ಮೂಡುಬಿದಿರೆ: ಬಸವನ ಕಜೆ ಕೆರೆಗೆ ಕಾಯಕಲ್ಪ ಖುಷಿ

ಬಸವನ ಕಜೆ  ಕೆರೆ ಒಂದು ಹಸುರು ಪ್ರದೇಶ. ಬಹಳ ಕುತೂಹಲಕಾರಿ ಸಂಗತಿ

Team Udayavani, Jun 11, 2024, 4:01 PM IST

ಮೂಡುಬಿದಿರೆ: ಬಸವನ ಕಜೆ ಕೆರೆಗೆ ಕಾಯಕಲ್ಪ ಖುಷಿ

ಮೂಡುಬಿದಿರೆ: ಹದಿನೆಂಟು ಬಸದಿ, ದೇವಸ್ಥಾನ, ಕೆರೆಗಳ ಊರು ಮೂಡುಬಿದಿರೆ ಎನ್ನುತ್ತಾರೆ. ಈಗ ಕೆರೆಗಳ ಸಂಖ್ಯೆ 20ಕ್ಕೇರಿದೆ. ಕೆಲವು ಜೀವಂತವಾಗಿವೆ, ಇನ್ನು ಕೆಲವು ಅರೆ ಜೀವಂತ, ಕೆಲವು ಬರಡಾಗಿ ಹೋಗಿವೆ. ಆಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯನ್ನು ಆಡಳಿತೆದಾರ ಈಶ್ವರ ಭಟ್ಟರು “ಮಾನಸ ಗಂಗೋತ್ರಿ’ಯಾಗಿ ಮಾಡಿದರು. ಬಳಿಕ ರೋಟರಿ ಕ್ಲಬ್‌ನವರು ಕಡಲಕೆರೆಯ ಪುನರುತ್ಥಾನ ಮಾಡಿದರು. ಈಗ ಅದು ಹಲವು ಆಕರ್ಷಣೆಗಳ ತಾಣವಾಗಿದೆ. ಇದಿಷ್ಟೇ ಅಲ್ಲ, ರೋಟರಿ ಚಾರಿಟೆ ಬಲ್‌ ಟ್ರಸ್ಟ್‌ ಕಳೆದ ಏಳು ವರ್ಷಗಳಲ್ಲಿ ನಾಲ್ಕು ಕೆರೆಗಳನ್ನು ಅಭಿವೃದ್ಧಿ ಮಾಡಿದ್ದು, ಈಗ ಐದನೆಯದಾಗಿ ಬಸವನ ಕಜೆ ಕೆರೆಯನ್ನು ಜೀವಂತವಾಗಿಸಲು ಸಿದ್ಧವಾಗುತ್ತಿದೆ.

ರೋಟರಿ ಕ್ಲಬ್‌ ಕಡಲಕೆರೆಗೆ ಕಾಯಕಲ್ಪ ಮಾಡಿದ್ದು 25 ವರ್ಷ ಗಳ ಹಿಂದೆ. ಕಡ ಲ ಕೆರೆ ಜನಪ್ರಿಯಗೊಂಡ ರೀತಿಯನ್ನು ಕಂಡು ಬೆರ ಗಾದ ರೋಟರಿ ಕ್ಲಬ್‌ 2016ರಲ್ಲಿ ರೋಟರಿ ಚಾರಿಟೆಬಲ್‌ ಟ್ರಸ್ಟ್‌ ರೂಪಿಸಿ ರೋಟಾ ಲೇಕ್ಸ್‌ ಎಂಬ ಕೆರೆಗಳ ಪುನರುತ್ಥಾನ ಯೋಜನೆಯನ್ನೇ ಹಮ್ಮಿಕೊಂಡಿತು. ತೀರ್ಥ ಕೆರೆ, ಉಳಿಯ ಕೆರೆ, ಪುಚ್ಚೇರಿ ಕೆರೆ ಮತ್ತು ಬಂಟ್ವಾಳ ರಸ್ತೆ ಬದಿ ಇರುವ ಕೇಂಪ್ಲಾಜೆ ಕೆರೆಗಳಿಗೆ ಅದು ಮರುಜೀವ ನೀಡಿದೆ. ಇದೀಗ ಮೂಡುಬಿದಿರೆ ಸರಹದ್ದಿನಲ್ಲಿ ಬರುವ ಬಸವನ ಕಜೆ ಕೆರೆಯನ್ನು ಮತ್ತೆ ಜೀವಂತವಾಗಿಸಲು ಸಿದ್ಧವಾಗಿದೆ.

