ಇಲ್ಲಿನ ಒಂದು ಕುಟುಂಬಕ್ಕೂ ಇಲ್ಲ ಹಕ್ಕುಪತ್ರ

ನೂತನ ವಾರ್ಡ್‌ -19: ಮಿಲಿಟ್ರಿ ಗ್ರೌಂಡ್‌ನ‌ ಮತದಾರರ ಕಥೆ-ವ್ಯಥೆ

Team Udayavani, May 17, 2019, 6:00 AM IST

24

ನೂತನ ವಾರ್ಡ್‌ 19ರ ಮಿಲಿಟ್ರಿ ಗ್ರೌಂಡ್‌ ಪ್ರದೇಶದಲ್ಲಿನ ಹಕ್ಕುಪತ್ರವಿಲ್ಲದ ಮನೆಗಳ ನೋಟ.

ಸುಳ್ಯ: ಈ ಬಾರಿ ಹೊಸ ದಾಗಿ ರೂಪುಗೊಂಡ ಮಿಲಿಟ್ರಿ ಗ್ರೌಂಡ್‌ ವಾರ್ಡ್‌ನಲ್ಲಿ ಹಕ್ಕು ಚಲಾಯಿಸುವರಲ್ಲಿ ವಾಸ ಸ್ಥಳಕ್ಕೆ ಹಕ್ಕುಪತ್ರ ಹೊಂದಿಲ್ಲದ 236 ಕುಟುಂಬಗಳು ಸೇರಿವೆ.
19ನೇ ವಾರ್ಡ್‌ ಆಗಿ ರಚನೆಗೊಂಡರುವ ಮಿಲಿಟ್ರಿ ಗ್ರೌಂಡ್‌ಗೆ ಚರಂಡಿ, ರಸ್ತೆ ಸಮಸ್ಯೆಗಿಂತ ವಾಸಸ್ಥಳಕ್ಕೆ ಹಕ್ಕಿಲ್ಲದ್ದೆ ಚಿಂತೆಯಾಗಿದೆ. ಹೊಸ ವಾರ್ಡ್‌ ರೂಪುಗೊಂಡ ತರಹ, ಹೊಸದಾಗಿ ಹಕ್ಕುಪತ್ರ ಕೈ ಸೇರಬೇಕು ಎನ್ನುವ ಬೇಡಿಕೆ ಕೂಡ ಇಲ್ಲಿನವರದ್ದು.

ಸೌಲಭ್ಯವೂ ಸಿಗುತ್ತಿಲ್ಲ
ಇಲ್ಲಿನ 236 ಮನೆಗಳಲ್ಲಿ ನವರು ವಾಸಿಸುತ್ತಿರುವ ಈ ಪ್ರದೇಶ ದೇಶದ ರಕ್ಷಣಾ ಇಲಾಖೆಯ ಮಿಲಿಟರಿ ಚಟು ವಟಿಕೆಗೆ ಕಾದಿರಿಸಿದ ಸ್ಥಳ ಎಂದು ಕಂದಾಯ ಇಲಾಖೆಯ ದಾಖಲೆಯೊಂದು ಹಕ್ಕುಪತ್ರ ಸಿಗುವಲ್ಲಿನ ಅಡ್ಡಿಗೆ ಕಾರಣವಾಗಿದೆ. ಹಕ್ಕುಪತ್ರಕ್ಕೆ ಹೋರಾಟ ಸಾಗಿದೆ. ಜನಪ್ರತಿ ನಿಧಿಗಳಿಂದ ಹಿಡಿದು ಉನ್ನತ ಅಧಿಕಾರಿಗಳ ತನಕ ಸಾಲು ಸಾಲು ಪತ್ರ ಸಲ್ಲಿಕೆ, ಭೇಟಿ ಯಾಗಿ ಚರ್ಚೆಯೂ ಆಗಿದೆ.

ಜಯನಗರ ವ್ಯಾಪ್ತಿಯ ಮಿಲಿಟ್ರಿ ಗ್ರೌಂಡ್‌ನ‌ಲ್ಲಿ ಮನೆ ಕಟ್ಟಿರುವ 236 ಕುಟುಂಬಗಳಿಗೆ ಮನೆ ನಂಬರ್‌, ಪಡಿತರ ಸೌಲಭ್ಯ, ಆಧಾರ್‌ ಕಾರ್ಡ್‌ ಸೌಲಭ್ಯಗಳಿವೆ. ಇವರು ನ.ಪಂ.ಗೆ ಮನೆ, ನೀರಿನ ತೆರಿಗೆ ಕಟ್ಟುತ್ತಾರೆ. ನಿವೇಶನ ಸ್ಥಳಕ್ಕೆ ದಾಖಲೆ ಮಾತ್ರ ಇಲ್ಲ. ಇದರಿಂದ ವಸತಿ ಸಹಾಯಧನ, ಸಾಲ ಸೌಲಭ್ಯ, ಪ್ರಮಾಣ ಪತ್ರ ಇತ್ಯಾದಿಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಲ್ಲಿ 40-50 ವರ್ಷಗಳಿಂದ ನೆಲೆಸಿದವರು, ಜಾಗ ಖರೀದಿಸಿ ಮನೆ ಕಟ್ಟಿದವರೂ ಇದ್ದಾರೆ. ಇಲ್ಲಿ ಸುಮಾರು 650ಕ್ಕೂ ಅಧಿಕ ಜನಸಂಖ್ಯೆ ಇಲ್ಲಿದೆ.

