ಮಹಾ ಮಳೆಗೆ ನಲುಗಿದ ನಗರದ ರಸ್ತೆಗಳು


Team Udayavani, Aug 20, 2018, 10:51 AM IST

20-agust-3.jpg

ಮಹಾನಗರ: ಕೆಲವೇ ದಿನಗಳಲ್ಲಿ ಶ್ರೀ ಕೃಷ್ಣಾಷ್ಟಮಿ, ಶ್ರೀ ಗಣೇಶ ಚತುರ್ಥಿ ಸಂಭ್ರಮಾಚ ರಣೆ ನಡೆಯಲಿದೆ. ಆದರೆ ನಗರದ ರಸ್ತೆಗಳು ಮಾತ್ರ ಮಹಾಮಳೆ ಯಿಂದಾಗಿ ನಲುಗಿ ಹೋಗಿದ್ದು,ಹಬ್ಬಗಳ ಮೆರವಣಿಗೆ ಸಾಗಲು ಕೂಡ ಸಂಕಷ್ಟ ಪಡುವ ಪರಿಸ್ಥಿತಿ ನಿರ್ಮಾಣ ವಾಗಿದೆ.

ಹಬ್ಬಗಳು ಎದುರುಗೊಳ್ಳುತ್ತಿದ್ದಂತೆ, ರಸ್ತೆಯಲ್ಲಿ ಮೆರವಣಿಗೆ ಗೌಜಿ ಇರುವ ಕಾರಣದಿಂದ ಮಳೆಗಾಲದ ಕೊನೆಯ ಅವಧಿಯಲ್ಲಿ ನಗರದ ರಸ್ತೆಗಳಿಗೆ ತಾತ್ಕಾಲಿಕವಾಗಿ ತೇಪೆ ಅಥವಾ ಮರು ಡಾಮರು ಕಾಮ ಗಾರಿ ಸಾಮಾನ್ಯವಾಗಿ ಕೃಷ್ಣಾಷ್ಟಮಿ ಬರುವ ವೇಳೆಗೆ ಪ್ರತಿ ವರ್ಷ ನಡೆಸಲಾಗುತ್ತದೆ. ಆದರೆ, ಈ ಬಾರಿ ಮಳೆ ಇನ್ನೂ ಕೂಡ ನಿಲ್ಲದಿರುವ ಕಾರಣ ಪಾಲಿಕೆ ಯಾವುದೇ ಕಾಮಗಾರಿಗೆ ನಡೆಸಿಲ್ಲ.

ಈ ಮಳೆಗಾಲ ಆರಂಭದ ಹೊತ್ತಿಗೆ ನಗರದ ರಸ್ತೆಗಳು ಹೊಂಡ ಗುಂಡಿಗಳಾಗಿ ಬದಲಾಗಿದ್ದವು. ಕಾಂಕ್ರೀಟ್‌ ಅಳವಡಿಸಲಾದ ಕೆಲವು ರಸ್ತೆಗಳನ್ನು ಹೊರತುಪಡಿಸಿ ನಗರದ ಮುಖ್ಯ, ಹೊರಭಾಗದ ಡಾಮರು ರಸ್ತೆಗಳು ಬಹುತೇಕ ಗುಂಡಿಬಿದ್ದಿವೆ. ಇತ್ತೀಚೆಗೆ ಮತ್ತೆ ಮಳೆ ಬಂದ ಹಿನ್ನೆಲೆಯಲ್ಲಿ ಮತ್ತಷ್ಟು ಹೊಂಡಗಳು ಸೃಷ್ಟಿಯಾಗಿವೆ. ಮಳೆ ಬರುವಾಗ ರಸ್ತೆ ರಿಪೇರಿ ಮಾಡಲು ಆಗುವುದಿಲ್ಲ ಎಂದು ಪಾಲಿಕೆ ಕೈಕಟ್ಟಿ ಕುಳಿತಿತ್ತು.

