ಸಮುದ್ರದಲ್ಲಿ ಮುಳುಗಿರುವ ಪ್ರಿನ್ಸೆಸ್‌ ಮಿರಾಲ್‌ಗೆ “ಆರೆಸ್ಟ್‌’ ಆದೇಶ!

ಹಡಗಿನ ಬಾಕಿ ಪಾವತಿಗಾಗಿ ಹೈಕೋರ್ಟ್‌ ಮೊರೆ ಹೋದ ಯುಎಇ ಸಂಸ್ಥೆ

Team Udayavani, Oct 31, 2022, 8:46 AM IST

ಸಮುದ್ರದಲ್ಲಿ ಮುಳುಗಿರುವ ಪ್ರಿನ್ಸೆಸ್‌ ಮಿರಾಲ್‌ಗೆ “ಆರೆಸ್ಟ್‌’ ಆದೇಶ!

ಮಂಗಳೂರು : ಉಳ್ಳಾಲದ ಬಟ್ಟಪ್ಪಾಡಿ ಬಳಿ ಸಮುದ್ರದಲ್ಲಿ ಮುಳುಗಿರುವ ಪ್ರಿನ್ಸೆಸ್‌ ಮಿರಾಲ್‌ ಹಡಗನ್ನು “ಆರೆಸ್ಟ್‌’ ಮಾಡಬೇಕು!

ರಾಜ್ಯ ಹೈಕೋರ್ಟ್‌ ಹೀಗೊಂದು ಆದೇಶ ನೀಡಿರುವ ವಿಚಾರ ತಿಂಗಳ ಬಳಿಕ ಬಹಿರಂಗಗೊಂಡಿದೆ. ಒಂದೆಡೆ ಹಡಗಿನಲ್ಲಿರುವ ತೈಲ ಹೊರತೆಗೆಯುವುದಕ್ಕೆ ವೇದಿಕೆ ಸಜ್ಜಾಗುತ್ತಿರುವಾಗಲೇ ಹೈಕೋರ್ಟ್‌ನಲ್ಲಿ ನಡೆದ ಈ ಬೆಳವಣಿಗೆಯಿಂದ ಜಿಲ್ಲಾಡಳಿತದ ಯತ್ನ ಹಿನ್ನಡೆ ಕಾಣುವಂತಾಗಿದೆ.

ಯುಎಇಗೆ ಸೇರಿದ ಮೊಂಜಾಸಾ ಡಿಎಂಸಿಸಿ ಎಂಬ ಕಂಪೆನಿಯು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ತನಗೆ ಶಿಪ್‌ ಬಂಕರಿಂಗ್‌ (ತೈಲ ಪೂರೈಕೆ) ಕುರಿತು ತನಗೆ ಬರಬೇಕಾದ 1,71,301 ಅಮೆರಿಕನ್‌ ಡಾಲರ್‌ (ಸುಮಾರು 1.39 ಕೋಟಿ ರೂ.) ಮೊತ್ತ ಬಂದಿಲ್ಲ, ಅದು ಬರುವ ವರೆಗೆ ಈ ಹಡಗನ್ನು ಆರೆಸ್ಟ್‌ ಮಾಡದಿದ್ದರೆ ತನಗೆ ನಷ್ಟ ಉಂಟಾಗಲಿದೆ, ಎನ್‌ಎಂಪಿಎ ವ್ಯಾಪ್ತಿಯಲ್ಲಿರುವ ಈ ಹಡಗನ್ನು ಅದರ ಭಾಗಗಳಾದ ಹಲ್‌, ಗಿಯರ್‌, ಬಂಕರ್‌ ಮಷಿನರಿ, ಫರ್ನಿಚರ್‌ ಸಹಿತ ಆರೆಸ್ಟ್‌ ಮಾಡುವಂತೆ ವಾರಂಟ್‌ ಹೊರಡಿಸಬೇಕು ಹಾಗೂ ಅದನ್ನು ಮಾರಾಟ ಮಾಡಿ ಬರುವ ಮೊತ್ತದಿಂದ ತನ್ನ ನಷ್ಟವನ್ನು ಭರಿಸುವಂತೆ ಆದೇಶಿಸಬೇಕು ಎಂದು ಕೇಳಿಕೊಂಡಿತ್ತು. ಅದರಂತೆ ವಿಚಾರಣೆ ನಡೆಸಿರುವ ಹೈಕೋರ್ಟ್‌ ಕಳೆದ ತಿಂಗಳು ಆದೇಶ ನೀಡಿ ಹಡಗನ್ನು ಆರೆಸ್ಟ್‌ ಮಾಡುವಂತೆ ನವಮಂಗಳೂರು ಬಂದರು ಪ್ರಾಧಿಕಾರಕ್ಕೆ ಆದೇಶ ನೀಡಿದೆ. ಆದೇಶದಲ್ಲಿ ಅಡ್ಮಿರಾಲ್ಟಿ (ಜುರಿಸ್ಟಿಕ್ಷನ್ಸ್‌ ಆ್ಯಂಡ್‌ ಸೆಟ್ಲ ಮೆಂಟ್‌ ಆಫ್‌ ಮೆರಿಟೈಂ ಕ್ಲೇಮ್ಸ್‌) ಕಾಯಿದೆ 2017ಯನ್ನು ಪ್ರಸ್ತಾವಿಸಲಾಗಿದೆ.

