ಪ್ರಾಪರ್ಟಿ ಕಾರ್ಡ್‌ ಕಡ್ಡಾಯಗೊಳಿಸುವ ಪ್ರಕ್ರಿಯೆ ಚುರುಕು


Team Udayavani, Oct 30, 2018, 11:51 AM IST

30-october-4.gif

ಮಹಾನಗರ: ಕರಾವಳಿ ಕರ್ನಾಟಕದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಅನುಷ್ಠಾನಗೊಂಡಿರುವ ರಾಜ್ಯ ಸರಕಾರದ ಪ್ರಾಪರ್ಟಿ ಕಾರ್ಡ್‌ (ಆಸ್ತಿ ಮಾಲಕತ್ವದ ದಾಖಲೆ) ಪ್ರಕ್ರಿಯೆ ಚುರುಕುಗೊಂಡಿದೆ. ಆ ಮೂಲಕ ಮುಂದಿನ ವರ್ಷ ಜನವರಿಯಿಂದ ನಗರದಲ್ಲಿಯೂ ಪ್ರಾಪರ್ಟಿ ಕಾರ್ಡ್‌ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವ ಪ್ರಕ್ರಿಯೆಗೆ ಜಿಲ್ಲಾಡಳಿತ ಮುಂದಾಗಿದೆ. 2 ತಿಂಗಳಲ್ಲಿ ಆಸ್ತಿ ದಾಖಲೆಗಳ ಸಂಖ್ಯೆ ದುಪ್ಪಟ್ಟುಗೊಂಡಿದ್ದು, ತಿಂಗಳಿಗೆ 300 ಆಸ್ತಿ ದಾಖಲೆಗಳು ಸಲ್ಲಿಕೆಯಾಗುತ್ತಿವೆ. ದಿನಕ್ಕೆ 50 ಮಂದಿ ಪ್ರಾಪರ್ಟಿ ಕಾರ್ಡ್‌ ಪಡೆದುಕೊಳ್ಳುವುದಕ್ಕೆ ಬರುತ್ತಿದ್ದಾರೆ.

ಮೂಲ ಸೌಕರ್ಯ ಹೆಚ್ಚಿಸಲು ಅನುದಾನಕ್ಕೆ ಮನವಿ
ಪ್ರಾಪರ್ಟಿ ಕಾರ್ಡ್‌ ವಿತರಣೆ ಸಂಬಂಧಪಟ್ಟು ಹೆಚ್ಚುವರಿಯಾಗಿ 15 ಮಂದಿ ಸರ್ವೆಯರ್‌ಗಳನ್ನು ನಿಯುಕ್ತಿಗೊಳಿಸಲಾಗಿದ್ದು, ಒಟ್ಟು 21 ಮಂದಿ ಸರ್ವೆಯರ್‌ಗಳು ಕಾರ್ಯ ನಿರತರಾಗಿದ್ದಾರೆ. ಇವರು ಬಾಕಿ ಇರುವ ಸರ್ವೆಗಳ ಜತೆಗೆ ಮನೆ-ಮನೆಗಳಿಗೆ ತೆರಳಿ ಪ್ರಾಪರ್ಟಿ ಕಾರ್ಡ್‌ ಆವಶ್ಯಕತೆ ಬಗ್ಗೆ ವಿವರಿಸಿ ದಾಖಲೆಪತ್ರಗಳು ನೀಡಲು ಬಾಕಿ ಇರುವವರಿಂದ ಸೂಕ್ತ ದಾಖಲೆಪತ್ರಗಳನ್ನು ಸಂಗ್ರಹಿಸುತ್ತಿದ್ದಾರೆ. ಪ್ರಾಪರ್ಟಿ ಕಾರ್ಡ್‌ ವಿತರಣೆ ಪ್ರಕ್ರಿಯೆಗೆ ಇನ್ನೂ ಹೆಚ್ಚುವರಿಯಾಗಿ 5 ಮಂದಿಯನ್ನು ನಿಯುಕ್ತಿಗೊಳಿಸಿ ತರಬೇತಿ ನೀಡಲಾಗುತ್ತಿದೆ.

