ನಿರಂತರ ಆನ್‌ಲೈನ್‌ ತರಗತಿ; ವಿದ್ಯಾರ್ಥಿಗಳಿಗೆ ಕಿರಿಕಿರಿ!


Team Udayavani, Jun 25, 2021, 5:40 AM IST

ನಿರಂತರ ಆನ್‌ಲೈನ್‌ ತರಗತಿ; ವಿದ್ಯಾರ್ಥಿಗಳಿಗೆ ಕಿರಿಕಿರಿ!

ಸಾಂದರ್ಭಿಕ ಚಿತ್ರ

ಮಹಾನಗರ: ಕೋವಿಡ್ ಆತಂಕದಿಂದಾಗಿ ಬಹುದೊಡ್ಡ ಸಮಸ್ಯೆ ಎದುರಿಸಿರುವ ಶಿಕ್ಷಣ ಕ್ಷೇತ್ರಕ್ಕೆ ಆಧಾರ ವಾಗಿರುವ ಆನ್‌ಲೈನ್‌ ಶಿಕ್ಷಣ ಕ್ರಮವೇ ಇದೀಗ ಮಕ್ಕಳಿಗೆ ಹೊಸ ಕಿರಿಕಿರಿ ಸೃಷ್ಟಿಸುತ್ತಿದೆ. ಪ್ರತೀದಿನ ಮುಂಜಾನೆಯಿಂದ ಮಧ್ಯಾಹ್ನದವರೆಗೆ ಮಕ್ಕಳು ಕಂಪ್ಯೂಟರ್‌/ ಮೊಬೈಲ್‌ನಲ್ಲಿ ಆನ್‌ಲೈನ್‌ ಮುಖೇನ ಕಲಿಯುತ್ತಿರುವ ಕಾರಣದಿಂದ ಮಕ್ಕಳಿಗೆ ಒತ್ತಡ ಅಧಿಕವಾಗುತ್ತಿದೆ ಎಂಬ ಆಕ್ಷೇಪ ಕೇಳಿಬಂದಿದೆ.

ರಾಜ್ಯಪಠ್ಯಕ್ರಮದ ಶಿಕ್ಷಣ ವ್ಯವಸ್ಥೆ ಇನ್ನಷ್ಟೇ ಆರಂಭವಾಗಬೇಕಿದೆ. ಭೌತಿಕ ತರಗತಿ ಆರಂಭವಾಗುವವರೆಗೆ ಆನ್‌ಲೈನ್‌ ತರಗತಿಗಳು ನಡೆಯಲಿದ್ದು, ಕೆಲವೇ ದಿನದಲ್ಲಿ ಆರಂಭವಾಗಲಿದೆ. ಆದರೆ ಸಿಬಿಎಸ್‌ಸಿ ಸಹಿತ ಕೇಂದ್ರೀಯ ಪಠ್ಯಕ್ರಮದ ಆನ್‌ಲೈನ್‌ ತರಗತಿಗಳು ಈಗಾಗಲೇ ಆರಂಭವಾಗಿದೆ. ಮಂಗಳೂರಿನ ಹಲವು ಶಾಲೆಗಳಲ್ಲಿ ಆನ್‌ಲೈನ್‌ ತರಗತಿಗಳು ಶುರುವಾಗಿವೆ.

ಕೆಲವು ಶಾಲೆಗಳಲ್ಲಿ ಬೆಳಗ್ಗೆ 8 ಗಂಟೆಗೆ ಆನ್‌ಲೈನ್‌ ತರಗತಿ ಆರಂಭವಾಗುತ್ತಿದೆ. ಮಧ್ಯಾಹ್ನ 12 ಗಂಟೆಯವರೆಗೂ ಇದು ನಡೆಯುತ್ತದೆ. ಇದರ ಮಧ್ಯೆ 4 ತರಗತಿಗಳು ಇರುತ್ತದೆ. ಒಂದು ತರಗತಿ ಆದ ಬಳಿಕ ಕೇವಲ 5 ಅಥವಾ 10 ನಿಮಿಷ ಮಾತ್ರ ಬಿಡುವು ಇದೆ. ಉಳಿದಂತೆ 4 ತರಗತಿಗಳಿಗಾಗಿ ಮಕ್ಕಳು ಕಂಪ್ಯೂಟರ್‌/ಮೊಬೈಲ್‌ಗೆ ಸೀಮಿತಗೊಳ್ಳುತ್ತಿದ್ದಾರೆ. ಹೀಗಾಗಿ ಮಕ್ಕಳಿಗೆ ಒತ್ತಡ ಅಧಿಕವಾಗುತ್ತಿದೆ ಎಂದು ಮಕ್ಕಳ ಹೆತ್ತವರು ಅಭಿಪ್ರಾಯಪಟ್ಟಿದ್ದಾರೆ.

