‘ವಿವೇಕಾನಂದರ ಚಿಂತನೆ, ದೂರದೃಷ್ಟಿತ್ವ ಅಗತ್ಯ’


Team Udayavani, Jan 14, 2019, 6:23 AM IST

14-january-9.jpg

ಸವಣೂರು : ವಿವೇಕಾನಂದರ ಜೀವನದ ಆದರ್ಶ ಹಾಗೂ ವಿವೇಕ ವಾಣಿ ಯನ್ನು ಅಳವಡಿಸಿಕೊಂಡು ಮುನ್ನಡೆದಾಗ ಯಶಸ್ವಿಯಾಗಲು ಸಾಧ್ಯ. ವಿವೇಕಾನಂದರ ಚಿಂತನೆ ಹಾಗೂ ದೂರದೃಷ್ಟಿತ್ವ ಇಂದಿನ ಅಗತ್ಯ ಎಂದು ಪುತ್ತೂರು ನರೇಂದ್ರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಹರಿಣಿ ಪುತ್ತೂರಾಯ ಹೇಳಿದರು.

ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿ ನಲ್ಲಿ ಶನಿವಾರ ರಾತ್ರಿ ನಡೆದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಹಾಗೂ ರಾಜ್ಯ ಯುವ ಸಮ್ಮೇಳನ, ದ.ಕ. ಜಿಲ್ಲಾ ಮತ್ತು ರಾಜ್ಯ ಯುವ ಸಂಘಗಳ ಒಕ್ಕೂಟ ವತಿಯಿಂದ ಕೊಡಲ್ಪಡುವ ರಾಜ್ಯ ಯುವ ಮತ್ತು ಸಾಂಘಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ, ಯುವ ಜನತೆ ಸಮಾಜದ ಭವಿಷ್ಯದ ರೂವಾರಿಗಳು ಎಂದರು.

ಆರೋಗ್ಯ ಕಾರ್ಯಕ್ರಮಗಳ ಕುರಿತು ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಜಯರಾಮ ಪೂಜಾರಿ, ಸ್ವಾಮಿ ವಿವೇಕಾನಂದರ ಕುರಿತು ಆದರ್ಶ ಗೋಖಲೆ, ಯುವಜನರು ಮತ್ತು ಸಮಾಜ ಸೇವಾ ಕಾರ್ಯ ಕುರಿತು ಬಿ.ವಿ. ಸೂರ್ಯನಾರಾಯಣ, ಸೀತಾರಾಮ ಕೇವಳ, ಹನುಮಂತ ಗೌಡ ಡಿ.ಎಂ. ವಿಚಾರಗೋಷ್ಠಿ ನಡೆಸಿದರು.

ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಪ್ರಶಸ್ತಿ ಪ್ರದಾನ ಮಾಡಿದರು. ಡಿಸಿಸಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್‌ ರೈ, ಸುದಾನ ವಿದ್ಯಾಸಂಸ್ಥೆಯ ಸಂಚಾಲಕ ವಂ| ವಿಜಯ ಹಾರ್ವಿನ್‌, ಬೆಳಂದೂರು ಪದವಿ ಕಾಲೇಜಿನ ಪ್ರಾಚಾರ್ಯ ಪದ್ಮನಾಭ ಕೆ., ಸವಣೂರು ಪ್ರಾ.ಕೃ.ಸ. ಸಂಘದ ಸಿಇಒ ಚಂದ್ರಶೇಖರ ಪಿ., ಸವಣೂರು ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚಿನ್‌ ಕುಮಾರ್‌ ಜೈನ್‌, ರಾಜ್ಯ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ| ಎಸ್‌. ಬಾಲಾಜಿ, ದ.ಕ. ಜಿಲ್ಲಾ ಒಕ್ಕೂಟದ ಗೌರವಾಧ್ಯಕ್ಷ ರಾಜೀವ್‌ ಸಾಲಿಯಾನ್‌, ಪುತ್ತೂರಿನ ಸುಬ್ರಹ್ಮಣ್ಯ ಕರುಂಬಾರು, ಸುಳ್ಯದ ದಿಲೀಪ್‌ ಬಾಬ್ಲುಬೆಟ್ಟು, ಬೆಳ್ತಂಗಡಿ ಯ ಪ್ರಭಾಕರ ಶೆಟ್ಟಿ, ಬೆಳಗಾವಿ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಸಿದ್ದಣ್ಣ ದುರದುಂಡಿ, ರಾಜ್ಯ ಒಕ್ಕೂಟದ ಮಾಜಿ ಅಧ್ಯಕ್ಷ ಚಿತ್ತಪ್ಪ, ಸವಣೂರು ಯುವಕ ಮಂಡಲದ ಅಧ್ಯಕ್ಷ ಮನೋಹರ ಮೆದು, ಪದ್ಮಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಕುಸುಮಾ ಪಿ. ಶೆಟ್ಟಿ, ಪುತ್ತೂರು ತಾ| ಯುವ ಸಬಲೀಕರಣ ಕ್ರೀಡಾಧಿಕಾರಿ ಮಾಮಚ್ಚನ್‌, ಸುಳ್ಯದ ದೇವರಾಜ್‌ ಮುತ್ಲಾಜೆ, ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ರಾಜಲಕ್ಷ್ಮೀ ಎಸ್‌. ರೈ ಉಪಸ್ಥಿತರಿದ್ದರು. ರಾಜ್ಯ ಯುವ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಸುರೇಶ್‌ ರೈ ಸೂಡಿಮುಳ್ಳು ಸ್ವಾಗತಿಸಿ, ವಂದಿಸಿದರು. ತಾರಾನಾಥ ಸವಣೂರು, ಗುರುಪ್ರಿಯಾ ನಾಯಕ್‌ ನಿರೂಪಿಸಿದರು.

