Mangaluru ಶಾಲಾ ಮಕ್ಕಳ ಸಾಗಾಟ ವಾಹನಗಳಿಗೆ “ಸ್ಕೂಲ್‌ ಕ್ಯಾಬ್‌’ ನೋಂದಣಿ ಕಡ್ಡಾಯ

ಮಕ್ಕಳ ಸುರಕ್ಷಿತ ಸಂಚಾರ ಉದ್ದೇಶಕ್ಕೆ ಕಾಯ್ದೆಯಲ್ಲಿ ತಿದ್ದುಪಡಿ

Team Udayavani, Jul 11, 2024, 7:30 AM IST

Mangaluru ಶಾಲಾ ಮಕ್ಕಳ ಸಾಗಾಟ ವಾಹನಗಳಿಗೆ “ಸ್ಕೂಲ್‌ ಕ್ಯಾಬ್‌’ ನೋಂದಣಿ ಕಡ್ಡಾಯ

ಮಂಗಳೂರು: ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಮತ್ತು ವಾಪಸ್‌ ಮನೆಗೆ ಬಿಡುವ ಖಾಸಗಿ ವಾಹನಗಳಲ್ಲಿ ಮಕ್ಕಳ ಸುರಕ್ಷೆಗೆ ಸಂಬಂಧಿಸಿ ಸರಕಾರ ಮಹತ್ವದ ನಿರ್ಧಾರ ವೊಂದನ್ನು ತೆಗೆದುಕೊಂಡಿದೆ. ಮಕ್ಕಳನ್ನು ಕೊಂಡೊಯ್ಯುವ ವಾಹನಗಳು ಇನ್ಮುಂದೆ ಸಾರಿಗೆ ಪ್ರಾಧಿಕಾರದಲ್ಲಿ “ಸ್ಕೂಲ್‌ ಕ್ಯಾಬ್‌’ ಎಂದು ನೋಂದಣಿ ಮಾಡುವುದು ಕಡ್ಡಾಯ.

ಕರ್ನಾಟಕ ಮೋಟಾರು ವಾಹನ (ಶಾಲಾ ಮಕ್ಕಳ ಸಾಗಾಟ ಮಾಡುವ ವಾಹನಗಳಿಗೆ ನಿಯಮಾವಳಿ) ಕಾಯ್ದೆ 2012 (ತಿದ್ದುಪಡಿ) ಕಾಯ್ದೆ 2024ರಡಿ ಈ ಹೊಸ ಆದೇಶ ಹೊರಡಿಸಲಾಗಿದೆ. ವಾಹನದ ಮಾಲಕರು ಅಥವಾ ಚಾಲಕರು ಶಾಲಾ ಮುಖ್ಯಸ್ಥರಿಂದ ವಾಹನದ ವಿವರ, ಚಾಲಕರ ವಿವರ ಮತ್ತು ವಿದ್ಯಾರ್ಥಿಗಳ ವಿವರವನ್ನು ಒಳಗೊಂಡ ಪತ್ರವನ್ನು ಪಡೆದು ನೋಂದಣಿ ಪ್ರಾಧಿಕಾರದ ಮುಂದೆ ಹಾಜರುಪಡಿಸಿ, “ಸ್ಕೂಲ್‌ ಕ್ಯಾಬ್‌’ ಎಂದು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ತಿದ್ದುಪಡಿ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿಂದೆ “ಕಾಂಟ್ರಾಕ್ಟ್ ಕ್ಯಾರೇಜ್‌’
ಕರ್ನಾಟಕ ಮೋಟಾರು ವಾಹನ (ಶಾಲಾ ಮಕ್ಕಳ ಸಾಗಾಟ ಮಾಡುವ ವಾಹನಗಳಿಗೆ ನಿಯಮಾವಳಿ) ಕಾಯ್ದೆ 2012ರ ಸೆಕ್ಷನ್‌ 74ರ ಅಡಿಯಲ್ಲಿ ನೀಡಲಾದ “ಕಾಂಟ್ರಾಕ್ಟ್ ಕ್ಯಾರೇಜ್‌ ಪರ್ಮಿಟ್‌’ ಹೊಂದಿದ್ದರೆ ಅಂತಹ ವಾಹನಗಳನ್ನು ಶಾಲಾ ಮಕ್ಕಳನ್ನು ಸಾಗಿಸಲು ಬಳಸಬಹುದಾಗಿತ್ತು. ಆದರೆ “ಬಿಳಿ ನಂಬರ್‌ ಪ್ಲೇಟ್‌’ ಹೊಂದಿರುವ ಖಾಸಗಿ ವಾಹನಗಳಲ್ಲೂ ಮಕ್ಕಳನ್ನು ಸಾಗಿಸುವುದು, ಮಕ್ಕಳ ಸುರಕ್ಷೆಗೆ ಆದ್ಯತೆ ನೀಡದಿರುವುದು ಮೊದಲಾದ ಕಾರಣಗಳಿಂದಾಗಿ ಸಾಕಷ್ಟು ಅವಘಡ ಗಳು ಸಂಭವಿಸುತ್ತಿದ್ದವು. ಆದ್ದರಿಂದ ಸರಕಾರ ಕಾಯ್ದೆ ತಿದ್ದುಪಡಿಗೆ ಮುಂದಾಗಿದೆ.

