ಒಂದೇ ಹೆಸರಿನ ಇನ್ನೊಂದು ಖಾತೆಗೆ ಹಣ !


Team Udayavani, Aug 6, 2018, 3:23 PM IST

net-bank.jpg

ಪುತ್ತೂರು: ಅವರಿಬ್ಬರ ಹೆಸರು ಒಂದೇ. ಹೀಗಾಗಿ ಪತ್ನಿಯ ಖಾತೆಗೆ ಜಮೆಯಾಗಬೇಕಿದ್ದ 3 ಲಕ್ಷ ರೂ. ಇನ್ನೊಬ್ಬ ಮಹಿಳೆಯ ಖಾತೆಗೆ ಹೋಗಿದೆ. ಆದರೆ ಅದು ತನಗೇ ಸೇರಿದ್ದೆಂದು ಆ ಮಹಿಳೆ ಹೇಳುತ್ತಿದ್ದಾರೆ. ಈ ಹಣವನ್ನು ಬಿಡುಗಡೆ ಮಾಡಬೇಡಿ ಎಂದು ನ್ಯಾಯಾಲಯ ಈಗ ಬ್ಯಾಂಕಿಗೆ ಆದೇಶ ನೀಡಿದೆ.

ಇದು ನೆಟ್‌ಬ್ಯಾಂಕಿಂಗ್‌ ಅವಾಂತರದ ಒಂದು ಪ್ರಕರಣ. ತಪ್ಪಾಗಿ ಜಮೆಯಾದ ಈ ಹಣವನ್ನು ಬಿಡುಗಡೆ ಮಾಡದಂತೆ ಹರಿಯಾಣದ ಬ್ಯಾಂಕ್‌ ಶಾಖೆಯೊಂದಕ್ಕೆ ಪುತ್ತೂರು ಪ್ರಧಾನ ಸಿವಿಲ್‌ ನ್ಯಾಯಾಲಯ ಆದೇಶಿಸಿದೆ. ಡಾ| ಪೃಥ್ವಿನಾರಾಯಣ ಪಿ. ಅವರು ನೆಟ್‌ ಬ್ಯಾಂಕಿಂಗ್‌ ಮೂಲಕ ತನ್ನ ಪತ್ನಿಯ ಖಾತೆಗೆ 3 ಲಕ್ಷ ರೂ. ವರ್ಗಾವಣೆ ಮಾಡಿದ್ದರು. ಆದರೆ ಕಣ್ತಪ್ಪಿನಿಂದಾಗಿ ಈ ಹಣ ಹರಿಯಾಣದ ಪಂಜಾಬ್‌ ಆ್ಯಂಡ್‌ ಸಿಂಧ್‌ ಬ್ಯಾಂಕ್‌ನ ಬಿವಾನಿ ಶಾಖೆಯ ಖಾತೆಯೊಂದಕ್ಕೆ ಜಮೆಯಾಗಿತ್ತು. ಮೂರು ದಿನಗಳ ಬಳಿಕ ಈ ವಿಷಯ ಅವರ ಗಮನಕ್ಕೆ ಬಂದಿದ್ದು, ಹಣ ಬಿಡುಗಡೆ ಮಾಡದಂತೆ ಬಿವಾನಿ ಶಾಖೆಗೆ ಮನವಿ ಮಾಡಲಾಗಿತ್ತು. ಅಷ್ಟರಲ್ಲಿ ಈ ಹಣ ತನಗೆ ಸೇರಿದ್ದು ಎಂದು ಬಿವಾನಿ ಶಾಖೆಯ ಗ್ರಾಹಕಿ ಕೂಡ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪುತ್ತೂರು ನ್ಯಾಯಾಲಯದಲ್ಲಿ ದಾವೆ ಹೂಡಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ, ಹಣ ಬಿಡುಗಡೆ ಮಾಡದಂತೆ ಪಂಜಾಬ್‌ ಆ್ಯಂಡ್‌ ಸಿಂಧ್‌ ಬ್ಯಾಂಕ್‌ನ ಬಿವಾನಿ ಶಾಖಾ ಪ್ರಬಂಧಕರಿಗೆ ಮಧ್ಯಾಂತರ ತಡೆಯಾಜ್ಞೆ ನೀಡಿದೆ. ಪ್ರಕರಣದಲ್ಲಿ ನ್ಯಾಯವಾದಿ ಗಿರೀಶ ಮಳಿ ವಾದಿಸಿದ್ದರು.