ಪ್ರಸ್ತುತ ಎನ್‌ಎಂಪಿಎ ಹೇಳುವ ಪ್ರಕಾರ ಈ ನೌಕೆ ಅದರ ವ್ಯಾಪ್ತಿಯಲ್ಲಿಲ್ಲ; ಬದಲಾಗಿ ಹಳೆ ಬಂದರು (ರಾಜ್ಯ ಸರಕಾರ ಅಧೀನ) ವ್ಯಾಪ್ತಿಯಲ್ಲಿದ್ದು, ಜಿಲ್ಲಾಡಳಿತ ಈ ಕುರಿತು ಕ್ರಮ ಕೈಗೊಳ್ಳಬೇಕಾಗುತ್ತದೆ.

ಇದನ್ನೂ ಓದಿ : ನವೀಕರಣಗೊಂಡ ನಾಲ್ಕೇ ದಿನಕ್ಕೆ ಕುಸಿದು ಬಿದ್ದ ಸೇತುವೆ :132 ಮಂದಿ ಸಾವು, 177 ಮಂದಿಯ ರಕ್ಷಣೆ

ಹೈಕೋರ್ಟ್‌ಗೆ ಮನವಿ ಮಾಡಲು ತೀರ್ಮಾನ
ಹಡಗಿನ ಆರೆಸ್ಟ್‌ ಆದೇಶವೀಗ ಅದರ ತೆರವಿಗಾಗಿ ಮುಂದುವರಿಯುತ್ತಿದ್ದ ನೌಕಾಯಾನ ಮಹಾ ನಿರ್ದೇಶಕರ ಕಚೇರಿ, ದ.ಕ. ಜಿಲ್ಲಾಡಳಿತಕ್ಕೆ ತಾತ್ಕಾಲಿಕ ಆಘಾತ ತಂದೊಡ್ಡಿದೆ.

ಹಡಗಿನಲ್ಲಿರುವ ಸುಮಾರು 220 ಟನ್‌ ತೈಲವು ಸೋರಿಕೆಯಾದರೆ ಸಮುದ್ರ, ಪರಿಸರಕ್ಕೆ ತುಂಬಲಾರದ ನಷ್ಟ, ಅಪಾಯ ತಂದೊಡ್ಡಬಹುದು ಎಂದು ಸರಕಾರಕ್ಕೆ ಪತ್ರ ಬರೆದು, ಸರಕಾರದ ಮೂಲಕ ಹೈಕೋರ್ಟ್‌ಗೆ ತೈಲ ತೆರವಿಗೆ ಅವಕಾಶ ಕೋರಿ ಮನವಿ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಇದಕ್ಕೆ ಮೊದಲು ಹಡಗಿನಲ್ಲಿರುವ ತೈಲ ತೆರವಿಗೆ ಸಾಕಷ್ಟು ಸಿದ್ಧತೆ ನಡೆಸಲಾಗಿತ್ತು. ಹಿಂದೆ ಎರಡು ಸಂಸ್ಥೆಗಳು ಇದರಲ್ಲಿನ ತೈಲ ಹೊರತೆಗೆ ಯುವುದಾಗಿ ಹೇಳಿದ್ದರೂ ಸಾಕಷ್ಟು ಸಿದ್ಧತೆ, ತಂತ್ರಜ್ಞಾನ ಇಲ್ಲದ ಕಾರಣ ಹಿಂಜರಿದಿದ್ದವು. ಈಗ ಮೂರನೇ ಸಂಸ್ಥೆ ಗುಜರಾತ್‌ ಮೂಲದ ಬನ್ಸಾಲ್‌ ಎಂಡೆವರ್ ಅಂತಿಮಗೊಂಡಿದೆ. ಒಂದೆಡೆ ಹವಾಮಾನವೂ ಸೂಕ್ತವಾಗಿರುವುದರಿಂದ ತೈಲ ತೆರವಿಗೆ ಡಿಜಿ ಶಿಪ್ಪಿಂಗ್‌ ಹಾಗೂ ಜಿಲ್ಲಾಡಳಿತ ಶ್ರಮಿಸುತ್ತಿದ್ದವು. ತೈಲ ತೆರವಿಗೆ ಪೂರ್ವಭಾವಿಯಾಗಿ ಅಂಡರ್‌ವಾಟರ್‌ ಸರ್ವೆ ನಡೆಸಿ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು.

