ಮಳವೂರಿನಿಂದ 13 ಗ್ರಾಮಗಳಿಗೆ ಜೀವ ನದಿಯಾದ ಫ‌ಲ್ಗುಣಿ

ಬಹುಗ್ರಾಮ ಕುಡಿಯುವ ನೀರು ಯೋಜನೆ

Team Udayavani, May 19, 2019, 6:05 AM IST

1605BAJ-

ಮಳವೂರಿನಲ್ಲಿರುವ ಫ‌ಲ್ಗುಣಿ ನದಿ.

ಬಜಪೆ: ಮಳವೂರು ವೆಂಟೆಡ್‌ ಡ್ಯಾಂ ನಿರ್ಮಾಣದ ಬಳಿಕ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದಾಗಿ ಫ‌ಲ್ಗುಣಿ ನದಿ ಈಗ ಎಂಟು ಗ್ರಾಮ ಪಂಚಾಯತ್ ಳ 13 ಗ್ರಾ ಹಾಗೂ ಕಂದಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸೌಹಾರ್ದನಗರ ಪ್ರದೇಶದವರಿಗೆ ಜೀವನದಿಯಾಗಿದೆ.ಇದರಿಂದಾಗಿ ಈ ಭಾಗದ ಜನರ ನೀರಿನ ಸಮಸ್ಯೆ ಬಹುತೇಕ ಪರಿಹಾರವಾಗಿದೆ.

ಮಳವೂರು, ಬಜಪೆ, ಪೆರ್ಮುದೆ, ಎಕ್ಕಾರು, ಸೂರಿಂಜೆ, ಬಾಳ, ಜೋಕಟ್ಟೆ, ಮೂಡು ಶೆಡ್ಡೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ 13 ಗ್ರಾಮ ಹಾಗೂ ಕಂದಾವರ ಗ್ರಾಮದ ಸೌಹಾರ್ದ ನಗರದ ಒಟ್ಟು 76 ಸಾವಿರ ಜನರು ಈಗ ಇದೇ ನೀರನ್ನು ಅವಲಂಭಿಸಿದ್ದಾರೆ.

ದಿನವೊಂದಕ್ಕೆ 5ಎಂಎಲ್‌ಡಿ (50 ಲಕ್ಷ ಲೀಟರ್‌) ನೀರು ಈ ವೆಂಟೆಡ್‌ ಡ್ಯಾಂನಿಂದ 120 ಅಶ್ವಶಕ್ತಿವುಳ್ಳ ಪಂಪ್‌ನಿಂದ ಸರಬರಾಜು ಮಾಡಲಾಗುತ್ತದೆ. ಈ ಪಂಪ್‌ ದಿನಕ್ಕೆ 16 ರಿಂದ 18 ಗಂಟೆಗಳ ಕಾಲ ಚಾಲನೆಯಲ್ಲಿರುತ್ತದೆ.

ಹೆಚ್ಚಿನ ಗ್ರಾ.ಪಂ.ಗಳು ಕುಡಿಯುವ ನೀರಿಗಾಗಿ ಕೊಳವೆ ಬಾವಿ ಯನ್ನೇ ಆಧರಿಸಿದ್ದವು.ಈ ಬಾರಿ ಅಂತರ್ಜಲ ಕುಸಿತ ದಿಂದಾಗಿ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿ ಈ ಪ್ರದೇಶಗಳಲ್ಲಿ ಹೆಚ್ಚು ನೀರಿನ ಸಮಸ್ಯೆ ಎದುರಾಗಿದೆ. ಹೊಸ ಕೊಳವೆ ಬಾವಿಗಳನ್ನು 600 ರಿಂದ 700 ಅಡಿಗಳಷ್ಟು ಕೊರೆಯ ಬೇಕಾದ ಪರಿಸ್ಥಿತಿ ಎದುರಾಗಿತ್ತು.

ಮಳವೂರು ಗ್ರಾ.ಪಂ. ವ್ಯಾಪ್ತಿಯಲ್ಲಿ 15 ಕೊಳವೆ ಬಾವಿಗಳಿದ್ದು,ಮೂರರಲ್ಲಿ ನೀರು ಕಡಿಮೆಯಾಗಿದೆ. ಕರಂಬಾರು ಅಂಬೇ ಡ್ಕರ್‌ ನಗರ, ಪೊರ್ಕೋಡಿ, ಕೊಪ್ಪಳ, ಅಂತೋನಿಕಟ್ಟೆ,ಅಡ್ಮಗುಡ್ಡೆ,ಕರಂಬಾರು ಪ್ರದೇಶಗಳಿಗೆ ಮಳವೂರು ವೆಂಟೆಡ್‌ ಡ್ಯಾಂ ನ ನೀರು ಸರಬರಾಜು ಮಾಡಲಾಗುತ್ತದೆ.