“ಸ್ಕೂಲ್‌ ಕ್ಯಾಬ್‌ ಸುರಕ್ಷಾ ಸಮಿತಿ’ ಕಡ್ಡಾಯ
ಕಾಯ್ದೆಯಡಿ ಪ್ರತಿ ಶಾಲೆಯಲ್ಲೂ ಸ್ಕೂಲ್‌ ಕ್ಯಾಬ್‌ ಸುರಕ್ಷಾ ರಚನೆ ಕಡ್ಡಾಯ ಮಾಡಲಾಗಿದೆ. ಮಕ್ಕಳ ಸುರಕ್ಷೆ ಕುರಿತಂತೆ ನಿಗಾ ವಹಿಸುವ ಜವಾಬ್ದಾರಿ ಸಮಿತಿಯದ್ದಾಗಿದೆ. ವಾಹನದ ಬಾಡಿಗೆ, ನಿಲುಗಡೆ ಸ್ಥಳಗಳನ್ನು ಸಮಿತಿಯೇ ಅಂತಿಮಪಡಿಸಬೇಕು. ಸಮಿತಿಯಲ್ಲಿ ವಾಹನಗಳ ಚಾಲಕ ಅಥವಾ ಮಾಲಕರು ಮತ್ತು ಹೆತ್ತವರು ಇರುವುದು ಕಡ್ಡಾಯ. ವಾಹನದ ನೋಂದಣಿ ಪ್ರಮಾಣಪತ್ರ, ಫಿಟೆ°ಸ್‌ ಸರ್ಟಿಫಿಕೆಟ್‌, ವಿಮೆ, ಪರ್ಮಿಟ್‌, ಮಾಲಿನ್ಯ ಪ್ರಮಾಣಪತ್ರ, ಚಾಲಕನ ಚಾಲನಾ ಪರವಾನಿಗೆ, ಅಗ್ನಿ ಶಮನ ಸಿಲಿಂಡರ್‌, ಪ್ರಥಮ ಚಿಕಿತ್ಸೆ ಕಿಟ್‌ ಸಹಿತ ಎಲ್ಲ ರೀತಿಯ ಸುರಕ್ಷಾ ಕ್ರಮಗಳು ಇರುವುದನ್ನು ಸಮಿತಿ ಖಾತರಿಪಡಿಸಿಕೊಳ್ಳಬೇಕು.

ಕೆಲವು ನಿಬಂಧನೆಗಳು
– ವಾಹನದಲ್ಲಿ ಗರಿಷ್ಠ ವೇಗ 40 ಕಿ.ಮೀ.ಗೆ ಅನ್ವಯಿಸುವಂತೆ ಸ್ಪೀಡ್‌ ಗವರ್ನರ್‌ ಅಳವಡಿಸಬೇಕು.
– 15 ವರ್ಷಗಳಿಗಿಂತ ಹಳೆಯ ವಾಹನಗಳನ್ನು ಉಪಯೋಗಿಸುವಂತಿಲ್ಲ.
– ವಾಹನ ಹಳದಿ ಬಣ್ಣ ಹೊಂದಿರಬೇಕು. ಜತೆಗೆ ಸ್ಕೂಲ್‌ ಕ್ಯಾಬ್‌- ಶಾಲಾ ವಾಹನ ಎಂದು ಬರೆದಿರಬೇಕು.
– ವಾಹನದ ಆಸನ ವ್ಯವಸ್ಥೆಯನ್ನು ಬದಲಾಯಿಸುವಂತಿಲ್ಲ.
– ಸಂಚರಿಸುವ ಮಕ್ಕಳ ಸಂಪೂರ್ಣ ವಿವರ ವಾಹನದಲ್ಲಿ ಇರಬೇಕು.
– 12 ವರ್ಷಗಳ ಕೆಳಗಿನ ಮಕ್ಕಳಾಗಿದ್ದರೆ ಆಸನ ಸಾಮರ್ಥ್ಯದ 1.5 ಪಟ್ಟು ಮಕ್ಕಳನ್ನು ಕರೆದುಕೊಂಡು ಹೋಗಬಹುದು.

ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ!
ಹೊಸ ಆದೇಶದಂತೆ ಒಂದು ಬಾರಿ “ಸ್ಕೂಲ್‌ ಕ್ಯಾಬ್‌’ ಆಗಿ ನೋಂದಣಿಯಾದ ವಾಹನವನ್ನು ವಿದ್ಯಾರ್ಥಿಗಳ ಸಾಗಾಟ ಹೊರತು ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ವಾಹನದ ಬಣ್ಣವನ್ನೂ ಬದಲಾಯಿಸಬೇಕಾಗಿರುವುದರಿಂದ ರಜಾ ದಿನಗಳಲ್ಲಿ ಬೇರೆ ಬಾಡಿಗೆಯನ್ನೂ ಮಾಡುವಂತಿಲ್ಲ. ಹಾಗಾಗಿ ಎಷ್ಟು ಮಂದಿ “ಸ್ಕೂಲ್‌ ಕ್ಯಾಬ್‌’ ಆಗಿ ಪರಿವರ್ತಿಸಲು ಮುಂದೆ ಬರುತ್ತಾರೆ ಎಂದು ಮುಂದಿನ ದಿನಗಳಲ್ಲಷ್ಟೇ ಗೊತ್ತಾಗಲಿದೆ ಎನ್ನುತ್ತಾರೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್‌ ಮಲ್ಲಾಡ್‌.

ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನಗಳನ್ನು ಇನ್ಮುಂದೆ “ಸ್ಕೂಲ್‌ ಕ್ಯಾಬ್‌’ ಎಂದು ನೋಂದಣಿ ಮಾಡುವುದು ಕಡ್ಡಾಯವಾಗಿದೆ. ಈ ಬಗ್ಗೆ ಸರಕಾರ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿ ಆದೇಶ ನೀಡಿದೆ. ಈಬಗ್ಗೆ ಶೀಘ್ರ ಶಾಲಾ ಮುಖ್ಯಸ್ಥರು, ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ಪದಾಧಿಕಾರಿಗಳ ಸಭೆ ನಡೆಸಿ ಸೂಕ್ತ ಸೂಚನೆಗಳನ್ನು ನೀಡಲಾಗುವುದು.
– ಶ್ರೀಧರ್‌ ಮಲ್ಲಾಡ್‌
ಪ್ರಾದೇಶಿಕ ಸಾರಿಗೆ ಅಧಿಕಾರಿ, ಮಂಗಳೂರು.

– ಭರತ್‌ ಶೆಟ್ಟಿಗಾರ್‌

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Kulai: ಬೃಹತ್‌ ಟ್ರಕ್‌ ಓಡಾಟದಿಂದ ರಸ್ತೆಗೆ ಹಾನಿ

10

Lalbagh: ಪಾಲಿಕೆ ಚುನಾವಣೆ ಸನ್ನಿಹಿತ; ಮೀಸಲಾತಿಯದೇ ಆತಂಕ!

7–ullala

Ullala: ಇನ್ಸ್‌ಪೆಕ್ಟರ್ ಕೊಠಡಿಯೊಳಗೆಯೇ ಹಿಂದೂ ಸಂಘಟನೆ ಮುಖಂಡನಿಗೆ ಮುಸ್ಲಿಂ ಯುವಕ ಹಲ್ಲೆ

7

Mangaluru: ನಿತ್ಯ ಟ್ರಾಫಿಕ್‌ ಜಾಮ್‌ ಗೋಳು; ವಾಹನ ಸವಾರರ ಪರದಾಟ

Crime

Mangaluru: ಬಸ್‌ ನಿರ್ವಾಹಕನ ಕೊಲೆ; ಆರೋಪಿಗಳ ಸುಳಿವು ಲಭ್ಯ?

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.