![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 3, 2017, 5:07 PM IST
ಉಪ್ಪಳ: ಒಖೀ ಚಂಡಮಾರುತದ ಪ್ರಭಾವದಿಂದಾಗಿ ಮೂಸೋಡಿ ಅದಿಕದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ನಾಲ್ಕು ಮನೆಗಳು ಪೂರ್ಣವಾಗಿ ಸಮುದ್ರಪಾಲಾಗಿವೆ. ಶುಕ್ರವಾರ ಸಂಜೆಯಿಂದ ತೀವ್ರಗೊಂಡಿದ್ದ ಕಡಲ್ಕೊರೆತ ರಾತ್ರಿ 10 ಗಂಟೆ ವೇಳೆಗೆ ಮತ್ತಷ್ಟು ತೀವ್ರಗೊಂಡಿದೆ.
ಈ ವೇಳೆ ಅಬ್ದುಲ್ ಖಾದರ್ ಅವರ ಮನೆ ಪೂರ್ಣವಾಗಿ ಸಮುದ್ರ ಪಾಲಾಯಿತು. ಅಪಾಯ ಮನಗಂಡು ಮನೆಯಿಂದ ಹೊರಗೋಡಿದ ಕುಟುಂಬ ಪಾರಾಗಿದೆ. ಸ್ಥಳಕ್ಕೆ ಕೂಡಲೇ ತಲುಪಿದ ಪೊಲೀಸ್, ಅಗ್ನಿಶಾಮಕದಳ ಹಾಗೂ ಕಂದಾಯ ಅಧಿಕಾರಿಗಳು ಅಬ್ದುಲ್ ಖಾದರ್ ಅವರ ಕುಟುಂಬ ವನ್ನು ಬೇರೆಡೆಗೆ ಸ್ಥಳಾಂತರಿಸಲು ನೆರವು ನೀಡಿದರು. ಇದೇ ವೇಳೆ ಈ ಹಿಂದೆ ಉಂಟಾದ ಕಡಲ್ಕೊರೆತಕ್ಕೆ ಸಿಲುಕಿ ಭಾಗಶಃ ನಾಶಗೊಂಡಿದ್ದ ಮೂರು ಮನೆಗಳೂ ಶುಕ್ರವಾರ ಪೂರ್ಣ
ವಾಗಿ ಸಮುದ್ರ ಪಾಲಾಯಿತು. ಸಮುದ್ರ ಪಾಲಾದ ಮನೆಗಳು ಖದೀಜಮ್ಮ, ಇಬ್ರಾಹಿಂ, ಅಶ್ರಫ್ ಅವರ ಮನೆಗಳಾಗಿವೆ. ಈ ಹಿಂದೆ ಮನೆಗಳು ಭಾಗಶಃ ನಾಶಗೊಂಡಾಗ ಈ ಮೂರು ಕುಟುಂಬಗಳನ್ನು ಅಂದೇ ಸ್ಥಳಾಂತರಿಸಲಾಗಿತ್ತು. ಕಡಲ್ಕೊರೆತ ಮುಂದುವರಿ ದಿದ್ದು ಸುಮಾರು 200 ಮೀಟರ್ ಪ್ರದೇಶ ಸಮುದ್ರ ಪಾಲಾಗಿದೆ.
ಒಖೀ ಪ್ರಭಾವ ಕೇರಳದ ಕರಾವಳಿಯಾದ್ಯಂತ ಒಖೀ ಚಂಡ ಮಾರುತ ಪ್ರಭಾವ ವ್ಯಾಪಕವಾಗಿ ಕಂಡು ಬಂದಿದ್ದು, ಗುರುವಾರದಿಂದಲೇ ಸಮುದ್ರ ಪ್ರಕ್ಷುಬ್ಧವಾಗಿತ್ತು. ಕುಂಬಳೆ, ಮೊಗ್ರಾಲ್, ಉಪ್ಪಳ ಕಡಲ ಕಿನಾರೆಯಲ್ಲೂ ಸಮುದ್ರ ಪ್ರಕ್ಷುಬ್ಧವಾದ್ದ ರಿಂದ ಉಪ್ಪಳದಲ್ಲಿ ಜನರು ಸಂಜೆವೇಳೆ ಮನೆ ಯಿಂದ ಹೊರಬಂದು ಮಧ್ಯರಾತ್ರಿಯ ತನಕ ಹೊರಗುಳಿದರು.
ಮರ ಬಿದ್ದು ಸಂಚಾರಕ್ಕೆ ತಡೆ ಕಾಸರಗೋಡಿನಲ್ಲಿ ಶನಿವಾರ ಬೀಸಿದ ಭಾರೀಗಾಳಿಗೆ ನಗರದ ನೆಲ್ಲಿಕುಂಜೆ ಗೀತಾ ಚಿತ್ರ
ಮಂದಿರದ ಬಳಿ ಬೀಚ್ ರಸ್ತೆಯಲ್ಲಿ ಮರವೊಂದು ಮುರಿದು ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಅದನ್ನು ತೆರವುಗೊಳಿಸಿತು. ಚಂಡ ಮಾರುತ ಸಾಧ್ಯತೆಯ ಹಿನ್ನೆಲೆಯಲ್ಲಿ ಕಾಸರ ಗೋಡು ಮತ್ತು ಚೇರಂಗೈ ಕಡಪ್ಪುರದಲ್ಲಿ ಪೊಲೀಸರು ಧ್ವನಿ ವರ್ಧಕ ಮೂಲಕ ಜಾಗ್ರತಾ ನಿರ್ದೇಶ ನೀಡಿದ್ದಾರೆ. ಬೆಸ್ತರು ಮೀನುಗಾರಿಕೆಗೆ ತೆರಳದಂತೆ ಸೂಚಿಸಲಾಗಿದೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.