
ಜಿಲ್ಲಾಡಳಿತದಿಂದ “ಮರಳು ಪರಿವೀಕ್ಷಕ’ ಇಂಟಿಗ್ರೆಟೇಡ್ ಸಾಫ್ಟ್ವೇರ್
Team Udayavani, Aug 11, 2021, 3:40 AM IST

ಮಹಾನಗರ: ಮರಳುಗಾರಿಕೆ ಮತ್ತು ಸರಬರಾಜಿನಲ್ಲಿ ಹೆಚ್ಚು ಪಾರದರ್ಶಕ ತರುವ ಹಾಗೂ ಕಟ್ಟುನಿಟ್ಟಿನ ನಿಗಾ ಇರಿಸುವ ನಿಟ್ಟಿನಲ್ಲಿ ದ.ಕ. ಜಿಲ್ಲಾಡಳಿತ “ಮರಳು ಪರಿವೀಕ್ಷಕ’ ಎಂಬ ಇಂಟಿಗ್ರೆಟೇಡ್ ಸಾಫ್ಟ್ ವೇರ್ (ಸಮಗ್ರ ಮಾಹಿತಿ ಒಳಗೊಂಡ ತಂತ್ರಾಂಶ) ಸಿದ್ಧಪಡಿಸಿದೆ. ಮರಳಿಗೆ ಸಂಬಂಧಪಟ್ಟಂತೆ ಪ್ರಸ್ತುತ ವಿರುವ ಸ್ಯಾಂಡ್ ಬಜಾರ್ ಸಹಿತ ಎಲ್ಲ ತಂತ್ರಾಂಶಗಳನ್ನು ಒಂದೇ ತಂತ್ರಾಂಶದೊಳಗೆ ತರಲಾಗಿದೆ.
ಮರಳು ಪರಿವೀಕ್ಷಕ ಇಂಟಿಗ್ರೆಟೇಡ್ ಸಾಫ್ಟ್ವೇರ್ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರ ಪರಿಕಲ್ಪನೆಯಾಗಿದ್ದು, ಸರಕಾರಿ ಸ್ವಾಮ್ಯದ ಕಿಯೋನಿಕ್ಸ್ ಮೂಲಕ ಇದು ಸಿದ್ಧಗೊಂಡಿದ್ದು ರಾಜ್ಯದಲ್ಲೆ ಈ ಮಾದರಿ ಪ್ರಥಮವಾಗಿದೆ. ಮರಳುಗಾರಿಕೆ ದಿಬ್ಬಗಳಿಂದ ಮರಳು ತೆಗೆದು ಬೇಡಿಕೆ ಸಲ್ಲಿಸಿರುವವರ ತಾಣಕ್ಕೆ ಮರಳು ಸರಬರಾಜು ಆಗುವವರೆಗಿನ ಎಲ್ಲ ಮಾಹಿತಿಗಳು ಒಳ್ಳಗೊಂಡಿವೆ. ಇದಕ್ಕಾಗಿ ನೂತನ ಆ್ಯಪ್ವೊಂದನ್ನು ಸಿದ್ಧಪಡಿಸಲಾಗಿದ್ದು ಅಧಿಕಾರಿಗಳು ಪ್ರತಿಯೊಂದು ಹಂತವನ್ನು ಮೊಬೈಲ್ನಲ್ಲಿ ಆ್ಯಪ್ ಮೂಲಕ ವೀಕ್ಷಿಸಬಹುದಾಗಿದೆ.
ತಂತ್ರಾಂಶದ ವಿನ್ಯಾಸ:
ಮರಳು ದಿಬ್ಬಗಳನ್ನು ತೆರವುಗೊಳಿಸಲು ಬಳಸುವ ದೋಣಿಗಳಿಗೆ ಹಾಗೂ ಮರಳು ಸಾಗಾಟ ವಾಹನಗಳಿಗೆ ಈಗಾಗಲೇ ಜಿಪಿಎಸ್ ಅಳವಡಿಸಲಾಗಿದೆ. ಮರಳು ದಿಬ್ಬ ಕೇಂದ್ರಗಳ ಬಳಿ 360 ಡಿಗ್ರಿ ತಿರುಗುವ ಮತ್ತು ರಾತ್ರಿಯು ನಿಖರ ವಿಷನ್ ಹೊಂದಿರುವ ಶಕ್ತಿಶಾಲಿ ಕೆಮರಾಗಳನ್ನು ಅಳವಡಿಸಲಾಗುತ್ತಿದೆ. ಇದಲ್ಲದೆ ವಿವಿಧ ಪೊಲೀಸ್ ಚೆಕ್ಪೋಸ್ಟ್ಗಳಲ್ಲಿ ಸಿಸಿ ಕೆಮರಾಗಳಿರುತ್ತವೆ. ಈ ಎಲ್ಲ ವ್ಯವಸ್ಥೆಗಳನ್ನು ಒಂದೇ ತಂತ್ರಾಂಶದೊಳಗೆ ತಂದು ಒಂದು ಆ್ಯಪ್ನಲ್ಲಿ ಅಳವಡಿಸಿರುವ ಯೋಜನೆ ಇಂಟಿಗ್ರೆಟೇಡ್ ಸಾಫ್ಟ್ವೇರ್ ಆಗಿದೆ. ಆ್ಯಪ್ ಅನ್ನು ಮೊಬೈಲ್ಗೆ ಲಿಂಕ್ ಮಾಡಲಾಗಿದೆ.