ಮಕ್ಕಳ ಸಂಖ್ಯೆ ಅಧಿಕವಿರುವ ಕಾರಣದಿಂದ ತರಗತಿ ನಿರಂತರವಾಗಿ ಮಾಡಲೇಬೇಕಾದ ಅನಿವಾರ್ಯವಿದೆ. ಪ್ರತೀದಿನ ಮನೋರಂಜನ ಚಟುವಟಿಕೆ ಕೂಡ ನಡೆಸಲಾಗುತ್ತಿದೆ. ಶಾಲೆಯ ವಾತಾವರಣವನ್ನೇ ಆನ್‌ಲೈನ್‌ ಮೂಲಕ ರೂಪಿಸಲಾಗುತ್ತಿದೆ ಎಂದು ಶಾಲೆಯ ಪ್ರಮುಖರು ವಿವರಿಸಿದ್ದಾರೆ.

ನೆಟ್‌ವರ್ಕ್‌ ಸಮಸ್ಯೆ :

ನೆಟ್‌ವರ್ಕ್‌ ಕಿರಿಕಿರಿ ನಗರ ಪ್ರದೇಶವನ್ನೂ ಬಿಟ್ಟಿಲ್ಲ. ಮಂಗಳೂರಿನ ಕೆಲವು ಕಡೆಗಳಲ್ಲಿ ನೆಟ್‌ವರ್ಕ್‌ ಸಮಸ್ಯೆ ಇದೆ. ಇದು ಶಿಕ್ಷಕರಿಗೂ ತಲೆನೋವಾಗಿದೆ. ನೆಟ್‌ವರ್ಕ್‌ ಇಲ್ಲದೆ ಮಕ್ಕಳಿಗೂ ಕೆಲವೊಮ್ಮೆ ಪಾಠದಲ್ಲಿ ಕೆಲವು ಅಂಶಗಳು ಕೈತಪ್ಪುತ್ತಿವೆ ಎಂಬ ದೂರು ಇದೆ.ಹೀಗೂ ಮಾಡಬಹುದು :

  • ಒಂದು ಪಠ್ಯದ ಅವಧಿ ಹಾಗೂ ಇನ್ನೊಂದರ ಮಧ್ಯೆ ಕನಿಷ್ಠ 20 ನಿಮಿಷ ಬಿಡುವು ಇರಲಿ
  • ಒಂದು ಪಠ್ಯದ ತರಗತಿ ಅವಧಿ 30/45 ನಿಮಿಷಕ್ಕೆ ಸೀಮಿತಗೊಳಿಸಿದರೆ ಉತ್ತಮ
  • ಒಂದು ದಿನದಲ್ಲಿ ಬೆಳಗ್ಗಿನಿಂದ ಮಧ್ಯಾಹ್ನದ ಒಳಗೆ ಪಠ್ಯ ಪೂರ್ಣಗೊಳಿಸುವ ಬದಲು ವಿಂಗಡಿಸಿ (ಬೆಳಗ್ಗೆ-ಮಧ್ಯಾಹ್ನ ಅನಂತರ) ಮಾಡಿದರೆ ಉತ್ತಮ.
  • ವಿದ್ಯಾರ್ಥಿಗಳ ಹಿತದೃಷ್ಟಿ-ಮಾನಸಿಕ ಒತ್ತಡ ಕಡಿಮೆಗೊಳಿಸಲು ಮನೋರಂಜನ ಚಟುವಟಿಕೆಗೂ ಹೆಚ್ಚು ಆದ್ಯತೆ ಇರಲಿ.
  • ಪ್ರತೀ ವಿದ್ಯಾರ್ಥಿಯ ಹೆಸರನ್ನು ಪ್ರತೀ ಪಠ್ಯದ ವೇಳೆ ಶಿಕ್ಷಕರು ಉಲ್ಲೇಖೀಸಿ ಪ್ರೇರೇಪಿಸಿದರೆ ಉತ್ತಮ.