7 ಓವರ್‌ ಹೆಡ್‌ ಟ್ಯಾಂಕ್‌ 
ಪೆರ್ಮುದೆ ಗ್ರಾ.ಪಂ. ವ್ಯಾಪ್ತಿ ಯಲ್ಲಿ 12 ಕೊಳವೆ ಬಾವಿಗಳಿದ್ದು, 7 ಓವರ್‌ ಹೆಡ್‌ ಟ್ಯಾಂಕ್‌ ಗಳಿವೆ. 1 ಸರಕಾರಿ ಬಾವಿ, 9 ಹ್ಯಾಂಡ್‌ ಕೊಳವೆ ಬಾವಿಗಳಿವೆ. ಪೆರ್ಮುದೆ ಪೇಟೆ, ನಿಡ್ಡೇಲ್‌, ಭ್ರಟಕೆರೆ, ಪೆರ್ಮುದೆ ಪದವು, ಮೆಣYಲ್‌, ಕುತ್ತೆತ್ತೂರು, ಮೆಣಸು ಕಾಡು, ಅದರ್ಶನಗರಕ್ಕೆ ಮಳವೂರು ಡ್ಯಾಂನ ನೀರು ಸರಬರಾಜು ಆಗುತ್ತಿದೆ.

ಎಕ್ಕಾರು ಗ್ರಾ.ಪಂ.ವ್ಯಾಪ್ತಿಯಲ್ಲಿ 15 ಕೊಳವೆ ಬಾವಿಗಳಿದ್ದು, ಇದರಲ್ಲಿ ಎರಡು ಉಪಯೋಗವಾಗುತ್ತಿಲ್ಲ. 2 ತೆರೆದ ಬಾವಿ,6 ಓವರ್‌ ಹೆಡ್‌ ಟ್ಯಾಂಕ್‌ನಲ್ಲಿ 5 ಉಪ ಯೋಗವಾಗುತ್ತಿದೆ.ತೆಂಕ ಎಕ್ಕಾರು ಹೆಚ್ಚಿನ ಪ್ರದೇಶ ಹಾಗೂ ಬಡಗ ಎಕ್ಕಾರಿನ ಕೆಲವು ಪ್ರದೇಶಗಳಲ್ಲಿ ಮಳವೂರು ವೆಂಟೆಡ್‌ ಡ್ಯಾಂ ನೀರೇ ಆಶ್ರಯವಾಗಿದೆ.

11 ಕೊಳವೆ ಬಾವಿ
ಜೋಕಟ್ಟೆ ಗ್ರಾ.ಪಂ.ವ್ಯಾಪ್ತಿಯಲ್ಲಿ 11 ಕೊಳವೆ ಬಾವಿಗಳಿದ್ದು,3 ಕೊಳವೆ ಬಾವಿ ಗಳಲ್ಲಿ ನೀರು ಕಡಿಮೆಯಾಗಿದೆ. 5 ಓವರ್‌ ಹೆಡ್‌ ಟ್ಯಾಂಕ್‌ಗಳಿವೆ. ಎಂ.ಪಿ. ರೋಡ್‌,ಅರಿಕೆರೆ,ಪಂಚಾಯತ ಗುಡ್ಡೆ, ಬೊಟ್ಟು ಮನೆ,ನಡುಮನೆ,ಸಿಡಿಗುರಿ,ಮೈಂದ ಗುರಿ ಪ್ರದೇಶಗಳಿಗೆ ಮಳವೂರು ಡ್ಯಾಂನ ನೀರು ಸರಬರಾಜು ಆಗುತ್ತಿದೆ.

ಬಾಳ ಗ್ರಾ.ಪಂ.ವ್ಯಾಪ್ತಿಯಲ್ಲಿ 9 ಕೊಳವೆ ಬಾವಿಗಳಿದ್ದು, 2ರಲ್ಲಿ ನೀರು ಕಡಿಮೆಯಾಗಿದೆ.3 ತೆರೆದ ಬಾವಿ ಇದೆ. 4 ಓವರ್‌ ಹೆಡ್‌ ಟ್ಯಾಂಕ್‌ಗಳಿವೆ. ಮಂಗಳಪೇಟೆ ಹೊಟ್ಟೆ ಕಾಯರ್‌, ಬಾಳ ಪದವು, ಕಳವಾರು ಅಶ್ರಯ ಕಾಲನಿ, ಕುರ್ಸು ಗುಡ್ಡೆ ಕಾಪಿಕಾಡು ಗುಡ್ಡೆ ಪ್ರದೇಶಗಳಿಗೆ ಮಳ ವೂರು ಡ್ಯಾಂ ನೀರು ಸರಬರಾಜು ಆಗುತ್ತಿದೆ.

