ಮೂಲ್ಕಿಗೆ ಮೆಸ್ಕಾಂ  ಉಪವಿಭಾಗ: ಹಳೆ ಕಟ್ಟಡವೇ ಗತಿ


Team Udayavani, Oct 27, 2017, 2:17 PM IST

27Mng-10.jpg

ಮೂಲ್ಕಿ: ಇಲ್ಲಿಯ ಮೆಸ್ಕಾಂ ಕಚೇರಿಯನ್ನು ಎರಡು ವರ್ಷಗಳ ಹಿಂದೆಯೇ ಮೇಲ್ದರ್ಜೆಗೆ ಏರಿಸಲಾಗಿದ್ದು, ಸೂಕ್ತ ಸೌಲಭ್ಯಗಳಿಲ್ಲದೆ ಅದರ ಪೂರ್ಣ ಲಾಭ ಗ್ರಾಹಕರಿಗಿನ್ನೂ ಲಭ್ಯವಾಗುತ್ತಿಲ್ಲ.

ಮೂಲ್ಕಿಯನ್ನು ಉಪವಿಭಾಗವಾಗಿ ಮೇಲ್ದರ್ಜೆಗೇರಿಸಲು ಮೆಸ್ಕಾಂ ನಿರ್ಧರಿಸಿದ್ದರಿಂದ ಇಲ್ಲಿದ್ದ ಸೆಕ್ಷನ್‌ ಕಚೇರಿಯಲ್ಲಿ ಸ್ಥಳ ಹಾಗೂ ಸೌಲಭ್ಯಗಳು ಸಾಲದು. ಈ ಹಿನ್ನೆಲೆಯಲ್ಲಿ ಸೆಕ್ಷನ್‌ ಕಚೇರಿಯ ಕಟ್ಟಡವನ್ನು ಸಂಪೂರ್ಣವಾಗಿ ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ಮೆಸ್ಕಾಂ ಮುಂದಾಗಿದೆ.

ಆದರೆ, ತಾತ್ಕಾಲಿಕವಾಗಿ ಒಂದು ಕಟ್ಟಡವನ್ನು ಬಾಡಿಗೆಗೆ ಪಡೆದು ಮೆಸ್ಕಾಂ ಉಪ ವಿಭಾಗದ ಕಚೇರಿ ಆರಂಭಿಸಿದ್ದು, ಸೌಲಭ್ಯಗಳಿಲ್ಲದೆ ಗ್ರಾಹಕರಿಗೆ ತೊಂದರೆಯಾಗಿದೆ. ಪೂರ್ಣ ಪ್ರಮಾಣದ ನಿರ್ವಹಣೆಗಾಗಿ ಹೊಸ ಕಟ್ಟಡವನ್ನು ಶೀಘ್ರದಲ್ಲೇ ನಿರ್ಮಾಣ ಮಾಡಬೇಕಾಗಿದೆ. 

ಈ ಹಿಂದೆ ಸುರತ್ಕಲ್‌ ಉಪ ವಿಭಾಗ ಕಚೇರಿಗೆ ಅಲೆದಾಡಬೇಕಾದ ಪರಿಸ್ಥಿತಿಯಿತ್ತು. ಎರಡು ವರ್ಷಗಳಿಂದ ಮೂಲ್ಕಿ ಮೆಸ್ಕಾಂ ಕಚೇರಿಯನ್ನು ಉಪ ವಿಭಾಗೀಯ ಕಚೇರಿಯನ್ನಾಗಿ ಮೇಲ್ದರ್ಜೆಗೆ ಏರಿಸಿದ್ದರಿಂದ ಮೂಲ್ಕಿ -ಹಳೆಯಂಗಡಿಯ ವ್ಯಾಪ್ತಿಯ ವಿದ್ಯುತ್‌ ಗ್ರಾಹಕರು ತಮ್ಮ ಹೆಚ್ಚಿನ ಕೆಲಸ ಕಾರ್ಯಗಳನ್ನು ಮೂಲ್ಕಿ ಕಚೇರಿಯ ಮೂಲಕವೇ ಮಾಡಿಕೊಳ್ಳುವುದು ಸಾಧ್ಯವಾಗಿದೆ. 

