ಪಶ್ಚಿಮ ಘಟ್ಟ ಸಂರಕ್ಷಣೆಗೆ ಹಸಿರು ಸೇನೆ ತಯಾರಿ


Team Udayavani, Feb 14, 2018, 10:17 AM IST

14-Feb-1.jpg3_.jpg

ಮಹಾನಗರ: ನಮ್ಮ ಪಶ್ಚಿಮ ಘಟ್ಟವನ್ನು ಉಳಿಸಿಕೊಳ್ಳಲು ನಾವೆಲ್ಲರೂ ಹಸಿರು ಸೈನಿಕರಾದರೆ ಹೇಗೆ? ಒಳ್ಳೆಯದೆ ತಾನೇ. ಇದೇ ಕೆಲಸವನ್ನು ಮಾಡುತ್ತಿದೆ ಸಹ್ಯಾದ್ರಿ ಸಂಚಯ ಬಳಗ. ಬಳಗದ ಸದಸ್ಯರು ‘ಪಶ್ಚಿಮ ಘಟ್ಟ ಸುರಕ್ಷತಾ ಅಭಿಯಾನ’ ಹೆಸರಿನಡಿ ವಿದ್ಯಾರ್ಥಿಗಳಿಗೆ ಪಶ್ಚಿಮ ಘಟ್ಟ ಕುರಿತು ಪಾಠ ಮಾಡುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳನ್ನು ಕಾಡಿನೊಳಗೆ ಕರೆದೊಯ್ದು ವಸ್ತು ಸ್ಥಿತಿ ವಿವರಿಸುವ ನೈಜ ಪಾಠವಿದು.

ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು
2016ರಿಂದ ಆರಂಭವಾದ ಈ ಪಶ್ಚಿಮ ಘಟ್ಟ ಸುರಕ್ಷತಾ ಅಭಿಯಾನದಲ್ಲಿ ದ.ಕ., ಉಡುಪಿ ಹಾಗೂ ಕಾಸರಗೋಡಿನ ಕಾಲೇಜು ಮಕ್ಕಳು ಭಾಗವಹಿಸುತ್ತಿದ್ದಾರೆ. 2016ರಲ್ಲಿ 6 ಕಾಲೇಜು, 2017ರಲ್ಲಿ 14 ಕಾಲೇಜುಗಳು, 2018 ಈವರೆಗೆ 7 ಕಾಲೇಜಿನ ನೂರಾರು ಮಕ್ಕಳು ಇದರ ಅನುಭವ ಪಡೆದಿದ್ದಾರೆ.

ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ನಡೆದ ಅನೇಕ ಹೋರಾಟಗಳಲ್ಲಿ ಜಿಲ್ಲೆಯ ಜನರು ಸ್ತಬ್ಧವಾಗಿದ್ದರು.
ವಿದ್ಯಾರ್ಥಿಗಳೂ ತಣ್ಣಗಿದ್ದರು. ಈ ಹಿನ್ನೆಲೆಯಲ್ಲಿ ಬಳಗವು ಮಕ್ಕಳಲ್ಲಿ ಪರಿಸರ ಪ್ರೇಮ ಬಿತ್ತಲು ಹೊರಟಿತು. ಪ್ರತಿ ಶಾಲಾ ಕಾಲೇಜಿಗೆ ಹೋಗಿ ವಿದ್ಯಾರ್ಥಿಗಳಿಗೆ ಪರಿಸರ ಕುರಿತು ಮಾಹಿತಿ ನೀಡಲಾಯಿತು. ಬಳಿಕ ಚಾರಣ- ಅಧ್ಯಯನದಂಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ನಾವು ಹೀಗೆ ಹೋಗುವಾಗ ಸ್ಥಳೀಯ ಅಧಿಕಾರಿಗಳ ಅನುಮತಿ ಪಡೆಯಲು ಮರೆಯುವುದಿಲ್ಲ ಎನ್ನುತ್ತಾರೆ ದಿನೇಶ್‌ ಹೊಳ್ಳ.