ಜೂನ್‌ನಲ್ಲಿ ಮುಳುಗಿದ್ದ ಹಡಗು
ಇದೇ ವರ್ಷ ಜೂ. 21ರಂದು ಉಳ್ಳಾಲ ಬಟ್ಟಪ್ಪಾಡಿ ಸಮುದ್ರದಲ್ಲಿ ಪ್ರಿನ್ಸೆಸ್‌ ಮಿರಾಲ್‌ ಅಪಾಯಕ್ಕೆ ಸಿಲುಕಿತ್ತು. ಅದರಲ್ಲಿ ರಂಧ್ರ ಕಾಣಿಸಿಕೊಂಡು ನೀರು ಒಳಸೇರಿತ್ತು. ಅದರಲ್ಲಿದ್ದ 15 ಸಿರಿಯನ್‌ ನಾವಿಕರನ್ನು ಕೋಸ್ಟ್‌ ಗಾರ್ಡ್‌ ರಕ್ಷಿಸಿತ್ತು. ಆ ಬಳಿಕ ಬಟ್ಟಪ್ಪಾಡಿಯಲ್ಲಿ ಹಡಗಿನ ತಳವು ನೆಲಕ್ಕೆ ತಾಗಿ ನಿಂತಿದ್ದು, ಚಲಿಸುವ ಸಾಧ್ಯತೆ ಇಲ್ಲದೆ ಮುಕ್ಕಾಲು ಭಾಗ ಮುಳುಗಿದ ಸ್ಥಿತಿಯಲ್ಲಿದೆ. ಅದರಲ್ಲಿ 160 ಟನ್‌ ಫರ್ನೆಸ್‌ ಆಯಿಲ್‌ ಹಾಗೂ 60 ಟನ್‌ ಡೀಸೆಲ್‌ ಇರುವುದಾಗಿ ಮಾಹಿತಿ ಇದೆ. ಚೀನದಿಂದ ಲೆಬನಾನ್‌ಗೆ 8,000 ಟನ್‌ ತೂಕದ ಸ್ಟೀಲ್‌ ಕಾಯಿಲ್‌ ಸಾಗಿಸುತ್ತಿದ್ದ ಹಡಗು ಇದಾಗಿತ್ತು.

– ವೇಣುವಿನೋದ್‌ ಕೆ.ಎಸ್‌.

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

0888

Leopard: ಮೂಲ್ಕಿ ಕೊಯ್ಯಾರಿನಲ್ಲಿ ಚಿರತೆ?

1-aaa

Ullal;ಜನಪ್ರತಿನಿಧಿಗಳು ಸೇರಿ ಹಲವರಿಂದ ಅರ್ಜುನ್ ಅಂತಿಮ ದರ್ಶನ

Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು

Mangaluru: ರಾಷ್ಟ್ರೀಯ ಹೆದ್ದಾರಿಯಲ್ಲೇ ಹೊತ್ತಿ ಉರಿದ BMW ಕಾರು… ಪ್ರಯಾಣಿಕರು ಪಾರು

ಮುಕ್ತಿ ಕಾಣದ “ಬ್ಲ್ಯಾಕ್‌ಸ್ಪಾಟ್‌’ಗಳು: ಮತ್ತಷ್ಟು ಹೆಚ್ಚುತ್ತಿರುವ ಅಪಘಾತಗಳು

Mangaluru: ಮುಕ್ತಿ ಕಾಣದ “ಬ್ಲ್ಯಾಕ್‌ಸ್ಪಾಟ್‌’ಗಳು: ಮತ್ತಷ್ಟು ಹೆಚ್ಚುತ್ತಿರುವ ಅಪಘಾತಗಳು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.