ಮೂಡುಬಿದಿರೆ: ಆಳ್ವಾಸ್‌ನಲ್ಲಿ ಹಲಸು, ಹಣ್ಣು, ಆಹಾರೋತ್ಸವಗಳ ಸಮೃದ್ಧಿ


Team Udayavani, Jun 15, 2024, 4:05 PM IST

ಮೂಡುಬಿದಿರೆ: ಆಳ್ವಾಸ್‌ನಲ್ಲಿ ಹಲಸು, ಹಣ್ಣು, ಆಹಾರೋತ್ಸವಗಳ ಸಮೃದ್ಧಿ

ಮೂಡುಬಿದಿರೆ: ಮೂಡುಬಿದಿರೆ ವಿದ್ಯಾಗಿರಿಯ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ) ವೇದಿಕೆಯಲ್ಲಿ ಕೃಷಿಋಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ಏರ್ಪಡಿಸಲಾಗಿರುವ ಎರಡನೇ ವರ್ಷದ “ಸಮೃದ್ಧಿ’-ಹಲಸು ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳ ಶುಕ್ರವಾರ ಪ್ರಾರಂಭವಾಗಿದೆ. ರವಿವಾರ ಸಂಜೆಯವರೆಗೆ ಮಹಾಮೇಳ ನಡೆಯಲಿದೆ.

ಹಲಸು, ಮಾವು ಪ್ರಧಾನವಾಗಿದ್ದು ರಂಬುಟಾನ್‌, ಮೆಂಗೋಸ್ಟಿನ್‌, ಅಬಿಯೂ, ಮಚ್ಚೋವಾ ಮೊದಲಾದ ದೇಶೀಯ, ವಿದೇಶಿಯ ಹಣ್ಣಿನ ಗಿಡಗಳ ಮಹಾ ಸಂಗ್ರಹವೇ ಇಲ್ಲಿದೆ. ವಿಶೇಷವಾಗಿ ಜಾಕ್‌ ಅನಿಲ್‌ ಅವರ ಸಂಶೋಧನೆ “ನಿನ್ನಿತಾಯ್‌’ ಹಲಸು, ಗಿಡ್ಡನೆ ತಳಿ, ಒಂದೂವರೆ ವರ್ಷ ದಲ್ಲಿಯೇ ಫಲವೀಯುವ ತಳಿ ಸೇರಿದಂತೆ ಬಹು ವಿಧ ಹಣ್ಣು ಹಂಪಲುಗಳ ಕಸಿಕಟ್ಟಿದ ಗಿಡಗಳು ಜನಮನ ಸೆಳೆಯುತ್ತಿವೆ. ಸಾಕುವ ವಿಧಾನವನ್ನೂ ಎಚ್ಚರಿಕೆಯ ಕ್ರಮಗಳನ್ನೂ ಅವರು, ಅವರ ಸಿಬಂದಿ ತಿಳಿಸಿಕೊಡುತ್ತಿದ್ದಾರೆ.

ನೇತ್ರಾವತಿ ಮತ್ತಿತರ ಹೆಸರಿನ ನರ್ಸರಿಗಳಿಂದಲೂ ಹಣ್ಣು, ಹೂವುಗಳ ವೈವಿಧ್ಯಮಯ ಗಿಡಗಳು ಸ್ಟಾಲ್‌ಗ‌ಳಲ್ಲಿವೆ. ಸಾಯಿ ಎಂಟರ್‌ ಪ್ರೈಸಸ್‌ನವರ ಕೃಷಿ ಸಲಕರಣೆಗಳು, ಹೊಸ ಹೊಸ ಸಾಮಗ್ರಿಗಳು ಗಮನ ಸೆಳೆಯುತ್ತಿವೆ. ಹತ್ತಿರದ ಮಳಿಗೆಗಳಲ್ಲಿ ಜೋನಿ ಬೆಲ್ಲ, ಸಾವಯವ ಬೆಲ್ಲದಿಂದ ಹಿಡಿದು ಆಯುರ್ವೇದ ಔಷಧಗಳ ಸಹಿತ ಆರೋಗ್ಯಪೂರ್ಣ ಆಹಾರ ವಸ್ತುಗಳು
ಪ್ರದರ್ಶನಾಂಗಣದಲ್ಲಿವೆ.

ಆಳ್ವಾಸ್‌ ಪ್ರಕೃತಿ ಚಿಕಿತ್ಸೆ ಯೋಗವಿಜ್ಞಾನ ಕಾಲೇಜಿನವರು ಹಲಸು ಮತ್ತು ಇತರ ಹಣ್ಣುಗಳಿಂದ ತಯಾರಿಸಿದ ಹಲ್ವ, ಬರ್ಫಿ, ಹೋಳಿಗೆ, ಹಲಸಿನ ಬೀಜದ ಖಾದ್ಯ ವಸ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ.

