ಸೌತಡ್ಕ: ಎಂಡೋ ವಿರೋಧಿ ಸಂತ್ರಸ್ತರ‌ ಸಭೆ


Team Udayavani, Apr 10, 2017, 2:42 PM IST

84NLD1.jpg

ನೆಲ್ಯಾಡಿ : ಎಂಡೋ ಸಂತ್ರಸ್ತರ ಬಗೆಗೆ ಸರಕಾರದ ನಿರ್ಲಕ್ಷ್ಯ ಧೋರಣೆ ವಿರುದ್ಧ ಎಂಡೋ ವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ಅವರ ಅಧ್ಯಕ್ಷತೆಯಲ್ಲಿ  ಮುಂದಿನ ಕಾರ್ಯತಂತ್ರದ ಬಗ್ಗೆ ಸಮಾಲೋಚನಾ ಸಭೆಯು ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಗಣೇಶ ಕಲಾಮಂದಿರದಲ್ಲಿ ನಡೆಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಪುರಂದರ ಗೌಡ ಕಡಿರ, ಎಂಡೋ ಸಂತ್ರಸ್ತರ ಬಾಳಿನಲ್ಲಿ ಸರಕಾರ ಚೆಲ್ಲಾಟ ವಾಡುತ್ತಿದ್ದು  ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ  ಎಂಡೋ ಸಂತ್ರಸ್ತರು ಹೋಗಿ ಪ್ರತಿಭಟಿಸಿಯೂ ಸರಕಾರದ ನಿರ್ಲಕ್ಷ್ಯ  ಧೋರಣೆ ಮುಂದುವರಿಸಿದೆ. ಇದೀಗ ನಿರ್ಣಾಯಕ ಹೋರಾಟ ನಡೆಸಿ  ಈ ಸಮಸ್ಯೆಗೆ ತಾರ್ಕಿಕ ಅಂತ್ಯ ತರಲು ಉದ್ದೇಶಿಸಿ ಈ ಸಮಾಲೋಚನ  ಸಭೆ ಕರೆಯಲಾಗಿದೆ ಎಂದು ನುಡಿದರು.

ಉಡುಪಿ, ದ.ಕ. ಜಿಲ್ಲಾ  ಅಂಗವಿಕಲರ ಸಂಘದ ಅಧ್ಯಕ್ಷ ಡಾ| ಮುರಳೀಧರ ನಾಯಕ್‌ ಮಾತನಾಡಿ, ಕೇರಳ ಸರಕಾರವು ಎಂಡೋ ಸಂತ್ರಸ್ತರಿಗೆ ಸೂಕ್ತರೀತಿಯಲ್ಲಿ  ಪರಿಹಾರದ ವ್ಯವಸ್ಥೆ ಮಾಡಿರುವಾಗ ನಮ್ಮಲ್ಲಿ ಯಾಕೆ ನಿರ್ಲಕ್ಷ್ಯಮಾಡಲಾಗುತ್ತಿದೆ ಎಂದರು.