ಮೂಡುಶೆಡ್ಡೆ ಗ್ರಾ.ಪಂ. ವ್ಯಾಪ್ತಿಯಲ್ಲಿ 6 ಕೊಳವೆ ಬಾವಿ, 3 ತೆರೆದ ಬಾವಿಗಳಿವೆ. ಒಟ್ಟು 6 ಓವರ್‌ ಹೆಡ್‌ ಟ್ಯಾಂಕ್‌ಗಳಿವೆ. ಶಿವನಗರ ಹಾಗೂ ಮಹಾದೇವಿ ಮಂದಿರದ ಪ್ರದೇಶಗಳಿಗೆ ಮಳವೂರು ಡ್ಯಾಂ ನೀರು ಸರಬರಾಜು ಆಗುತ್ತಿದೆ.

ಸೂರಿಂಜೆ ಗ್ರಾ.ಪಂ.ನಲ್ಲಿ ಕುಡಿಯುವ ನೀರಿಗಾಗಿ 2 ಕೊಳವೆ ಬಾವಿ. 3 ತೆರೆದ ಬಾವಿ,4 ಓವರ್‌ ಹೆಡ್‌ ಟ್ಯಾಂಕ್‌ಗಳಿವೆ. ಸೂರಿಂಜೆ, ಕೋಟೆ ಹಾಗೂ ದೇಲಂತ ಬೆಟ್ಟು ಪ್ರದೇಶಗಳಿಗೆ ಹಾಗೂ ಕಂದಾವರ ಗ್ರಾ.ಪಂ.ನ ಸೌಹಾರ್ದನಗರ ಪ್ರದೇಶಗಳಿಗೆ ಮಳವೂರು ವೆಂಟೆಡ್‌ ಡ್ಯಾಂ ನೀರು ಸರಬರಾಜು ಆಗುತ್ತಿದೆ.

ಶುದ್ಧ ನೀರು
ಮಳವೂರು ವೆಂಟೆಡ್‌ ಡ್ಯಾಂ ನೀರು ಸರಬರಾಜಿನಿಂದಾಗಿ ಈ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಯ ಮೂಲಕ ಇತರೆಡೆ ಕಾಣಿಸಿದಷ್ಟು ಕೊಳವೆ ಬಾವಿ, ಬಾವಿಗಳಲ್ಲಿ ನೀರು ಕಡಿಮೆಯಾಗಿಲ್ಲ. ಕೊಳವೆ ಬಾವಿಗಿಂತ ಶುದ್ಧ ನೀರು ಈ ಪ್ರದೇಶಗಳಿಗೆ ಸಿಕ್ಕಿದೆ.ಒಟ್ಟಿನಲ್ಲಿ ಈ ಪ್ರದೇಶಗಳಿಗೆ ಪಲ್ಗುಣಿ ನದಿ ಜೀವನದಿಯಾಗಿದೆ.

ನೀರು ಪೋಲಾಗದಂತೆ ಸೂಚನೆ
ಬಜಪೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ 35 ಕೊಳವೆ ಬಾವಿಗಳಲ್ಲಿದ್ದು, 5ರಲ್ಲಿ ನೀರು ಕಡಿಮೆಯಾಗಿದೆ. 10 ಓವರ್‌ ಹೆಡ್‌ ಟ್ಯಾಂಕ್‌ಗಳಿದ್ದು, ಇಲ್ಲಿ 2 ದಿನಕ್ಕೊಮ್ಮೆ ನೀರು ಸರಬರಾಜಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಇತರ ಪ್ರದೇಶಗಳಿಗೆ ಮಳವೂರು ಡ್ಯಾಂನ ನೀರು ಸರಬರಾಜು ಆಗುತ್ತಿದೆ. ಈಗಾಗಲೇ ಗ್ರಾಮ ಪಂಚಾಯತ್‌ 6 ಪಂಪ್‌ ಅಪರೇಟರ್‌ಗಳಿಗೆ ನೀರು ಪೋಲಾಗದಂತೆ ನೋಡಿ ಕೊಳ್ಳಲು ಸೂಚಿಸಿದೆ.