ರೋಟರಿ ಚಾರಿಟೆಬಲ್‌ ಟ್ರಸ್ಟ್‌ ಗೆ ಮೊದಲ ಎರಡು ಅವಧಿ ಅಂದರೆ 6 ವರ್ಷ ಗಳಲ್ಲಿ ಡಾ| ಮುರಳಿಕೃಷ್ಣ ಅವರು ಅಧ್ಯಕ್ಷರಾಗಿದ್ದರೆ, ಈಗ 2 ವರ್ಷಗಳಿಂದ ಪಿ.ಕೆ. ಥಾಮಸ್‌ ಟ್ರಸ್ಟ್‌ ಚುಕ್ಕಾಣಿ ಹಿಡಿದು ಕೆರೆ ಅಭಿವೃದ್ಧಿಯನ್ನು ಮುಂದುವರಿ ಸುತ್ತಿದ್ದಾರೆ. ಬಸವನ ಕಜೆ ಕೆರೆಯ ವಿಶೇಷ ಮೂಡುಬಿದಿರೆ ಪುರಸಭೆಯ ಮಾರ್ಪಾಡಿ ಗ್ರಾಮದ ಈಶಾನ್ಯ ಮೂಲೆಯಲ್ಲಿದೆ ಬಸವನಕಜೆ ಕೆರೆ. 6.25 ಎಕ್ರೆ ಪ್ರದೇಶದಲ್ಲಿ ಹರಡಿರುವ ಬಸವನಕಜೆ ಕೆರೆಗೆ ಬೇರೆ ಮೂಲಗಳಿಂದ ನೀರ ಹರಿವು ಇಲ್ಲ. ನೀರು ಹೊರಗೆ ಹೋಗುವ ದ್ವಾರವೂ ಇಲ್ಲ. ಮಳೆಗಾಲದಲ್ಲಿ ನೀರು ತುಂಬಿ ನಿಲ್ಲುತ್ತದೆ.

ಮೂರು ಹಂತಗಳಲ್ಲಿರುವ ಬಸವನಕಜೆ ಕೆರೆಯಲ್ಲಿ ಎತ್ತರದ ಒಂದು ಹಂತ, ಸ್ವಲ್ಪ ತಗ್ಗಿನಲ್ಲಿರುವ ನೀರಿನ ಪ್ರದೇಶ ಮತ್ತು ಮೂರನೇ ಸ್ತರದಲ್ಲಿ ಬಯಲ ಭಾಗ. ಸದ್ಯ ಸುಮಾರು 70 ಶೇ.ದಷ್ಟು ಜಾಗದಲ್ಲಿ ಹಸಿರಿದೆ. 15 ಶೇ. ಬರಡು, ಅಷ್ಟೇ ಜಾಗದಲ್ಲಿ ಕೆಲವಂಶ ನಿರ್ಮಾಣ  ಕಾಮಗಾರಿಗಳಾಗಿವೆ. ರಾಷ್ಟ್ರೀಯ ಹೆದ್ದಾರಿ ಈ ಕೆರೆಯ ಹತ್ತಿರವೇ ಸಾಗುವ ಕಾರಣ, ನಗರೀಕರಣ
ವೇಗ ಪಡೆದುಕೊಳ್ಳುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಇಲ್ಲಿನ ಸಸ್ಯರಾಶಿ ಕಡಿಮೆಯಾಗುತ್ತ ಬಂದು, ನಿರ್ಮಾಣ ಕಾಮಗಾರಿಗಳು ನಡೆದಂತೆಲ್ಲ ಬಸವನಕಜೆಯ ಸಹಜ ಪ್ರಾಕೃತಿಕ ಚೆಲುವು, ಸಂಪತ್ತಿಗೆ ಕುತ್ತಾಗುವ ಎಲ್ಲ ಸಾಧ್ಯತೆಗಳೂ ಇವೆ.