ಶ್ರೀ ಕೃಷ್ಣಾಷ್ಟಮಿ ಹಿನ್ನೆಲೆಯಲ್ಲಿ ಮೊಸರು ಕುಡಿಕೆ ಉತ್ಸವ ನಗರಾದ್ಯಂತ ರಸ್ತೆಗಳಲ್ಲಿಯೇ ನಡೆಯುತ್ತದೆ. ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ನಗರದ ವಿವಿಧ ಭಾಗಗಳಲ್ಲಿ ಗಣೇಶನನ್ನು ಇಟ್ಟು ಕೆಲವು ದಿನ ಆರಾಧಿಸುವ ಸಂಪ್ರದಾಯವಿದೆ. ಜತೆಗೆ ಗಣೇಶನ ಭವ್ಯ ಮೆರವಣಿಗೆ ಟ್ಯಾಬ್ಲೋ ಸಹಿತವಾಗಿ ನೂರಾರು ಜನರೊಂದಿಗೆ ಸಾಗುವ ಸಂದರ್ಭ ಈ ಹೊಂಡ ಗುಂಡಿಗಳು ತೊಡಕಾಗಬಹುದು. ಮಂಗಳೂರು ದಸರಾ ಮಹೋತ್ಸವ ಕಾಲದಲ್ಲೂ ಮೆರವಣಿಗೆ ಸಾಗುವುದರಿಂದ ರಸ್ತೆ ರಿಪೇರಿಯಾಗದಿದ್ದರೆ ಆಗಲೂ ಪರಿಣಾಮ ಎದುರಿಬೇಕಾದೀತು.

ಬಂದರು-ಮಾರ್ಕೆಟ್‌ ರಸ್ತೆ ಗೋಳು
ಜಿಲ್ಲಾಧಿಕಾರಿ ಕಚೇರಿಯ ಪಕ್ಕದ ಲ್ಲಿಯೇ ಇರುವ ಬಂದರು ರಸ್ತೆಯಲ್ಲಿ ಮಳೆಯಿಂದ ಹೊಂಡಗಳು ಉಂಟಾಗಿವೆ. ನಿತ್ಯ ಇಲ್ಲಿ ಸಾವಿರಾರು ವಾಹನ ಗಳು ಸಂಚರಿಸುತ್ತಿದ್ದು, ಪ್ರಯಾಣ ದುಸ್ತರ ವಾಗಿದೆ. ಮೊದಲೇ ಇಕ್ಕಟ್ಟಿನ ರಸ್ತೆ ಇಲ್ಲಿದ್ದು ಹೊಂಡಗಳು ನಿರ್ಮಾಣವಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ತರಕಾರಿ, ಹಣ್ಣು ಹಂಪಲುಗಳು ಸಿಗುವ ಮಂಗಳೂರಿನ ಸೆಂಟ್ರಲ್‌ ಮಾರುಕಟ್ಟೆ ವ್ಯಾಪ್ತಿಯ ರಸ್ತೆಯ ಕಥೆಯೂ ಹೇಳತೀರದಾಗಿದೆ. ಇಲ್ಲಿನ ಬಹುತೇಕ ರಸ್ತೆಗಳಲ್ಲಿ ಮಳೆನೀರು ಈಗಲೂ ನಿಂತು ರಸ್ತೆ ಕೆಟ್ಟುಹೋಗಿದೆ.

ಸರ್ವಿಸ್‌ ಬಸ್‌ಸ್ಟ್ಯಾಂಡ್ ; ಹೊಂಡಗಳು ಮಾತ್ರ!
ಸ್ಟೇಟ್‌ಬ್ಯಾಂಕ್‌ನ ಖಾಸಗಿ ಬಸ್‌ ನಿಲ್ದಾಣವಂತೂ ಸಮಸ್ಯೆಯ ಆಗರವಾಗಿದೆ. ನಿಲ್ದಾಣಕ್ಕೆ ಪ್ರವೇಶ ಪಡೆಯುವ ಭಾಗದಿಂದ ನಿಲ್ದಾಣ ಪೂರ್ತಿ ಹೊಂಡಗಳಿಂದ ತುಂಬಿ ಕೊಂಡಿದೆ. 

