ತುಳುನಾಡಿನ ಸೌಹಾರ್ದ ಸಾರಾ ಬಾಳಿನ “ಸಾರ’


Team Udayavani, Jan 11, 2023, 7:42 AM IST

ತುಳುನಾಡಿನ ಸೌಹಾರ್ದ ಸಾರಾ ಬಾಳಿನ “ಸಾರ’

ಸಮಾಜದಲ್ಲಿ ಸೌಹಾರ್ದ, ಮನುಷ್ಯ ಪ್ರೀತಿಯಿಂದ ಬದುಕಬೇಕು ಎಂಬುದನ್ನು ಸಾಹಿತಿಯಾಗಿ ಬರವಣಿಗೆ ಮೂಲಕ ತೋರಿಸಿದ್ದಲ್ಲದೆ, ತುಳುನಾಡಿನ ಸಂಸ್ಕೃತಿಯ ಜೀವಾಳವಾದ ಸೌಹಾರ್ದದ ಬಾಳನ್ನು ಬದುಕಿ ತೋರಿಸಿದವರು ನಾಡೋಜ ಡಾ| ಸಾರಾ ಅಬೂಬಕರ್‌. ಅವರ ಮಾನವ ಪ್ರೀತಿ, ಅನ್ಯಾಯದ ವಿರುದ್ಧ ಧ್ವನಿಯಾಗುವ ಅವರ ನಡೆಯಿಂದ ಅವರ ವ್ಯಕ್ತಿತ್ವ ಮಹಾನ್‌ ಅನ್ನಿಸಿಕೊಳ್ಳುತ್ತದೆ.

ತಳ ಮಟ್ಟದ ಮಹಿಳೆಯರ ಜತೆ ಒಡನಾಟ ಹೊಂದಿದ್ದ ಡಾ| ಸಾರಾ ಅಬೂಬಕರ್‌, ತಮ್ಮನ್ನು ಯಾರೇ ಆಹ್ವಾನಿಸಿದರೂ ಬಿಗುಮಾನವಿಲ್ಲದೆ ತೆರಳುತ್ತಿದ್ದರು. ಅವರ ಜತೆ ಬೆರೆಯುತ್ತಿದ್ದರು. ಜತೆಗೆ ಅರಿವು ಹಂಚುವ ಕಾರ್ಯ ಮಾಡುತ್ತಿದ್ದರು. ಬರಹಗಾರರು ಕೋಣೆಯಲ್ಲಿ, ಎಸಿ ರೂಮಿನಲ್ಲಿ ಕುಳಿತು ಬರೆಯುವ ಬದಲು, ಯಾವುದೇ ಧರ್ಮ, ಮತ ಭೇದಗಳ ಅಂತರವಿಲ್ಲದೆ ಜತೆಯಾಗಿ ಬೆರೆತು ಅವರ ಜತೆ ಚರ್ಚಿಸುವುದು, ಅವರನ್ನು ಅರಿಯುವುದು, ಅವರಿಗೆ ಅರಿವು ಮೂಡಿಸುವ ಕಾರ್ಯ ಒಬ್ಬ ಬರಹಗಾರನ ಹೃದಯ ಶ್ರೀಮಂತಿಕೆ. ಅದು ಡಾ. ಸಾರಾ ಅಬೂಬಕರ್‌ ಅವರಲ್ಲಿತ್ತು. ಅದಕ್ಕಾಗಿ ಅವರು ನನಗೆ ಅತ್ಯಂತ ಪ್ರಬುದ್ಧ, ಮೇಲ್ಪಂಕ್ತಿಯ ಬರಹಗಾರರೆನಿಸಿದ್ದಾರೆ.

ದ.ಕ. ಜಿಲ್ಲೆಯ ಮಹಿಳಾ ಹೋರಾಟಗಳೂ ಸೇರಿದಂತೆ ಹಲವು ಪ್ರತಿಭಟನೆಗಳಲ್ಲಿ ಅವರು ಪಾಲ್ಗೊಂಡಿದ್ದರು. ಆ ಮೂಲಕ ನಮ್ಮಲ್ಲೂ ಧೈರ್ಯ ತುಂಬಿದವರು. ತನಗೆ ಹೇಳಬೇಕೆನ್ನಿಸಿದ್ದನ್ನು ನೇರವಾಗಿ ಹೇಳುತ್ತಿದ್ದವರು. ಕರಾವಳಿ ವಾಚಕಿಯರ, ಲೇಖಕಿಯರ ಸಂಘದ ಹುಟ್ಟಿನಿಂದ ಹಿಡಿದು ಅದರ ಬೆಳವಣಿಗೆಗೆ ಶ್ರಮಿಸಿದವರಲ್ಲಿ ಸಾರಾ ಕೂಡಾ ಒಬ್ಬರು. ಅವರು ಸಂಘಕ್ಕೆ ಒಂದು ದೊಡ್ಡ ನಿಧಿಯಾಗಿದ್ದರು.

ಸುಮಾರು 40ರಿಂದ 45 ವರ್ಷಗಳಿಂದ ಅವರನ್ನು ಬಲ್ಲೆ. ಸಂಘದ ಅಧ್ಯಕ್ಷರಾಗಿದ್ದಾಗ ಜತೆಗೆ ಕೆಲಸ ಮಾಡುವ ಅವಕಾಶವೂ ದೊರಕಿತ್ತು. ಸಾಹಿತ್ಯ ಎಂಬುದು ಸಮಾಜದ ಪ್ರತಿಬಿಂಬವಾಗಬೇಕು ಎಂಬುದು ಅವರ ಅನಿಸಿಕೆಯಾಗಿತ್ತು.

ಯಾರು ಅನ್ಯಾಯಕ್ಕೆ ಒಳಗಾಗುತ್ತಾರೆಯೋ ಅವರ ಜತೆ ನಾವು ಇರಬೇಕು. ಅದನ್ನು ಸಮಾಜಕ್ಕೆ ತಿಳಿಸಬೇಕು. ಪ್ರಭುತ್ವಕ್ಕೆ ಮನವರಿಕೆ ಮಾಡಬೇಕು. ವಿರೋಧ ಮಾಡುವವರಿಗೆ ವಾಸ್ತವವನ್ನು ತಿಳಿಸುವ ಕೆಲಸವಾಗಬೇಕು ಎಂಬ ಧ್ವನಿಯೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದವರು ಸಾರಾ ಅಬೂಬಕರ್‌. ಕೇವಲ ಬರಹದಲ್ಲಿ ಅವರು ಸಮಾಜದ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿದವರಲ್ಲ.

ಲೇಖಕರು, ಸಾಹಿತಿಗಳು ಕೇವಲ ಭಾವನಾತ್ಮಕವಾಗಿ ಬೆಳೆದರೆ ಸಾಲದು. ಬೌದ್ಧಿಕವಾಗಿಯೂ ಬೆಳೆಯಬೇಕು ಎಂಬ ದಿಸೆಯಲ್ಲಿ ಡಾ| ಸಾರಾ ನಮ್ಮ ಜತೆಗಿದ್ದ ಜ್ವಲಂತ ನಿದರ್ಶನ.

∙ಬಿ.ಎಂ. ರೋಹಿಣಿ, ಹಿರಿಯ ಸಾಹಿತಿ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.