October 8ರಿಂದ 14: ಮಂಗಳೂರು ಶ್ರೀ ಶಾರದಾ ಮಹೋತ್ಸವ
Team Udayavani, Sep 25, 2024, 12:31 AM IST
ಮಂಗಳೂರು: ಶ್ರೀ ಶಾರದಾ ಮಹೋತ್ಸವ ಸಮಿತಿ ವತಿಯಿಂದ ರಥಬೀದಿಯ ಶ್ರೀ ವೆಂಕಟರಮಣ ದೇಗುಲದ ಆಚಾರ್ಯರ ಮಠ ವಠಾರದಲ್ಲಿ 102ನೇ ವರ್ಷದ ಶ್ರೀ ಶಾರದಾ ಮಹೋತ್ಸವವು ಅ. 8ರಿಂದ 14ರ ವರೆಗೆ ನಡೆಯಲಿದೆ ಎಂದು ಶ್ರೀ ವೆಂಕಟರಮಣ ದೇಗುಲದ ತಂತ್ರಿ ಹಾಗೂ ಸಮಿತಿಯ ಟ್ರಸ್ಟಿ ಡಾ| ಪಂಡಿತ್ ನರಸಿಂಹಾಚಾರ್ಯ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅ. 9ರಂದು ಬೆಳಗ್ಗೆ 7ಕ್ಕೆ ಶ್ರೀ ಶಾರದಾ ವಿಗ್ರಹಏದ ಪ್ರತಿಷ್ಠಾಪನೆ ನಡೆಯಲಿದೆ. ಅ. 13ರ ವರೆಗೆ ದೀಪಾಂಲಕಾರ ಸಹಿತ ರಂಗಪೂಜೆ ನಡೆಯಲಿದೆ. ಅ. 13ರಂದು ಶ್ರೀ ಕಾಳಿಕಾ ದೇವಿಯ ವಿಶೇಷ ಅಲಂಕಾರ, ಬೆ. 10ಕ್ಕೆ ವಿದ್ಯಾರಂಭ, ಸಂಜೆ 6ಕ್ಕೆ ವಿಶೇಷ ದೀಪಾಲಂಕಾರ ಸೇವೆ ಜರಗಲಿದೆ.
ಅ. 14ರಂದು ಸಂಜೆ 5ಕ್ಕೆ ಶಾರದಾ ಮಾತೆಗೆ ಪೂರ್ಣಾಲಂಕಾರ, ರಾತ್ರಿ ವಿಸರ್ಜನೆ ಶೋಭಾಯಾತ್ರೆ ನಡೆಯಲಿದೆ. ಅ. 10ರಂದು ರಾತ್ರಿ ದುರ್ಗಾ ನಮಸ್ಕಾರ ಸೇವೆ, ಸಾರ್ವಜನಿಕ ಅನ್ನ ಸಂತರ್ಪಣೆ ಇದೆ ಎಂದರು. ವಿಸರ್ಜನೆ ಯಾತ್ರೆಯಲ್ಲಿ ಡಿಜೆ ಅಥವಾ ನಾಸಿಕ್ ಬ್ಯಾಂಡ್ ಅವಕಾಶವಿಲ್ಲ ಎಂದರು. ಟ್ರಸ್ಟಿಗಳಾದ ದತ್ತಾತ್ರೇಯ ಭಟ್, ಗಣೇಶ್ ಬಾಳಿಗ, ಮತ್ತಿತರರು ಭಾಗವಹಿಸಿದ್ದರು.
ತಿರುಪತಿ ಲಡ್ಡು ಪ್ರಕರಣ: ಸಾಮೂಹಿಕ ಪ್ರಾರ್ಥನೆ
ಶಾರದಾ ಮಹೋತ್ಸವದ 100ನೇ ಸಮಾರಂಭದಲ್ಲಿ ತಿರುಪತಿಯಿಂದ ಲಡ್ಡು ತಂದು ವಿತರಿಸಲಾಗಿತ್ತು. ಈಗ ಪ್ರಸಾದ ಕಲಬೆರಕೆಯಾದ ಸಂಗತಿ ಹೊರಬಿದ್ದ ಹಿನ್ನೆಲೆಯಲ್ಲಿ ಶಾರದಾ ಮಾತೆಯ ಪ್ರತಿಷ್ಠೆ ವೇಳೆ ಪ್ರಾಯಶ್ಚಿತ ರೂಪದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸುವುದಾಗಿ ಡಾ| ಪಂಡಿತ್ ನರಸಿಂಹಾಚಾರ್ಯ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.