ಏನೆಲ್ಲ ಇದೆ ಈ ಕೆರೆಯಲ್ಲಿ?
ಬಸವನ ಕಜೆ  ಕೆರೆ ಒಂದು ಹಸುರು ಪ್ರದೇಶ. ಬಹಳ ಕುತೂಹಲಕಾರಿ ಸಂಗತಿ ಎಂದರೆ 2015ರಲ್ಲಿ ತೆಗೆದ ಚಿತ್ರದಲ್ಲಿ ತೋರುವ
ಸಸ್ಯರಾಶಿಗಿಂತ 2023ರಲ್ಲಿ ಕಂಡ ಸಸ್ಯಸಂಕುಲ ಸಮೃದ್ಧವಾಗಿದೆ, ವೈವಿಧ್ಯಮಯವೂ ಆಗಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಬೆಳೆಯುವ ಅನೇಕ ಸಸ್ಯಗಳು ಇಲ್ಲಿವೆ. ಕುಂಟ ನೇರಳೆ, ಕಾಡು ಆರ್ಕಿಡ್‌, ಮುಳ್ಳಿನ ಡಲ್‌ಬರ್ಜಿಯಾ, ಲಿಯಾನಾ ಎಂಬ ಮರವನ್ನು ಸುತ್ತಿಕೊಳ್ಳುವ ಕಾಡುಬಳ್ಳಿ ಮೊದಲಾದ ಬಹುವಿಧ ಸಸ್ಯಗಳಿಲ್ಲಿವೆ.

ಗಿಡಮೂಲಿಕೆಗಳ ನೆಲೆಯೂ ಇದಾಗಿದೆ;
ಮುಂದೆ ಅವುಗಳನ್ನು ಸೂಕ್ತವಾಗಿ ಬೆಳೆಸುವ ಅವಕಾಶವೂ ಇದೆ. ನೀರಿರುವ ಭಾಗದಲ್ಲಿ ಸರೀಸೃಪಗಳು, ಪಶ್ಚಿಮ ಘಟ್ಟದಲ್ಲಿರುವಂತೆ ಅರಿಶಿನ ಬುರುಡೆಯ ಗುಬ್ಬಚ್ಚಿಯಂತಹ ಹಕ್ಕಿಗಳು, ವರ್ಣರಂಜಿತ ಚಿಟ್ಟೆ, ಪಾತರಗಿತ್ತಿಗಳು ಇವೆ. ಕೆಲವೊಂದು ಸೀಸನ್‌ ನಲ್ಲಿ ದೂರದೂರುಗಳ ಪಕ್ಷಿ ಸಂಕುಲವೂ ಬರುವುದುಂಟು.

