ಜೆಸಿಬಿಯಲ್ಲಿ ಮೆರವಣಿಗೆ, ಮದುಮಗನೇ ಚಾಲಕ!
Team Udayavani, Jun 19, 2018, 2:20 AM IST
ಪುತ್ತೂರು: ವಧು – ವರರನ್ನು ಕಾರಿನಲ್ಲಿ ಕುಳ್ಳಿರಿಸಿ ಮನೆಗೆ ಕರೆತರುವುದು ವಾಡಿಕೆ. ಜೆಸಿಬಿಯಲ್ಲೇ ಕರೆತಂದರೆ! ಇಂತಹ ಕೌತುಕಕ್ಕೆ ಸಂಟ್ಯಾರ್ ಸಾಕ್ಷಿಯಾಯಿತು. ತಾಲೂಕಿನ ಕಲ್ಲಕಟ್ಟ ನಿವಾಸಿ ದಿ| ಶೀನಪ್ಪ- ಜಯಂತಿ ದಂಪತಿ ಪುತ್ರ ಚೇತನ್ ಕುಮಾರ್ ಹಾಗೂ ಕೆದಂಬಾಡಿ ಬೋಳ್ಳೋಡಿ ನಿವಾಸಿ ದಿ| ಬಾಬು ಪೂಜಾರಿ- ಪ್ರೇಮಾ ಅವರ ಪುತ್ರಿ ಮಮತಾ ಅವರ ವಿವಾಹ ಜೂ. 18ರಂದು ಪರ್ಪುಂಜ ಶಿವಕೃಪಾ ಆಡಿಟೋರಿಯಂನಲ್ಲಿ ನಡೆಯಿತು.
ಮದುವೆ ಹಾಲ್ನಲ್ಲೇ ಗಮನ ಸೆಳೆದದ್ದು ಸಿಂಗರಿಸಿ ನಿಲ್ಲಿಸಿದ್ದ ಜೆಸಿಬಿ. ಸಂಜೆ ವೇಳೆಗೆ ಮನೆ ಕಡೆ ಹೋಗಲು ವಧು ಹಾಗೂ ವರರು ಕಾರು ಹತ್ತುತ್ತಾರೆ ಎಂದು ಭಾವಿಸಿದ್ದರೆ, ಅದು ತಪ್ಪಾಗಿತ್ತು. ಬೆಳಗ್ಗೆ ಹಾಲ್ ಗೆ ಬಂದದ್ದು ಕಾರಿನಲ್ಲೇ ಆದರೂ, ಮರಳಿ ಹೋಗುವಾಗ ಜೆಸಿಬಿ ಹತ್ತಿದರು. ಸ್ವತಃ ಮದುಮಗನೇ ಜೆಸಿಬಿ ಚಾಲಕ. ಮದುಮಗಳನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು, ಎಲ್ಲರೂ ನೋಡನೋಡುತ್ತಿದ್ದಂತೆ ಮನೆ ಕಡೆ ತೆರಳಿದರು. ಮದುಮಗನಿಗೆ ಸ್ನೇಹಿತರು ಸಾಥ್ ನೀಡಿದರು. ಸಂಟ್ಯಾರ್ನಲ್ಲಿ ವಧು ಹಾಗೂ ವರರನ್ನು ಕೆಳಗಿಳಿಸಿ, ಜೆಸಿಬಿ ಮುಂಭಾಗದ ಬಕೆಟ್ನಲ್ಲಿ ಕುಳ್ಳಿರಿಸಿದರು. ಇನ್ನೊಬ್ಟಾತ ಜೆಸಿಬಿ ಚಲಾಯಿಸಿದ. ಸಂಟ್ಯಾರ್ನಲ್ಲಿ ಪಟಾಕಿ ಸಿಡಿಸಿ, ಸ್ವಾಗತ ನೀಡಿದರು. ಬಳಿಕ ಮೆರವಣಿಗೆ ರೀತಿಯಲ್ಲಿ ಕಲ್ಲಕಟ್ಟದ ಮನೆಗೆ ತೆರಳಿದರು.
ಸಂಭ್ರಮದ ಮೆರವಣಿಗೆ ಮನೆಗೆ ತಲುಪಿದರೆ, ವಧು ಹಾಗೂ ವರರಿಗೆ ಪರೀಕ್ಷೆ ಎದುರಾಗಿತ್ತು. ಮದುಮಗ ತೆಂಗಿನಕಾಯಿ ತುರಿಯಲು ಹಾಗೂ ಮದುಮಗಳು ಮೀನು ಶುಚಿಗೊಳಿಸಲು ತಿಳಿಸಿದರು. ಇದಾಗಿ, ಮದುಮಗಳನ್ನು ಅಡುಗೆ ಕೋಣೆಗೆ ಕರೆದೊಯ್ದು ಚಹಾ ಮಾಡಲು ತಿಳಿಸಿದರು. ಅಷ್ಟೇ ಅಲ್ಲ, ಆಕೆಯ ಕೈಯಲ್ಲೇ ನೆಂಟರಿಗೆ ಚಹಾ ವಿತರಣೆಯೂ ನಡೆಯಿತು.
ಜೆಸಿಬಿ ಆಪರೇಟರ್
ಮದುಮಗಳು ಖಾಸಗಿ ಕಂಪೆನಿ ಉದ್ಯೋಗಿ. ಮದುಮಗ ಚೇತನ್ ಜೆಸಿಬಿ ಆಪರೇಟರ್ ಆಗಿರುವುದರಿಂದ, ತಾನು ಚಲಾಯಿಸುವ ಜೆಸಿಬಿಯಲ್ಲೇ ಮದುವೆ ದಿಬ್ಬಣ ಬರಲು ಸಿದ್ಧತೆ ನಡೆಸಿದ್ದರು. ಈ ಸನ್ನಿವೇಶದ ವೀಡಿಯೋ, ಫೂಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಮೊದಲ ಕಿನ್ನಿಪಿಲಿಗೆ 48 ವರ್ಷ!; 15ರಿಂದ 75ಕ್ಕೇರಿದ ಟೀಮ್
Belthanagdy:ಹಿರಿಯ ಸಹಕಾರಿ,ಉಜಿರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸೇವಾಸಂಘದ ಅಧ್ಯಕ್ಷ ನಿಧನ
New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ
Putturu: ವಿದೇಶಗಳಿಂದ ಅಡಿಕೆ ಆಮದು ಪರಿಣಾಮ ಅಧ್ಯಯನ: ಸಂಸದ ಕ್ಯಾ.ಬ್ರಿಜೇಶ್ ಚೌಟ
Wild Elephant: ಧರ್ಮಸ್ಥಳ, ಚಾರ್ಮಾಡಿಯಲ್ಲಿ ಕಾಡಾನೆಗಳ ಹಾವಳಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ
Ambewadi ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೀಟೆ ಮರ ಕಡಿಯುತ್ತಿದ್ದ ಓರ್ವನ ಬಂಧನ
Cycle Ride: ಸಾಗುತ ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್ ಸವಾರಿ
Kamanur village: ದಾರಿ ತೋರುವ ಮಾದರಿ ಗ್ರಾಮ
Bigg Boss: ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.