂಲ್ಕಿಯಲ್ಲಿ ಸರಕಾರದ ಎಲ್ಲ ಪ್ರಮುಖ ಇಲಾಖೆಗಳ ಕಚೇರಿ, ನ್ಯಾಯಲಯ ಹಾಗೂ ರಾಜಕೀಯವಾಗಿ ಮಾತ್ರವಲ್ಲದೆ ಇತರ ಮೂಲ ಸೌಕರ್ಯಗಳ ಕೇಂದ್ರವಾಗಿ ಬೆಳೆದ ಮೂಲ್ಕಿ ಸೇತುವೆಯ ನಿರ್ಮಾಣದಿಂದ ಬಂದರು ಸಂಪರ್ಕದಿಂದ ನಿಂತು ವ್ಯವಹಾರ ಮಂಗಳೂರಿನತ್ತಾ ವರ್ಗಾವಣೆಯಾದ ದಿನದಿಂದ ಮೂಲ್ಕಿ ನಗಣ್ಯವಾಗಲು ಸುರುವಾಯಿತು ಎಂದು ಪುನರೂರು ಹೇಳಿದರು.

ಮೂಲ್ಕಿ ಬಪ್ಪನಾಡು ದೇವಸ್ಥಾನದ ಆಡಳಿತೆ ಮೊಕ್ತೇಸರ ಎನ್‌.ಎಸ್‌. ಮನೋಹರ ಶೆಟ್ಟಿ ಅವರು ವೇದಿಕೆಯನ್ನು ಉದ್ಘಾಟಿಸಿ ಮೂಲ್ಕಿಯ ಜನರ ಹಿತವನ್ನು ಕಾಯ್ದುಕೊಳ್ಳುವಲ್ಲಿ ವೇದಿಕೆಯ ಯೋಜನೆಗಳು ಯಶಸ್ವಿಯಾಗಲಿ ಎಂದು ಹೇಳಿದರು.

ಪ್ರಸ್ತಾವಿಕವಾಗಿ ವೇದಿಕೆಯ ಅಧ್ಯಕ್ಷ ಎನ್‌.ಪಿ.ಶೆಟ್ಟಿಯವರು ಮಾತನಾಡಿ, ಮೂಲ್ಕಿ ಪರಸರದ ಜನರ ಹಿತವನ್ನು ಕಾಯ್ದುಕೊಳ್ಳುವಲ್ಲಿ ಅಗತ್ಯ ಬಿದ್ದರೆ ಹೋರಾಟಕ್ಕೂ ವೇದಿಕೆಯು ಕಾರ್ಯಾಚರಣೆ ನಡೆಸಲು ಸಿದ್ಧ ಎಂದರು.

ಮೂಲ್ಕಿ ಚರ್ಚ್‌ನ ಧರ್ಮಗುರು ಫಾ| ಪ್ರಾನ್ಸೀಸ್‌ ಕ್ಷೇವಿಯರ್‌ ಗೋಮ್ಸ್‌, ಬಪ್ಪನಾಡು ದೇವಳ ಪ್ರಧಾನ ಅರ್ಚಕ ಶ್ರೀಪತಿ ಉಪಾಧ್ಯಾಯ, ಕಾರ್ನಾಡು ಮಸೀದಿಯ ಮಹಮ್ಮದ್‌ ಶಾಫಿ ಮಾಲವಿ ಮುಂತಾದವರು ಶುಭ ಹಾರೈಸಿ ವೇದಿಕೆಯ ಮೂಲಕ ಜನತೆಗೆ ಉತ್ತಮ ಸೇವೆ ಸಿಗುವಂತಾಗಲಿ ಎಂದರು.

ಮೂಲ್ಕಿ ಕೆಂಚನಕೆರೆ ಪತಾಂಜಲಿ ಯೋಗ ಕೇಂದ್ರದ ಯೋಗ ಗುರು ಜಯ ಮುದ್ದು ಶೆಟ್ಟಿ,ಹೊಸ ಅಂಗಣ ಪತ್ರಿಕೆಯ ಸಂಪಾದಕ ಹರಿಶ್ಚಂದ್ರ ಪಿ.ಸಾಲ್ಯಾನ್‌ ಮೂಲ್ಕಿ ರಾಮಕೃಷ್ಣ ಪೂಂಜ ಐ.ಟಿ.ಐ.ನ ಪ್ರಾಂಶುಪಾಲ ವೈ  ಯಶವಂತ ಸಾಲ್ಯಾನ್‌ ಇವರನ್ನು ವೇದಿಕೆ‌ಯ ವತಿಯಿಂದ ಸಮ್ಮಾನಿಸಲಾಯಿತು.

