Rain ದಕ್ಷಿಣ ಕನ್ನಡ: ನಾಲ್ಕು ದಿನ ಎಲ್ಲೋ ಅಲರ್ಟ್
Team Udayavani, Jul 4, 2024, 12:16 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದ್ದು, ಜಿಲ್ಲಾದ್ಯಂತ ಬುಧವಾರ ಸಾಧಾರಣ ಮಳೆಯಾಗಿದೆ. ಉಳಿದಂತೆ ಮೋಡದಿಂದ ಕೂಡಿದ ವಾತಾವರಣ ಇತ್ತು. ಮಂಗಳೂರಿನಲ್ಲಿ ಸಂಜೆ ವೇಳೆ ಉತ್ತಮ ಮಳೆಯಾಗಿದೆ.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಜು.4ರಿಂದ 7ರ ವರೆಗೆ “ಎಲ್ಲೋ ಅಲರ್ಟ್’ ಘೋಷಿಸಲಾಗಿದೆ. ಈ ವೇಳೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಮಂಗಳೂರಿನಲ್ಲಿ 29.9 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.9 ಡಿ.ಸೆ. ಏರಿಕೆ ಮತ್ತು 24.6 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1.6 ಡಿ.ಸೆ. ಏರಿಕೆ ಕಂಡಿತ್ತು.
ಉಡುಪಿಯ ಹಲವೆಡೆ ಧಾರಾಕಾರ ಮಳೆ
ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ಹಾಗೂ ಬುಧವಾರ ಹಲವೆಡೆ ಧಾರಾಕಾರ ಮಳೆಯಾಗಿದ್ದು, 27 ಮನೆಗಳಿಗೆ ಹಾನಿಯಾಗಿದೆ. ಕುಂದಾಪುರ ತಾಲೂಕಿನ ಬೀಜಾಡಿ, ಕೂರ್ಗಿ, ಕೆದೂರು, ಉಡುಪಿ ತಾಲೂಕಿನ ಕಡೆಕಾರು, ಶಿವಳ್ಳಿ, ಪುತ್ತೂರು, ಬ್ರಹ್ಮಾವರದಲ್ಲಿ ಹೊಸೂರು, ಯಡ್ತಾಡಿ, ಕರ್ಜೆ ಭಾಗದಲ್ಲಿ ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದೆ. ಕುಂದಾಪುರದ ಕುಳಂಜೆ ಗ್ರಾಮದಲ್ಲಿ ಅಡಕೆ, ಜಾನುವಾರು ತೋಟಗಳಿಗೆ ಹಾನಿ ಸಂಭವಿಸಿದೆ.
ಬುಧವಾರ ಇಡೀ ದಿನ ಮಣಿಪಾಲ, ಉಡುಪಿ, ಮಲ್ಪೆ, ಬ್ರಹ್ಮಾವರ, ಕಾಪು ಸುತ್ತಮುತ್ತಲಿನ ಪರಿಸರದಲ್ಲಿ ಬಿಸಿಲು-ಮೋಡ ಕವಿದ ವಾತಾವರಣದ ನಡುವೆ ಬಿಟ್ಟುಬಿಟ್ಟು ಮಳೆ ಸುರಿದಿದೆ. ಗಾಳಿ ಮಳೆಯಿಂದಾಗಿ ಹಲವೆಡೆ ವಿದ್ಯುತ್ ಕಂಬಗಳಿಗೆ ಹಾನಿ ಸಂಭವಿಸಿದ್ದು, ಗಂಟೆಗಟ್ಟಲೆ ವಿದ್ಯುತ್ ವ್ಯತ್ಯಯವಾಗಿತ್ತು.
ಜಿಲ್ಲೆಯಲ್ಲಿ 60 ವಿದ್ಯುತ್ ಕಂಬ, 5 ವಿದ್ಯುತ್ ಪರಿವರ್ತಕಗಳಿಗೆ ಹಾನಿ ಸಂಭವಿಸಿದೆ. ಕಾರ್ಕಳ 20.1, ಕುಂದಾಪುರ 50.0, ಉಡುಪಿ 26.4, ಬೈಂದೂರು 34.3, ಬ್ರಹ್ಮಾವರ 30.4, ಕಾಪು 14.8, ಹೆಬ್ರಿ 42.4 ಮಿ. ಮೀ. ಮಳೆಯಾಗಿದ್ದು, 34. 0 ಮಿ. ಮೀ. ಸರಾಸರಿ ಮಳೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CC Camera ದೃಶ್ಯಾವಳಿ; ಫೂರೆನ್ಸಿಕ್ ವರದಿ ಸಾಕ್ಷಿಯಾಗಿಸಿ ಶಿಕ್ಷೆ ವಿಧಿಸಿದ ನ್ಯಾಯಾಲಯ
Yakshagana ಮುಮ್ಮೇಳದ ಸವ್ಯಸಾಚಿ ಕುಂಬ್ಳೆ ಶ್ರೀಧರ್ ರಾವ್
Mangaluru ವಸತಿ ಯೋಜನೆ: 4 ವರ್ಷಗಳಿಂದ ದ.ಕ.ಕ್ಕೆ ಮನೆಯೇ ಸಿಕ್ಕಿಲ್ಲ!
“Dengue ಪರೀಕ್ಷೆಗೆ ಹೆಚ್ಚು ಶುಲ್ಕ ಪಡೆದಲ್ಲಿ ಕ್ರಮ’: ಸಚಿವ ದಿನೇಶ್ ಗುಂಡೂರಾವ್
Dakshina Kannada ಡೆಂಗ್ಯೂ ಹೆಚ್ಚಳ; ಲಾರ್ವಾ ಸಮೀಕ್ಷೆಗೆ ಆದ್ಯತೆ
MUST WATCH
ಹೊಸ ಸೇರ್ಪಡೆ
“Symphony Of The Sea’: 21ನೇ ಶತಮಾನದ ವಿಸ್ಮಯ, ಅತೀ ದೊಡ್ಡ ಹಡಗು
ಒಮ್ಮತದ ಸಂಬಂಧದಲ್ಲಿ POCSO ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ: ಹೈಕೋರ್ಟ್
TMC ಹಿರಿಯ ನಾಯಕ, ಮಾಜಿ ರೈಲ್ವೆ ಸಚಿವ ಮುಕುಲ್ ರಾಯ್ ಆರೋಗ್ಯ ಸ್ಥಿತಿ ಗಂಭೀರ
LS poll results ಆಪ್ ಸರಕಾರ ತೆಗೆದುಹಾಕಲು ಉತ್ಸಾಹ ಹೆಚ್ಚಿಸಿದೆ: ವೀರೇಂದ್ರ ಸಚ್ದೇವ್
Jigar movie review; ಆ್ಯಕನ್ ಡ್ರಾಮಾದಲ್ಲೊಂದು ಪ್ರೇಮ್ ಕಹಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.