ಕೈಗಾರಿಕೆಗಳ ನಾಡಿನಲ್ಲಿ ಹೊಂಡ ಗುಂಡಿ!
ಸುರತ್ಕಲ್‌, ಬೈಕಂಪಾಡಿ ವ್ಯಾಪ್ತಿಯ ಕೈಗಾರಿಕ ಪ್ರದೇಶದ ಅಕ್ಕ-ಪಕ್ಕದ ರಸ್ತೆಗಳು ಸಂಪೂರ್ಣ ಹೊಂಡಗಳು ಸೃಷ್ಟಿಯಾಗಿದ್ದು, ಇಲ್ಲಿ ಪ್ರಯಾಣವೇ ದುಸ್ತರ. ಸ್ಥಳೀಯರು ಹಬ್ಟಾರಣೆಯನ್ನು ಕೆಟ್ಟುಹೋದ ರಸ್ತೆಯಲ್ಲಿಯೇ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನು ಮಂಗಳೂರಿನ ಒಳ/ಅಡ್ಡ ರಸ್ತೆಗಳ ಪಾಡು ಕೇಳುವಂತಿಲ್ಲ. ಎಲ್ಲೆಲ್ಲೂ ಹೊಂಡಗಳದ್ದೇ ಸಾಮ್ರಾಜ್ಯ. 

ಹೈ ವೇ ಸಂಚಾರ ದುಸ್ತರ
ಪಂಪ್‌ವೆಲ್‌ ಸರ್ಕಲ್‌, ನಂತೂರು, ಕೊಟ್ಟಾರ, ಕೂಳೂರು ಬ್ರಿಡ್ಜ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಮಳೆಯ ಕಾರಣದಿಂದ ಸಾಕಷ್ಟು ಅಧ್ವಾನಗಳನ್ನೇ ಎದುರಿಸುತ್ತಿದೆ. ದ್ವಿಚಕ್ರ ವಾಹನಗಳಿಗೆ ಇಲ್ಲಿ ಪ್ರಯಾಣವೇ ದುಸ್ತರ. ಹೆದ್ದಾರಿಯ ಮಧ್ಯ ಭಾಗದಲ್ಲಿ ಕಾಣಸಿಗುವ ಹೊಂಡಗಳು ಸಂಚಾರಕ್ಕೆ ಸಂಕಷ್ಟ ತರಿಸುತ್ತಿವೆ. ಆದರೆ, ಸಣ್ಣ ಪುಟ್ಟ ತೇಪೆ ಹೆದ್ದಾರಿಯಲ್ಲಿ ನಡೆಯುತ್ತಿದೆಯಾದರೂ ಅದು ಯಾವುದೇ ಫಲ ನೀಡುತ್ತಿಲ್ಲ.

15 ದಿನಗಳ ತೇಪೆ
ಮಳೆಯ ಹಿನ್ನೆಲೆಯಲ್ಲಿ ನಗರದ ವಿವಿಧ ರಸ್ತೆಗಳು ಹಾಳಾಗಿವೆ. ಕೆಲವೇ ದಿನಗಳಲ್ಲಿ ಹಬ್ಬಗಳು ನಡೆಯುವ ಕಾರಣದಿಂದ ತತ್‌ ಕ್ಷಣದಿಂದ ದುರಸ್ತಿಪಡಿಸಲು ಸುಮಾರು 15 ಕೋ.ರೂ. ಒದಗಿಸುವಂತೆ ರಾಜ್ಯ ಸರಕಾರವನ್ನು ಈಗಾಗಲೇ ಕೋರಿಕೊಳ್ಳಲಾಗಿದೆ. ಮುಂದಿನ 15 ದಿನದೊಳಗೆ ತುರ್ತಾಗಿ ತೇಪೆ ಹಾಕುವ ಕಾರ್ಯ ನಡೆಸಲಾಗುವುದು.
 - ಭಾಸ್ಕರ್‌ ಕೆ, ಮೇಯರ್‌

ವಿಶೇಷ ವರದಿ

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.