ಜಿಲ್ಲೆಯಲ್ಲಿರುವ ಮರಳು ದಿಣ್ಣೆಗಳನ್ನು ಜಿಪಿಎಸ್ ನಿಗಾಕ್ಕೆ ಒಳಪಡಿಸಲಾಗುತ್ತಿದೆ. ಮರಳು ಸಾಗಾಟ ಲಾರಿಗಳು ಹಾಗೂ ಮರಳುಗಾರಿಕೆ ದೋಣಿಗಳು ಜಿಪಿಎಸ್ ವ್ಯವಸ್ಥೆ ಹೊಂದುವುದನ್ನು ಈಗಾಗಲೇ ಕಡ್ಡಾಯಗೊಳಿಸಲಾಗಿದೆ. ಇದನ್ನು ಪ್ರಸ್ತುತ ರೂಪಿಸಿರುವ ಮರಳು ಪರಿವೀಕ್ಷಕ ಆ್ಯಪ್ಗೆ
ಜೋಡಿಸಲಾಗುತ್ತದೆ. ಮರಳು ಸಾಗಾಟ ವಾಹನ ಹಾಗೂ ದೋಣಿ ಮಾಲಕರು ಜಿಪಿಎಸ್ ಫಿಟ್ನೆಸ್ ಸರ್ಟಿಫಿಕೆಟ್ ಆಧಾರದಲ್ಲಿ ಕ್ಯೂಆರ್ ಕೋಡ್ ಸೃಷ್ಟಿಸಬಹುದಾಗಿದೆ. ಜಿಪಿಎಸ್ ಸಾಧನ ಕಾರ್ಯಾರಂಭ ಮಾಡಿದ ಬಳಿಕ ಇದು ಮರಳು ಪರಿವೀಕ್ಷಕ ವೆಬ್ಗ ಜೋಡಣೆಯಾಗುತ್ತದೆ. ಜಿಪಿಎಸ್ ಅನ್ನು ಸದಾ ಸಕ್ರಿಯವಾಗಿಡುವುದು ಕಡ್ಡಾಯವಾಗಿರುತ್ತದೆ. ಮರಳು ಸಾಗಾಟ ಲಾರಿಗಳು ದಿನಕ್ಕೆ ಎಷ್ಟು ಬಾರಿ ಮರಳು ದಿಣ್ಣೆಗಳಿಂದ ಮರಳು ಸಾಗಾಟ ಮಾಡಿವೆ ಮತ್ತು ಪರವಾನಿಗೆ ರಹಿತವಾಗಿ ಅಥವಾ ಒಂದೇ ಪರವಾನಿಗೆ ಬಳಸಿ ಹಲವು ಬಾರಿ ಸಾಗಾಟ ಮಾಡಲಾಗಿದೆಯೇ ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ. ಇದಲ್ಲದೆ ಆಂತಾರಾಜ್ಯ ಮರಳು ಸಾಗಾಟವೂ ಪತ್ತೆಯಾಗುತ್ತದೆ.
ಮರಳುಗಾರಿಕೆ ಹಾಗೂ ಸರಬರಾಜು ವ್ಯವಸ್ಥೆಯಲ್ಲಿ ಪ್ರಸ್ತುತ ಇರುವ ವಿವಿಧ ತಂತ್ರಾಂಶ ಹಾಗೂ ನಿಗಾ ವ್ಯವಸ್ಥೆಗಳನ್ನು ಒಟ್ಟುಗೂಡಿಸಿ ಒಂದೇ ವೇದಿಕೆಯಡಿ ತರುವ ನಿಟ್ಟಿನಲ್ಲಿ ಮರಳು ಪರಿವೀಕ್ಷಕ ಇಂಟಿಗ್ರೆಟೇಡ್ ಸಾಫ್ಟ್ ವೇರ್ ಸಿದ್ಧಪಡಿಸಲಾಗಿದ್ದು, ಕಾರ್ಯಾರಂಭ ಮಾಡಿದೆ. ಇದರ ಆಧಾರದಲ್ಲಿ ನಿಯಮ ಉಲ್ಲಂಘನೆ ಬಗ್ಗೆ ಈಗಾಗಲೇ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. -ಡಾ| ರಾಜೇಂದ್ರ ಕೆ.ವಿ., ದ.ಕ. ಜಿಲ್ಲಾಧಿಕಾರಿ
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP Congress;ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರಿಗೆ ಪ್ರತಿದೂರು

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.