ಅಭಿವೃದ್ಧಿ ಪ್ಲ್ರಾನ್‌ ಏನು?
ಸಿಡಿಡಿ ಇಂಡಿಯಾ, ರೋಟರಿ ಚಾರಿಟೆಬಲ್‌ ಟ್ರಸ್ಟ್‌, ಪುರಸಭೆ, ಅರಣ್ಯ ಇಲಾಖೆ ಇವೆಲ್ಲ ಸೇರಿಕೊಂಡು ಬಸವನ ಕಜೆ ಕೆರೆಯನ್ನು ಪುನರುಜ್ಜೀವನಗೊಳಿಸಲು ಯೋಜನೆ ಹಾಕಿಕೊಂಡಿವೆ. ಈಗಾಗಲೇ ಡಿಪಿಆರ್‌ ತಯಾರಾಗಿದೆ. ಸುಮಾರು ಎರಡು ಕೋಟಿ ರೂ. ವೆಚ್ಚದ ಯೋಜನೆ ಇದು. ಮೇಲಿನ ಹಂತವನ್ನು ಸುಮಾರು 25 ಅಡಿ ತಗ್ಗಿಸಿ ಜಲಾಶಯವನ್ನು ವಿಸ್ತಾರಗೊಳಿಸುವುದು, ಸುತ್ತಲೂ
ನಡೆದಾಡುವ ಪಥ, ಉದ್ಯಾನವನ, ಆಟದ ಬಯಲು ಇವನ್ನೆಲ್ಲ ನಿರ್ಮಿಸಲು ಯೋಜಿಸಲಾಗಿದೆ. ಉಪಾಹಾರ ಗೃಹಗಳೂ ತೆರೆದುಕೊಳ್ಳಲಿವೆ. ಇವೆಲ್ಲವೂ ಸಮರ್ಪಕವಾಗಿ ನಡೆದಾಗ ಬಸವನಕಜೆ ಪ್ರದೇಶವೂ ಪ್ರವಾಸಿ ಆಕರ್ಷಣೆಯ ತಾಣವಾಗಲಿದೆ.

ಮೂಡುಬಿದಿರೆಯಲ್ಲಿರುವ ಕೆರೆಗಳು
ಕಡಲಕೆರೆ, ತೀರ್ಥಕೆರೆ (ಮೊಹಲ್ಲ ಕೆರೆ), ಗೌರಿ ಕೆರೆ, ಅಂಕಸಾಲೆ ಕೆರೆ, ಬಸದಿ ಕೆರೆ, ಪೊಟ್ಟು ಕೆರೆ, ಚಂದ್ರಶೇಖರ ದೇವಸ್ಥಾನ ಕೆರೆ, ಮಹಾಲಿಂಗೇಶ್ವರ ಕೆರೆ, ಕೇಂಪ್ಲಾಜೆ ಕೆರೆ, ಉಳಿಯ ಕೆರೆ, ಪುಚ್ಚೇರಿ ಕೆರೆ (ಸುಭಾಸ್‌ನಗರ) ವೆಂಕಟರಮಣ ದೇಗುಲ ಕೆರೆ, ಬಸವನ ಕಜೆ ಕೆರೆ, ಕಲ್ಯಾಣಿ ಕೆರೆ, ಉಮಿಗುಂಡಿ ಕೆರೆ, ವಿದ್ಯಾಗಿರಿ ಕೆರೆ, ಕಡದಬೆಟ್ಟು ಕೆರೆ, ಒಂಟಿಕಟ್ಟೆ ಕೆರೆ

*ಧನಂಜಯ ಮೂಡುಬಿದಿರೆ

ಟಾಪ್ ನ್ಯೂಸ್

IPL retention: IPL new rule gave good news to Chennai-Mumbai Franchise

IPL retention: ಚೆನ್ನೈ-ಮುಂಬೈಗೆ ಗುಡ್‌ ನ್ಯೂಸ್‌ ನೀಡಿದ ಐಪಿಎಲ್‌ ಹೊಸ ನಿಯಮ

1-HDK

Documents ಬಿಡುಗಡೆಯಾದರೆ 6-7 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ: ಎಚ್ ಡಿಕೆ

Food-1

Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!

001

BBK11: ಬಿಗ್‌ ಬಾಸ್‌ ಕನ್ನಡ-11ರ ಮೊದಲ ಅಧಿಕೃತ ಸ್ಪರ್ಧಿ ಇವರೇ ನೋಡಿ..

