Rain ಕರಾವಳಿಯ ಕೆಲವೆಡೆ ಮಳೆ; ಕಾಸರಗೋಡು ಜಿಲ್ಲೆಯಲ್ಲಿ ಸಿಡಿಲಿನಿಂದ ಹಾನಿ
Team Udayavani, Nov 4, 2023, 10:51 PM IST
ಮಂಗಳೂರು/ಕಾಸರಗೋಡು: ದಕ್ಷಿಣ ಕನ್ನಡ, ಕಾಸರಗೋಡು, ಜಿಲ್ಲೆಯ ಕೆಲವು ಕಡೆಗಳಲ್ಲಿ ಶನಿವಾರ ಮಳೆಯಾಗಿದೆ.
ಶುಕ್ರವಾರ ರಾತ್ರಿ ಗುಡುಗು, ಮಳೆಯಿಂದ ಕಾಸರಗೋಡು ಜಿಲ್ಲೆಯ ವಿವಿಧೆಡೆ ಹಾನಿ ಸಂಭವಿಸಿದೆ. ಪರಪ್ಪದಲ್ಲಿ ಮನೆಗೆ ಸಿಡಿಲು ಬಡಿದು ಇಬ್ಬರು ಗಾಯಗೊಂಡಿದ್ದಾರೆ. ಉಪ್ಪಳ ಅಂಬಾರು ಕೃಷ್ಣನಗರದಲ್ಲಿ ಮೊಹಮ್ಮದಲಿ ಅವರ
ತೆಂಗಿನ ಮರಕ್ಕೆ ಸಿಡಿಲು ಬಡಿದು ಸುಟ್ಟು ಹೋಗಿದೆ. ಮನೆಯಲ್ಲಿದ್ದ ಪತ್ನಿ ನಜೀಮ ಆಘಾತ ದಿಂದಾಗಿ ಕುಸಿದಿದ್ದಾರೆ. ಮನೆಯ ವಯರಿಂಗ್ ಹಾನಿಗೊಂಡಿದೆ. ಕಾಂಕ್ರೀಟ್ ಮನೆಯ ಗೋಡೆ ಬಿರುಕು ಬಿಟ್ಟಿದೆ. ಉಪ್ಪಳ ಬಸ್ ಏಜೆಂಟ್ ಸುಕುಮಾರ ಅವರ ಮನೆಯ ಇನ್ವರ್ಟರ್ ಹಾಗೂ ಬಲುºಗಳು ಹಾನಿಗೀಡಾಗಿವೆ. ಮುಟ್ಟಂ ಬೇರಿಕೆಯ ಜಾನಕಿ ಅವರ ಮನೆ ಬಳಿಯ ತೆಂಗಿನ ಮರಕ್ಕೆ ಸಿಡಿಲು ಬಡಿದು ಉರಿದಿದೆ.
ಸಿಡಿಲು ಬಡಿದು ಹಾನಿ
ಕೆದಂಬಾಡಿ ಗ್ರಾಮದ ಕನ್ನಡಮೂಲೆಯಲ್ಲಿ ಶುಕ್ರವಾರ ರಾತ್ರಿ ಸಿಡಿಲು ಬಡಿದು ಭಾಸ್ಕರ ರೈ ಅವರ ಮನೆಗೆ ಹಾನಿ ಸಂಭವಿಸಿದೆ. ಭಾಸ್ಕರ ರೈಸ್ವಲ್ಪ ಕಾಲ ಅಸ್ವಸ್ಥರಾಗಿದ್ದಾರೆ. ವಿದ್ಯುತ್ ಪರಿಕರ ಸುಟ್ಟು ಹೋಗಿವೆ. ಮನೆಗೆ ಹಾನಿಯಾಗಿದೆ.
ನೆಲ್ಯಾಡಿ ಮತ್ತು ಸುತ್ತಮುತ್ತ ಶುಕ್ರವಾರ ಭಾರೀ ಸಿಡಿಲಬ್ಬರದ ಮಳೆಯಿಂದಾಗಿ ಕೃತಕ ನೆರೆಯುಂಟಾಗಿದೆ. ಮಣ್ಣಗುಂಡಿಯ ರಸ್ತೆಯಲ್ಲಿ ನೆರೆ ನೀರು ಹರಿದು ಮನೆಯೊಂದಕ್ಕೆ ನೆರೆ ನೀರು ನುಗ್ಗಿ ಹಾನಿಯುಂಟಾಗಿದೆ. ಮಳೆ ನೀರಿಗೆ ಕೊಚ್ಚಿ ಕೊಂಡು ಬಂದ ಕಾಡಿನಲ್ಲಿ ಬಿದ್ದಿದ್ದ ಮರಗಳ ರಾಶಿ ಸಣ್ಣಂಪಾಡಿ ಕಿರು ಸೇತುವೆಯಲ್ಲಿ ಸಿಲುಕಿಕೊಂಡು ನೀರಿನ ಸರಾಗ ಹರಿಯುವಿಕೆಗೆ ತೊಡಕುಂಟು ಮಾಡಿತ್ತು.
ಉಳಿದಂತೆ ಕರಾವಳಿಯಲ್ಲಿ ಬಿಸಿಲ, ಮೋಡದ ವಾತಾವರಣವಿತ್ತು. ಸೆಕೆಯ ಧಗೆ ಹೆಚ್ಚಿತ್ತು. ಕರಾವಳಿಯಲ್ಲಿ ಹಿಂಗಾರು ಮಳೆ ಮುಂದು ವರಿಯುವ ಸಾಧ್ಯತೆಯಿದ್ದು, ಹವಾಮಾನಇಲಾಖೆ 2 ದಿನ ಎಲ್ಲೋ ಅಲರ್ಟ್ ಘೋಷಿಸಿದೆ. ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 23.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.