ಜನಾಕರ್ಷಣೆಗೆ ಒಳಗಾದ  ಮಣ್ಣು ಕೊರೆಯುವ ಯಂತ್ರ


Team Udayavani, May 23, 2018, 3:31 PM IST

23-may-17.jpg

ಬಂಟ್ವಾಳ : ನೇತ್ರಾವತಿ ನದಿ ಪಾಣೆಮಂಗಳೂರು ಕಾಂಕ್ರಿಟ್‌ ಸೇತುವೆಯಲ್ಲಿ ಸನಿಹದಲ್ಲಿ ನೂತನ ನಿರ್ಮಾಣದ ಸೇತುವೆಯ ತಳದಲ್ಲಿ ನಡೆಯುತ್ತಿರುವ ಬೇಸ್‌ಮೆಂಟ್‌ ನಿರ್ಮಾಣಕ್ಕೆ ಮಣ್ಣನ್ನು ಕೊರೆಯುವ ಯಂತ್ರವು ಭಾರೀ ಜನಾಕರ್ಷಣೆಗೆ ಒಳಗಾಗಿದೆ.

ಇನ್ನೂರ ಐವತ್ತು ಅಡಿ ಎತ್ತರ
ಇನ್ನೂರ ಐವತ್ತು ಅಡಿ ಎತ್ತರದ ಯಂತ್ರದ ಮೂಲಕ ನದಿಯ ತಳಭಾಗವನ್ನು ಬಗೆದು ಅಲ್ಲಿ ಶಿಲೆಯನ್ನು ಹುಡುಕಿ ನೂತನ ಸೇತುವೆಯ ಪಿಲ್ಲರ್‌ ಎಬ್ಬಿಸಲು ಸಹಾಯ ಆಗುವಂತೆ ಈ ಯಂತ್ರವನ್ನು ಇಲ್ಲಿ ಅಳವಡಿಸಲಾಗಿದೆ.

ನದಿಯ ಅರ್ಧಕ್ಕೆ ಮಣ್ಣನ್ನು ತುಂಬಿಸಿ ಅದರ ಮೇಲೆ ಬೃಹತ್‌ ಗಾತ್ರದ ಈ ಯಂತ್ರವನ್ನು ತರಲಾಗಿದೆ. ಅದರ ಮೂಲಕ ನೆಲವನ್ನು ಕೊರೆದು ಶಿಲೆಯನ್ನು ಪತ್ತೆಹಚ್ಚಿ ಮುಂದಿನ ಜೂನ್‌ ತಿಂಗಳ ಮಳೆ ಬರುವ ಮೊದಲು ಪಿಲ್ಲರ್‌ ಎಬ್ಬಿಸುವುದು ಯೋಜನೆಯ ಉದ್ದೇಶ.

ರಾಷ್ಟ್ರೀಯ ಹೆದ್ದಾರಿ ಮಂಗಳೂರು- ಬೆಂಗಳೂರು ಚತುಷ್ಪಥ ಕಾಮಗಾರಿ ಇನ್ನೊಂದು ಸೇತುವೆ ನಿರ್ಮಾಣ ಯೋಜಿಸಿದ್ದು ಇಲ್ಲಿ ನಿರ್ಮಾಣ ಪೂರ್ವದ ಕೆಲಸವನ್ನು ಮಾಡಲು ಯೋಜಿಸಲಾಗಿದೆ. ಮುಂದಿನ ಜೂನ್‌ ಒಳಗೆ ನೀರಿನ ಮಟ್ಟಕ್ಕೆ (7 ಮೀ.) ತನಕ ನದಿ ಪಾತಳಿಯಿಂದ ಪಿಲ್ಲರ್‌ ಎಬ್ಬಿಸುವ ಯೋಜನೆ ತಯಾರಾಗಿದೆ.

ಮಳೆ ತಡವಾದರೆ ಕಾಮಗಾರಿಯ ಬಹುತೇಕ ಭಾಗ ಮುಂದಿನ ಹದಿನೈದು ದಿನಗಳಲ್ಲಿ ಆಗಲಿದೆ. ಮಳೆ ನಿರಂತರ ಬಂದು ನದಿಯಲ್ಲಿ ನೀರಿನ ಹರಿವು ಹೆಚ್ಚಿದರೆ ಕಾಮಗಾರಿ ನಿಲ್ಲಿಸಿ ಮುಂದಿನ ಅಕ್ಟೋಬರ್‌ ತಿಂಗಳ ಆರಂಭದಲ್ಲಿ ಕೆಲಸಕ್ಕೆ ಪುನರ್‌ ಚಾಲನೆ ನೀಡುವುದಾಗಿ ತಿಳಿದು ಬಂದಿದೆ.

ಸಾಮಾನ್ಯ ಕೊಳವೆ ಬಾವಿ ಕೊರೆಯುವ ಯಂತ್ರವನ್ನು ಅನೇಕರು ಕಂಡಿದ್ದಾರೆ. ಆದರೆ ಇಂತಹ ಮಾದರಿ, ಕ್ಷಣಾರ್ಧದಲ್ಲಿ ಮಣ್ಣನ್ನು ಬಗೆದು ಮೇಲಕ್ಕೆ ಎತ್ತುವ ಯಂತ್ರದ ಸಾಮರ್ಥ್ಯವನ್ನು ಕಂಡು ಜನರು ಬೆರಗಾಗುತ್ತಾರೆ. ದಿನಂಪ್ರತಿ ಸಾರ್ವಜನಿಕರಿಂದ ಈ ಯಂತ್ರದ ವೀಕ್ಷಣೆ ಹೆಚ್ಚಾಗಿದೆ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.