ತಯಾರಿಕೆಯ ವಿಧಾನಗಳನ್ನು ಆಸಕ್ತರಿಗೆ ತಿಳಿಸುತ್ತಿದ್ದಾರೆ. ನಾಡಿನೆಲ್ಲೆಡೆಯಿಂದ ತರಿಸ ಲಾದ ಬಹುಬಗೆಯ ಹಲಸು ಮಾರಾಟವೂ ನಡೆಯುತ್ತಿದೆ. ಉಳಿದಂತೆ ತಿಂಡಿ, ತಿನಿಸುಗಳ ಆಹಾರೋತ್ಸವ, ಗೃಹೋಪಯೋಗಿ ವಸ್ತುಗಳು, ಬಟ್ಟೆ ಬರೆ, ಫ್ಯಾನ್ಸಿ ಸಾಮಗ್ರಿಗಳು ಸೇರಿ ಇದೊಂದು ಸಮಗ್ರ ದೇಸೀ ಸಂಸ್ಕೃತಿಯನ್ನು ಪರಿಚಯಿಸುವ ಮಹಾ ಮೇಳ “ಸಮೃದ್ಧಿ’ ಎನ್ನುವ ಕಾರಣ ದಿಂದಾಗಿ ದೂರದೂರಿನ ಜನರನ್ನೂ ಇತ್ತ ಸೆಳೆಯುತ್ತಲಿದೆ. ಎಂದಿನಂತೆ ಆಳ್ವಾಸ್‌ ಕ್ಯಾಂಪಸ್‌ನ ವಿದ್ಯಾರ್ಥಿಗಳು, ಸಿಬಂದಿಗಳ ಸಹಿತ 25,000ಕ್ಕೂ ಅಧಿಕ ಮಂದಿಯ ಆಡುಂಬೊಲವಾಗಿದೆ.

ಟಾಪ್ ನ್ಯೂಸ್

DKShi

Congress;ಚುನಾವಣ ರಾಜಕೀಯಕ್ಕೆ ನಮ್ಮ ಕುಟುಂಬದವರು ಬರುವ ಪ್ರಶ್ನೆಯೇ ಇಲ್ಲ:ಡಿ.ಕೆ.ಶಿವಕುಮಾರ್

1-wedsadsad

Govt ನಿರ್ಲಕ್ಷ್ಯ; 2000 ಕೋಟಿ ರೂ.ಬಂಡವಾಳದ ಕಂಪನಿ ಮಹಾರಾಷ್ಟ್ರಕ್ಕೆ: ಬೆಲ್ಲದ ಆರೋಪ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

jio

Jio ಪ್ರಿಪೇಡ್ /ಪೋಸ್ಟ್ ಪೇಡ್ ಪ್ಲಾನ್ ಗಳ ದರ ಏರಿಕೆ

26

Bantwal: ಬೈಕ್‌ ಸ್ಕೀಡ್; ಗಂಭೀರ ಗಾಯಗೊಂಡು ಸಹಸವಾರೆ ಮೃತ್ಯು

Mangalore: ಗಾಂಜಾ ಸೇವನೆ; ಮೂವರು ವಶಕ್ಕೆ

Mangalore: ಗಾಂಜಾ ಸೇವನೆ; ಮೂವರು ವಶಕ್ಕೆ

1-crick

India vs England ಸೆಮಿ ಪಂದ್ಯ; ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆಂಗ್ಲರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangalore: ಗಾಂಜಾ ಸೇವನೆ; ಮೂವರು ವಶಕ್ಕೆ

Mangalore: ಗಾಂಜಾ ಸೇವನೆ; ಮೂವರು ವಶಕ್ಕೆ

rain 3

Red Alert; ನಾಳೆ ದಕ್ಷಿಣ ಕನ್ನಡದ ಶಾಲೆಗಳಿಗೆ, ಪಿಯು ಕಾಲೇಜುಗಳಿಗೆ ರಜೆ

suicide

Belthangady; ವಿದ್ಯುತ್ ಪ್ರವಹಿಸಿ ರಸ್ತೆಯಲ್ಲಿ ಸಾಗುತ್ತಿದ್ದ ವಿದ್ಯಾರ್ಥಿನಿ ಸಾವು

ಜನರ ಸುರಕ್ಷಗೆ ಮೊದಲ ಆದ್ಯತೆ ನೀಡಿ: ಮೆಸ್ಕಾಂ ಎಂ.ಡಿ. ಪದ್ಮಾವತಿ

ಜನರ ಸುರಕ್ಷಗೆ ಮೊದಲ ಆದ್ಯತೆ ನೀಡಿ: ಮೆಸ್ಕಾಂ ಎಂ.ಡಿ. ಪದ್ಮಾವತಿ

ವೈದ್ಯಕೀಯ ಶಿಕಣ ಪಡೆದವರೇ ಡ್ರಗ್ಸ್‌ ಗೆ ಬಲಿ: ಸಿವಿಲ್‌ ನ್ಯಾಯಾಧೀಶೆ ಶೋಭಾ

ವೈದ್ಯಕೀಯ ಶಿಕಣ ಪಡೆದವರೇ ಡ್ರಗ್ಸ್‌ ಗೆ ಬಲಿ: ಸಿವಿಲ್‌ ನ್ಯಾಯಾಧೀಶೆ ಶೋಭಾ

MUST WATCH

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

ಹೊಸ ಸೇರ್ಪಡೆ

DKShi

Congress;ಚುನಾವಣ ರಾಜಕೀಯಕ್ಕೆ ನಮ್ಮ ಕುಟುಂಬದವರು ಬರುವ ಪ್ರಶ್ನೆಯೇ ಇಲ್ಲ:ಡಿ.ಕೆ.ಶಿವಕುಮಾರ್

1-wedsadsad

Govt ನಿರ್ಲಕ್ಷ್ಯ; 2000 ಕೋಟಿ ರೂ.ಬಂಡವಾಳದ ಕಂಪನಿ ಮಹಾರಾಷ್ಟ್ರಕ್ಕೆ: ಬೆಲ್ಲದ ಆರೋಪ

31

Kiran Pahal: ವನಿತೆಯರ 400 ಮೀ.; ಕಿರಣ್‌ ಪಹಲ್‌ ಒಲಿಂಪಿಕ್ಸ್‌ ಗೆ ಅರ್ಹತೆ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

jio

Jio ಪ್ರಿಪೇಡ್ /ಪೋಸ್ಟ್ ಪೇಡ್ ಪ್ಲಾನ್ ಗಳ ದರ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.