ಓರ್ವ ಅಧೀಕ್ಷಕ ಹಾಗೂ 3 ಮಂದಿ ತಹಶೀಲ್ದಾರರು ಸೇರಿ 4 ಮಂದಿ ವಿಚಾರಣಾ ಅಧಿಕಾರಿಗಳಿದ್ದಾರೆ. ಹೆಚ್ಚುವರಿ ಕಂಪ್ಯೂಟರ್‌ ಸೇರಿದಂತೆ ಮೂಲ ಸೌಕರ್ಯಗಳನ್ನು ಹೆಚ್ಚಿಸಲು ಅನುದಾನ ಕೋರಲಾಗಿದೆ ಎಂದು ಪ್ರಾಪರ್ಟಿ ಕಾರ್ಡ್‌ ಯೋಜನಾಧಿಕಾರಿ ಬಿ.ಕೆ. ಕುಸುಮಾಧರ್‌ ತಿಳಿಸಿದ್ದಾರೆ.

ಜನವರಿಯಿಂದ ಕಡ್ಡಾಯ
ಮಂಗಳೂರು ನಗರದಲ್ಲಿ 2012ರ ಎಪ್ರಿಲ್‌ನಲ್ಲಿ ಯೋಜನೆ ಆರಂಭಗೊಂಡಿತ್ತು. ಆದರೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯಗೊಳಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಇದ್ದ ಗೊಂದಲಗಳಿಂದಾಗಿ ಕಾರ್ಡ್‌ ವಿತರಣೆಯಲ್ಲಿ ಹೆಚ್ಚಿನ ಪ್ರಗತಿ ಸಾಧ್ಯವಾಗಿರಲಿಲ್ಲ. ಇದೀಗ ಜಿಲ್ಲಾಡಳಿತ ಇದನ್ನು ಕಡ್ಡಾಯಗೊಳಿಸಲು ಕಾರ್ಯೋನ್ಮುಖವಾಗಿದೆ. ಅಕ್ಟೋಬರ್‌ ನಲ್ಲಿ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರು ಪತ್ರಿಕಾ ಪ್ರಕಟನೆ ನೀಡಿ ಜನವರಿಯಿಂದ ಕಡ್ಡಾಯವಾಗಲಿದೆ ಎಂಬುದಾಗಿ ತಿಳಿಸಿದ್ದರು.

ಆಸ್ತಿಗಳ ದಾಖಲೆ ಪತ್ರಗಳನ್ನು ನೀಡಲು ಮಾಲಕರಿಗೆ ಮೂರು ತಿಂಗಳ ಕಾಲಾವಕಾಶ ನೀಡಿ ಪಿ.ಆರ್‌. ಕಾರ್ಡ್‌ ಪಡೆಯಲು ಜನವರಿಯೊಳಗೆ ದಾಖಲೆಗಳನ್ನು ಒದಗಿಸಬೇಕು ಎಂದು ತಿಳಿಸಿಕೋರಿದ್ದರು. ಈ ಸಂಬಂಧ ಸರಕಾರದ ಆದೇಶಕ್ಕಾಗಿ ಕಾಯಲಾಗುತ್ತಿದ್ದು, ಡಿ.1ರಿಂದಲೇ ನಗರದಲ್ಲಿ ಪ್ರಾಪರ್ಟಿ ಕಾರ್ಡ್‌ ಕಡ್ಡಾಯಗೊಳಿಸುವ ಸಾಧ್ಯತೆ ಇದೆ.