ನವಚೇತನ ಚಾರಿಟೇಬಲ್‌ ಟ್ರಸ್ಟ್‌  ಬೆಂಗಳೂರು ಇದರ ಸ್ಥಾಪಕಾಧ್ಯಕ್ಷ  ಮಂಜುನಾಥ್‌ ಮಾತನಾಡಿ, ಸರಕಾರದ ನಿರ್ಲಕ್ಷ್ಯ ಧೋರಣೆ ವಿರುದ್ಧ ಕೊಕ್ಕಡದಲ್ಲಿ ನಡೆಯುವ ಎಂಡೋಸಂತ್ರಸ್ತರ ಪ್ರತಿಭ ಟನೆಗೆ ರಾಜ್ಯಾದ್ಯಂತ ತಮ್ಮ ಸಂಘಟನೆಗಳ ಮೂಲಕವೂ ಅದೇ  ದಿನಗಳಲ್ಲಿ   ಪ್ರತಿ ಭಟನೆ ನಡೆಸುವ ಮೂಲಕ ಈ ಬಾರಿ ಎಂಡೋ ಸಂತ್ರಸ್ತರಿಗೆ  ನ್ಯಾಯ ಒದಗಿ ಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಅಧ್ಯಕ್ಷತೆ   ವಹಿಸಿ ಮಾತನಾಡಿದ ಎಂಡೋ ವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು  ಅವರು, ತಾನು  ಕೂಡ  ಒಬ್ಬ ಎಂಡೋ ಸಂತ್ರಸ್ತನಾಗಿ  ಇವರಿಗೆ ನ್ಯಾಯ ಒದಗಿ ಸುವ   ನಿಟ್ಟಿನಲ್ಲಿ  ಪ್ರತಿಭಟನೆ ನಡೆಸಿದ್ದಕ್ಕೆ  ಕೆಲವು ಸಚಿವರುಗಳಿಂದ  ಪ್ರಚಾರಕ್ಕಾಗಿ ಹೋರಾಟ ನಡೆಸುತ್ತಿದ್ದೇನೆ ಅನ್ನುವ ಅಪ ವಾದವೂ ಒದಗಿದೆ. ಅತ್ತ ಸಾಯಲೂ ಆಗದೇ ಇತ್ತ ಬದುಕಲೂ ಆಗದೇ ನರಳಾಡುತ್ತಿರುವ ಎಂಡೋ ಸಂತ್ರಸ್ತರು ಒಂದೆಡೆಯಾದರೆ ಮನೆಯವರಿಗೆ ಸಂತ್ರಸ್ತರನ್ನು  ಸಂಭಾಳಿಸುವುದರ ಜತೆಗೆ ಕನಿಷ್ಠ ಪರಿಹಾರಕ್ಕೂ ಸರಕಾರದ ಅಧಿಕಾರಿಗಳ ಮುಂದೆ ಅಲೆದಾಡುವ ಪರಿಸ್ಥಿತಿ ಇದೆ.  

ಕೊಕ್ಕಡದಲ್ಲಿ ಕೆಲವು ದಿನಗಳ ಹಿಂದೆ ಎಂಡೋಸಂತ್ರಸ್ತ ಕುಟುಂಬದ ಸಾಮೂಹಿಕ ಆತ್ಮಹತ್ಯೆ ಯಂತಹ  ಘಟನೆ ನಡೆದರೂ ಸರಕಾರದ ಯಾವುದೇ ಪ್ರತಿನಿಧಿಗಳೂ ಕನಿಷ್ಠ ಇಲ್ಲಿಗೆ ಭೇಟಿ ನೀಡಿ ಸಾಂತ್ವನ ಕೂಡ ಹೇಳಿಲ್ಲ.  

ಸರಕಾರಿ ಕೃಪಾಪೋಷಿತ ಎಂಡೋ ಸಿಂಪಡಣೆಯಿಂದಾಗಿ ಉಂಟಾದ ಈ ದುರವಸ್ಥೆಗೂ ಸರಕಾರದ ಬಳಿ ಪರಿಹಾರಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣ ಮಾಡುತ್ತಿರುವ ಸರಕಾರದ ಹಾಗೂ ಇಲಾಖಾಧಿಕಾರಿಗಳ ವಿರುದ್ಧ ಈ ಬಾರಿ ಮಾಡು ಇಲ್ಲವೇ ಮಡಿ ಅನ್ನುವ ಹೋರಾಟ ಮಾಡುವ ಉದ್ದೇಶದಿಂದ  ಈ ಸಭೆ ನಡೆದಿದೆ. ಕಳೆದ ಬಾರಿ ಬೆಂಗಳೂರಿಗೆ ಹೋಗಿ ಎಂಡೋ ಸಂತ್ರಸ್ತರು ಪ್ರತಿಭಟಿಸಿದರೂ ನಿರೀಕ್ಷಿತ ಪರಿಹಾರಗಳು ಲಭ್ಯವಾಗದ ಕಾರಣ ಈ ಬಾರಿ ಹೋರಾಟವು ತಾರ್ಕಿಕ ಅಂತ್ಯ ಕಾಣುವುದಕ್ಕೋಸ್ಕರ ಕೊಕ್ಕಡ ದಲ್ಲಿಯೇ ಆಮರಣಾಂತ ಉಪ ವಾಸ ನಡೆಸಲಾಗುವುದು. ಮುಖ್ಯಮಂತ್ರಿಗಳು ಇಲ್ಲಿಗೆ ಬಂದು ಎಂಡೋಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.

