ವೇಳಾಪಟ್ಟಿ ಪರಿಷ್ಕರಣೆ; ವಿದ್ಯಾರ್ಥಿ, ಪೋಷಕರಿಗೆ ಸಂಕಷ್ಟ
Team Udayavani, Apr 16, 2018, 11:00 AM IST
ಮಂಗಳೂರು: ಪಿಯುಸಿ ವೇಳಾಪಟ್ಟಿಯನ್ನು ದಿಢೀರ್ ಬದಲಾಯಿಸಿ ಒಂದು ತಿಂಗಳು ಮುಂಚಿತವಾಗಿ ತರಗತಿ ಆರಂಭಿಸುವ ಪ.ಪೂ. ಶಿಕ್ಷಣ ಇಲಾಖೆಯ ಕ್ರಮ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಬದಲಾವಣೆ ಬಗ್ಗೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕ ವರ್ಗದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪ್ರತಿವರ್ಷ ಪಿಯುಸಿ ತರಗತಿ ಜೂ. 1ರಂದು ಪ್ರಾರಂಭವಾಗುತ್ತಿತ್ತು. ಆದರೆ ಈ ವರ್ಷ ಮೇ 2ರಂದು ಆರಂಭಿಸಲು ಆದೇಶ ಹೊರಡಿಸಲಾಗಿದೆ. ಪ್ರಥಮ ಪಿಯು ತರಗತಿ ಎಸೆಸೆಲ್ಸಿ ಫಲಿತಾಂಶ ಬಂದ ಒಂದು ವಾರದೊಳಗೆ ಪ್ರಾರಂಭವಾಗಬೇಕು.
ಎಪ್ರಿಲ್, ಮೇ ರಜೆಯ ಉದ್ದೇಶ
ಆಯಾ ಪ್ರದೇಶದ ಹವಾಮಾನ ಹೊಂದಿಕೊಂಡು ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗುತ್ತದೆ. ರಾಜ್ಯ ದಲ್ಲಿ ಎಪ್ರಿಲ್, ಮೇಯಲ್ಲಿ ಸುಡುಬಿಸಿಲು ಹಾಗೂ ವಿಪರೀತ ಸೆಕೆ ಇರುತ್ತದೆ. ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುತ್ತದೆ. ಸಾಂಕ್ರಾಮಿಕ ರೋಗಗಳ ಹಾವಳಿ ಜಾಸ್ತಿ. ಇದ್ಯಾವುದನ್ನೂ ಪರಿಗಣಿಸದೆ ಮೇಯಲ್ಲಿ ತರಗತಿ ಆರಂಭಿಸುವ ನಿರ್ಧಾರ ಆತುರ ಮತ್ತು ಅವೈಜ್ಞಾನಿಕ ಎಂಬುದು ಶಿಕ್ಷಕರು, ಪೋಷಕರ ಅಭಿಪ್ರಾಯ.
ಚುನಾವಣಾ ಕರ್ತವ್ಯ
ಹೆಚ್ಚಿನ ಪ.ಪೂ. ಶಿಕ್ಷಕರು ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ತರಗತಿ ಆರಂಭ ಗೊಂಡರೂ ಪಾಠ ನಡೆಯದು ಎಂಬುದು ಶಿಕ್ಷಕರ ಅನಿಸಿಕೆ.
ಇಲಾಖೆಯ ಸಮರ್ಥನೆ
ಉಪನ್ಯಾಸಕರಿಗೆ ಹೆಚ್ಚು ಕಾರ್ಯನಿರತ ದಿನ ದೊರೆತು ಪಠ್ಯಕ್ರಮವನ್ನು ಯಶಸ್ವಿಯಾಗಿ ಬೋಧಿಸಲು ಹಾಗೂ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸಾಧ್ಯ. ಈ ಹಿಂದಿನ ವೇಳಾಪಟ್ಟಿಯಂತೆ ಮಕ್ಕಳಿಗೆ ಸುಮಾರು 100 ದಿನಗಳ ಬೇಸಗೆ ರಜೆ ದೊರಕುತ್ತಿತ್ತು. ಇದರಿಂದ ಕಲಿತದ್ದನ್ನು ಮರೆಯುವ ಸಾಧ್ಯತೆ ಇರುತ್ತದೆ. ಈಚೆಗೆ ಉನ್ನತ ಶಿಕ್ಷಣ ಪ್ರವೇಶ ಪರೀಕ್ಷೆಗಳಲ್ಲಿ ಪಿಯು ವಿದ್ಯಾರ್ಥಿಗಳ ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಪರಿಷ್ಕೃತ ವೇಳಾಪಟ್ಟಿಯಲ್ಲಿ ಪ್ರವೇಶ ಪರೀಕ್ಷೆಗಳಿಗೆ ತಯಾರು ಮಾಡಲು ಹೆಚ್ಚು ಸಮಯ ದೊರಕುತ್ತದೆ. ಮೇಯಲ್ಲಿ ಕಾಲೇಜು ಆರಂಭವಾದರೆ ಸರಕಾರಿ ಪ.ಪೂ. ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚುತ್ತದೆ ಎಂಬುದು ಇಲಾಖೆಯ ಸಮರ್ಥನೆ.
