ಹೊಸ ತಾಲೂಕು: ಹೋಬಳಿ ಮರೆತ ಸರಕಾರ!: ಸರಕಾರಿ ಸೇವೆ ಪಡೆಯಲು ಜನರ ಅಲೆದಾಟ


Team Udayavani, Jul 29, 2023, 12:36 AM IST

kadaba

ಮಂಗಳೂರು: ಹೊಸ ತಾಲೂಕುಗಳನ್ನು ರಚಿಸಿರುವ ಸರಕಾರಗಳು ಆಡಳಿತ ವ್ಯವಸ್ಥೆಯ ಬೆನ್ನೆಲುಬಾದ “ಹೋಬಳಿ’ಗಳನ್ನು ರಚಿಸದ ಪರಿಣಾಮ ಜನರ ಮೇಲಾಗುತ್ತಿದ್ದು, ವಿವಿಧ ಸೇವೆಗಳಿಗಾಗಿ ಕಚೇರಿ ಅಲೆದಾಟಕ್ಕೆ ಮುಕ್ತಿ ಸಿಗುತ್ತಿಲ್ಲ!

ರಾಜ್ಯದಲ್ಲಿ 2018 ರಿಂದ ಇದುವರೆಗೆ ಒಟ್ಟು 63 ಹೊಸ ತಾಲೂಕು ಗಳನ್ನು ರಚಿಸಲಾಗಿದೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಮೂಡುಬಿದಿರೆ, ಮೂಲ್ಕಿ, ಉಳ್ಳಾಲ ಹಾಗೂ ಉಡುಪಿ ಜಿಲ್ಲೆಯಲ್ಲಿ ಹೆಬ್ರಿ, ಕಾಪು, ಬ್ರಹ್ಮಾವರ, ಬೈಂದೂರು ತಾಲೂಕುಗಳಲ್ಲಿ ಹೊಸ “ಹೋಬಳಿ’ ರಚನೆ ಆಗಿಯೇ ಇಲ್ಲ. ಇದರಿಂದಾಗಿ ಕಂದಾಯ ಸಹಿತ ಪ್ರತೀ ಸರಕಾರಿ ಸೇವೆ, ಕೆಲಸಗಳಿಗೂ ದೂರದಲ್ಲಿರುವ ತಾಲೂಕು ಕಚೇರಿಗಳಿಗೇ ಎಡತಾಕಬೇಕಾದ ಸ್ಥಿತಿ ಇದೆ.

ಹೊಸ ತಾಲೂಕುಗಳಲ್ಲಿ ಮತ್ತೆ ಗ್ರಾಮ ವಿಂಗಡನೆ ಮಾಡಿ “ಹೋಬಳಿ’ ಮಾಡ ಬೇಕಾಗಿದೆ. ಜನರು ಇರುವಲ್ಲಿಂದ ಗರಿಷ್ಠ 5-6 ಕಿ.ಮೀ. ಒಳಗಡೆಯಲ್ಲಿಯೇ ಜನರಿಗೆ ಹೋಬಳಿ ಮಟ್ಟದ ಸೇವೆ ಸಿಗಬೇಕು ಎಂಬುದು ಸರಕಾರದ ಲೆಕ್ಕಾಚಾರ. ಆದರೆ ಇದಾಗದೆ ಈಗ ಜನರು ಹೋಬಳಿ ಮಟ್ಟದಲ್ಲಿ ಸಿಗುವ ಸೇವೆಗಳಿಗಾಗಿ 20-30 ಕಿ.ಮೀ. ದೂರ ತೆರಳಬೇಕಿದೆ. ಗ್ರಾಮಗಳ ಸಮೂಹ ಲೆಕ್ಕಾಚಾರ ಮಾಡಿ ಹೊಸ ತಾಲೂಕು ಘೋಷಿಸಲಾಗುತ್ತದೆ. ಅನಂತರ ಗ್ರಾಮಗಳ ಸಮೂಹವನ್ನು ಆಧ ರಿಸಿ (ಜನಸಂಖ್ಯೆ, ತಾಲೂಕು ಕೇಂದ್ರಕ್ಕೆ ಇರುವ ಅಂತರ, ಆರ್‌ಟಿಸಿ ಇರುವವರ ಸಂಖ್ಯೆ) ಹೊಸ ಹೋಬಳಿ ರಚಿಸಲಾಗುತ್ತದೆ. ಈ ಪ್ರಾಥಮಿಕ ಕೆಲಸವೇ ಇದುವರೆಗೆ ಆಗಿಲ್ಲ.

ಹೋಬಳಿಯೇ ತಾಲೂಕಾಯಿತು!

