ಅಳಕೆ ಹೊಸ ಮಾರುಕಟ್ಟೆ; ಕೋಟಿ ರೂ. ಕರಗಿದರೂ ಸದ್ಯ ಶೂನ್ಯ ಸಂಪಾದನೆ !


Team Udayavani, Apr 9, 2021, 3:30 AM IST

ಅಳಕೆ ಹೊಸ ಮಾರುಕಟ್ಟೆ; ಕೋಟಿ ರೂ. ಕರಗಿದರೂ ಸದ್ಯ ಶೂನ್ಯ ಸಂಪಾದನೆ !

ಮಹಾನಗರ: ಹಳೆಯ ಮಾರುಕಟ್ಟೆಗಳಲ್ಲಿ ಒಂದಾದ ಕುದ್ರೋಳಿ ಅಳಕೆಯ ಮಾರುಕಟ್ಟೆಗೂ ಹೊಸ ಕಟ್ಟಡ ನಿರ್ಮಿಸಲಾಗಿದೆ. ಆದರೆ ಇಲ್ಲಿಯೂ ಪೂರ್ಣ ಪ್ರಮಾಣ ದಲ್ಲಿ  ವ್ಯಾಪಾರ- ವಹಿವಾಟು ಆರಂಭವಾಗಿಲ್ಲ.

ಕುದ್ರೋಳಿ ಮುಖ್ಯ ರಸ್ತೆಗೆ ಹೊಂದಿಕೊಂಡಂತಿದ್ದ ಹಳೆಯ ಮಾರುಕಟ್ಟೆಗಿಂತ ಸ್ವಲ್ಪ ಹಿಂದಕ್ಕೆ ಹೊಸ ಕಟ್ಟಡ ನಿರ್ಮಾಣವಾಯಿತು. 2016-17ರಲ್ಲಿ ಆರಂಭಗೊಂಡಿದ್ದ ಕಾಮಗಾರಿ ಒಂದು ವರ್ಷದ ಹಿಂದೆಯೇ ಪೂರ್ಣ ಗೊಂಡಿತ್ತು. ಆದರೂ ನೀರು, ಶೌಚಾಲಯ ಮತ್ತಿತರ ಮೂಲಸೌಕರ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಕಲ್ಪಿಸ ದ್ದರಿಂದ ವಹಿವಾಟಿಗೆ ಸೂಕ್ತವಾಗಿರಲಿಲ್ಲ. ಅನಂತರ ಮತ್ತೆ 30 ಲ.ರೂ. ವೆಚ್ಚದ ಕಾಮಗಾರಿ ನಡೆಸಿ,  ಕಳೆದ ಅಕ್ಟೋಬರ್‌ ವೇಳೆಗೆ ಉದ್ಘಾಟಿಸಲಾಯಿತು. ಆದರೂ ವ್ಯಾಪಾರಿಗಳು ಅತ್ತ ಸುಳಿಯಲಿಲ್ಲ. ಜ.18 ರ ವೇಳೆಗೆ ಕೆಲವೇ ಮಂದಿ ವ್ಯಾಪಾರಿ ಗಳು ಪಾಲಿಕೆಯವರ ಆಗ್ರಹಕ್ಕೆ ಮಣಿದು ಹೊಸ ಕಟ್ಟಡದಲ್ಲಿ ವ್ಯಾಪಾರ ಆರಂಭಿಸಿದರು. ಆದರೂ ಮಾರುಕಟ್ಟೆ ಗ್ರಾಹಕರಿಗೆ, ನಮಗೆ ಅನುಕೂಲವಾಗುವಂತೆ ನಿರ್ಮಾಣವಾಗಿಲ್ಲ ಎಂಬುದು ವ್ಯಾಪಾರಸ್ಥರ ಆರೋಪ. ಅಲ್ಲದೆ ಎಲ್ಲ ಮಳಿಗೆಗಳು ಕಾರ್ಯಾರಂಭ ಮಾಡದ್ದರಿಂದ ಜನರೂ ಬರುತ್ತಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.

