NEET: ಆಳ್ವಾಸ್ ಪ.ಪೂ. ಕಾಲೇಜು ಸಾರ್ವಕಾಲಿಕ ಸಾಧನೆ
ಒಂದೇ ಕ್ಯಾಂಪಸ್ನ 181 ವಿದ್ಯಾರ್ಥಿಗಳಿಗೆ 600ಕ್ಕಿಂತ ಅಧಿ ಕ ಅಂಕ ;ವಿಶಿಷ್ಟ ಚೇತನ 15 ಮಂದಿಯೂ ಮೆಡಿಕಲ್ಗೆ
Team Udayavani, Jun 5, 2024, 10:58 PM IST
ಮೂಡುಬಿದಿರೆ: ಅಖಿಲ ಭಾರತ ಮಟ್ಟದ ಯುಜಿ ನೀಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ 181 ವಿದ್ಯಾರ್ಥಿಗಳು 600 ಅಂಕಗಳ ಮೇಲೆ ಅಂಕ ಪಡೆಯುವ ಮೂಲಕ ಸಾರ್ವಕಾಲಿಕ ಸಾಧನೆ ಮೆರೆದಿದೆ.
670ಕ್ಕೂ ಅಧಿಕ 11 ಮಂದಿ 670ಕ್ಕೂ ಅಧಿಕ, 650ಕ್ಕೂ ಅಧಿಕ 51 ಮಂದಿ 650ಕ್ಕೂ ಅಧಿಕ, 181 ಮಂದಿ 600ಕ್ಕೂ ಅಧಿಕ, 371 ಮಂದಿ 550ಕ್ಕೂ ಅಧಿಕ 371ಮಂದಿ, 686ಮಂದಿ 500ಕ್ಕೂ ಅ ಧಿಕ ಅಂಕ ಪಡೆದಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಆಕಾಶ್ ಬಸವರಾಜ್ ಪ.ಪಂಗಡ ಕೆಟಗರಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ 55ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಪ್ರೀತಮ್ ಎಂ- 691, ಸದಾನಂದ ಗೌಡ ಕುಲಕರ್ಣಿ- 676, ಗೌಸ ಈ ಅಝಾಮ್-673, ಶುಭಾ ವೈ.ಬಿ. -673, ವಿವೇಕ್ ಎಸ್.ಬಿ.-671, ತರುಣ್ ಜಿ.ಎನ್.-671, ಮೊಹಮ್ಮದ್ ಓವೈಸ್ ನಿಸಾರ್ ಖಾನ್- 671, ಆಕಾಶ್ ಬಸವರಾಜ್-670, ನಮಿತ್ ಎ.ಪಿ.-670, ನಂದೀಷ್ ಆರ್.ಎಸ್.-670, ದರ್ಶನ್ ಎಚ್.ಇ.- 670, ತೇಜಸ್ ಗೌಡ ಎಂ.- 667, ಮಲಪ್ಪ ಮೇಟಿ- 667, ಅಭಿಷೇಕ್ ಗೌಡ ಜೆ.-666, ಮಲ್ಲಿಕಾರ್ಜುನ ಕೆ ಜೆ-666, ದರ್ಶನ ಕುಮಾರ್ ತಳ್ಳೋಳ್ಳಿ-665, ಆಕರ್ಷ ಪಿ.ಎಸ್.- 665, ತನು ಮಹೇಶ್ ಎಚ್.-665, ರಕ್ಷನ್ ಡಿ. ಷೇಖಾ- 665, ಪ್ರಜುಷಾ ಮಹಾವೀರ್-665, ಧುವನ್ ಗೌಡ-665, ಸಂತೋಷ ಬಿ.ಎಂ.- 665, ವಿಶ್ವಾಸ್ ಬಿ. ಗೌಡ- 664, ಸ್ವಾತಿ-663, ರೋಹಿತ್ ಸಿ- 660, ವಾಣಿ ಕೃಷ್ಣ ಜಿ.-660, ಯೋಗಾನಂದ ರಾವ್ ಎನ್.- 660, ಶಶಾಂಕ್ ಬಿ.ಕೆ.-660, ಆಕಾಶ್ ಬಸಲಿಂಗಪ್ಪ ಎಚ್. -657, ಸಿಂಚನಾ ಎಚ್.ಸಿ.-657, ನಿ .ಉಮೇಶ್-657, ಬಸವರಾಜ್ ಅಥಣಿ-657, ದೀತ್ಯಾ ಪಿ.-656, ನವೀನ್ ಬಿ-655, ಉಜ್ವಲ್ ಬಸವರಾಜ್ ಬಿ. -655, ಆದರ್ಶ- 655, ಆದಿತ್ಯ-655, ಮಲ್ಲಿಕಾರ್ಜುನ- 652, ರಿಧಿ ಶೆಟ್ಟಿ-652, ಚಿರಾಗ್ ಬಿ.ಎಂ-652, ಹೇಮಂತ್ ಕುಮಾರ್-651, ಟಿ. ನಾಗರಾಜ್- 651, ಯಶ್ವಂತ್ ಡಿ.ಆರ್.-651, ಅವನೀತಾ ಚೇತನಾ- 651, ಸುಯೋಗ್ ಎಸ್.-651, ಜನ್ಸ$rನ್ ಸೀಕ್ವೇರಾ-651, ಸುಪ್ರೀತಾ-650, ಯಶ್ವಂತ್ ಕುಮಾರ್- 650, ರಮೇಶ್ ರಾಜ್ ಪುರೋಹಿತ್-650, ಮನು ಸಿ.ಎಚ್. -650, ಸಂಜಯ್-650 ಅಂಕವನ್ನು ಪಡೆದಿದ್ದಾರೆ.