ನೀರಿನ ಬಳಕೆ ಕಡಿಮೆ
ಮಳವೂರು ವೆಂಟೆಡ್‌ ಡ್ಯಾಂ ನಿರ್ಮಾಣದ ಬಳಿಕ ಈ ಪರಿಸರದಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಈ ಹಿಂದೆ ನದಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿತ್ತು. ಆದರೆ ಡ್ಯಾಂ ನಿರ್ಮಾಣದ ಬಳಿಕ ನೀರಿನ ಸದ್ಬಳಕೆಯಾಗುತ್ತಿದೆ. ಇದರಿಂದಾಗಿ ಕೊಳವೆ ಬಾವಿಗಳ ನೀರಿನ ಬಳಕೆಯೂ ಕಡಿಮೆಯಾಗಿದೆ.

 ನೀರಿನ ಸಮಸ್ಯೆ ಇಲ್ಲ
ಮಳವೂರು ವೆಂಟೆಡ್‌ ಡ್ಯಾಂನ ನೀರು ಇಲ್ಲದೇ ಇರುತ್ತಿದ್ದರೆ ಈ ಬಾರಿ ಜನವರಿ – ಫೆಬ್ರವರಿಯಲ್ಲೇ ನೀರಿನ ಸಮಸ್ಯೆ ಬರು ತ್ತಿತ್ತು. ಈ ಭಾಗದಲ್ಲಿ ಈಗ 450 ಅಡಿ ಆಳವಿರುವ ಕೊಳವೆ ಬಾವಿಗಳು ಮಾತ್ರ ಉಪಯೋಗವಾಗುತ್ತಿದೆ.ಉಳಿದವು ನೀರಿಲ್ಲದೆ ಬತ್ತಿ ಹೋಗಿವೆ. ಮಳವೂರು ಡ್ಯಾಂನ ನೀರು ನಿರಂತರವಾಗಿದ್ದು ಹೆಚ್ಚು ಶುದ್ಧವಾಗಿದೆ.ಗ್ರಾ.ಪಂ.ನ ಹೆಚ್ಚಿನ ಭಾಗಗಳಿಗೆ ಸರಬರಾಜಾಗುತ್ತಿದೆ.ಕೆಲವೆಡೆ ಪೈಪ್‌ಲೈನ್‌ಗಳಾಗದೆ ಇರುವುದರಿಂದ ಕೊಳವೆ ಬಾವಿ ನೀರು ಸರಬರಾಜು ಮಾಡಲಾಗುತ್ತದೆ.ಇದರಿಂದ ಈ ಭಾಗದಲ್ಲಿ ಹೆಚ್ಚಿನ ನೀರಿನ ಸಮಸ್ಯೆ ಈ ಬಾರಿ ಕಾಣಿಸಿಕೊಂಡಿಲ್ಲ.
– ಸುರೇಶ್‌ ಶೆಟ್ಟಿ,
ಅಧ್ಯಕ್ಷರು,ಎಕ್ಕಾರು ಗ್ರಾ.ಪಂ.

ಟಾಪ್ ನ್ಯೂಸ್

1-aaaaaaaaa

Train; ಕೆಟ್ಟು ನಿಂತ ‘ವಂದೇ ಭಾರತ್‌’ ಎಳೆದು ತಂದ ಗೂಡ್ಸ್‌ ರೈಲಿನ ಎಂಜಿನ್‌!

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

uUdupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗUdupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗ

Udupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗ

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Pilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿPilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿ

Pilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿ

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

BC Road ಕಾರು ಅಪಘಾತವಾದ ಸ್ಥಳ ಪರಿಶೀಲಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

BC Road ಕಾರು ಅಪಘಾತವಾದ ಸ್ಥಳ ಪರಿಶೀಲಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Tulu ಲಿಪಿ ಯುನಿಕೋಡ್‌ಗೆ! ಹೊಸ ಮೈಲಿಗಲ್ಲು

Tulu ಲಿಪಿ ಯುನಿಕೋಡ್‌ಗೆ! ಹೊಸ ಮೈಲಿಗಲ್ಲು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

1-aaaaaaaaa

Train; ಕೆಟ್ಟು ನಿಂತ ‘ವಂದೇ ಭಾರತ್‌’ ಎಳೆದು ತಂದ ಗೂಡ್ಸ್‌ ರೈಲಿನ ಎಂಜಿನ್‌!

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Pilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿPilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿ

Pilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.