ಹೆಸರು ಹೋಲಿಕೆಯಿಂದ ಪ್ರಮಾದ
ಮಾಣಿ ಸಮೀಪದ ಬರಿಮಾರ್‌ ನಿವಾಸಿ ಡಾ| ಪೃಥ್ವಿನಾರಾಯಣ ಪಿ. ಅವರು ಪಾಲಕ್ಕಾಡ್‌ ಐಐಟಿಯಲ್ಲಿ ಸಹಾಯಕ ಪ್ರಾಧ್ಯಾಪಕ. ಇಸ್ರೇಲ್‌ನಲ್ಲಿದ್ದ ಸಂದರ್ಭ ಪುತ್ತೂರಿನ ಕರ್ಣಾಟಕ ಬ್ಯಾಂಕ್‌ನಲ್ಲಿ ಎನ್‌ಆರ್‌ಐ ಖಾತೆ ತೆರೆದಿದ್ದರು. ಇದರ ಮೂಲಕ ಹರಿಯಾಣದ ಕರೂರ್‌ ವೈಶ್ಯ ಬ್ಯಾಂಕ್‌ನ ಸೋನೆಪತ್‌ ಶಾಖೆಯಲ್ಲಿರುವ ಪತ್ನಿ ಕುಸುಮ್‌ ಅವರ ಖಾತೆಗೆ 3 ಲಕ್ಷ ರೂ.ಗಳನ್ನು ಜು. 27ರಂದು ವರ್ಗಾವಣೆ ಮಾಡಿದ್ದರು. ಮೂರು ದಿನವಾದರೂ ಹಣ ಬಾರದ್ದನ್ನು ಗಮನಿಸಿದ ಕುಸುಮ್‌, ಪತಿಗೆ ವಿಷಯ ತಿಳಿಸಿದ್ದರು. ಪರಿಶೀಲಿಸಿದಾಗ ಹಣ ಕಣ್ತಪ್ಪಿನಿಂದ ಹರಿಯಾಣದ ಪಂಜಾಬ್‌ ಆ್ಯಂಡ್‌ ಸಿಂಧ್‌ ಬ್ಯಾಂಕ್‌ನ ಬಿವಾನಿ ಶಾಖೆಯ ಕುಸುಮ್‌ ಎಂಬವರ ಖಾತೆಗೆ ವರ್ಗಾವಣೆಗೊಂಡಿತ್ತು. ಈರ್ವರ ಹೆಸರು ಒಂದೇ ಆಗಿರುವುದು ಸಮಸ್ಯೆಗೆ ಕಾರಣವಾಗಿತ್ತು.

ತತ್‌ಕ್ಷಣ ಬಿವಾನಿ ಶಾಖಾ ಪ್ರಬಂಧಕರಿಗೆ ವಿಷಯ ತಿಳಿಸಲಾಯಿತು. ಅಷ್ಟರಲ್ಲಿ ಹರಿಯಾಣದ ಕುಸುಮ್‌ಗೂ ವಿಷಯ ತಿಳಿದು, ಆಕೆ ಹಣ ತನ್ನದೆಂದು ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜು. 31ರಂದು ಪುತ್ತೂರು ನ್ಯಾಯಾಲಯದಲ್ಲಿ ದಾವೆ ಹೂಡಲಾಯಿತು. ದಾಖಲೆಗಳನ್ನು ಪರಿಶೀಲನೆ ನಡೆಸಿದ ನ್ಯಾಯಾಲಯ ಮಧ್ಯಾಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ.

ಟಾಪ್ ನ್ಯೂಸ್

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

8-kukke

Subrahmanya: ಮುಜರಾಯಿ ಸಚಿವರ ನೇತೃತ್ವದಲ್ಲಿ ಕುಕ್ಕೆ ದೇಗುಲದ ಅಭಿವೃದ್ಧಿ ಸಭೆ

3(1

Sullia: ಜಳಕದಹೊಳೆ ಸೇತುವೆ; ಸಂಚಾರ ನಿಷೇಧ

2(1

Uppinangady: ಕಾಂಕ್ರೀಟ್‌ ರಸ್ತೆಯೇ ಕಿತ್ತೋಗಿದೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.