ನಾಗಬನವಾಗಿ ಪರಿವರ್ತನೆಗೊಳ್ಳುತ್ತಿದೆೆ ಚಿಣ್ಣರ ಪಾರ್ಕ್‌


Team Udayavani, Jul 12, 2017, 3:45 AM IST

Park-11-7.jpg

ಪುತ್ತೂರು: ಮಂಗಳೂರಿನಲ್ಲಿ ಚಿಣ್ಣರ ಪಾರ್ಕ್‌ ಇದೆ. ಮೈಸೂರಿನಲ್ಲೂ ಚಿಣ್ಣರ ಪಾರ್ಕ್‌ ಇದೆ. ಅದರಂತೆಯೇ ಪುತ್ತೂರಿನಲ್ಲೂ ಚಿಣ್ಣರ ಪಾರ್ಕ್‌ ಇದ್ದರೂ ಅದು ನಾಗಬನವಾಗಿ ಪರಿವರ್ತನೆಯಾಗುತ್ತಿದೆ. ನಗರಸಭಾ ವ್ಯಾಪ್ತಿಯ ತಾಲೂಕು ಕಚೇರಿ ರಸ್ತೆಯಲ್ಲಿ ಚಿಣ್ಣರ ಪಾರ್ಕ್‌ ಇದೆ. ಇದರ ನಿರ್ವಹಣೆ ಸಮರ್ಪಕವಾಗಿಲ್ಲ. ಹಾಗಾಗಿ ಯಾರಿಗೂ ಪ್ರಯೋಜನವಾಗುತ್ತಿಲ್ಲ. ಸ್ಥಳೀಯ ಸ್ವಯಂಸೇವಾ ಸಂಸ್ಥೆ 25 ವರ್ಷಗಳ ಹಿಂದೆ ತಮ್ಮ ಸೇವಾ ಯೋಜನೆಯಾಗಿ ಈ ಪಾರ್ಕ್‌ ನಿರ್ಮಿಸಿ ಅಂದಿನ ಪುರಸಭೆಗೆ ಒಪ್ಪಿಸಿದ್ದರು. ಇಲ್ಲಿ ಜೋಕಾಲಿ, ಜಾರುಬಂಡಿ ಸೇರಿದಂತೆ ಮಕ್ಕಳ ಆಟದ ಸಲಕರಣೆಗಳಿದ್ದವು. ಒಂದಷ್ಟು ದಿನ ಮಕ್ಕಳೂ ಬಂದು ಆಡತೊಡಗಿದರು. ಆದರೆ, ನಗರಸಭೆ (ಆಗಿನ ಪುರಸಭೆ) ನಿರ್ವಹಣೆ ಮಾಡುವುದನ್ನು ಮರೆತಿದ್ದರಿಂದ ಕ್ರಮೇಣ ಪಾಳು ಬೀಳತೊಡಗಿತು. ಕ್ರಮೇಣ ಈ ಪಾರ್ಕ್‌ ಅಲೆಮಾರಿಗಳ ಪಾರ್ಕ್‌ ಆಯಿತು. ಈ ಮಧ್ಯೆ ಸೋಮವಾರ ಸಂತೆಯ ದಿನ ಬಾಳೆಕಾಯಿ ವ್ಯಾಪಾರದ ತಾಣವೂ ಆಯಿತು. ವಿಸ್ತರಿತ ಪುತ್ತೂರು ಪುರಸಭೆಯನ್ನು ಸಿಂಗಾ ಪುರ ಮಾಡಲು ಹೊರಟವರು ಈ ಪಾರ್ಕನ್ನು ಉದ್ಯಮವೊಂದಕ್ಕೆ ಹಸ್ತಾಂತರಿಸಿ ಅಭಿವೃದ್ಧಿಪಡಿಸುವ ಕನಸು ಕಂಡರೂ ಈಡೇರಲಿಲ್ಲ.