40 ವರ್ಷದ ಬೇಡಿಕೆ ಇದಾಗಿದ್ದರೂ, ಕಳೆದ ಐದು ವರ್ಷದಿಂದ ಹೋರಾಟ ವೇಗ ಪಡೆದಿದೆ. ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗೆ ಪತ್ರ ಬರೆದ ಪರಿಣಾಮ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರು ಸೂಕ್ತ ವರದಿ ಕೋರಿದ್ದರು.
ಅದರಂತೆ ಮುಖ್ಯ ಕಾರ್ಯದರ್ಶಿಯವರು ಜಿಲ್ಲಾಧಿ ಕಾರಿಗಳು, ಸಹಾಯಕ ಕಮಿಷನರ್‌ ಅವರ ಮುಖಾಂತರ ತಹಶೀಲ್ದಾರ್‌ ಅವರಿಗೆ ವರದಿ ಸಲ್ಲಿಸಲು ಸೂಚಿಸಿ ಆ ಪ್ರಕ್ರಿಯೆ ನಡೆದಿದೆ. ತಾಲೂಕು ಕಂದಾಯ ಇಲಾಖೆ ಸ್ವಾಧೀನದಲ್ಲಿರುವ ಮನೆ ನಿವೇಶನದ ವಿಸ್ತೀರ್ಣ ಸರ್ವೆ ಕಾರ್ಯ ಪೂರ್ಣಗೊಂಡಿದೆ.

ಪ್ರಸ್ತುತ ರಕ್ಷಣಾ ಇಲಾಖೆ ಕೂಡ ಹಕ್ಕುಪತ್ರ ನೀಡಲು ಅಡ್ಡಿ ಮಾಡಿಲ್ಲ. ಹಾಗಾಗಿ ಸದ್ಯದಲ್ಲೇ ಹಕ್ಕುಪತ್ರ ಸಿಗುವ ನಿರೀಕ್ಷೆ ಇದೆ ಎನ್ನುತ್ತಾರೆ ಹೋರಾಟದ ನೇತೃತ್ವ ವಹಿಸಿರುವ ಜಗನ್ನಾಥ ಜಿ.ಸಮಸ್ಯೆಗಳಿವೆ ಉಳಿದಂತೆ ವಾರ್ಡ್‌ನಲ್ಲಿ ಕುಡಿಯುವ ನೀರು, ಚರಂಡಿ, ರಸ್ತೆ ಮೊದಲಾದ ಸಮಸ್ಯೆಗಳು ಎಲ್ಲ ವಾರ್ಡ್‌ಗಳಂತೆ ಇಲ್ಲಿಯೂ ಇವೆ.  ಹಕ್ಕುಪತ್ರ ಸಿಕ್ಕರೆ ಸರಕಾರದ ಸಹಾಯಧನ ಪಡೆದು ಹೊಸ ಮನೆ ಕಟ್ಟುವ ಬಯಕೆ ಅಲ್ಲಿನ ಜನರದ್ದು.