ಒಂದೊಂದು “ಹೋಬಳಿ’ಯನ್ನೇ “ಹೊಸ ತಾಲೂಕು’ ಆಗಿ ಮಾಡಲಾಗಿದೆ. ಪಾಣೆಮಂಗಳೂರು ಹಾಗೂ ಮಂಗಳೂರು “ಬಿ’ ಹೋಬಳಿಯ ಕೆಲವು ಗ್ರಾಮಗಳನ್ನು ತೆಗೆದು ಹೊಸದಾಗಿ ಉಳ್ಳಾಲ ತಾಲೂಕು ಮಾಡಲಾಯಿತಾದರೂ ಹೊಸ ಹೋಬಳಿ ಮಾಡಿಲ್ಲ. ಮೂಲ್ಕಿ ಹೋಬಳಿಯನ್ನೇ ತಾಲೂಕಾಗಿ ಮಾಡಲಾಯಿತು. ಕಡಬದಲ್ಲಿ ಕೂಡ ಹೋಬಳಿ ತಾಲೂಕಾಯಿತೇ ವಿನಾ ಹೊಸ ಹೋಬಳಿ ಆಗಿಲ್ಲ. ಮೂಡುಬಿದಿರೆ ಹೋಬಳಿಯ ಕಥೆಯೂ ಹೀಗೆಯೇ. ಉಡುಪಿ ಜಿಲ್ಲೆಯ ಹೊಸ ತಾಲೂಕುಗಳದ್ದೂ ಇದೇ ಕಥೆ.

ಹೋಬಳಿ ಯಾಕೆ ಅಗತ್ಯ?

l  ಹೋಬಳಿಯಲ್ಲಿ ನಾಡ ಕಚೇರಿ ಇರುತ್ತದೆ.

l  ಉಪ ತಹಶೀಲ್ದಾರ್‌ ಸಹಿತ ವಿವಿಧ ಅಧಿಕಾರಿಗಳು ಲಭ್ಯ.

l  ಕಂದಾಯ ಇಲಾಖೆ ಸಂಬಂಧಿ ಬಹುತೇಕ ಕೆಲಸಗಳು ಇಲ್ಲಿ ಲಭ್ಯ.

l  ಪಿಂಚಣಿ ಸಹಿತ ವಿವಿಧ ಸೇವೆಗಳನ್ನು ಪಡೆಯಬಹುದು.

l  ಪ್ರತಿಯೊಂದಕ್ಕೂ ತಾಲೂಕು ಕಚೇರಿಗೆ ಅಲೆದಾಡುವ ಪ್ರಮೇಯ ಇರುವುದಿಲ್ಲ.

l  ಸರಕಾರದಿಂದ “ಹೋಬಳಿ’ ಮಟ್ಟದ ಅನುದಾನ ಹಂಚಿಕೆ ಸಾಧ್ಯ.

l ಹೋಬಳಿ ಮಟ್ಟದ ಕ್ರೀಡಾಕೂಟ, ಯುವಜನ ಮೇಳ ಇತ್ಯಾದಿ ಆಯೋಜನೆ ಸಾಧ್ಯ.

l  ಹೋಬಳಿ ಮಟ್ಟದ ಆಡಳಿತ ಸುಧಾ ರಣೆಗೆ ವಿಶೇಷ ಸಭೆ ಆಯೋಜನೆ.

l  ಪಶು ವೈದ್ಯಕೀಯ ಆಸ್ಪತ್ರೆ, ಮೆಸ್ಕಾಂ ಶಾಖಾ ಅಧಿಕಾರಿ, ಕೃಷಿ ಅಧಿಕಾರಿ ಸಹಿತ ವಿವಿಧ ಆಡಳಿತ ಕೇಂದ್ರಗಳು ಲಭ್ಯ.

 ದಿನೇಶ್‌ ಇರಾ

ಟಾಪ್ ನ್ಯೂಸ್

Viral Video: ತೆರೆದ ಬಾವಿ ಮೇಲೆ ಕೂತು ಮಹಿಳೆಯ ರೀಲ್ಸ್..‌ ಕಾಲಿನಲ್ಲಿ ನೇತಾಡಿದ ಮಗು.!

Viral Video: ತೆರೆದ ಬಾವಿ ಮೇಲೆ ಕೂತು ಮಹಿಳೆಯ ರೀಲ್ಸ್..‌ ಕಾಲಿನಲ್ಲಿ ನೇತಾಡಿದ ಮಗು.!

