Bollywood actor; ಸಂಜಯ್ ದತ್ ಕರಾವಳಿ ಭೇಟಿ: ಕಟೀಲಿನಲ್ಲಿ ಪ್ರಾರ್ಥನೆ
ಬಿರುವೆರ್ ಕುಡ್ಲದ 10ನೇ ವರ್ಷದ ಹುಲಿ ವೇಷ ಸಂಭ್ರಮದಲ್ಲಿ ಭಾಗಿ... ಮುಗಿ ಬಿದ್ದ ಅಭಿಮಾನಿಗಳು
Team Udayavani, Oct 12, 2024, 8:32 PM IST
ಮಂಗಳೂರು : ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಅವರು ಶನಿವಾರ(ಅ18) ತುಳುನಾಡಿನ ಪ್ರವಾಸದಲ್ಲಿದ್ದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಸಂಜಯ್ ದತ್ ನೋಡಲು ಮುಗಿಬಿದ್ದ ಅಭಿಮಾನಿಗಳು
ಮಂಗಳೂರಿನ ಬಿರುವೆರ್ ಕುಡ್ಲ ದ 10ನೇ ವರ್ಷದ ಹುಲಿ ವೇಷ ಹಾಕುವ ಊದು ಕಾರ್ಯಕ್ರಮದಲ್ಲಿಸಂಜಯ್ ದತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಸಂಜು ಬಾಯ್ ನೋಡಲು ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಮಧ್ಯಾಹ್ನ 2 ಗಂಟೆಗೆ ಬರುವ ಬಗ್ಗೆ ಘೋಷಣೆ ಮಾಡಲಾಗಿತ್ತು. ಆದರೆ ಬರುವಾಗ ಸುಮಾತು 5.30 ಆಗಿತ್ತು. ವೇದಿಕೆ ಕಡೆ ಬರುತ್ತಿದ್ದಂತೆ ಖಳ್ ನಾಯಕ್ ಸಂಗೀತಕ್ಕೆ ಅಭಿಮಾನಿಗಳೂ ಧ್ವನಿಗೂಡಿಸಿದರು.
ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಮೊಬೈಲ್ ಮೂಲಕ ಚಿತ್ರ ತೆಗೆಯಲು ಮುಗಿ ಬಿದ್ದರು. ಬಳಿಕ ಹುಲಿ ವೇಷ ಕುಣಿತ ವೀಕ್ಷಿಸಿದರು.ಹುಲಿ ಮುಖವರ್ಣಿಕೆಯ ಬೃಹತ್ ಉಡುಗೋರೆಯನ್ನು ನೀಡಲಾಯಿತು. ಮೈಕ್ ನಲ್ಲಿ ಹಲೋ ಮಂಗಳೂರು ಎಂದು ಸಂಜು ಹೇಳಿದೊಡನೆ ಭಾರೀ ಕರತಾಡನ ಕೇಳಿಬಂತು. ಸಂಜಯ್ ದತ್ ಅವರು, ಈ ಹುಲಿಗಳಿಗಿಂತ ಉದಯಣ್ಣ ದೊಡ್ಡ ಹುಲಿ ಎಂದುಕೊಂಡಿದ್ದೇನೆ ಎಂದಾಗ ಬಿರುವೆರ್ ಕುಡ್ಲದ ಸದಸ್ಯರು ಭಾರೀ ಚಪ್ಪಾಳೆ ,ಶಿಳ್ಳೆ ಮೂಲಕ ಸಂಭ್ರಮಿಸಿದರು. ಮಂಗಳೂರಿನ ಸಂಸ್ಕೃತಿ ಬಗ್ಗೆ ಅಭಿಮಾನದಿಂದ ಮಾತನಾಡಿದರು.
ಕಾರ್ಯ ಕ್ರಮದಲ್ಲಿ ಉದಯ್ ಪೂಜಾರಿ ಬಳ್ಳಾಲ್ ಬಾಗ್, ವೆಂಕಟೇಶ್ ಭಂಡಾರಿ,ಮಹೇಶ್ ಶೆಟ್ಟಿ,ನಳಿನ್ ಕುಮಾರ್ ಕಟೀಲ್ ಸಹಿತ ಗಣ್ಯರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Grants: ಕೇಂದ್ರ ಸರಕಾರ ದೂರುವುದೇ ರಾಜ್ಯ ಕಾಂಗ್ರೆಸ್ ಸರಕಾರದ ಚಾಳಿ: ಪ್ರಹ್ಲಾದ್ ಜೋಶಿ
NCP Leader; ಗುಂಡಿನ ದಾಳಿಗೈದು ಬಾಬಾ ಸಿದ್ದಿಕಿ ಬರ್ಬರ ಹ*ತ್ಯೆ!!
Uppinangady: ಚಾಲಕನ ನಿಯಂತ್ರಣ ತಪ್ಪಿ ಗುಂಡ್ಯ ಹೊಳೆಗೆ ಬಿದ್ದ ಬಸ್; ಚಾಲಕ ಸಾವು
Surathkal: ಕಾಮಗಾರಿ ಹೊಂಡಕ್ಕೆ ಬಿದ್ದ ಬೈಕ್ ಸವಾರ ಪಾರು
Haryana: ಕಾಲುವೆಗೆ ಬಿದ್ದ ಕಾರು ಒಂದೇ ಕುಟುಂಬದ 7 ಮಂದಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.