![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jun 5, 2021, 10:41 AM IST
ಸುರತ್ಕಲ್: ಎಂ ಆರ್ ಪಿಎಲ್ ಸೇರಿದಂತೆ ಉದ್ಯಮಗಳಲ್ಲಿನ ಉದ್ಯೋಗಳಲ್ಲಿ ತುಳುನಾಡಿನ ಯುವಜನತೆಗೆ ಆಗುತ್ತಿರುವ ವಂಚನೆಯ ವಿರುದ್ದ, ನ್ಯಾಯಯುತ ಪಾಲಿಗೆ ಆಗ್ರಹಿಸಿ ಶನಿವಾರ ತುಳುನಾಡಿನ ಸಮಾನ ಮನಸ್ಕರಿಂದ (ಜೂನ್ 5) ಮನೆ ಮನೆ ಪ್ರತಿಭಟನೆ ನಡೆಯಿತು.
ಎಂ ಆರ್ ಪಿಎಲ್ ನಲ್ಲಿ ನಡೆದಿರುವ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸುವುದು,ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವುದು ನಮ್ಮ ಪ್ರಧಾನ ಹಕ್ಕೊತ್ತಾಯ. ಎರಡೂ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಈ ಪ್ರತಿಭಟನೆ ನಡೆಯಲಿದೆ. ಸಾವಿರಾರು ಜನತೆ ಸ್ವಪ್ರೇರಣೆಯಲ್ಲಿ ಈ ಆಂದೋಲನದಲ್ಲಿ ಭಾಗಿಯಾದರು.
ಇದನ್ನೂ ಓದಿ: ಅಮ್ಮನ ಪಾಲಿಗೆ ಮಗನೇ ಖಳನಾಯಕ: ವ್ರದ್ಧೆ ತಾಯಿಯನ್ನು ಅಮಾನುಷವಾಗಿ ನಡೆಸಿಕೊಂಡ ಪುತ್ರ
“ತುಳುನಾಡ ಅಭಿವೃದ್ದಿಡ್ ತುಳುವಪ್ಪೆ ಜೋಕುಲೆಗ್ ಮಲ್ಲಪಾಲ್” ಎಂಬ ಘೋಷ ವ್ಯಾಕದಡಿ ಪ್ರತಿಭಟನೆ ನಡೆಯುತ್ತಿದೆ. ಡಿವೈಎಫ್ಐ ಸಹಿತ ವಿವಿಧ ಸಂಘಟನೆಗಳು ನೇತೃತ್ವ ವಹಿಸಿದೆ. ಮಾಜಿ ಶಾಸಕರು,ಕಾರ್ಪೊರೇಟರ್ ಗಳು ,ವಿವಿಧ ಸಂಘ ಸಂಸ್ಥೆಗಳು ಈ ಹೋರಾಟಕ್ಕೆ ಬೆಂಬಲ ನೀಡಿವೆ
You seem to have an Ad Blocker on.
To continue reading, please turn it off or whitelist Udayavani.