1.20 ಲಕ್ಷ ರೂ. ಆದಾಯ ನಿರೀಕ್ಷೆ :  

ಒಂದೊಂದು ಮಳಿಗೆಯಿಂದ ತಿಂಗಳಿಗೆ ಸರಾಸರಿ 5 ಸಾವಿರ ರೂ. ಗಳಂತೆ ಸುಮಾರು 1.20 ಲ.ರೂ. ಆದಾಯ ವನ್ನು ಪಾಲಿಕೆ ನಿರೀಕ್ಷಿಸಿದೆ. ಎಲ್ಲ ಮಳಿಗೆಗಳು ಪೂರ್ಣ ಗೊಂಡರೆ ಮಾತ್ರ ಇದು ಸಾಧ್ಯ. ಆದರೆ, ಎಲ್ಲ 24 ಮಳಿಗೆ ಗಳನ್ನೂ ವ್ಯಾಪಾರಸ್ಥರಿಗೆ ವಹಿಸಲು ಪಾಲಿಕೆಯೂ ಹೆಚ್ಚಿನ ಮುತುವರ್ಜಿ ವಹಿಸುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿರುವ ಅಂಶ.

ರಸ್ತೆಗೆ ಹೊಂದಿಕೊಂಡಿಲ್ಲ  :

ಕುದ್ರೋಳಿ ಮುಖ್ಯರಸ್ತೆಯಿಂದ ಸ್ವಲ್ಪ ಒಳಭಾಗದಲ್ಲಿ ಮಾರುಕಟ್ಟೆ ಇರುವ ಕಾರಣ ರಸ್ತೆ ಬದಿ ಓಡಾಡುವವರು ಬರುತ್ತಿಲ್ಲ. ಹಾಗಾಗಿ ವ್ಯಾಪಾರವೂ ಕಡಿಮೆ. ಮಾರುಕಟ್ಟೆ ರಸ್ತೆಯ ಪಕ್ಕದಲ್ಲೇ ಇದ್ದಿದ್ದರೆ ಹೆಚ್ಚು ಅನು ಕೂಲವಾಗುತ್ತಿತ್ತು ಎನ್ನುತ್ತಾರೆ ವ್ಯಾಪಾರಸ್ಥರು.

ಪಾರ್ಕಿಂಗ್‌ ಜಾಗವಿದ್ದರೂ ಗ್ರಾಹಕರಿಗಿಲ್ಲ :

ಮಾರುಕಟ್ಟೆಯಲ್ಲಿ  ಉತ್ತಮ ಪಾರ್ಕಿಂಗ್‌ ಸ್ಥಳಾವಕಾಶವಿದೆ. ಆದರೆ ಮಾರುಕಟ್ಟೆಗೆ ಬರುವ ಗ್ರಾಹಕರಿಗಿಂತ ಬೇರೆಯವರವಾಹನಗಳೇ ತುಂಬಿ ರುತ್ತವೆ. ಈ ಬಗ್ಗೆಯೂ ಪಾಲಿಕೆ ಗಮನಹರಿಸಬೇಕಿದೆ.

 ವ್ಯಾಪಾರಸ್ಥರು-  ಗ್ರಾಹಕ ಸ್ನೇಹಿಗೊಳಿಸಿ   :

ಅಳಕೆ ಮಾರುಕಟ್ಟೆಯನ್ನೂ ವ್ಯಾಪಾರಸ್ಥರು, ಗ್ರಾಹಕ ಸ್ನೇಹಿಯಾಗಿ ನಿರ್ಮಿಸದಿರುವುದು ಸ್ಪಷ್ಟ. ವ್ಯಾಪಾರಸ್ಥರಿಗೆ ಸ್ವತ್ಛತೆ ಕಾಪಾಡಿಕೊಳ್ಳುವುದಕ್ಕೂ ಪೂರಕವಾಗಿ ಕಟ್ಟಡವನ್ನು ನಿರ್ಮಿಸಿಲ್ಲ ಎನ್ನುವ ಆರೋಪವಿದೆ. ನೀರಿನ ಲಭ್ಯತೆ ಕೊರತೆ ಇನ್ನೂ ಬಗೆಹರಿದಿಲ್ಲ ಎನ್ನುವುದು ಕೆಲವು ವ್ಯಾಪಾರಿಗಳ ದೂರು. ಎಲ್ಲ ಮಳಿಗೆಗಳನ್ನು ಭರ್ತಿ ಮಾಡಬೇಕು. ಹೆಚ್ಚಿನ ಸಾಮಗ್ರಿಗಳು ಒಂದೇ ಕಡೆ ದೊರೆತರೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇದೆ. ಹಾಗಾಗಿ ಎಲ್ಲ ಮಳಿಗೆಗಳಲ್ಲಿ ವ್ಯಾಪಾರ ಆರಂಭವಾಗುವಂತೆ ಪಾಲಿಕೆಯವರು ಕ್ರಮ ಕೈಗೊಳ್ಳಬೇಕು ಎಂದು ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.