ಏನಿದು ಮಿಲಿಟ್ರಿ ಗ್ರೌಂಡ್‌?
1939ರಲ್ಲಿ ಬ್ರಿಟಿಷ್‌ ಆಡಳಿತ ಕಾಲದಲ್ಲಿ ಮಿಲಿಟರಿ ಉದ್ದೇಶಕ್ಕಾಗಿ ಜಯನಗರದಲ್ಲಿ 76 ಎಕ್ರೆ ಸ್ಥಳ ಮೀಸಲಿರಿಸಲಾಗಿತ್ತು. ಆದರೆ ಆ ಜಾಗದಲ್ಲಿ ಸ್ವಾತಂತ್ರ್ಯ ಪೂರ್ವ ಅಥವಾ ಅನಂತರದಲ್ಲಾಗಲಿ ಮಿಲಿಟರಿಗೆ ಸಂಬಂಧಿಸಿದ ಯಾವುದೇ ಚಟುವಟಿಕೆ ನಡೆದಿರುವ ಬಗ್ಗೆ ಎಲ್ಲಿಯೂ ಉಲ್ಲೇಖ ಇಲ್ಲ ಎನ್ನುತ್ತಾರೆ ಸ್ಥಳೀಯರು. ಕಂದಾಯ ಇಲಾಖೆ ದಾಖಲೆಯಲ್ಲಿ ಮಿಲಿಟರಿ ಗ್ರೌಂಡ್‌ ಎನ್ನುವ ಕೈ ಬರೆಹದ ಪತ್ರ ಇದೆ. ಇದು ಮಿಲಿಟರಿ ಚಟುವಟಿಕೆಗೆ ಕಾದಿರಿಸಿರುವುದಕ್ಕೆ ಇರುವ ಏಕೈಕ ಆಧಾರವಷ್ಟೆ. ಈಗಿನ ಪಹಣಿಯಲ್ಲಿ ದಾಖಲಾತಿ 38.61 ಎಕ್ರೆ ಎಂದಿದೆ. 1939ರಲ್ಲಿ 76 ಎಕ್ರೆ ಮಿಲಿಟರಿ ಗ್ರೌಂಡ್‌ ಎಂದು ದಾಖಲೆಗಳಿತ್ತು. 1994-95ರಲ್ಲಿ ನಡೆಸಿದ ಸರ್ವೆ ಪ್ರಕಾರ 43 ಎಕ್ರೆ ಜಾಗವಿರುವುದಾಗಿ ದಾಖಲೆಗಳು ಹೇಳುತ್ತವೆ. ಅದರಲ್ಲಿ ಕಟ್ಟಡ, ದಾರಿ, ರಸ್ತೆ 16 ಎಕ್ರೆ. ಮನೆ ನಿವೇಶನ 11 ಎಕ್ರೆ, ಹೌಸಿಂಗ್‌ ಕಾರ್ಪೊರೇಶನ್‌ 2 ಎಕ್ರೆ, ಬಂಜರು ಬೆಟ್ಟ ಪ್ರದೇಶ 5.60 ಎಕ್ರೆ ಇದೆ. ಇತ್ತೀಚೆಗೆ ಮಾಡಿದ ಸರ್ವೆ ಪ್ರಕಾರ ಒಟ್ಟು 38.61 ಎಕ್ರೆ ಸ್ಥಳ ಕಂಡು ಬಂದಿದೆ.

ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

1-BCCI

Gwalior T20: ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ

Big-Bos

BBK11: ಮೊದಲ ವಾರದಲ್ಲೇ ಬಿಗ್ ಬಾಸ್ ಆಟ ಮುಗಿಸಿದ ಯಮುನಾ ಶ್ರೀನಿಧಿ!

HDK-Chennapattana

By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್‌.ಡಿ.ಕುಮಾರಸ್ವಾಮಿ

1-lokaa

Lokayukta; 25 ಸಾವಿರ ರೂ.ಲಂಚ ಪಡೆಯುವಾಗ ಬಲೆಗೆ ಬಿದ್ದ ಎಡಿಎಲ್‌ಆರ್‌!!

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

Jaladurga-Puuturu

Putturu: ಭಾರೀ ಮಳೆಗೆ ಪೆರುವಾಜೆ ದೇವಾಲಯ ಜಲಾವೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Sulya: ಅವಾಚ್ಯ ಮಾತು: ಮಹಿಳೆಯಿಂದ ಪೊಲೀಸರಿಗೆ ದೂರು

1

Bantwala: ಕೇಪು, ಅಳಿಕೆಯಲ್ಲಿ ಸಿಡಿಲು ಬಡಿದು ಮನೆಗೆ ಹಾನಿ

Jaladurga-Puuturu

Putturu: ಭಾರೀ ಮಳೆಗೆ ಪೆರುವಾಜೆ ದೇವಾಲಯ ಜಲಾವೃತ

1(2)

Puttur: ಮೊದಲ ಕಿನ್ನಿಪಿಲಿಗೆ 48 ವರ್ಷ!; 15ರಿಂದ 75ಕ್ಕೇರಿದ ಟೀಮ್‌

5-belthanagdy

Belthanagdy:ಹಿರಿಯ ಸಹಕಾರಿ,ಉಜಿರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸೇವಾಸಂಘದ ಅಧ್ಯಕ್ಷ ನಿಧನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

police

Sulya: ಅವಾಚ್ಯ ಮಾತು: ಮಹಿಳೆಯಿಂದ ಪೊಲೀಸರಿಗೆ ದೂರು

puttige

Udupi; ಗೀತಾರ್ಥ ಚಿಂತನೆ 57: ದುರ್ಯೋಧನನಲ್ಲಿ ಮಾನಸಿಕ ಸ್ಥೈರ್ಯ ಕುಸಿತ

1-BCCI

Gwalior T20: ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ

Big-Bos

BBK11: ಮೊದಲ ವಾರದಲ್ಲೇ ಬಿಗ್ ಬಾಸ್ ಆಟ ಮುಗಿಸಿದ ಯಮುನಾ ಶ್ರೀನಿಧಿ!

HDK-Chennapattana

By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್‌.ಡಿ.ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.