ಪ್ರಾಪರ್ಟಿ ಕಾರ್ಡ್‌ ಪ್ರಕ್ರಿಯೆ
ಅರ್ಬನ್‌ ಪ್ರಾಪರ್ಟಿ ಒನರ್‌ಶಿಪ್‌ ರೆಕಾರ್ಡ್‌ (ನಗರ ಆಸ್ತಿ ಮಾಲಕತ್ವದ ದಾಖಲೆ) ಎಂದು ಕರೆಯಲ್ಪಡುವ ಪ್ರಾಪರ್ಟಿ ಕಾರ್ಡ್‌ ಕಂಪ್ಯೂಟರೀಕೃತ ದಾಖಲೆ ಪತ್ರ. ಆಸ್ತಿಯ ಸ್ವರೂಪ, ಆಸ್ತಿ ದಾಖಲೆಗಳು, ಋಣಭಾರ ಸೇರಿದಂತೆ ಇತರ ಬಾಧ್ಯತೆಗಳು, ಆಸ್ತಿ ನಕ್ಷೆ ವಿವರಗಳನ್ನು ಒಳಗೊಂಡಿರುತ್ತದೆ, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಆಶ್ರಯದಲ್ಲಿ, ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ ನಗರ ಆಸ್ತಿಗಳ ನಕ್ಷೆ ಮತ್ತು ಹಕ್ಕುದಾಖಲೆಗಳನ್ನು ಸಿದ್ಧಪಡಿಸುವ (ಅರ್ಬನ್‌ ಪ್ರಾಪರ್ಟಿ ಒನರ್‌ಶಿಪ್‌ ರೆಕಾರ್ಡ್ಸ್ -ಯುಪಿಒಆರ್‌) ಯೋಜನೆ ಇದಾಗಿದೆ.

ಆಸ್ತಿಗಳಿಗೆ ನೋಟಿಸ್‌ ನೀಡಿ ದಾಖಲೆಪತ್ರಗಳನ್ನು ಸಂಗ್ರಹಿಸಿ ಡಾಟಾ ಎಂಟ್ರಿ ಮತ್ತು ಸ್ಕ್ಯಾನಿಂಗ್, ಅಳತೆ ಹಾಗೂ ನಕ್ಷೆ ತಯಾರಿಸುವುದು, ಆಸ್ತಿಗಳ ಛಾಯಾಚಿತ್ರ ತೆಗೆಯುವುದು, ಮಾಲಕತ್ವದ ದಾಖಲೆಗಳ ಸಂಗ್ರಹಣೆ, ಪರಿಶೀಲನೆ, ಸ್ಕ್ಯಾನಿಂಗ್  ಮತ್ತು ಅಂಕಿ ಅಂಶಗಳ ದಾಖಲೀಕರಣ, ಇಲಾಖೆಯಿಂದ ಮಾಲಕತ್ವದ ತನಿಖಾ ಪ್ರಕ್ರಿಯೆಗಳು ಒಳಗೊಂಡಿದ್ದು ಕರಡು ಪ್ರಾಪರ್ಟಿ ಕಾರ್ಡ್‌ ತಯಾರಿಸಿ ವಿತರಿಸಲಾಗುತ್ತಿದೆ. ಮಾಲಕರು ಅದನ್ನು ಪರಿಶೀಲಿಸಿ ತಿದ್ದುಪಡಿಗಳಿದ್ದರೆ 30 ದಿನಗಳೊಳಗೆ ಮರಳಿಸಿ ಸರಿಪಡಿಸಬೇಕು. ಮಾಲಕರ 10 ಬೆರಳುಗಳ ಬಯೋಮೆಟ್ರಿಕ್‌ ಪಿಂಗರ್‌ಪ್ರಿಂಟ್‌ ಸಂಗ್ರಹಿಸಲಾಗುತ್ತದೆ. ಇದೆಲ್ಲ ನಡೆದು ಪಕ್ಕಾ ಕಾರ್ಡ್‌ ಸಿದ್ಧಗೊಳ್ಳುತ್ತದೆ. ಆಸ್ತಿ ಮಾಲಕರಿಂದ ನಿಗದಿತ ಶುಲ್ಕ ಪಡೆದು ಪಕ್ಕಾ ಕಾರ್ಡ್‌ ವಿತರಿಸಲಾಗುತ್ತದೆ. ಕಾರ್ಡ್‌ ಆಸ್ತಿಯ ಸ್ವರೂಪ, ಆಸ್ತಿ ದಾಖಲೆಗಳು, ಋಣಭಾರ ಸೇರಿದಂತೆ ಇತರ ಬಾಧ್ಯತೆಗಳು, ಆಸ್ತಿ ನಕ್ಷೆ, ವಿಶೇಷ ಸಂಖ್ಯೆ ಹೊಂದಿರುತ್ತದೆ.