ಪ.ಜಾತಿ, ಪಂಗಡದವರ ಸಾಧನೆ
ಬಸವರಾಜ್55ನೇ ರ್ಯಾಂಕ್, ಆರ್. ರಕ್ಷಿತಾ 486ರ್ಯಾಂಕ್, ಗೌತಮ್ ಜಿ. 577ನೇ ರ್ಯಾಂಕ್ ಪಡೆದಿದ್ದಾರೆ.
ವಿಶೇಷ ಚೇತನರ ಸಾಧನೆ
ವಿಶೇಷ ಚೇತನರ ವಿಭಾಗದಲ್ಲಿ 15 ವಿದ್ಯಾರ್ಥಿಗಳು ಶ್ರೇಷ್ಠ ಸಾಧನೆ ತೋರಿದ್ದು ಎಲ್ಲರೂ ರಾಷ್ಟ್ರಮಟ್ಟದ ರ್ಯಾಂಕಿಂಗ್ ಅರ್ಹತೆಯಲ್ಲಿ ಹೆಸರಾಂತ ಸರಕಾರಿ ಮೆಡಿಕಲ್ ಕಾಲೇಜಿಗೆ ಸೇರುವ ಅರ್ಹತೆ ಗಳಿಸಿದ್ದಾರೆ. ಇವರಲ್ಲಿಚಿರಂತ್ ಕೆ.ಎಂ. -(229) ವೀರು ಪಾಟೀಲ್-(289), ಜಫೀನ್ ಹ್ಯಾರಿ- (361), ನಝೀರ್ ಕೆ.ಎಚ್.- (370) ರ್ಯಾಂಕ್ ಗಳಿಸಿದ್ದಾರೆ.
ಆಳ್ವಾಸ್ ಪ.ಪೂ. ಕಾಲೇಜಿನ ಪ್ರಾಚಾರ್ಯ ಪ್ರೊ| ಎಂ. ಸದಾಕತ್, ಆಡಳಿತಾಧಿ ಕಾರಿ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.
600ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಸೀಟು ಸಾಧ್ಯತೆ
ಜನರಲ್ ಕೆಟಗರಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಹೈದಾರಾಬಾದ್ ಕರ್ನಾಟಕ, ಗ್ರಾಮೀಣ ಕೋಟಾ, ಕನ್ನಡ ಮಾಧ್ಯಮ ಕೋಟಾ, ವಿಶೇಷಚೇತನರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಕೋಟಾ ಇವುಗಳಲ್ಲಿ 600ಕ್ಕೂ ಅ ಧಿಕ ವಿದ್ಯಾರ್ಥಿಗಳು ಸರಕಾರಿ ಕೋಟಾದಲ್ಲಿ ಎಂಬಿಬಿಎಸ್ ಪದವಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆದುಕೊಂಡಿದ್ದಾರೆ.
267 ಮಂದಿ ದತ್ತು ಸ್ವೀಕಾರದ ಫಲಾನುಭವಿಗಳು
ಉತ್ತಮ ಸಾಧನೆ ಮೆರೆದ ವಿದ್ಯಾರ್ಥಿಗಳಲ್ಲಿ 267 ವಿದ್ಯಾರ್ಥಿಗಳು ಸಂಸ್ಥೆಯ ದತ್ತು ಸ್ವೀಕಾರ ವ್ಯವಸ್ಥೆಯಲ್ಲಿ ಕಲಿತಿದ್ದು ಸಂಸ್ಥೆ ಅವರ ವಿದ್ಯಾಭ್ಯಾಸಕ್ಕೆ ಪ್ರತಿವರ್ಷ ಸುಮಾರು 3.5 ಕೋ.ರೂ. ವಿನಿಯೋಗಿಸಿದೆ ಎಂದು ಡಾ| ಆಳ್ವ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
R. Ashok ವಾಗ್ಧಾಳಿ; ದೋಚುವ ಸರಕಾರಕ್ಕೆ ಜನ ಕಪಾಳಮೋಕ್ಷ ಮಾಡಬೇಕು
Congress;ಚುನಾವಣ ರಾಜಕೀಯಕ್ಕೆ ನಮ್ಮ ಕುಟುಂಬದವರು ಬರುವ ಪ್ರಶ್ನೆಯೇ ಇಲ್ಲ:ಡಿ.ಕೆ.ಶಿವಕುಮಾರ್
Govt ನಿರ್ಲಕ್ಷ್ಯ; 2000 ಕೋಟಿ ರೂ.ಬಂಡವಾಳದ ಕಂಪನಿ ಮಹಾರಾಷ್ಟ್ರಕ್ಕೆ: ಬೆಲ್ಲದ ಆರೋಪ
Kiran Pahal: ವನಿತೆಯರ 400 ಮೀ.; ಕಿರಣ್ ಪಹಲ್ ಒಲಿಂಪಿಕ್ಸ್ ಗೆ ಅರ್ಹತೆ
MLA Harish Gowda: ನನಗೆ ಯಾರೂ ಹನಿಟ್ರ್ಯಾಪ್ ಮಾಡಲು ಸಾಧ್ಯವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.