ಆಡಳಿತಕ್ಕಾಗಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರ ನೇಮಕವಾಗಿದೆ. ಅವರಿಗೂ ಸೂಕ್ತವಾದ ಕಚೇರಿಯಿಲ್ಲದೆ ಸಮಸ್ಯೆಯಾಗಿದೆ.  ಗ್ರಾಹಕರಿಗೆ ಸೌಲಭ್ಯ ಸಿಗುವಂತೆ ಮಾಡುವ ದೃಷ್ಟಿಯಿಂದ ಇಲ್ಲಿ ವ್ಯವಸ್ಥಿತ ಕಟ್ಟಡ ನಿರ್ಮಾಣ ಆದಷ್ಟು ಶೀಘ್ರ ಗತಿಯಿಂದ ನಡೆಯಬೇಕಾಗಿದೆ. ಬಿಲ್‌ ಪಾವತಿ ಕೇಂದ್ರವನ್ನು ‘ಬೆಟ್ಟ’ದಿಂದ ಕೆಳಗೆತಂದು, ಜನರಿಗೆ ಸರಾಗವಾಗಿ ಸರದಿಯಲ್ಲಿ ನಿಲ್ಲುವಂತಹ ವ್ಯವಸ್ಥೆ ತುರ್ತಾಗಿ ಆಗಬೇಕಿದೆ. ಮೂಲ್ಕಿ ವಿದ್ಯುತ್‌ ಉಪ ವಿಭಾಗದ ಕಚೇರಿ ಬೇಗನೆ ನಿರ್ಮಾಣವಾಗಿ ಸೇವೆಗೆ ಲಭ್ಯವಾದರೆ ಸಾರ್ವಜನಿಕರಿಗೆ ಅನುಕೂಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬಿಲ್‌ ಪಾವತಿಗೆ ತೊಂದರೆ
ಸದ್ಯಕ್ಕೆ ಕಚೇರಿಯ ಬಹುತೇಕ ವಿಭಾಗಗಳನ್ನು ಪಕ್ಕದಲ್ಲಿಯೇ ಇರುವ ಖಾನ್‌ ಪ್ಲಾಜಾ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಗಿದೆ. ಆದರೆ ತಿಂಗಳ ವಿದ್ಯುತ್‌ ಬಿಲ್‌ ಪಾವತಿಸಲು ಬರುವ ಜನರಿಗೆ ಈ ತಾತ್ಕಾಲಿಕ ವ್ಯವಸ್ಥೆ ತೀವ್ರ ತ್ರಾಸದಾಯಕವಾಗಿದೆ. ಬಿಲ್‌ ಪಾವತಿಸಲು ಬರುವವರು ಬೆಟ್ಟ ಏರುವ ರೀತಿಯಲ್ಲಿ ಮೊದಲ ಮಹಡಿಯಲ್ಲಿ ಇರುವ ಪಾವತಿ ಕೇಂದ್ರಕ್ಕೆ ಸಾಲು ನಿಲ್ಲಬೇಕಾಗುತ್ತದೆ. ಮಾತ್ರವಲ್ಲ, ಕೌಂಟರ್‌ನಲ್ಲಿ ಬಹಳಷ್ಟು ನಿಧಾನಗತಿಯ ಸೇವೆ ದೊರೆಯುತ್ತಿದೆ. ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಸಾಲಲ್ಲಿ ನಿಲ್ಲುವುದೇ ಕಷ್ಟ. ಈ ಬಗ್ಗೆ ಯಾರಲ್ಲೂ ಹೇಳುವಂತಿಲ್ಲ ಎಂಬುದು ಗ್ರಾಹಕರ ದೂರು.

ಸಾರ್ವಜನಿಕರಿಗೆ ಅನುಕೂಲಕರ ವ್ಯವಸ್ಥೆ
ನೂತನ ಕಟ್ಟಡ ನಿರ್ಮಾಣದ ಕೆಲಸ ಆರಂಭಿಸುವ ಸಲುವಾಗಿ ಈಗಿರುವ ಹಳೆ ಕಚೇರಿಯನ್ನು ಸಮೀಪದ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಸೆಕ್ಷನ್‌ ಆಫಿಸರ್‌ ಮತ್ತು ಲೈನ್‌ ಮ್ಯಾನ್‌ಗಳ ನಿಲುಗಡೆ ವ್ಯವಸ್ಥೆ ಈಗ ಹಳೆಯ ಕಟ್ಟಡದಲ್ಲಿಯೇ ಇದೆ. ಇದನ್ನು ಪಕ್ಕದ ಇಲಾಖಾ ಎಂಜಿನಿಯರ್‌ಗಳ ವಸತಿ ಗೃಹಕ್ಕೆ ಆದಷ್ಟು ಬೇಗನೆ ಸ್ಥಳಾಂತರಿಸಲಾಗುವುದು. ವಸತಿಗೃಹದ ರಿಪೇರಿ ಕೆಲಸ ನಡೆಯುತ್ತಿದ್ದು, ಕಚೇರಿ ಸ್ಥಳಾಂತರವಾಗುವ ಸಂದರ್ಭ ಬಿಲ್‌ ಪಾವತಿ ವಿಭಾಗವನ್ನು ಸಾರ್ವಜನಿಕರಿಗೆ ಅನುಕೂಲವಾಗುವ ಹಾಗೆ ಸ್ಥಳಾಂತರ ಮಾಡಲು ಪ್ರಯತ್ನ ಮಾಡಲಾಗುವುದು.
ರಾಮಕೃಷ್ಣ ಐತಾಳ್‌
ಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್‌
ಎಂಜಿನಿಯರ್‌, ಮೂಲ್ಕಿ ಉಪವಿಭಾಗ