ರಾಜ್ಯ ಯುವ, ಸಾಂಘಿಕ ಪ್ರಶಸ್ತಿ ಪುರಸ್ಕೃರು
ಉಡುಪಿ ಜಿಲ್ಲೆಯ ಶರಣ್‌ ಕುಮಾರ್‌ ಮಟ್ಟು, ದಕ್ಷಿಣ ಕನ್ನಡದಿಂದ ಕಬಕ ಮಹಾದೇವಿ ಯುವಕ ಮಂಡಲದ ಸುರೇಶ್‌ ಪಿ., ಬೆಂಗಳೂರು ಗ್ರಾ. ಜಿಲ್ಲೆ ಸಂತೋಷ್‌ ಜಿ.ಟಿ., ಬೆಂಗಳೂರು ನಗರ ಜಿಲ್ಲೆ ನಂಜಪ್ಪ ಡಿ.ಎಸ್‌., ರಾಮನಗರ ಚಂದ್ರ ಎಂ., ತುಮಕೂರು ರವಿ ಜೆಪಿ, ಹಾಸನ ಉಲ್ಲಾಸ್‌ ಎಚ್.ವಿ., ಮಂಡ್ಯ ಎಂ.ಸಿ. ಸೌಂದರ್ಯ, ಕೋಲಾರ ಅರುಣ್‌ ಕುಮಾರ್‌, ಚಿತ್ರದುರ್ಗ ದೇವರಾಜ್‌, ದಾವಣಗೆರೆ ಪೃಥ್ವಿ ಬಿ.ಎಂ., ಮೈಸೂರು ಗೋವಿಂದ ನಾಯ್ಕ, ಕಲಬುರಗಿ ಚನ್ನವೀರ ವಿ. ಕಣಗಿ, ಬೀದರ್‌ ನಾಗರಾಜ್‌, ರಾಯಚೂರು ಬಾಬಾ, ಹಾವೇರಿ ಹರೀಶ್‌ ಗುಂಗೇರ್‌, ಚಿಕ್ಕಬಳ್ಳಾಪುರ ಟಿ. ಶ್ರೀ ಲಕ್ಷ್ಮೀ, ಧಾರವಾಡ ಮಂಜುಳಾ ಎಂ. ಮುನವಳ್ಳಿ, ಉತ್ತರ ಕನ್ನಡ ದಯಾನಂದ ಹೊನ್ನಾವರ, ಬಳ್ಳಾರಿ ಚಂದ್ರಶೇಖರ ರೆಡ್ಡಿ, ಕೊಪ್ಪಳ ಜಯಪ್ಪ,ಶಿವಮೊಗ್ಗ ಲೋಕೇಶಪ್ಪ, ವಿಜಯಪುರ ಹುಸೇನ ಬಾದಶಾಹ್‌ ಮುಲ್ಲಾ, ಚಿಕ್ಕಮಗಳೂರು ಅಜ್ಜಂಪುರ ಎಸ್‌. ಶೃತಿ, ಚಾಮರಾಜನಗರ ಅಂಕರಾಜು, ಬೆಳಗಾವಿ ಸುಧೀರ್‌ ರಾಜು ನಾಯರ್‌, ಯಾದಗಿರಿ ಜಟ್ಟಪ್ಪ ಪೂಜಾರಿ,ಬಾಗಲಕೋಟೆ ಬಾಳಪ್ಪ ಮಾಯಪ್ಪ ಗಡ್ಡದವರ್‌, ಗದಗ ಚನ್ನಾರೆಡ್ಡಿ ಬಸವರಾಜ ಗೂಳ ರೆಡ್ಡಿ, ಕೊಡಗು ನವೀನ್‌ ದೇರಳ ಅವರಿಗೆ ರಾಜ್ಯ ಯುವ ಪ್ರಶಸ್ತಿ, ರಾಜ್ಯ ಉತ್ತಮ ಯುವ ಒಕ್ಕೂಟ ಪ್ರಶಸ್ತಿಗೆ ಸುಳ್ಯ ಯುವಜನ ಸಂಯುಕ್ತ ಮಂಡಳಿ, ಉತ್ತಮ ಸಾಂಘಿಕ ಪ್ರಶಸ್ತಿಗೆ ಬೆಳ್ತಂಗಡಿ ಮುಂಡಾಜೆಯ ಯಂಗ್‌ ಚಾಲೆಂಜರ್ಸ್‌, ಚಿಕ್ಕಮಗಳೂರು ತರಿಕೆರೆ ಸ್ಪೂರ್ತಿ ಯುವ ಕಲಾ ಸಂಘಕ್ಕೆ ಪ್ರದಾನ ಮಾಡಲಾಯಿತು.

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.