24ರಲ್ಲಿ 10 ಮಳಿಗೆ ಮಾತ್ರ  ಭರ್ತಿ!  :

ಈ ಕಟ್ಟಡದಲ್ಲಿ ಮೀನು ಮಾರುಕಟ್ಟೆ  ಸೇರಿದಂತೆ ಮಾಂಸ, ತರಕಾರಿ ಮಾರಾಟಕ್ಕೆ ಒಟ್ಟು 24 ಮಳಿಗೆಗಳಿವೆ. ಆದರೆ ಪ್ರಸ್ತುತ 10 ಮಳಿಗೆಗಳು ಮಾತ್ರ ಭರ್ತಿಯಾಗಿವೆ. ಈ ಹಿಂದೆ ಇಲ್ಲಿ ಹಳೆ ಕಟ್ಟಡದಲ್ಲಿದ್ದ 6 ಮಂದಿ ವ್ಯಾಪಾರಸ್ಥರಿಗೂ ಇಲ್ಲಿ ಅವಕಾಶ ನೀಡಲಾಗಿದೆ. ಉಳಿದ ಮಳಿಗೆಗಳಿಗೆ ಇತ್ತೀಚೆಗಷ್ಟೇ ಟೆಂಡರ್‌ ಕರೆಯಲಾಗಿದ್ದು, ಬೇಗ ಇತ್ಯರ್ಥಗೊಳ್ಳ ಬೇಕೆಂಬುದು ನಾಗರಿಕರ ಆಗ್ರಹ.

 

-  ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

Women’s T20 World Cup: ವಿಂಡೀಸನ್ನು ಹೊಸಕಿ ಹಾಕಿದ ದಕ್ಷಿಣ ಆಫ್ರಿಕಾ

Women’s T20 World Cup: ವಿಂಡೀಸನ್ನು ಹೊಸಕಿ ಹಾಕಿದ ದಕ್ಷಿಣ ಆಫ್ರಿಕಾ

Davanagere: ಹಳೇ ಜಾತಿಗಣತಿ ಒಪ್ಪಲ್ಲ… ಬೇಕಾದರೆ ಹೊಸದಾಗಿ ಮಾಡಲಿ… :ಶಾಸಕ ಶಾಮನೂರು

Davanagere: ಹಳೇ ಜಾತಿಗಣತಿ ಒಪ್ಪಲ್ಲ… ಬೇಕಾದರೆ ಹೊಸದಾಗಿ ಮಾಡಲಿ… :ಶಾಸಕ ಶಾಮನೂರು

Chitara

BBK11: ವಂಚನೆ ಪ್ರಕರಣ ನೆನೆದು ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಚೈತ್ರಾ!

1-trew

Iran ಸರ್ವೋಚ್ಚ ನಾಯಕನ ಕೈಯಲ್ಲಿ ರೈಫಲ್!; ಇಸ್ರೇಲ್ ದೀರ್ಘಕಾಲ ಉಳಿಯುವುದಿಲ್ಲ..