ಎಲ್ಲೆಲ್ಲಿ ಮಾಹಿತಿ?
ಮೊದಲಿಗೆ ಕಾಲೇಜಿಗೆ ತೆರಳಿ ತರಗತಿಯಲ್ಲಿ ಜೀವ ಜಲ, ಪಶ್ಚಿಮ ಘಟ್ಟ , ಪರಿಸರ ಜಾಗೃತಿಯ ಕುರಿತಾಗಿ ತರಗತಿ ನಡೆಸಲಿದೆ. ಬಳಿಕ ಪಶ್ಚಿಮ ಘಟ್ಟಕ್ಕೆ ಕರೆದೊಯ್ದು ವಿವರಿಸಲಾಗುತ್ತದೆ. ಚಾರ್ಮಾಡಿಯ ಜೇನುಕಲ್ಲುಗುಡ್ಡ,
ಕೊಡೆಕಲ್ಲು, ಬಿದಿರುತಳ ಟ್ರೈಬಲ್‌ ವಿಲೇಜ್‌, ಎತ್ತಿನ ಭುಜ, ಸೊಪ್ಪಿನಗುಡ್ಡ, ಶಿರಾಡಿಯ ವೆಂಕಟಗಿರಿ, ಮುಗಿಲಗಿರಿ, ಕಳಸ ಸಮೀಪದ ಹೊರನಾಡುವಿನ ಗಾಳಿಗುಡ್ಡ, ಅಬ್ಬಿನೆತ್ತಿ, ಹಣತೆಬೆಟ್ಟ,ಬಲಿಗೆಖಾನ, ಎಳನೀರು ಘಾಟಿ, ಹಿರಿಮರಿಗುಪ್ಪೆ, ಕೃಷ್ಣಗಿರಿ, ಬಿಸಿಲೆಘಾಟ್‌ ಮೊದಲಾದೆಡೆ ಭೇಟಿ ನೀಡಲಾಗುತ್ತದೆ.

ಹಸಿರು ಸೈನಿಕರು ಬೇಕಾಗಿದ್ದಾರೆ
ದೇಶವನ್ನು ಕಾಯಲು ಗಡಿಯಲ್ಲಿ ಸೈನಿಕರಿರುವಂತೆ ಪಶ್ಚಿಮ ಘಟ್ಟವನ್ನು ಸಂರಕ್ಷಿಸಲು ಹಸಿರು ಸೈನಿಕರ ಆವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನಾವು ಯುವ ಜನತೆಯನ್ನು ಪರಿಸರ ಸಂರಕ್ಷಣಾ ಯೋಧರನ್ನಾಗಿ ಪರಿವರ್ತಿಸಬೇಕಿದೆ.
-ದಿನೇಶ್‌ ಹೊಳ್ಳ

ಅರಣ್ಯಾಧಿಕಾರಿಯಾಗುವ ಗುರಿ
ಪಶ್ಚಿಮ ಘಟ್ಟದ ಬಗ್ಗೆ ಸರಕಾರದ ನಿರ್ಲಕ್ಷ್ಯತನ ಮತ್ತು ಮಾಫಿಯಾಗಳ ಒಡೆತನದ ಬಗ್ಗೆ ಕೇಳಿದ್ದೆ. ಈ ತರಗತಿಯಿಂದ ಸ್ಪಷ್ಟ ಮಾಹಿತಿ ದೊರಕಿತು. ನಮ್ಮ ಬದುಕಿಗೆ ಚೇತನವಾಗಿರುವ ಪಶ್ಚಿಮಘಟ್ಟವನ್ನು ಸಂರಕ್ಷಿಸಲು ಅರಣ್ಯ
ಅಧಿಕಾರಿ ಆಗಬೇಕೆಂದಿರುವೆ.
– ಅಕ್ಷತಾ, ವಿವಿ ಕಾಲೇಜು ಮಂಗಳೂರು 

ಪಶ್ಚಿಮಘಟ್ಟದ ರೋದನಕ್ಕೆ ಕಿವಿಯಾಗಬೇಕು
ಪ್ರಕೃತಿಯ ಕುರಿತು ನನ್ನ ಪ್ರೀತಿ ಮತ್ತು ಗೌರವ ಇಂಥ ಕಾರ್ಯಕ್ರಮ ಪ್ರೇರಣೆ ನೀಡಬಲ್ಲದು. ಪಶ್ಚಿಮಘಟ್ಟದ ರೋದನಕ್ಕೆ ಕಿವಿಯಾಗಿ ನನ್ನಿಂದಾದಷ್ಟು ಒಳಿತು ಮಾಡಬೇಕೆಂಬ ಜಾಗೃತಿ ನನ್ನಲ್ಲಿ ಮೂಡಿದೆ.
ಮಹಾಲಕ್ಷ್ಮೀ, ಭಂಡಾರ್‌ಕಾರ್
   ಕಾಲೇಜು ಕುಂದಾಪುರ

 ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

Tirupati Case; Hurtful work for Hindus by converted Jagan: KS Eshwarappa

Tirupati Case; ಮತಾಂತರಗೊಂಡ ಜಗನ್‌ ರಿಂದ ಹಿಂದೂಗಳಿಗೆ ನೋವುಂಟು ಮಾಡುವ ಕೆಲಸ: ಈಶ್ವರಪ್ಪ

11-bantwala

Bantwala: ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿದ್ದ ಯುವತಿ ನಾಪತ್ತೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

CM Siddaramaiah slams BJP about Ganeshotsav riot

Mysuru; ಬಿಜೆಪಿಯವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಗಲಾಟೆ: ಸಿಎಂ ಸಿದ್ದರಾಮಯ್ಯ ಆರೋಪ

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hampankatta: ಪಾರ್ಕಿಂಗ್‌ ಸಮಸ್ಯೆಗೆ ‘ಮಲ್ಟಿ ಲೆವೆಲ್‌’ ಉತ್ತರ!

Hampankatta: ಪಾರ್ಕಿಂಗ್‌ ಸಮಸ್ಯೆಗೆ ‘ಮಲ್ಟಿ ಲೆವೆಲ್‌’ ಉತ್ತರ!

ಕೊರಗ ಸಮುದಾಯದಿಂದ ಅಹೋರಾತ್ರಿ ಧರಣಿ

Mulki: ಕೊರಗ ಸಮುದಾಯದಿಂದ ಅಹೋರಾತ್ರಿ ಧರಣಿ

Mangaluru: ನೂತನ ಮೇಯರ್‌ ಮನದಾಳ:ಜನಸ್ನೇಹಿ ಆಡಳಿತ, ಸ್ಮಾರ್ಟ್‌ ಸಿಟಿಗೆ ವೇಗ

Mangaluru: ನೂತನ ಮೇಯರ್‌ ಮನದಾಳ:ಜನಸ್ನೇಹಿ ಆಡಳಿತ, ಸ್ಮಾರ್ಟ್‌ ಸಿಟಿಗೆ ವೇಗ

Kinnigoli – Patching work for potholes on Mulki State Highway

Kinnigoli – ಮೂಲ್ಕಿ ರಾಜ್ಯ ಹೆದ್ದಾರಿ ಹೊಂಡ ಗುಂಡಿಗಳಿಗೆ ತೇಪೆ ಕಾರ್ಯ

Ullal: ಹಿರಿಯರ ಬಡಾವಣೆಗೆ ಸೌಲಭ್ಯಗಳೇ ಇಲ್ಲ

Ullal: ಹಿರಿಯರ ಬಡಾವಣೆಗೆ ಸೌಲಭ್ಯಗಳೇ ಇಲ್ಲ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

13-bng

Bengaluru: ನಮ್ಮ ಕ್ಲಿನಿಕ್‌ಗೆ ಸೀಮಿತವಾದ ತಾಯಿ-ಮಗು ಆಸ್ಪತ್ರೆ

Malpe: ಪೊಟ್ಟುಕೆರೆ ಅಭಿವೃದ್ಧಿಪಡಿಸಿದರೆ ಶಾಶ್ವತ ನೀರಿನ ಒರತೆ

Malpe: ಪೊಟ್ಟುಕೆರೆ ಅಭಿವೃದ್ಧಿಪಡಿಸಿದರೆ ಶಾಶ್ವತ ನೀರಿನ ಒರತೆ

Udupi ತಮಿಳುನಾಡಿನ ಎಳನೀರು; ಸ್ಥಳೀಯ ಕಾರ್ಮಿಕರ ಕೊರತೆ

Udupi ತಮಿಳುನಾಡಿನ ಎಳನೀರು; ಸ್ಥಳೀಯ ಕಾರ್ಮಿಕರ ಕೊರತೆ

Bellary; poor food supply; Protest in SC, ST hostel

Bellary; ಕಳಪೆ ಆಹಾರ ಪೂರೈಕೆ; ಎಸ್‌ಸಿ, ಎಸ್ಟಿ ವಸತಿ ನಿಲಯದಲ್ಲಿ ಪ್ರತಿಭಟನೆ

Udupi: ಉಡುಪಿಗೆ ಬರುವುದೆಂದು ವಾರಾಹಿ ನೀರು?; ಶೇ.90 ಕಾಮಗಾರಿ ಪೂರ್ಣ

Udupi: ಉಡುಪಿಗೆ ಬರುವುದೆಂದು ವಾರಾಹಿ ನೀರು?; ಶೇ.90 ಕಾಮಗಾರಿ ಪೂರ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.