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

pejawara

Tirupati Laddu Case; ದೇವಳಗಳನ್ನು ಸರ್ಕಾರದ ಸ್ವಾಧೀನದಿಂದ ಮುಕ್ತಗೊಳಿಸಿ: ಪೇಜಾವರ ಶ್ರೀ

Chennai: ಕೆಲಸದ ಒತ್ತಡಕ್ಕೆ ಮತ್ತೊಂದು ಬಲಿ; ವೈಯರ್‌ ಸುತ್ತಿಕೊಂಡು ಟೆಕ್ಕಿ ಆ*ತ್ಮಹತ್ಯೆ

Chennai: ಕೆಲಸದ ಒತ್ತಡಕ್ಕೆ ಮತ್ತೊಂದು ಬಲಿ; ವೈಯರ್‌ ಸುತ್ತಿಕೊಂಡು ಟೆಕ್ಕಿ ಆ*ತ್ಮಹತ್ಯೆ

Belthangady: ಧರ್ಮಸ್ಥಳದಲ್ಲಿ 26 ನೇ ವರ್ಷದ ಭಜನಾ ತರಬೇತಿ ಕಮ್ಮಟ

Belthangady: ಧರ್ಮಸ್ಥಳದಲ್ಲಿ 26 ನೇ ವರ್ಷದ ಭಜನಾ ತರಬೇತಿ ಕಮ್ಮಟ

Shobha Gasti: ಬೆಂಕಿಯಲ್ಲಿ ಅರಳಿದ ಹೂವು; ದೇವದಾಸಿಯರ ಹಾಡು ಪಾಡು

Shobha Gasti: ಬೆಂಕಿಯಲ್ಲಿ ಅರಳಿದ ಹೂವು; ದೇವದಾಸಿಯರ ಹಾಡು ಪಾಡು

Mangaluru: ಕೆಪಿಟಿ ಬಳಿ ಅಪಘಾತ; ಬೈಕ್ ಸವಾರ ಪವಾಡ ಸದೃಶ ಪ್ರಾಣಾಪಾಯದಿಂದ ಪಾರು

Mangaluru: ಕೆಪಿಟಿ ಬಳಿ ಅಪಘಾತ; ಬೈಕ್ ಸವಾರ ಪವಾಡಸದೃಶ ರೀತಿ ಪ್ರಾಣಾಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady: ತೋಡಿಗೆ ಅಡಿಕೆ ಮರವೇ ಸಂಕ!

Belthangady: ತೋಡಿಗೆ ಅಡಿಕೆ ಮರವೇ ಸಂಕ!

Belthangady: ಧರ್ಮಸ್ಥಳದಲ್ಲಿ 26 ನೇ ವರ್ಷದ ಭಜನಾ ತರಬೇತಿ ಕಮ್ಮಟ

Belthangady: ಧರ್ಮಸ್ಥಳದಲ್ಲಿ 26 ನೇ ವರ್ಷದ ಭಜನಾ ತರಬೇತಿ ಕಮ್ಮಟ

Mangaluru: ಕೆಪಿಟಿ ಬಳಿ ಅಪಘಾತ; ಬೈಕ್ ಸವಾರ ಪವಾಡ ಸದೃಶ ಪ್ರಾಣಾಪಾಯದಿಂದ ಪಾರು

Mangaluru: ಕೆಪಿಟಿ ಬಳಿ ಅಪಘಾತ; ಬೈಕ್ ಸವಾರ ಪವಾಡಸದೃಶ ರೀತಿ ಪ್ರಾಣಾಪಾಯದಿಂದ ಪಾರು

mlr-mangalore

Nervous Disease: ಕರಾವಳಿಯಲ್ಲೂ ಬ್ರೈನ್‌ ಹೆಲ್ತ್‌ ಕ್ಲಿನಿಕ್‌ ಕಾರ್ಯಾರಂಭ

Moodbidri: ಸರ ಕಳ್ಳತನ; ಇಬ್ಬರು ಆರೋಪಿಗಳ ಸೆರೆ

Moodbidri: ಸರ ಕಳ್ಳತನ; ಇಬ್ಬರು ಆರೋಪಿಗಳ ಸೆರೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Viral Video: ತೆರೆದ ಬಾವಿ ಮೇಲೆ ಕೂತು ಮಹಿಳೆಯ ರೀಲ್ಸ್..‌ ಕಾಲಿನಲ್ಲಿ ನೇತಾಡಿದ ಮಗು.!

Viral Video: ತೆರೆದ ಬಾವಿ ಮೇಲೆ ಕೂತು ಮಹಿಳೆಯ ರೀಲ್ಸ್..‌ ಕಾಲಿನಲ್ಲಿ ನೇತಾಡಿದ ಮಗು.!

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

Belthangady: ತೋಡಿಗೆ ಅಡಿಕೆ ಮರವೇ ಸಂಕ!

Belthangady: ತೋಡಿಗೆ ಅಡಿಕೆ ಮರವೇ ಸಂಕ!

pejawara

Tirupati Laddu Case; ದೇವಳಗಳನ್ನು ಸರ್ಕಾರದ ಸ್ವಾಧೀನದಿಂದ ಮುಕ್ತಗೊಳಿಸಿ: ಪೇಜಾವರ ಶ್ರೀ

Chennai: ಕೆಲಸದ ಒತ್ತಡಕ್ಕೆ ಮತ್ತೊಂದು ಬಲಿ; ವೈಯರ್‌ ಸುತ್ತಿಕೊಂಡು ಟೆಕ್ಕಿ ಆ*ತ್ಮಹತ್ಯೆ

Chennai: ಕೆಲಸದ ಒತ್ತಡಕ್ಕೆ ಮತ್ತೊಂದು ಬಲಿ; ವೈಯರ್‌ ಸುತ್ತಿಕೊಂಡು ಟೆಕ್ಕಿ ಆ*ತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.