![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 17, 2023, 11:29 PM IST
ಮೂಡುಬಿದಿರೆ: ಅಲ್ಲಿ ತಾಳವಾದ್ಯ ಸಂಗೀತವಿತ್ತು; ಸಂಗೀತ ರಸಸಂಜೆಯ ಸಂಭ್ರಮವಿತ್ತು. ಒಟ್ಟಿನಲ್ಲಿ ಸಂಗೀತ ಮಾಧುರ್ಯದೊಂದಿಗೆ 29ನೇ ವರ್ಷದ ಆಳ್ವಾಸ್ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಸಂಪನ್ನಗೊಂಡಿತು.
ರವಿವಾರ ಸಂಜೆ ಈ ಬಾರಿಯ ವಿರಾಸತ್ ಪ್ರಶಸ್ತಿ ಸ್ವೀಕರಿಸಿದ ಸಂಗೀತ ಕ್ಷೇತ್ರದ ದಿಗ್ಗಜರೆನಿಸಿದ ಡಾ| ಮೈಸೂರು ಮಂಜುನಾಥ್, ಡಾ| ಪ್ರವೀಣ್ ಗೋಡ್ಖಿಂಡಿ ಹಾಗೂ ವಿಜಯ ಪ್ರಕಾಶ್ ಬಳಗದವರು ಮನಸ್ಸು ತುಂಬಿ ಸಂಗೀತ ಸುಧೆಯನ್ನು ಹರಿಸಿದರು. ತಾಳ ವಾದ್ಯ ಸಂಗೀತದಲ್ಲಿ ಮೈಸೂರು ಮಂಜುನಾಥ್ ವಯೋಲಿನ್ನಲ್ಲಿ ಮತ್ತು ಪ್ರವೀಣ್ ಗೋಡ್ಖಿಂಡಿ ಕೊಳಲಿನಲ್ಲಿ ಹಂಸಧ್ವನಿ ರಾಗದಲ್ಲಿ ವಾತಾಪಿ….ಪ್ರಸ್ತುತಪಡಿಸಿದರು.
ಮಂಗಳೂರು ಮೂಲದ ಅನುರಾಧಾ ಭಟ್ ಕೂಡ ಹಲವು ಹಾಡುಗಳನ್ನು ಹಾಡಿದರು. ಡಾ| ಆಳ್ವರಿಗೆ ಗಾಯನದ ನಮನ: ವಿಜಯಪ್ರಕಾಶ್ ಅವರು ಬೊಂಬೆ ಹೇಳುತೈತೆ…ಮತ್ತೆ ಹೇಳುತೈತೆ ಹಾಡುತ್ತ “ಹೊಸ ಬೆಳಕೊಂದು ಹೊಸಿಲಿಗೆ ಬಂತೂ ……ಮೂಡುಬಿದಿರೆ ಹೇಳು ತೈತೆ, ಕರ್ನಾಟಕ ಹೇಳುತೈತೆ, ಭಾರತ ಹೇಳುತೈತೆ ನೀನೇ ರಾಜ ಕುಮಾರಾ…ಎಂದು ಹಾಡಿನ ಸೊಲ್ಲನ್ನು ಕೊಂಚ ಮಾರ್ಪಡಿಸಿ ಡಾ| ಮೋಹನ ಆಳ್ವರಿಗೆ ಹಾಡಿನ ಗೌರವ ಸಲ್ಲಿಸಿದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.