![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Oct 15, 2022, 12:29 PM IST
ಮಂಗಳೂರು: ಭಾರತೀಯ ಅಂಚೆ ಇಲಾಖೆಯು ಭಾರತದಾದ್ಯಂತ ತನ್ನದೇ ಆದ ಅಖೀಲ ಭಾರತ ರೋಡ್ ಟ್ರಾನ್ಪೋರ್ಟ್ ನೆಟ್ವರ್ಕ್ ಹೊಂದುವತ್ತ ಹೆಜ್ಜೆ ಹಾಕುತ್ತಿದೆ. ಈ ನಿಟ್ಟಿನಲ್ಲಿ ಬುಧವಾರ ರಾತ್ರಿಯಿಂದ ಪ್ರತಿದಿನ ಮಂಗಳೂರು ಅಂಚೆ ಕೇಂದ್ರದಿಂದ ಕಣ್ಣೂರು, ಕಲ್ಲಿಕೋಟೆ, ತೃಶ್ಶೂರು, ಕೊಚ್ಚಿ ಮಾರ್ಗವಾಗಿ ತಿರುವನಂತಪುರಕ್ಕೆ ಪಾರ್ಸೆಲ್ ರವಾನಿಸಲು ತನ್ನದೇ ಆದ ಪಾರ್ಸೆಲ್ ವಾಹನದ ಸೌಲಭ್ಯಕ್ಕೆ ಚಾಲನೆ ನೀಡಲಾಯಿತು. ಇದೇ ಸಮಯ ತಿರುವನಂತಪುರದಲ್ಲೂ ಮಂಗಳೂರು ಕಡೆಗೆ ಹೊರಡುವ ವಾಹನಕ್ಕೆ ಚಾಲನೆ ನೀಡಲಾಗಿದೆ.
ಈ ಸೌಲಭ್ಯದ ಮೂಲಕ ಕೇರಳದ ವಿವಿಧ ಭಾಗಗಳಿಗೆ ಮಂಗಳೂರು, ಪುತ್ತೂರು, ಉಡುಪಿಯಿಂದ ಕಳುಹಿಸಲ್ಪಡುವ ಪಾರ್ಸೆಲ್ಗಳ ತ್ವರಿತ ಸಾಗಾಟ ಮತ್ತು ಡೆಲಿವರಿ ಸಾಧ್ಯವಾಗಲಿದೆ. ಅಲ್ಲದೆ ಕೇರಳದ ಯಾವುದೇ ಊರಿನಿಂದ ಮಂಗಳೂರಿಗೆ ಕಳುಹಿಸಲ್ಪಡುವ ಪಾರ್ಸೆಲ್ಗಳೂ ಕ್ಲಪ್ತ ಸಮಯದಲ್ಲಿ ತಲುಪಲಿವೆ. ಅಂಚೆ ಮೂಲಕ ಕೇರಳ ಕಡೆಗೆ ಪಾರ್ಸೆಲ್ ಕಳುಹಿಸಲು ಇಚ್ಛಿಸುವ ಉದ್ದಿಮೆ ದಾರರು, ಕಾಮರ್ಸ್ ಕಂಪೆನಿಗಳು, ಸಣ್ಣ ಕೈಗಾರಿಕೆದಾರರು ಮಂಗಳೂರು ಅಂಚೆ ವಿಭಾಗದ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಶಂಕರ್ಅವರನ್ನು ಸಂಪರ್ಕಿಸಬಹುದು ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.