![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 18, 2018, 2:43 PM IST
ಮಹಾನಗರ: ಮಾರುತಿ ಭೋಯಿ ಅವರು ಮೇ 9ರಂದು ಮಂಗಳೂರಿನ ಪ್ರಾದೇಶಿಕ ಭವಿಷ್ಯನಿಧಿ ಕಚೇರಿಯಲ್ಲಿ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತ ಗ್ರೇಡ್ 1 ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
ಅವರು 1997ನೇ ಬ್ಯಾಚ್ ಭವಿಷ್ಯನಿಧಿ ಸಂಘಟನೆಯ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದು ಆಡಳಿತಾತ್ಮಕ ಹಾಗೂ ಕಾರ್ಯನಿರ್ವಹಣಾ ಅನುಭವ ಹೊಂದಿದ್ದಾರೆ. ಅವರು ಭವಿಷ್ಯನಿಧಿ ಸಂಘಟನೆಯ ಕೊಚ್ಚಿನ್, ಬೆಂಗಳೂರು, ನಿಜಾಮಾ ಬಾದ್, ಗುವಾಹಟಿ, ಸೇಲಂ, ಉಡುಪಿ, ವೆಲ್ಲೂರು, ಕಲಬುರ್ಗಿ ಹಾಗೂ ಕಾನ್ಪುರ ಪ್ರಾದೇಶಿಕ ಕಚೇರಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಮಂಗಳೂರಿನ ಪ್ರಾದೇಶಿಕ ಕಚೇರಿ ಯು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯನ್ನು ಹೊಂದಿದ್ದು ಈ ಪ್ರದೇಶದ ಭವಿಷ್ಯನಿಧಿಗೆ ಸಂಬಂಧಪಟ್ಟ ಸೇವೆ ಹಾಗೂ ಕುಂದುಕೊರತೆಗಳಿಗಾಗಿ ಮಾಲಕರು, ಕಾರ್ಮಿಕರು ಹಾಗೂ ಪಿಂಚಣಿದಾರರು ಕಚೇರಿ ಸಮಯದಲ್ಲಿ ಹಾಗೂ ಇಮೇಲ್ [email protected] ಮೂಲಕ ಸಂಪರ್ಕಿಸಬಹುದು.
You seem to have an Ad Blocker on.
To continue reading, please turn it off or whitelist Udayavani.