Bailhongal: ಸಾರಿಗೆ ಬಸ್ ಬೈಕ್ ಮಧ್ಯೆ ಅಪಘಾತ… ಸ್ಥಳದಲ್ಲಿಯೇ ಬೈಕ್ ಸವಾರ ಸಾವು

Bailhongal: ಸಾರಿಗೆ ಬಸ್ ಬೈಕ್ ಮಧ್ಯೆ ಅಪಘಾತ… ಸ್ಥಳದಲ್ಲಿಯೇ ಬೈಕ್ ಸವಾರ ಸಾವು

CM Siddaramaiah: ಹಿಂದೆ ಮುಂದೆ ಇದ್ದವರಿಂದಲೇ ಖೆಡ್ಡಾ; ಅಶೋಕ

CM Siddaramaiah: ಹಿಂದೆ ಮುಂದೆ ಇದ್ದವರಿಂದಲೇ ಖೆಡ್ಡಾ; ಅಶೋಕ

DK-Shiva-Kumar

By Polls: ಚನ್ನಪಟ್ಟಣದ ಅಭಿವೃದ್ಧಿ ನಾನೇ ಮಾಡುವೆ, ಅಭ್ಯರ್ಥಿ ನೆಪಕ್ಕೆ ಮಾತ್ರ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ತ್ರಿಶಾ ಪದವಿ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ

Mangaluru: ತ್ರಿಶಾ ಪದವಿ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ

Mangaluru: ಹುಲಿ ವೇಷ ಬಣ್ಣಗಾರಿಕೆ ಹಿಂದಿದೆ ಶ್ರದ್ಧೆ, ಭಕ್ತಿ, ವಿಜ್ಞಾನ!

Mangaluru: ಹುಲಿ ವೇಷ ಬಣ್ಣಗಾರಿಕೆ ಹಿಂದಿದೆ ಶ್ರದ್ಧೆ, ಭಕ್ತಿ, ವಿಜ್ಞಾನ!

courts-s

Court: ವಾಹನ ಅಪಘಾತ: ಮೃತ ವ್ಯಕ್ತಿಯ ಆಶ್ರಿತರಿಗೆ 1.35 ಕೋ.ರೂ. ಪರಿಹಾರ: ನ್ಯಾಯಾಲಯ ಆದೇಶ

Navaratri 2024: ಕರಾವಳಿಯಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಅದ್ದೂರಿ ಚಾಲನೆ

Navaratri 2024: ಕರಾವಳಿಯಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಅದ್ದೂರಿ ಚಾಲನೆ

Mangaluru: ಮತದಾರರ ಒಲವು ನನ್ನ ಪರ: ಕಾಂಗ್ರೆಸ್‌ ಅಭ್ಯರ್ಥಿ ರಾಜು ಪೂಜಾರಿ

Mangaluru: ಮತದಾರರ ಒಲವು ನನ್ನ ಪರ: ಕಾಂಗ್ರೆಸ್‌ ಅಭ್ಯರ್ಥಿ ರಾಜು ಪೂಜಾರಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Women’s T20 World Cup: ವಿಂಡೀಸನ್ನು ಹೊಸಕಿ ಹಾಕಿದ ದಕ್ಷಿಣ ಆಫ್ರಿಕಾ

Women’s T20 World Cup: ವಿಂಡೀಸನ್ನು ಹೊಸಕಿ ಹಾಕಿದ ದಕ್ಷಿಣ ಆಫ್ರಿಕಾ

Davanagere: ಹಳೇ ಜಾತಿಗಣತಿ ಒಪ್ಪಲ್ಲ… ಬೇಕಾದರೆ ಹೊಸದಾಗಿ ಮಾಡಲಿ… :ಶಾಸಕ ಶಾಮನೂರು

Davanagere: ಹಳೇ ಜಾತಿಗಣತಿ ಒಪ್ಪಲ್ಲ… ಬೇಕಾದರೆ ಹೊಸದಾಗಿ ಮಾಡಲಿ… :ಶಾಸಕ ಶಾಮನೂರು

arrested

Vijayapura; ಮಹಿಳೆಯ ಕೊ*ಲೆಗೈದ ಅಪರಾಧಿಗೆ ಜೀವಾವಧಿ ಶಿಕ್ಷೆ

Chitara

BBK11: ವಂಚನೆ ಪ್ರಕರಣ ನೆನೆದು ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಚೈತ್ರಾ!

1-trew

Iran ಸರ್ವೋಚ್ಚ ನಾಯಕನ ಕೈಯಲ್ಲಿ ರೈಫಲ್!; ಇಸ್ರೇಲ್ ದೀರ್ಘಕಾಲ ಉಳಿಯುವುದಿಲ್ಲ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.