ಪಾರ್ಕ್‌ ಅಭಿವೃದ್ಧಿ
ಕೆಲವು ವರ್ಷಗಳ ಹಿಂದೆ ಪುರ ಸಭೆಯ ವತಿಯಿಂದ ಈ ಪಾರ್ಕ್‌ 10 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ದಿ ಪಡಿಸಲಾಗಿತ್ತು. ಮಕ್ಕಳಿಗೆ ಆಟ ವಾಡಲು ಪುಟ್ಟಗುಹೆ, ಬಯಲು ರಂಗಮಂದಿರ, ವಾಕಿಂಗ್‌ ಪಾತ್‌, ಸಿಮೆಂಟ್‌ ಸೋಫಾಗಳನ್ನು ಅಳವಡಿಸಲಾಗಿತ್ತು. ಬಯಲು ರಂಗಮಂದಿರದಲ್ಲಿ ಒಂದೆರಡು ಕಾರ್ಯಕ್ರಮಗಳೂ ನಡೆದವು. ಒಂದು ಪುಟ್ಟ ಅಂಗಡಿಯನ್ನು ಮಾಡಲಾಗಿದ್ದು, ಇದನ್ನು ವಹಿಸಿಕೊಂಡವರು ಪಾರ್ಕ್‌ನ ನಿರ್ವಹಣೆ ಮಾಡುತ್ತಾರೆಂದು ಪುರಸಭೆ ಹೇಳಿತು. ಆದರೆ ಈಗ ಪುರಸಭೆ ನಗರಸಭೆಯಾಗಿದೆ.

ಮರೆತು ಕುಳಿತ ನಗರಸಭೆ 
ಚಿಣ್ಣರ ಪಾರ್ಕ್‌ ಹಾವುಗಳ ತಾಣವಾಗಿದೆ. ಮಂಡಿಯಷ್ಟು ಉದ್ದಕ್ಕೆ ಹುಲ್ಲು ಬೆಳೆದಿದ್ದು, ಮಕ್ಕಳ ಗುಹೆಯ ಮುಂದೆ ಬಲ್ಲೆ ರಾಶಿ ಬಿದ್ದಿದೆ. ಆದರೂ ನಗರ ಸಭೆ ಮರೆತು ಕುಳಿತಿದೆ ಎಂದು ದೂರುತ್ತಾರೆ ನಾಗರಿಕರು. ಪಾರ್ಕ್‌ನ ನಿಷ್ಪ್ರಯೋಜಕತೆಯನ್ನು ಕಂಡು ಕಳೆದ ವರ್ಷ ಪುತ್ತೂರು ಪತ್ರಕರ್ತರ ಸಂಘ ನಿರ್ವಹಣೆ ಹೊಣೆ ಹೊರಲು ಮುಂದೆ ಬಂದಿತ್ತು. ಈ ಸಂದರ್ಭದಲ್ಲಿ ಕೆಲವು ಸೌಕರ್ಯಗಳನ್ನು ಕಲ್ಪಿಸಲು ಕೇಳಿಕೊಳ್ಳಲಾಗಿತ್ತು. ನಗರಸಭೆಯೂ ಒಪ್ಪಿಕೊಂಡಿತ್ತು. ಆದರೆ ಅನಂತರ ಯಾವುದೇ ಬೆಳವಣಿಗೆ ನಡೆದಿಲ್ಲ.

ಯಾರೂ ಮಾತನಾಡುವುದಿಲ್ಲ
ನಗರಸಭೆಯಲ್ಲಿ ರಾಜಕೀಯ ವಿವಾದಗಳನ್ನು ಎಷ್ಟು ಬೇಕಾದರೂ ಚರ್ಚಿಸಲಾಗುತ್ತದೆ. ಆದರೆ, ನಗರದ ಏಕೈಕ ಚಿಣ್ಣರ ಪಾರ್ಕ್‌ ಅಭಿವೃದ್ಧಿ ಅಥವಾ ನಿರ್ವಹಣೆಯ ಕುರಿತು ಯಾರೂ ಮಾತನಾಡುವುದಿಲ್ಲ. ಅದಕ್ಕೆ ಸಮಯವಿಲ್ಲ ಎಂಬುದು ನಾಗರಿಕರ ಬೇಸರದ ನುಡಿ.

ಟಾಪ್ ನ್ಯೂಸ್

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.