ಅದೇ ವೇದಿಕೆಯಲ್ಲಿ ಕಿನ್ನಿಗೋಳಿ ವಿಜಯ ಕಲಾವಿದರ ವತಿಯಿಂದ ಸಮಾಜ ಸೇವಕ ಜೈ ಕರ್ನಾಟಕ ಘಟಕದ ಅಧ್ಯಕ್ಷ ಭಾಸ್ಕರ ಶೆಟ್ಟಿಗಾರ್‌ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಅತಿಥಿಗಳಾಗಿ ಕಿನ್ನಿಗೋಳಿಯ ಸ್ವಾಮಿ ವಿವೇಕಾನಂದ ಸೇವಾಸಮಿತಿಯ ಅಧ್ಯಕ್ಷ ಚಾವಡಿ ಮನೆ ಜಗನ್ನಾಥ ಶೆಟ್ಟಿ,ಮೂಲ್ಕಿ ಜಿ.ಎಸ್‌.ಬಿ. ಸಭಾ ಅಧ್ಯಕ್ಷ ಸತ್ಯೇನ್ದ್ರ ಶೆಣೆ, ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ ಮಾತನಾಡಿದರು. ವೇದಿಕೆಯಲ್ಲಿ ಪದಾಧಿಕಾರಿಗಳಾದ ಮೋಹನ ಶೆಟ್ಟಿ,,ಸತೀಶ್‌ ಕಿಲ್ಪಾಡಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Rain: ಚಿತ್ತಾ ಮಳೆ ಅಬ್ಬರಕ್ಕೆ ಇಬ್ಬರ ದುರ್ಮರಣ

Rain: ಚಿತ್ತಾ ಮಳೆ ಅಬ್ಬರಕ್ಕೆ ಇಬ್ಬರ ದುರ್ಮರಣ

ನೀರಿನ ತೊಟ್ಟಿಗೆ ಬಿದ್ದು  3 ವರ್ಷದ ಮಗು ಸಾ*ವು

Kanakapura: ನೀರಿನ ತೊಟ್ಟಿಗೆ ಬಿದ್ದು 3 ವರ್ಷದ ಮಗು ಸಾ*ವು

Belthangady: ಡಿವೈಡರ್‌ ಗೆ ಬೈಕ್‌ ಢಿಕ್ಕಿ; ಸವಾರ ಸಾ*ವು

Belthangady: ಡಿವೈಡರ್‌ ಗೆ ಬೈಕ್‌ ಢಿಕ್ಕಿ; ಸವಾರ ಸಾ*ವು

Badiyadka: ವಂಚನೆ ಪ್ರಕರಣ; ಸಚಿತಾ ವಿರುದ್ಧ ಇನ್ನೊಂದು ಕೇಸು

Badiyadka: ವಂಚನೆ ಪ್ರಕರಣ; ಸಚಿತಾ ವಿರುದ್ಧ ಇನ್ನೊಂದು ಕೇಸು

Ullal: ಎಂಡಿಎಂಎ ಮಾರಾಟ ಆರೋಪಿ ಬಂಧನ

Ullal: ಎಂಡಿಎಂಎ ಮಾರಾಟ ಆರೋಪಿ ಬಂಧನ

Mangaluru: ಸಾಲು ಸಾಲು ರಜೆ; ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಜನಜಂಗುಳಿ

Mangaluru: ಸಾಲು ಸಾಲು ರಜೆ; ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಜನಜಂಗುಳಿ

Udupi: ಗೀತಾರ್ಥ ಚಿಂತನೆ-61: ಶ್ವೇತ ವರ್ಣಕ್ಕೂ, ಶುಕ್ಲ ವರ್ಣಕ್ಕೂ ಸೂಕ್ಷ್ಮ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-61: ಶ್ವೇತ ವರ್ಣಕ್ಕೂ, ಶುಕ್ಲ ವರ್ಣಕ್ಕೂ ಸೂಕ್ಷ್ಮ ವ್ಯತ್ಯಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullal: ಎಂಡಿಎಂಎ ಮಾರಾಟ ಆರೋಪಿ ಬಂಧನ

Ullal: ಎಂಡಿಎಂಎ ಮಾರಾಟ ಆರೋಪಿ ಬಂಧನ

Mangaluru: ಸಾಲು ಸಾಲು ರಜೆ; ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಜನಜಂಗುಳಿ

Mangaluru: ಸಾಲು ಸಾಲು ರಜೆ; ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಜನಜಂಗುಳಿ

accident2

Kaup: ದಂಪತಿಗೆ ಕಾರು ಢಿಕ್ಕಿ; ಮಹಿಳೆಗೆ ಗಾಯ

5

Kateel: ಕಟೀಲಮ್ಮನ ಮಡಿಲಿನಲ್ಲಿ 2,000 ವೇಷಗಳ ನರ್ತನ

4

Mangaluru: 8 ಕೆಜಿ ಮುಡಿ ಹಾರಿಸುವ 8ರ ಕಿನ್ನಿಪಿಲಿ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Rain: ಚಿತ್ತಾ ಮಳೆ ಅಬ್ಬರಕ್ಕೆ ಇಬ್ಬರ ದುರ್ಮರಣ

Rain: ಚಿತ್ತಾ ಮಳೆ ಅಬ್ಬರಕ್ಕೆ ಇಬ್ಬರ ದುರ್ಮರಣ

ನೀರಿನ ತೊಟ್ಟಿಗೆ ಬಿದ್ದು  3 ವರ್ಷದ ಮಗು ಸಾ*ವು

Kanakapura: ನೀರಿನ ತೊಟ್ಟಿಗೆ ಬಿದ್ದು 3 ವರ್ಷದ ಮಗು ಸಾ*ವು

1-ewwss

India vs Australia; ಟೆಸ್ಟ್‌  ಸರಣಿಗೆ ಗ್ರೀನ್‌ ಸಂಶಯ

1-ucchil

Uchchila Dasara: ದೇಹದಾರ್ಡ್ಯ ಸ್ಪರ್ಧೆ ಉದ್ಘಾಟನೆ

1-asdsad

Arctic Open ಬ್ಯಾಡ್ಮಿಂಟನ್‌; ಲಕ್ಷ್ಯ ಸೇನ್‌ಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.