 ಶೀಘ್ರ ನೀಡಲು ಮಾಲಕರಿಗೆ ಮನವಿ
ಪ್ರಾಪರ್ಟಿಕಾರ್ಡ್‌ ಪ್ರಕ್ರಿಯೆ ವೇಗ ಪಡೆದುಕೊಂಡಿದೆ. ಈಗಾಗಲೇ ಹೆಚ್ಚುವರಿ ಸಿಬಂದಿಯನ್ನು ನಿಯೋಜಿಸಲಾಗಿದ್ದು ಸರ್ವೆ ಹಾಗೂ ದಾಖಲೆಗಳ ಸಂಗ್ರಹ ಕಾರ್ಯ ಪ್ರಗತಿಯಲ್ಲಿದೆ. ದಾಖಲೆಗಳನ್ನು ನೀಡಲು ಬಾಕಿ ಇರುವ ಆಸ್ತಿಗಳ ಮಾಲಕರು ಇವುಗಳನ್ನು ಶೀಘ್ರ ನೀಡಬೇಕು ಎಂಬುದಾಗಿ ಮನವಿ ಮಾಡಲಾಗಿದೆ.
– ಬಿ.ಕೆ.ಕುಸುಮಾಧರ್‌,
ಪ್ರಾಪರ್ಟಿ ಕಾರ್ಡ್‌ ಯೋಜನಾಧಿಕಾರಿ 

18,380 ಆಸ್ತಿಗಳ ಮಾಲಕರಿಗೆ ಪಿಆರ್‌ ಕಾರ್ಡ್‌ ವಿತರಣೆ
ಪಾಲಿಕೆ ವ್ಯಾಪ್ತಿಯ 32 ಕಂದಾಯ ಗ್ರಾಮಗಳಲ್ಲಿನ 60 ವಾರ್ಡ್‌ಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ. ಪಾಲಿಕೆಯ 32 ಕಂದಾಯ ಗ್ರಾಮಗಳನ್ನು 6 ವಲಯಗಳಾಗಿ ಮತ್ತು 30 ಸೆಕ್ಟರ್‌ಗಳಾಗಿ ವಿಂಗಡಿಸಿದ್ದು ಅಳತೆಗೆ ಒಳಪಟ್ಟ 1,50,581 ಆಸ್ತಿಗಳನ್ನು ಸಮೀಕ್ಷೆ ನಡೆಸಲಾಗಿದೆ. ಈಗಾಗಲೇ ಅ. 27ರ ವರೆಗೆ 77,070 ಆಸ್ತಿಗಳ ದಾಖಲೆಗಳನ್ನು ಸಂಗ್ರಹಿಸಲಾಗಿದ್ದು 31,626 ಆಸ್ತಿಗಳ ಕರಡು ಪಿಆರ್‌ ಕಾರ್ಡ್‌ಗಳನ್ನು ತಯಾರಿಸಲಾಗಿದೆ. 26,220 ಆಸ್ತಿಗಳ ಕರಡು ಪಿಆರ್‌ ಕಾರ್ಡ್‌ ವಿತರಿಸಲಾಗಿದೆ. 23,503 ಅಂತಿಮ ಪಿಆರ್‌ ಕಾರ್ಡ್‌ಗಳು ಸಿದ್ಧಗೊಂಡಿದ್ದು 18,380 ಆಸ್ತಿಗಳ ಅಂತಿಮ ಪಿಆರ್‌ ಕಾರ್ಡ್‌ಗಳನ್ನು ಮಾಲಕರಿಗೆ ವಿತರಿಸಲಾಗಿದೆ.

ವಿಶೇಷ ವರದಿ

ಟಾಪ್ ನ್ಯೂಸ್

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

1

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.