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Manorama-Bhat

Theater, Stage Artist: ನಗುವಿನ ಸವಿ ಹಂಚಿದ ಅಮ್ಮ ಮನೋರಮಾ

Rajiv-Kumar

Maharashtra ವಿಧಾನಸಭಾ ಚುನಾವಣೆ: ಸಿದ್ಧತೆ ಪರಿಶೀಲಿಸಿದ ಚುನಾವಣ ಆಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು

Mangaluru: ರಾಷ್ಟ್ರೀಯ ಹೆದ್ದಾರಿಯಲ್ಲೇ ಹೊತ್ತಿ ಉರಿದ BMW ಕಾರು… ಪ್ರಯಾಣಿಕರು ಪಾರು

ಮುಕ್ತಿ ಕಾಣದ “ಬ್ಲ್ಯಾಕ್‌ಸ್ಪಾಟ್‌’ಗಳು: ಮತ್ತಷ್ಟು ಹೆಚ್ಚುತ್ತಿರುವ ಅಪಘಾತಗಳು

Mangaluru: ಮುಕ್ತಿ ಕಾಣದ “ಬ್ಲ್ಯಾಕ್‌ಸ್ಪಾಟ್‌’ಗಳು: ಮತ್ತಷ್ಟು ಹೆಚ್ಚುತ್ತಿರುವ ಅಪಘಾತಗಳು

Airport: ಭದ್ರತೆಯಿಂದ ಜೂಲಿ ನಿವೃತ್ತಿ: 8 ವರ್ಷಗಳಿಂದ ಸೇವೆಯಲ್ಲಿದ್ದ ಶ್ವಾನ

Airport: ಭದ್ರತೆಯಿಂದ ಜೂಲಿ ನಿವೃತ್ತಿ: 8 ವರ್ಷಗಳಿಂದ ಸೇವೆಯಲ್ಲಿದ್ದ ಶ್ವಾನ

Mangaluru: “ಜನಸಂಖ್ಯಾ ಲಾಭಾಂಶ’ ಸದ್ಬಳಕೆಯಾಗಲಿ: ನ್ಯಾ| ಅಬ್ದುಲ್‌ ನಜೀರ್‌

Mangaluru: “ಜನಸಂಖ್ಯಾ ಲಾಭಾಂಶ’ ಸದ್ಬಳಕೆಯಾಗಲಿ: ನ್ಯಾ| ಅಬ್ದುಲ್‌ ನಜೀರ್‌

Puttur: ಬ್ಯಾಂಕ್‌ ಸಿಬಂದಿ ವಿರುದ್ಧ ಮಾನಭಂಗಕ್ಕೆ ಯತ್ನದ ಪ್ರತಿದೂರು; ಎಸ್‌ಪಿ ಭೇಟಿ

Puttur: ಬ್ಯಾಂಕ್‌ ಸಿಬಂದಿ ವಿರುದ್ಧ ಮಾನಭಂಗಕ್ಕೆ ಯತ್ನದ ಪ್ರತಿದೂರು; ಎಸ್‌ಪಿ ಭೇಟಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

IPL retention: IPL new rule gave good news to Chennai-Mumbai Franchise

IPL retention: ಚೆನ್ನೈ-ಮುಂಬೈಗೆ ಗುಡ್‌ ನ್ಯೂಸ್‌ ನೀಡಿದ ಐಪಿಎಲ್‌ ಹೊಸ ನಿಯಮ

1-HDK

Documents ಬಿಡುಗಡೆಯಾದರೆ 6-7 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ: ಎಚ್ ಡಿಕೆ

Food-1

Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!

001

BBK11: ಬಿಗ್‌ ಬಾಸ್‌ ಕನ್ನಡ-11ರ ಮೊದಲ ಅಧಿಕೃತ ಸ್ಪರ್ಧಿ ಇವರೇ ನೋಡಿ..

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.