ಸರ್ವೋತ್ತಮ ಅಂಚನ್‌

ಟಾಪ್ ನ್ಯೂಸ್

10-ckm

Chikkamagaluru: ಪ್ರವಾಸಿಗರನ್ನು ಕರೆತಂದಿದ್ದ ಬೆಂಗಳೂರಿನ ಚಾಲಕ ಹೃದಯಾಘಾತದಿಂದ ಮೃತ್ಯು

Womens T20 World Cup: ಪಾಕ್‌ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್‌ ಸೋತ ಭಾರತ

Womens T20 World Cup: ಪಾಕ್‌ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್‌ ಸೋತ ಭಾರತ

9-mng-1

Mumtaz Ali ನಾಪತ್ತೆ ಪ್ರಕರಣ; ಶೋಧ ಕಾರ್ಯಾಚರಣೆಗೆ ಈಶ್ವರ ಮಲ್ಪೆ ತಂಡ ಆಗಮನ

Hubbali: ಅಪಾರ್ಟ್‌ಮೆಂಟ್ ಆವರಣದಲ್ಲಿದ್ದ ದತ್ತಾತ್ರೇಯ ದೇವರ ಮೂರ್ತಿ ಧ್ವಂಸಗೈದ ಕಿಡಿಗೇಡಿಗಳು

Hubbali: ಅಪಾರ್ಟ್‌ಮೆಂಟ್ ಆವರಣದಲ್ಲಿದ್ದ ದತ್ತಾತ್ರೇಯ ದೇವರ ಮೂರ್ತಿ ಧ್ವಂಸಗೈದ ಕಿಡಿಗೇಡಿಗಳು

Delhi: ರಾಮಲೀಲಾ ಪ್ರದರ್ಶನದ ವೇಳೆ ಕುಸಿದು ಬಿದ್ದು ರಾಮನ ಪಾತ್ರಧಾರಿ ಮೃತ್ಯು

Delhi: ರಾಮಲೀಲಾ ಪ್ರದರ್ಶನದ ವೇಳೆ ಕುಸಿದು ಬಿದ್ದು ರಾಮನ ಪಾತ್ರಧಾರಿ ಮೃತ್ಯು

7-mng

Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7(1)

Mangalore: ಊದು ಪೂಜೆ: ಹುಲಿ ವೇಷಕ್ಕೆ ಮುಹೂರ್ತ!

9-mng-1

Mumtaz Ali ನಾಪತ್ತೆ ಪ್ರಕರಣ; ಶೋಧ ಕಾರ್ಯಾಚರಣೆಗೆ ಈಶ್ವರ ಮಲ್ಪೆ ತಂಡ ಆಗಮನ

2(1)

Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!

7-mng

Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !

Mangaluru: ಮುಮ್ತಾಜ್‌ ಅಲಿ ನಾಪತ್ತೆ; ಮುಂಜಾನೆ ವೇಳೆ ಆಗಿದ್ದೇನು?

Mangaluru: ಮುಮ್ತಾಜ್‌ ಅಲಿ ನಾಪತ್ತೆ; ಮುಂಜಾನೆ ವೇಳೆ ಆಗಿದ್ದೇನು?

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

7(1)

Mangalore: ಊದು ಪೂಜೆ: ಹುಲಿ ವೇಷಕ್ಕೆ ಮುಹೂರ್ತ!

ಟ್ಯಾಂಕ್ ನೀರಿಗೆ ವಿಷ, ಬೆಚ್ಚಿಬಿದ್ದ ಗ್ರಾಮಸ್ಥರು

Hatti: ಟ್ಯಾಂಕ್ ನೀರಿಗೆ ವಿಷ, ಬೆಚ್ಚಿಬಿದ್ದ ಗ್ರಾಮಸ್ಥರು

6

Basroor- ಕುಂದಾಪುರ ಹೆದ್ದಾರಿ ಬದಿ ಹುಲ್ಲು ಕಟಾವು

11-Hagaribommanahalli

Hagaribommanahalli: ಆಕಳು ಮೇಯಿಸಲು ಹೋದ ಇಬ್ಬರು ಸಿಡಿಲಿಗೆ ಬಲಿ

5

Udupi: ಗ್ರಾಮ ಪಂಚಾಯತ್ ನೌಕರರ ಕಷ್ಟ ಕೇಳ್ಳೋರಿಲ್ಲ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.