ಪರಿಣಾಮಗಳೇನು?
– ಪೋಷಕರ ಸಂಕಷ್ಟ
ಸಾಮಾನ್ಯವಾಗಿ ಫೆಬ್ರವರಿ, ಮಾರ್ಚ್ನಲ್ಲಿ ಪಿಯುಸಿ ಪರೀಕ್ಷೆ ಮುಗಿದು ಜೂ. 1ರ ವರೆಗೆ ಮಕ್ಕಳಿಗೆ ರಜೆ. ಇದಕ್ಕೆ ಹೊಂದಿಕೊಂಡು ಪೋಷಕರು ಪ್ರವಾಸ, ಸಮಾರಂಭ ಗಳನ್ನು ನಿಗದಿ ಪಡಿಸುತ್ತಾರೆ. ದೂರ ಪ್ರವಾಸ ತೆರಳಲು ರೈಲು, ವಿಮಾನ ಟಿಕೆಟ್ ಕಾಯ್ದಿರಿಸುತ್ತಾರೆ. ಇಲಾಖೆ ಯಾವುದೇ ಮುನ್ಸೂಚನೆ ಇಲ್ಲದೆ ದಿಢೀರ್ ವೇಳಾಪಟ್ಟಿ ಬದಲಾಯಿಸಿರುವುದರಿಂದ ಇದೆಲ್ಲವೂ ಏರುಪೇರಾಗಿದೆ.
– ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸಮಸ್ಯೆ
ಈ ಬಾರಿ ಎಸೆಸೆಲ್ಸಿ ಫಲಿತಾಂಶ ಮೇ 7ಕ್ಕೆ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಹೊಸ ವೇಳಾ ಪಟ್ಟಿಯಂತೆ ಮೇ 14ರೊಳಗೆ ಪ್ರಥಮ ಪಿಯುಸಿ ಪ್ರವೇಶ ಪ್ರಕ್ರಿಯೆ ನಡೆದು ತರಗತಿ ಪ್ರಾರಂಭವಾಗಬೇಕು. ಪ್ರವೇಶಕ್ಕೆ ಲಭಿಸುವ ಕೇವಲ ಒಂದು ವಾರದಲ್ಲಿ ಕಾಲೇಜು, ಕೋರ್ಸ್ ಆಯ್ಕೆ, ಶುಲ್ಕ ಪಾವತಿ, ಸಮವಸ್ತ್ರ, ಪುಸ್ತಕ ಹೊಂದಿಸಿಕೊಳ್ಳಬೇಕು.
– ಸಿಬಿಎಸ್ಇ, ಐಸಿಎಸ್ಇ ವಿದ್ಯಾರ್ಥಿಗಳ ಆತಂಕ
ಸಿಬಿಎಸ್ಇ, ಐಸಿಎಸ್ಇ ಫಲಿತಾಂಶ ಮೇ ಕೊನೆಗೆ ಪ್ರಕಟವಾಗುತ್ತದೆ. ಈ ವಿದ್ಯಾರ್ಥಿ ಗಳಲ್ಲಿ ಬಹುತೇಕರು ಪಿಯುಸಿಯಲ್ಲಿ ರಾಜ್ಯ ಪಠ್ಯಕ್ರಮ ಆಯ್ದುಕೊಳ್ಳುತ್ತಾರೆ. ಈ ವರ್ಷ ತರಗತಿ ಬೇಗನೆ ಆರಂಭವಾಗುವುದರಿಂದ ಅವರು ಆತಂಕಕ್ಕೆ ಒಳಗಾಗಿದ್ದಾರೆ.
– ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ
Surathkal: ಕಾಟಿಪಳ್ಳ ಮಸೀದಿಗೆ ಕಲ್ಲು: 6 ಮಂದಿ ಸೆರೆ
Surathkal: ಬೈಕ್ ನಲ್ಲಿ ಬಂದು ಮಸೀದಿಗೆ ಕಲ್ಲು ಬಿಸಾಡಿದ ಕಿಡಿಗೇಡಿಗಳು… ಪ್ರಕರಣ ದಾಖಲು
Democracy Day: ದಕ್ಷಿಣ ಕನ್ನಡ: 130 ಕಿ.ಮೀ. ವ್ಯಾಪ್ತಿಯಲ್ಲಿ 84,200 ಮಂದಿ
Rohan City Bejai: ವಾಣಿಜ್ಯ ಮಳಿಗೆಗಳಲ್ಲಿ ಹೂಡಿಕೆಗೆ ಖಚಿತ ಪ್ರತಿಫಲ ಕೊಡುಗೆ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್ಐಎಗೆ ವಹಿಸಲಿ: ಶಾಸಕ ಸುನಿಲ್ ಕುಮಾರ್
Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ
Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್ ಸಿಸ್ಟಮ್
Eid: ಈದ್ ಮಿಲಾದ್ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ
Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್ ಮಿಲಾದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.