ಆನ್‌ಲೈನ್‌ ತರಗತಿ ಸದ್ಯದ ಪರಿಸ್ಥಿತಿಗೆ ಅನಿವಾರ್ಯ ಆಗಿದ್ದರೂ ನಿರಂತರ ಆನ್‌ಲೈನ್‌ನಲ್ಲಿ ಭಾಗವಹಿಸಿದರೆ ಕಣ್ಣಿಗೆ ಸಮಸ್ಯೆ ಆಗಬಹುದು ಅಥವಾ ಮಗುವಿಗೆ ಒತ್ತಡವೂ ಆಗಬಹುದು. ಹೀಗಾಗಿ ಆನ್‌ಲೈನ್‌ ತರಗತಿಯನ್ನು ಬೆಳಗ್ಗೆ-ಮಧ್ಯಾಹ್ನ ಅನಂತರ ಎಂಬ ನೆಲೆಯಲ್ಲಿ ವಿಂಗಡಿಸುವುದು ಉತ್ತಮ. ಜತೆಗೆ ಮಕ್ಕಳ ಮನೋವಿಕಾಸಕ್ಕಾಗಿ ಶಾಲೆಯಲ್ಲಿ ನಡೆಸುವಂತಹ ನೃತ್ಯ, ಸಂಗೀತ, ಯೋಗ, ಆಟೋಟ ಚಟುವಟಿಕೆಯನ್ನು ಆನ್‌ಲೈನ್‌ ಮೂಲಕ ನೀಡಿದರೆ ಉಪಯೋಗವಾದೀತು. ಕಣ್ಣು, ಆಹಾರ ಕ್ರಮ ಸಹಿತ ಆರೋಗ್ಯದ ಬಗ್ಗೆಯೂ ತಿಳಿವಳಿಕೆ ನೀಡಬಹುದು. ಆನ್‌ಲೈನ್‌ ಸಮಯದಲ್ಲಿ ಜಂಕ್‌ಫುಡ್‌ ತಿನ್ನದಂತೆ, ಶಾಲೆಯಲ್ಲಿ ಪಾಲ್ಗೊಳ್ಳುವಾಗ ಶಿಸ್ತು ಪಾಲಿಸಿದ ರೀತಿಯಲ್ಲಿಯೇ ಆನ್‌ಲೈನ್‌ ತರಗತಿಗೂ ಆದ್ಯತೆ ನೀಡಬೇಕು. ಇದರ ಜತೆಗೆ ಎರಡು ವಾರಕ್ಕೊಮ್ಮೆ ಹೆತ್ತವರ ಜತೆಗೆ ಆನ್‌ಲೈನ್‌ ಮುಖೇನ ಶಿಕ್ಷಕರು ಮಾತುಕತೆ ನಡೆಸಿದರೆ ಉತ್ತಮ. ವಿದ್ಯಾರ್ಥಿಗಳಿಗೆ ನಿಗದಿತ ಟಾಸ್ಕ್ ಅನ್ನು ಮೊದಲೇ ಕೊಡುವ ಬದಲು ತರಗತಿ ಮಧ್ಯೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ನೀಡಿದರೆ ಅವರು ಹೆಚ್ಚು ಸಕ್ರಿಯರಾಗಲು ಸಾಧ್ಯ.  –ಡಾ| ಅನಂತ್‌ ಪೈ, ಮಕ್ಕಳ ತಜ್ಞರು, ಮಂಗಳೂರು

 

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.