750ಕ್ಕಿಂತಲೂ ಹೆಚ್ಚು ಸಂತ್ರಸ್ತರು ಇದರಲ್ಲಿ ಪಾಲ್ಗೊಂಡಿದ್ದರು.ವೇದಿಕೆಯಲ್ಲಿ   ಹಿರಿಯ ಬಿಜೆಪಿ ಮುಖಂಡ ಪೂವಾಜೆ ಕುಶಾಲಪ್ಪಗೌಡ, ನ್ಯಾಯವಾದಿ ಹರೀಶ್‌ ಪೂಂಜ, ಸೇವಾ ಭಾರತಿ ಕನ್ಯಾಡಿ ಇದರ ಸಂಯೋಜಕ ವಿನಾಯಕ ರಾವ್‌, ದ.ಕ. ಜಿಲ್ಲಾ  ಅಂಗವಿಕಲರ ಸಂಘದ ಕಾರ್ಯದರ್ಶಿ ಕೊರಗಪ್ಪಗೌಡ, ಕೊಕ್ಕಡ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ  ನಾರಾಯಣ ಗೌಡ, ರೇವತೀ ತಾಮಣ್‌ಕರ್‌, ಅಲ್ಬರ್ಟ್‌  ಮಿನೇಜಸ್‌   ಮೊದಲಾದವರು  ಉಪಸ್ಥಿತರಿದ್ದರು.
 

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-bantwala-1

Bantwala: ನವ ದಂಪತಿ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ; ಪತ್ನಿ ಮೃತ್ಯು, ಪತಿ ಗಂಭೀರ

Belthangady ಅಂಗಮಾರಿ ರೋಗ ಲಕ್ಷಣ: ಪರಿಶೀಲನೆ

Belthangady ಅಂಗಮಾರಿ ರೋಗ ಲಕ್ಷಣ: ಪರಿಶೀಲನೆ

Untitled-1

Uppinangady ವಿವಾಹಿತೆ ನಾಪತ್ತೆ: ದೂರು ದಾಖಲು

Suresh ಬಲ್ನಾಡು ಅವರಿಗೆ ಸಾಂಬಾರ ಕೃಷಿಕ ಪ್ರಶಸ್ತಿ ಪ್ರದಾನ

Suresh ಬಲ್ನಾಡು ಅವರಿಗೆ ಸಾಂಬಾರ ಕೃಷಿಕ ಪ್ರಶಸ್ತಿ ಪ್ರದಾನ

Engineer Bantwal ಜಯಂತ್‌ ಬಾಳಿಗ ಅವರಿಗೆ ಪ್ರತಿಷ್ಠಿತ ಮಿಲೇನಿಯಂ ಟೆಕ್ನಾಲಿಜಿ ಪ್ರಶಸ್ತಿ

Engineer Bantwal ಜಯಂತ್‌ ಬಾಳಿಗ ಅವರಿಗೆ ಪ್ರತಿಷ್ಠಿತ ಮಿಲೇನಿಯಂ ಟೆಕ್ನಾಲಿಜಿ ಪ್ರಶಸ್ತಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.